MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Ganesh Chaturthi 2026 Date & Time
Ganesh Chaturthi Special Trains
Brics Summit 2026
Bengaluru Tunnel Road Business Corridor
ED Raid on Satish Jarkiholi
Karnataka Guarantee Schemes
Bengaluru Economy by 2037
Karnataka Apex Bank Election
BJP Padayatra
Prajwal Revanna Case
Duleep Trophy Final
Bengaluru-Mangaluru Vande Bharat
  • Home
  • Entertainment
  • Cine World
  • Hanuman Ansh: ನಾಯಕನ ಆರೋಗ್ಯ ಸಮಸ್ಯೆ, ಸಹಾಯಕ ನಿರ್ದೇಶಕನಿಗೆ ಸಿಕ್ತು ‘ಬಾಬಾ’ ಪಟ್ಟ.. ಮುಂದೆ ನಡೆದಿದ್ದು ಮಾತ್ರ ಇತಿಹಾಸ

Hanuman Ansh: ನಾಯಕನ ಆರೋಗ್ಯ ಸಮಸ್ಯೆ, ಸಹಾಯಕ ನಿರ್ದೇಶಕನಿಗೆ ಸಿಕ್ತು ‘ಬಾಬಾ’ ಪಟ್ಟ.. ಮುಂದೆ ನಡೆದಿದ್ದು ಮಾತ್ರ ಇತಿಹಾಸ

Hanuman Ansh: ಸದ್ಯ ಥಿಯೇಟರ್ ಗಳಲ್ಲಿ ಭಾರಿ ಸದ್ದು ಮಾಡುತ್ತಿರುವ, ಕಥೆಯ ಮೂಲಕ, ಜನರಿಂದ ಜನರಿಂದ ತಲುಪಿರುವ ಸಣ್ಣ ಬಜೆಟ್ ಸಿನಿಮಾ ‘ಹನುಮಾನ್ ಅಂಶ್’ ಸಿನಿಮಾದಲ್ಲಿ ನಟ ಶೋಭಿನವ್ ಸತ್ಯ ಅವರಿಗೆ ನಾಯಕನ ಪಾತ್ರ ಸಿಕ್ಕಿದ್ದು ಹೇಗೆ? ಎನ್ನುವ ಅಚ್ಚರಿಯ ವಿಚಾರ ಇಲ್ಲಿದೆ.

2 Min read
Author : Pavna Das
Published : Sep 11 2026, 12:07 PM IST
Share this Photo Gallery
  • FB
  • TW
  • Linkdin
  • Whatsapp
17
ಹನುಮಾನ್ ಅಂಶ್ ಸಿನಿಮಾ
Image Credit : Hanuman Ansh

ಹನುಮಾನ್ ಅಂಶ್ ಸಿನಿಮಾ

ವಿಶಾಲ್ ಚತುರ್ವೇದಿ ನಿರ್ದೇಶನದ ‘ಹನುಮಾನ್ ಅಂಶ್’ ಸಿನಿಮಾ ಈ ವರ್ಷ ಬಾಕ್ಸ್‌ಆಫೀಸ್‌ನಲ್ಲಿ ನಿರೀಕ್ಷೆಗೂ ಮೀರಿದ ಯಶಸ್ಸು ಕಂಡಿದೆ. ಆದರೆ ಈ ಸಿನಿಮಾ ದೊಡ್ಡ ಪರದೆಯ ಮೇಲೆ ಮೂಡಿಬರುವ ಪ್ರಯಾಣ ಅಷ್ಟು ಸುಲಭವಾಗಿರಲಿಲ್ಲ. ಕೇವಲ 2 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಾಣವಾದ ಈ ಭಕ್ತಿ ಪ್ರಧಾನ ಸಿನಿಮಾ ಇದುವರೆಗೆ 169 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿದೆ ಎಂದು ವರದಿಯಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
27
ಶೋಭಿನವ್ ಸತ್ಯ ಲೀಡ್‌ ಆಕ್ಟರ್ ಆಗಿರಲಿಲ್ಲ!
Image Credit : Asianet News

ಶೋಭಿನವ್ ಸತ್ಯ ಲೀಡ್‌ ಆಕ್ಟರ್ ಆಗಿರಲಿಲ್ಲ!

ಸಿನಿಮಾದಲ್ಲಿ ನೀಮ್ ಕರೋಲಿ ಬಾಬಾ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟ ಶೋಭಿನವ್ ಸತ್ಯ ಆರಂಭದಲ್ಲಿ ನಾಯಕನ ಪಾತ್ರಕ್ಕೆ ಆಯ್ಕೆಯಾಗಿರಲಿಲ್ಲ. ಸಿನಿಮಾ ಶೂಟಿಂಗ್‌ನ ಮೊದಲ ದಿನವೇ ಮೊದಲು ಆಯ್ಕೆಯಾಗಿದ್ದ ನಟ ಅನಾರೋಗ್ಯಕ್ಕೆ ಒಳಗಾದ ಹಿನ್ನೆಲೆಯಲ್ಲಿ ಸಹಾಯಕ ನಿರ್ದೇಶಕ ಶೋಭಿನವ್ ಅವರಿಗೆ ಈ ಪಾತ್ರವನ್ನು ನಿರ್ವಹಿಸುವ ಅವಕಾಶ ಸಿಕ್ಕಿತು.

Related Articles

Related image1
ಇಂಗ್ಲೆಂಡ್​ ಬಿಟ್ಟು ಭಾರತಕ್ಕೆ ಬಂದು Hanuman Anshನಿಂದ 100 ಕೋಟಿ ಗಳಿಸಿದ 21ರ ಯುವತಿ: ಯಾರೀ ನಿರ್ಮಾಪಕಿ
Related image2
Hanuman Ansh: 'ನೀಮ್ ಕರೋಲಿ ಬಾಬಾ' ಹಿಂದೆ ಕೊಹ್ಲಿ, ಮಾರ್ಕ್ ಜುಕರ್ಬರ್ಗ್ ಬಿದ್ದಿದ್ದೇಕೆ? ಉತ್ತರ ಸಿಕ್ಕೇ ಬಿಡ್ತು ನೋಡಿ!
37
ಪಾತ್ರ ಸಿಕ್ಕಾಗ ಶೋಭಿನವ್‌ಗೆ ಹಿಂಜರಿಕೆ
Image Credit : instagram

ಪಾತ್ರ ಸಿಕ್ಕಾಗ ಶೋಭಿನವ್‌ಗೆ ಹಿಂಜರಿಕೆ

ಈ ಪಾತ್ರಕ್ಕೆ ತಮ್ಮನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿದಾಗ ಶೋಭಿನವ್ ಸತ್ಯ ಅವರೇ ಅಚ್ಚರಿಗೊಳಗಾಗಿದ್ದರು. ಅದರ ಜೊತೆಗೆ ಪಾತ್ರದ ಬಗ್ಗೆ ಅವರಿಗೆ ಸಾಕಷ್ಟು ಒತ್ತಡವೂ ಇತ್ತು. ಅದರಲ್ಲೂ ಮುಖ್ಯವಾಗಿ ಸಹಾಯಕ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದರಿಂದ, ಈ ಪಾತ್ರವನ್ನು ಪ್ರೇಕ್ಷಕರು ಹೇಗೆ ಸ್ವೀಕರಿಸುತ್ತಾರೆ ಎಂಬ ಆತಂಕ ಅವರಲ್ಲಿತ್ತು.

47
‘ಜನ ನನ್ನನ್ನು ಈ ಪಾತ್ರದಲ್ಲಿ ಒಪ್ಪಿಕೊಳ್ಳುತ್ತಾರಾ?’ ಎಂಬ ಭಯ
Image Credit : Facebook

‘ಜನ ನನ್ನನ್ನು ಈ ಪಾತ್ರದಲ್ಲಿ ಒಪ್ಪಿಕೊಳ್ಳುತ್ತಾರಾ?’ ಎಂಬ ಭಯ

ಶೋಭಿನವ್ ಹೇಳುವಂತೆ, ಆರಂಭದಲ್ಲಿ ಅವರ ಮನಸ್ಸಿನಲ್ಲಿ ಹಲವು ಪ್ರಶ್ನೆಗಳು ಮೂಡಿದ್ದವು. “ಮುಂದೆ ಜನರು, ‘ಇಂತಹ ಬಾಬಾನನ್ನು ಎಲ್ಲಿಂದ ಕರೆದುಕೊಂಡು ಬಂದಿದ್ದಾರೆ?’ ಎಂದು ಹೇಳಿದರೆ ಏನು ಮಾಡುವುದು ಎಂಬ ಭಯವಿತ್ತು. ಈ ಎಲ್ಲ ವಿಚಾರಗಳು ನನ್ನ ಮನಸ್ಸಿನಲ್ಲಿ ಓಡಾಡುತ್ತಿದ್ದವು. ಆಗ ನಿರ್ದೇಶಕರು ನನ್ನನ್ನು ಸಮಾಧಾನಪಡಿಸಿ, ನೀನು ನಿನ್ನ ಅಭಿನಯದ ಬಗ್ಗೆ ಮಾತ್ರ ಗಮನ ಕೊಡು, ಬಾಕಿದ್ದನ್ನು ನಾನು ನೋಡುತ್ತೇನೆ’ ಎಂದಿದ್ದರಂತೆ. ಆದರೆ ಸಿನಿಮಾ ಚಿತ್ರೀಕರಣ ಆರಂಭವಾದ ನಂತರ ಅವರ ಆತ್ಮವಿಶ್ವಾಸ ನಿಧಾನವಾಗಿ ಹೆಚ್ಚಾಗತೊಡಗಿತು.

57
ಶೂಟಿಂಗ್ ವೇಳೆ ನಡೆದ ವಿಚಿತ್ರ ಅನುಭವ
Image Credit : X

ಶೂಟಿಂಗ್ ವೇಳೆ ನಡೆದ ವಿಚಿತ್ರ ಅನುಭವ

ಶೂಟಿಂಗ್‌ಗಾಗಿ ತಂಡದೊಂದಿಗೆ ದೇವಸ್ಥಾನಕ್ಕೆ ತೆರಳಿದ್ದಾಗ ನಡೆದ ಘಟನೆ ಅವರ ಮನಸ್ಥಿತಿಯನ್ನೇ ಬದಲಿಸಿತು ಎಂದು ಹೇಳುವ ಶೋಭಿನವ್ ‘ಅದು ಮೊದಲ ದಿನವಾಗಿತ್ತು. ನಾನು ಈ ಪಾತ್ರಕ್ಕೆ ನಿಜವಾಗಿಯೂ ಹೊಂದಿಕೊಳ್ಳುತ್ತಿದ್ದೇನೆಯೇ ಎಂಬುದು ನನಗೆ ಖಚಿತವಾಗಿರಲಿಲ್ಲ. ಆದರೆ ಎರಡನೇ ದಿನ ಇಡೀ ತಂಡ ಬೇಸ್‌ಗೆ ತೆರಳಿದಾಗ. ನಾನು ಮಾತ್ರ ದೇವಸ್ಥಾನದಲ್ಲಿ ಒಬ್ಬನೇ ಉಳಿದುಕೊಂಡಿದ್ದೆ. ಆವಾಗ ಅಲ್ಲಿಗೆ ಬಂದಿದ್ದ ಕೆಲವರು ಶೋಭಿನವ್ ಅವರನ್ನು ಬಾಬಾ ಎಂದು ಕರೆದರಂತೆ, ಜೊತೆಗೆ ಏನಾದರೂ ತಿನ್ನಲು ಬೇಕೆ ಎಂದು ಉಪಚರಿಸಿದರಂತೆ.

67
ಬೆಳ್ಳುಳ್ಳಿ, ಉಪ್ಪು ಮತ್ತು ರೊಟ್ಟಿ ತಿಂದ ನಟ
Image Credit : X

ಬೆಳ್ಳುಳ್ಳಿ, ಉಪ್ಪು ಮತ್ತು ರೊಟ್ಟಿ ತಿಂದ ನಟ

ಆ ಸಮಯದಲ್ಲಿ ತಾನು ಸ್ವಲ್ಪ ಬೆಳ್ಳುಳ್ಳಿ, ಉಪ್ಪು ಮತ್ತು ರೊಟ್ಟಿ ತರುವಂತೆ ಕೇಳಿದಾಗ, ಗ್ರಾಮಸ್ಥರು ಆ ವಸ್ತುಗಳನ್ನು ತಂದುಕೊಟ್ಟಿದ್ದರಂತೆ. ನನ್ನೊಂದಿಗೆ ಇಂತಹ ಹಲವು ಘಟನೆಗಳು ನಡೆಯುತ್ತಲೇ ಇದ್ದವು ಎನ್ನುವ ಶೋಭಿನವ್, ನಾನು ಉದ್ದೇಶಪೂರ್ವಕವಾಗಿ ಏನನ್ನೂ ಮಾಡಲು ಹೋಗಿರಲಿಲ್ಲ. ಆದರೆ ಎಲ್ಲವೂ ಸಹಜವಾಗಿಯೇ ನಡೆಯುತ್ತಿತ್ತು. ಜನರು ನನ್ನ ಬಳಿ ಬಂದು ಆಶೀರ್ವಾದ ಕೇಳಲು ಆರಂಭಿಸಿದಾಗ, ನಾನೂ ಅವರಿಗೆ ಆಶೀರ್ವಾದ ನೀಡಲು ಶುರು ಮಾಡಿದೆ. ಇದರಿಂದ ನಿಧಾನವಾಗಿ ನನ್ನ ಆತ್ಮವಿಶ್ವಾಸ ಹೆಚ್ಚಾಯಿತು” ಎಂದು ಅವರು ಹೇಳಿದ್ದಾರೆ.

77
ಲೀಡ್‌ ಆಕ್ಟರ್ ಆಗಿ ಜನ ಒಪ್ಪಿಕೊಳ್ಳುವರೇ ಎಂಬ ಆತಂಕ
Image Credit : X

ಲೀಡ್‌ ಆಕ್ಟರ್ ಆಗಿ ಜನ ಒಪ್ಪಿಕೊಳ್ಳುವರೇ ಎಂಬ ಆತಂಕ

ಶೋಭಿನವ್ ಅವರಿಗೆ ಮತ್ತೊಂದು ದೊಡ್ಡ ಚಿಂತೆ ಇತ್ತು. ತಾವು ಸಹಾಯಕ ನಿರ್ದೇಶಕರಾಗಿ ಪರಿಚಿತರಾಗಿದ್ದ ಕಾರಣ, ಪ್ರೇಕ್ಷಕರು ತಮ್ಮನ್ನು ನಾಯಕನ ಪಾತ್ರದಲ್ಲಿ ಸ್ವೀಕರಿಸುತ್ತಾರೆಯೇ ಎಂಬ ಅನುಮಾನ ಅವರಲ್ಲಿತ್ತು. “ ಜನರು ನನ್ನನ್ನು ಈ ಪಾತ್ರದಲ್ಲಿ ಸ್ವೀಕರಿಸುತ್ತಾರೆಯೇ ಎಂದು ನಾನು ಯೋಚಿಸುತ್ತಿದ್ದೆ. ನಟರು ಇಂತಹ ಸನ್ನಿವೇಶಗಳನ್ನು ಎದುರಿಸಬೇಕಾಗುತ್ತದೆ. ಮತ್ತೊಂದೆಡೆ, ನನ್ನನ್ನು ಸಹಾಯಕ ನಿರ್ದೇಶಕ ಎಂದು ತಿಳಿದಿರುವವರು ನನ್ನನ್ನು ನಾಯಕನಾಗಿ ಒಪ್ಪಿಕೊಳ್ಳುತ್ತಾರೆಯೇ? ಅವರ ಪ್ರತಿಕ್ರಿಯೆ ಹೇಗಿರಬಹುದು ಎಂಬ ಯೋಚನೆಯೂ ಇತ್ತು. ಆದರೆ ನಿರ್ದೇಶಕರು ಸಂಪೂರ್ಣ ಜವಾಬ್ದಾರಿ ತೆಗೆದುಕೊಂಡು, ನಾನು ನಿನ್ನೊಂದಿಗೆ ಇದ್ದೇನೆ ಎಂದು ಧೈರ್ಯ ತುಂಬಿದರು” ಎಂದು ಶೋಭಿನವ್ ಸತ್ಯ ತಿಳಿಸಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಹನುಮ ಜಯಂತಿ
ಮನರಂಜನಾ ಸುದ್ದಿ
ಬಾಲಿವುಡ್
ಸಿನಿಮಾ

Latest Videos
Recommended Stories
Recommended image1
ಲವ್, ಲಿವಿಂಗ್ ರಿಲೇಶನ್‌ಶಿಪ್, ಜಗಳ: 'ಬೇಬಿ' ಜೋಡಿಯ ಹೊಸ ಸಿನಿಮಾ 'ಎಪಿಕ್' ಹೀಗಿದ್ಯಾ?
Recommended image2
ವಿಜಯ್ ಜೊತೆ ಸಿನಿಮಾ ಸಿಕ್ಕಾಗ ತ್ರಿಷಾ ಕಳುಹಿಸಿದ್ರು ಆ ಮೆಸೇಜ್: ಇಂದಿಗೂ ನೆನಪಿದೆ ಎಂದ ಮಾಳವಿಕಾ
Recommended image3
ನಟನೆಗೆ ಗುಡ್‌ಬೈ ಹೇಳೋಕೆ ನಿರ್ಧರಿಸಿದ್ದ ಸಮಂತಾ! ನಿರ್ದೇಶಕ ರಾಜ್ ನಿಡಿಮೋರು ಕೊಟ್ಟ ಟ್ವಿಸ್ಟ್ ಏನು?
Related Stories
Recommended image1
ಇಂಗ್ಲೆಂಡ್​ ಬಿಟ್ಟು ಭಾರತಕ್ಕೆ ಬಂದು Hanuman Anshನಿಂದ 100 ಕೋಟಿ ಗಳಿಸಿದ 21ರ ಯುವತಿ: ಯಾರೀ ನಿರ್ಮಾಪಕಿ
Recommended image2
Hanuman Ansh: 'ನೀಮ್ ಕರೋಲಿ ಬಾಬಾ' ಹಿಂದೆ ಕೊಹ್ಲಿ, ಮಾರ್ಕ್ ಜುಕರ್ಬರ್ಗ್ ಬಿದ್ದಿದ್ದೇಕೆ? ಉತ್ತರ ಸಿಕ್ಕೇ ಬಿಡ್ತು ನೋಡಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved