10 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!

ಆತ ಮಾಜಿ ಗ್ರಾಮ ಪಂಚಾಯ್ತಿ ಅಧ್ಯಕ್ಷ.. ಕಾಂಗ್ರೆಸ್​​ ಕಾರ್ಯಕರ್ತ.. ಒಳ್ಳೆ ಮನುಷ್ಯ ಅನ್ನಿಸಿಕೊಂಡಿದ್ದ.. ತನ್ನ ಗ್ರಾಮದಲ್ಲಿ ಯಾವುದೆ ರಾಜಿ ಪಂಚಾಯ್ತಿ ಇದ್ರೂ ಈತನೆ ಮುಂದಾಳತ್ವ ವಹಿಸಿಕೊಂಡು ತೊಂದರೆಗಳನ್ನ ನಿವಾರಣೆ ಮಾಡ್ತಿದ್ದ.

Share this Video
  • FB
  • Linkdin
  • Whatsapp

ಆತ ಮಾಜಿ ಗ್ರಾಮ ಪಂಚಾಯ್ತಿ ಅಧ್ಯಕ್ಷ.. ಕಾಂಗ್ರೆಸ್​​ ಕಾರ್ಯಕರ್ತ.. ಒಳ್ಳೆ ಮನುಷ್ಯ ಅನ್ನಿಸಿಕೊಂಡಿದ್ದ.. ತನ್ನ ಗ್ರಾಮದಲ್ಲಿ ಯಾವುದೆ ರಾಜಿ ಪಂಚಾಯ್ತಿ ಇದ್ರೂ ಈತನೆ ಮುಂದಾಳತ್ವ ವಹಿಸಿಕೊಂಡು ತೊಂದರೆಗಳನ್ನ ನಿವಾರಣೆ ಮಾಡ್ತಿದ್ದ.. ಆವತ್ತೊಂದು ದಿನ ಪಕ್ಕದೂರಿನಲ್ಲಿದ್ದ ಪೆಟ್ರೋಲ್​ ಬಂಕ್​ನಲ್ಲಿ ತನ್ನದೇ ಗ್ರಾಮದ ಹುಡುಗ ಕಿರಿಕ್​ ಮಾಡಿಕೊಂಡಿದ್ದಾನೆ ಅನ್ನೋ ಮೆಸೆಜ್​ ಬರುತ್ತೆ.. ಈತ ಕೂಡಲೇ ಜಗಳ ಬಿಡಿಸೋಕೆ ಅಂತ ಹೋಗಿದ್ದಾನೆ.. ಅಷ್ಟೇ... ಜಗಳ ಬಿಡಿಸಲು ಬಂದವನು ಹೆಣವಾಗಿದ್ದ.. ಪೊಲೀಸರು ತನಿಖೆ ಶುರು ಮಾಡ್ತಾರೆ.. ಆಗಲೇ ನೋಡಿ ಗೊತ್ತಾಗೋದು ಅದು 10 ರೂಪಾಯಿಗಾಗಿ ನಡೆದಿದ್ದ ಕೊಲೆ ಅಂತ.. ಅಷ್ಟಕ್ಕೂ ಏನದು 10 ರೂಪಾಯಿಯ ಗಲಾಟೆ..? ಈತನನ್ನ ಕೊಂದವಱರು..? ಸಣ್ಣ ಕಿರಿಕ್​ ಒಬ್ಬನ ಜೀವವನ್ನೇ ತಗೆದ ಕಥೆಯೇ ಇವತ್ತಿನ ಎಫ್​​.ಐ.ಆರ್​​. ಯಾರದ್ದೋ ಜಗಳ.. ಯಾರದ್ದೋ ಕಿರಿಕ್​​.. ಆದ್ರೆ ಪಾಪಾ ಮೇಘನಾಥ ಹೆಣವಾದ.. ಇನ್ನೂ ಆ ಹುಡುಗರೂ ಕೂಡ ಈಗ ತಮ್ಮ ಜೀವನವನ್ನ ಕಂಡುಕೊಳ್ತಿದ್ರು.

ಮನೆಗೆ ಅವರೇ ಆಸರೆಯಾಗಿದ್ರು.. ಅವರೂ ಈಗ ಜೈಲು ಸೇರೋ ಮೂಲಕ ತಮ್ಮ ಭವಿಷ್ಯವನ್ನ ತಾವೇ ಹಾಳು ಮಾಡಿಕೊಂಡರು. ಅವರಿಬ್ಬರೂ ಮೂರು ವರ್ಷದಿಂದ ಪ್ರೀತಿಸುತ್ತಿದ್ರಂತೆ.. ಆದ್ರೆ ಆಕೆ ಇನ್ನೂ 10ನೇ ಕ್ಲಾಸ್​​ ಹುಡುಗಿ.. ಈತ ಏಸ್​​ ಗಾಡಿ ಡ್ರೈವರ್​​.. ಆಕೆ ಹಿಂದೂ ಆದರೆ ಅವನು ಮುಸ್ಲಿಂ.. ಮೂರು ವರ್ಷ ಯಾವುದೇ ಪ್ರಾಬ್ಲಂ ಇರಲಿಲ್ಲ.. ಆದ್ರೆ ಮೊನ್ನೆ ರಾತ್ರಿ ಇದ್ದಕ್ಕಿದ್ದಂತೆ ಆತ ಹುಡುಗಿಯ ಮನೆಗೆ ನುಗ್ಗಿ ಆಕೆಯ ಮೇಲೆ ಹಲ್ಲೆ ಮಾಡಿದ್ದ.. ಅಷ್ಟೇ ಅಲ್ಲ ತಾನೂ ಚಾಕು ಹಾಕಿಕೊಂಡಿದ್ದ.. ಯಾಕೆ ಹೀಗೆ ಮಾಡಿದ ಅಂತ ಪೊಲೀಸರು ವಿಚಾರಣೆ ಮಾಡಿದಾಗ ಅಲ್ಲಿ ಬಂದಿದ್ದು ಹುಡುಗಿಯ ಕಿತಾಪತಿ ಕೆಲಸ. ಎಲ್ಲವೂ ಕನ್​​​​ಫ್ಯೂಷನ್​​.. ಆದ್ರೆ ಇವತ್ತಿನ ಎರಡು ಸ್ಟೋರಿ ಕೂಡ ಬಾಳಿ ಬದುಕಬೇಕಿದ್ದ ಯುವಕರದ್ದೇ.. ಇದನ್ನೆಲ್ಲಾ ನೋಡ್ತಿದ್ರೆ ನಮ್ಮ ಯುವಜನತೆ ಎತ್ತ ಸಾಗ್ತಿದ್ದಾರೆ ಅಂತ ಭಯವಾಗುತ್ತೆ.

Related Video