
ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್ ಇತ್ತಾ..?
Suvarna FIR: ನಾವು ಮೂರು ದಿನದಿಂದ ಹೇಳುತ್ತಲೇ ಬಂದ್ವಿ.. ಐದುವರೆ ವರ್ಷದ ಬಾಲಕಿ ಕೊಲೆ ಕೇಸ್ನಲ್ಲಿ ಪೊಲೀಸರ ಮೇಲೆಯೆ ಅನುಮಾನ ಬರ್ತಿದೆ ಅಂತ.. ಅದಕ್ಕೆ ಪುಷ್ಟಿ ನೀಡುವಂತೆ ಇವತ್ತು ಮೂವರು ಪೊಲೀಸರು ಸಸ್ಪೆಂಡ್ ಆಗಿದ್ದಾರೆ.
ನಾವು ಮೂರು ದಿನದಿಂದ ಹೇಳುತ್ತಲೇ ಬಂದ್ವಿ.. ಐದುವರೆ ವರ್ಷದ ಬಾಲಕಿ ಕೊಲೆ ಕೇಸ್ನಲ್ಲಿ ಪೊಲೀಸರ ಮೇಲೆಯೆ ಅನುಮಾನ ಬರ್ತಿದೆ ಅಂತ.. ಅದಕ್ಕೆ ಪುಷ್ಟಿ ನೀಡುವಂತೆ ಇವತ್ತು ಮೂವರು ಪೊಲೀಸರು ಸಸ್ಪೆಂಡ್ ಆಗಿದ್ದಾರೆ.. ಮಗು ಸತ್ತು 3 ತಿಂಗಳು ಎಫ್.ಐ.ಆರ್ನೇ ದಾಖಲಿಸದ ಅಧಿಕಾರಿಗಳು ಇನ್ನೇನು ಮಾಡಿಯಾರು ಅಂತ ಅವರನ್ನ ಮನೆಗೆ ಕಳುಹಿಸಿದ್ದಾರೆ. ಅಷ್ಟಕ್ಕೂ ಸಸ್ಪೆಂಡ್ ಆದ ಆ ಮೂವರು ಪೊಲೀಸರು ಯಾರು..?
ಅವರು ಈ ಕೇಸ್ನಲ್ಲಿ ಮಾಡಿದ ಲೋಪಗಳೇನು..? ಇನ್ನೂ ಅರೆಸ್ಟ್ ಆಗಿರೋ ಪ್ರಿಯಾಂಕ ಪೊಲೀಸರ ಮುಂದೆ ಹೇಳಿರುವ ಸತ್ಯಗಳೇನು ಅನ್ನೋದನ್ನ ತಿಳಿದುಕೊಳ್ಳೋದೇ ಇವತ್ತಿನ ಎಫ್.ಐ.ಆರ್. ದೊಡ್ಡವರ ತಪ್ಪಿಗೆ ಚಿಕ್ಕವರಿಗೆ ಶಿಕ್ಷೆ ಅನ್ನೋ ಹಾಗಾಗಿದೆ ಪೊಲೀಸರ ಅಮಾನತ್ತು ಕಥೆ.. ಸದ್ಯ ಕೇಸ್ ACP ಅನುಷಾ ರವರಿಗೆ ಹೋಗಿದೆ.. ನೋಡೋಣ ಹೆಣ್ಣುಮಗಳ ಸಾವಿಗೆ ಮತ್ತೊಬ್ಬ ಹೆಣ್ಣುಮಗಳು ನ್ಯಾಯ ಕೊಡಿಸುತ್ತಾರಾ ಅಂತ. ನಿನ್ನೆ ಪೊಲೀಸರು ಸಕಲೇಶ್ಪುರದವರೆಗೆ ಹೋಗಿ ಪ್ರಿಯಾಂಕಳನ್ನ ಅರೆಸ್ಟ್ ಮಾಡಿಕೊಂಡು ಕರೆತಂದಿದ್ರು.. ಜಡ್ಜ್ ಮುಂದೆ ಹಾಜರುಪಡಿಸಿ 5 ದಿನ ಕಸ್ಟಡಿಗೂ ತಗೆದುಕೊಂಡರು.
ಇನ್ನೂ ಪೊಲೀಸರ ಮುಂದೆ ಕೂತು ಆ ಕಿಲ್ಲರ್ ಅಮ್ಮನ್ನ ಮಗುವನ್ನ ಕೊಂದ ನಂತರ ಏನೇನು ಮಾಡಿದ್ಲು..? ಆ ಮಗುವನ್ನ ಯಾಕಾಗಿ ಕೊಂದ್ಲು ಅಂತ ಡಿಟೇಲಾಗಿ ಹೇಳಿದ್ಲು.. ಇನ್ನೂ ಆ ಪರಮ ಪಾಪಿ ಹೆಳಿದನ್ನ ಕೇಳಿ ಸ್ವತಃ ಪೊಲೀಸರೇ ದಂಗಾಗಿ ಹೋಗಿದ್ರು. ನಿಜಕ್ಕೂ ಇವರಿಬ್ಬರು ಮನುಷ್ಯ ಜಾತಿಗೇ ಅವಮಾನ. ಇವರಿಗೆ ಅದೇನ್ ಶಿಕ್ಷೆ ಕೊಟ್ಟರೂ ಕಡಿಮೇನೇ.. ಇನ್ನೂ ಇಂಥಹ ಕ್ರೂರತೆಯನ್ನ ತಿಳಿದರೂ ಕ್ರಮಕೈಗೊಳ್ಳದ ಇಂಥಹ ಪೊಲೀಸರಿಗೂ ಬಿಸಿ ಮುಟ್ಟಿಸಬೇಕು ಇಲ್ಲವಾದ್ರೆ ಸಮಾಜಕ್ಕೆ ರಾಂಗ್ ಮೆಸೆಜ್ ಹೋಗುತ್ತೆ.