ಮುಟ್ಟು ನಿಲ್ಲುವ ಸಮಯದ ಬಗ್ಗೆ ಅನೇಕ ಮಹಿಳೆಯರು ಮುಕ್ತವಾಗಿ ಮಾತನಾಡುವುದಿಲ್ಲ. ನಟಿ ರಮ್ಯಾ ತಮ್ಮ 35ನೇ ವಯಸ್ಸಿನಲ್ಲಿಯೇ ಪೆರಿಮೆನೋಪಾಸ್‌ನಿಂದ ಅನುಭವಿಸಿದ ಮಾನಸಿಕ ಮತ್ತು ದೈಹಿಕ ಸಮಸ್ಯೆಗಳನ್ನು ಹಂಚಿಕೊಂಡಿದ್ದು, ಈ ಅನುಭವವೇ ರಾಜ್ಯ ಸರ್ಕಾರದ 'ಋತುತಾರೆ' ಯೋಜನೆಗೆ ಸ್ಫೂರ್ತಿಯಾಗಿದೆ.

ಮುಟ್ಟು ನಿಲ್ಲುವ ಸಮಯ (menopause) ಎನ್ನುವುದು ಪ್ರತಿ ಹೆಣ್ಣೂ ಅನುಭವಿಸಲೇಬೇಕಿರುವ ಒಂದು ಘಟ್ಟ. ಕೆಲವರಿಗೆ 35 ಆದ್ಮೇಲೆ ಈ ಸಮಯ ಬಂದರೆ ಮತ್ತೆ ಕೆಲವರಿಗೆ 60 ಆದ ಮೇಲೆ ಬರುವುದು ಇದೆ. ಅವರವರ ದೇಹ ಪ್ರಕೃತಿ, ಫುಡ್​ ಹ್ಯಾಬಿಟ್​, ಪರಿಸರ, ವಂಶ ಪಾರಂಪರ್ಯ ಎಲ್ಲವೂ ಇದಕ್ಕೆ ಕಾರಣವಾಗುತ್ತದೆ. ಕೆಲವರಿಗೆ ಮುಟ್ಟು ನಿಲ್ಲುವ ಸುಮಾರು 10-12 ವರ್ಷಗಳ ಮೊದಲು (ಅದನ್ನು ಪೆರಿ ಮೆನೋಪಾಸ್​- perimenopause) ಲಕ್ಷಣಗಳು ಕಂಡು ಬರುತ್ತವೆ. ಆ ಸಮಯದಲ್ಲಿ ದೇಹದಲ್ಲಿ ಇಸ್ಟ್ರೋಜಿನ್​ ಕಡಿಮೆ ಆಗುವ ಕಾರಣದಿಂದ ಒಂದಲ್ಲೊಂದು ಅನಾರೋಗ್ಯ ಸಮಸ್ಯೆಗಳು ಬಾಧಿಸುತ್ತವೆ. ನಿದ್ದೆ ಬರದೇ ಇರುವುದು, ದೇಹದಲ್ಲಿ ಬದಲಾವಣೆ ಆಗೋದು, ಯಾವುದಕ್ಕೂ ಮನಸ್ಸು ಇಲ್ಲದೇ ಇರುವುದು, ಯಾರಾದರೂ ಚಿಕ್ಕ ವಿಷಯ ಹೇಳಿದರೂ ಅದು ದೊಡ್ಡ ಮಟ್ಟದಲ್ಲಿ ಕಿರಿಕಿರಿ ಎನ್ನಿಸುವುದು, ಕೆಲವೊಮ್ಮೆ ಈ ಲೈಫೇ ಬೇಡ ಎನ್ನಿಸುವುದು, ಎಲ್ಲರ ಮೇಲೂ ಕೋಪ ಬರುವುದು.... ಹೀಗೆ ಏನೇನೋ ಲಕ್ಷಣಗಳು, ಒಬ್ಬೊಬ್ಬರಲ್ಲಿ ಒಂದು ರೀತಿಯ ಲಕ್ಷಣಗಳು ಕಾಣಿಸುವುದು ಉಂಟು. ಆದರೆ ಎಷ್ಟೋ ಸಂದರ್ಭಗಳಲ್ಲಿ ಮಹಿಳೆಯರ ಈ ನೋವನ್ನು ಕಚೇರಿಗಳಲ್ಲಿ, ಅಷ್ಟೇ ಏಕೆ ಮನೆಯವರೂ ಅರ್ಥ ಮಾಡಿಕೊಳ್ಳದೇ ಮತ್ತಷ್ಟ ನೋವು ಅನುಭವಿಸುವುದು ಇದೆ.

ಓಪನ್​ ಆಗಿ ಮಾತನಾಡುವವರು ಕಮ್ಮಿ

ಆದರೆ, ಮುಟ್ಟು, ಮೆನೋಪಾಸ್​ ಇಂಥ ವಿಷಯಗಳ ಬಗ್ಗೆ ಓಪನ್​ ಆಗಿ ಮಾತನಾಡುವವರು ತುಂಬಾ ಕಡಿಮೆ. ಆದರೆ ಇದೀಗ ರಾಜ್ಯ ಸರ್ಕಾರ, ಋತುತಾರೆ ಎನ್ನುವ ಹೊಸ ಯೋಜನೆಯನ್ನು ಶುರು ಮಾಡಿದ್ದು, ಇದಕ್ಕೆ ಮೋಹಕ ತಾರೆ ರಮ್ಯಾ ಅವರನ್ನು ರಾಯಭಾರಿ ಮಾಡಿದೆ. (ಇದರ ಸಂಪೂರ್ಣ ವಿವರ ಈ ಸುದ್ದಿಯ ನಡುವಿನhttps://kannada.asianetnews.com/health-life/johnson-and-johnson-seeks-to-end-decade-long-talc-litigation-with-52-thousand-cr-settlement-suc/articleshow-pqphw0t ಲಿಂಕ್​ನಲ್ಲಿದೆ). ಈ ಸಂದರ್ಭದಲ್ಲಿ ನಟಿ ರಮ್ಯಾ ಮಾತನಾಡಿದ್ದಾರೆ. ಈ ಯೋಜನೆಯ ಆರಂಭದ ಕುರಿತು ಅವರು ಅತ್ಯಂತ ಸುಂದರವಾಗಿ ಮಾತನಾಡಿದ್ದಾರೆ.

'35 ವರ್ಷ ಆದ್ಮೇಲೆ ನಾನು ನಾನಾಗಿರಲಿಲ್ಲ'

'35 ವರ್ಷ ಆದ್ಮೇಲೆ ನಾನು ನನ್ನ ಹಾಗೆ ಇರಲಿಲ್ಲ. ನಾನು ನಾನಾಗಿರಲಿಲ್ಲ. ಏನೋ ತಪ್ಪಾಗಿದೆ ಎಂದು ತಿಳಿಯುತ್ತಿತ್ತು. ನನ್ನ ಎನರ್ಜಿ ಲೆವೆಲ್​ ಕುಸಿದು ಹೋಯ್ತು. ನಿದ್ದೆ ಸರಿ ಬರ್ತಾ ಇರಲಿಲ್ಲ. ಪೀರಿಯಡ್ಸ್​ ಸರಿ ಆಗ್ತಾ ಇರಲಿಲ್ಲ. ಡಾಕ್ಟರ್​ ಬಳಿ ಹೋದ್ರೆ ಏನೂ ಇಲ್ಲ ಎಂದುಬಿಟ್ಟರು. ಇವೆಲ್ಲಾ ನಾರ್ಮಲ್​ ವಿಟಮಿನ್​ ಬಿ12, ಡಿ 3 ಕಡಿಮೆ ಆದಕ್ಕೆ ಹೀಗೆಲ್ಲಾ ಆಗ್ತಾ ಇದೆ ಎಂದರು. ಆದರೆ ನನಗೆ ಇಲ್ಲಾ ಏನೋ ಸಮಸ್ಯೆ ಇತ್ತು ಅಂದು ಗೊತ್ತಾಗಿತ್ತು. ಏನಾಗ್ತಿದೆ ಎನ್ನೋದನ್ನು ಅರ್ಥ ಮಾಡಿಕೊಳ್ಳಬೇಕಿತ್ತು. ಆದರೆ ವಿದೇಶಕ್ಕೆ ಹೋದರೂ ಇದರ ಬಗ್ಗೆ ಸರಿಯಾಗಿ ಯಾರೂ ಏನೂ ಹೇಳಲಿಲ್ಲ. ಏಕೆಂದರೆ ಎಂಬಿಬಿಎಸ್​ನಲ್ಲಿಯೂ ಮೆನೋಪಾಸ್​ ಬಗ್ಗೆ ಸರಿಯಾಗಿ ಸ್ಟಡಿ ಮಾಡಲಿಲ್ಲ. 40 ವರ್ಷ ಆದ್ಮೇಲೆ ನಿಮ್ಮ ಲೈಫ್​ ಮುಗಿಯಿತು ಎನ್ನೋ ನಾರ್ಮಲ್​ ಮಾತಿದೆ. ಸೋ ಮೆನೋಪಾಸ್​ ಬಗ್ಗೆ ಒಂದು ಅಂಡರ್​ಸ್ಟ್ಯಾಂಡ್ ಬೇಕಿತ್ತು ಎನ್ನುವ ಕಾರಣಕ್ಕೆ ತುಂಬಾ ರೀಸರ್ಚ್​ ಮಾಡಿದೆ. ಬೇರೆ ದೇಶಗಳ ಪಾಲಿಸಿ ಬಗ್ಗೆ ಮಾತನಾಡಿದೆ. ಇದರ ಫಲವಾಗಿಯೇ ಬಂದದ್ದು ಈ ಋತುತಾರೆ ಯೋಜನೆ ಎಂದರು.

ಈ ಮೂಲಕ ಮೆನೋಪಾಸ್​ ಸಮಯದಲ್ಲಿ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಜನರಿಗೆ ಮಾಹಿತಿ ನೀಡುವುದು, ಪರಿಹಾರ ನೀಡುವುದು, ಅವರಿಗೆ ಸಮಾಧಾನ ನೀಡುವುದು ಈ ಯೋಜನೆಯ ಉದ್ದೇಶವಾಗಿದ್ದು, ಅದರ ಸಂಪೂರ್ಣ ಮಾಹಿತಿ ಈ ಕೆಳಗಿನ ಲಿಂಕ್​ನಲ್ಲಿದೆ.