Asianet Suvarna News Asianet Suvarna News

ಪಾದರಾಯನಪುರ ಪುಂಡರಿಗೆ ಗ್ರ್ಯಾಂಡ್‌ ವೆಲ್‌ಕಮ್: ಮತ್ತೆ ಹೊಲಸು ತಿಂದ ಜಮೀರ್

ಪಾದರಾಯನಪುರ ಪುಂಡರ ಪರವಾಗಿ ನಿಂತಿದ್ದ ಮಾಜಿ ಸಚಿವ, ಹಾಲಿ ಚಾಮರಾಜಪೇಟೆ ಶಾಸಕ ಜಮೀರ್​ ಅಹ್ಮದ್ ಖಾನ್, ಇದೀಗ ಆರೋಪಿಗಳನ್ನು  ಭರ್ಜರಿಯಾಗಿ ಸ್ವಾಗತ ಕೋರಿ ಮತ್ತೆ ಹೊಲಸು ತಿಂದಿದ್ದಾರೆ.

ಬೆಂಗಳೂರು, (ಜೂ. 03): ಕೊರೋನಾ ಹಾಟ್​​ಸ್ಪಾಟ್ ಆಗಿದ್ದ ಬೆಂಗಳೂರಿನ ಪಾದರಾಯನಪುರದಲ್ಲಿ ಏಪ್ರಿಲ್​ 19ರಂದು ಪೊಲೀಸರು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದವರಿಗೆ ಈಗ ಜಾಮೀನು ಸಿಕ್ಕಿದೆ. 

ಪಾದರಾಯನಪುರ ಗಲಭೆ: ಜಮೀರ್‌ಗೆ ಫುಲ್ ಕ್ಲಾಸ್ ತೆಗೆದುಕೊಂಡ ಬಾಸ್...! 

ಆದ್ರೆ, ಈ ಹಿಂದೆ ಪಾದರಾಯನಪುರ ಪುಂಡರ ಪರವಾಗಿ ನಿಂತಿದ್ದ ಮಾಜಿ ಸಚಿವ, ಹಾಲಿ ಚಾಮರಾಜಪೇಟೆ ಶಾಸಕ ಜಮೀರ್​ ಅಹ್ಮದ್ ಖಾನ್, ಇದೀಗ ಆರೋಪಿಗಳನ್ನು  ಭರ್ಜರಿಯಾಗಿ ಸ್ವಾಗತ ಕೋರಿದ್ದಾರೆ. ಇದು ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ. ಈ ಮೂಲಕ ಮತ್ತೆ ಹೊಸಲು ತಿನ್ನುವ ಕೆಲಸ ಮಾಡಿದ್ದಾರೆ.