Asianet Suvarna News Asianet Suvarna News

ಇಂದು ಸಂಜೆ ಈಶ್ವರಪ್ಪ ರಾಜೀನಾಮೆ ಸಲ್ಲಿಕೆ, ಬೆಂಬಲಿಗರೊಂದಿಗೆ ಬೆಂಗಳೂರಿಗೆ

ಬೆಳಗಾವಿಯ (Belagavi) ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಆತ್ಮಹತ್ಯೆ (Santosh Suicide Case) ಪ್ರಕ​ರ​ಣ​ದಲ್ಲಿ ಸಚಿವ ಕೆ.ಎಸ್‌.ಈಶ್ವರಪ್ಪ (KS Eshwarappa)ಸಚಿವ ಸ್ಥಾನಕ್ಕೆ ದಿಢೀರ್‌ ರಾಜೀ​ನಾಮೆ ಘೋಷಿ​ಸಿ​ದ್ದಾ​ರೆ.

First Published Apr 15, 2022, 10:04 AM IST | Last Updated Apr 15, 2022, 10:04 AM IST

ಬೆಂಗಳೂರು (ಏ. 15): ಬೆಳಗಾವಿಯ (Belagavi) ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಆತ್ಮಹತ್ಯೆ (Santosh Suicide Case) ಪ್ರಕ​ರ​ಣ​ದಲ್ಲಿ ಸಚಿವ ಕೆ.ಎಸ್‌.ಈಶ್ವರಪ್ಪ (KS Eshwarappa)ಸಚಿವ ಸ್ಥಾನಕ್ಕೆ ದಿಢೀರ್‌ ರಾಜೀ​ನಾಮೆ ಘೋಷಿ​ಸಿ​ದ್ದಾ​ರೆ. ಪಕ್ಷ, ಸರ್ಕಾ​ರಕ್ಕೆ ಮುಜು​ಗರ ಆಗ​ಬಾ​ರದು ಎಂಬ ಕಾರ​ಣಕ್ಕೆ ಈ ನಿರ್ಧಾರ ಕೈಗೊ​ಳ್ಳು​ತ್ತಿ​ರು​ವು​ದಾಗಿ ಹೇಳಿ​ದ್ದಾ​ರೆ.

News Hour ಈಶ್ವರಪ್ಪ ತಲೆದಂಡ, ಬರೀ ರಾಜೀನಾಮೆ ಅಲ್ಲ ಅರೆಸ್ಟ್ ಮಾಡಬೇಕು ಎಂದ ಕಾಂಗ್ರೆಸ್!

ಇಂದು ಸಂಜೆ 6.30 ಕ್ಕೆ ಮುಖ್ಯಮಂತ್ರಿ ಬಸ​ವ​ರಾಜ ಬೊಮ್ಮಾ​ಯಿ (CM Bommai) ಅವರನ್ನು ಭೇಟಿ ಮಾಡಿ ರಾಜೀನಾಮೆ ಪತ್ರ ಸಲ್ಲಿಕೆ ಮಾಡಲಿದ್ದಾರೆ. ಗದಗ ಪ್ರವಾಸದಿಂದ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ. ನೂರಾರು ಕಾರುಗಳಲ್ಲಿ ಅಭಿಮಾನಿಗಳು, ಕಾರ್ಯಕರ್ತರು ಶಿವಮೊಗ್ಗದಿಂದ (Shivamogga)ಬೆಂಗಳೂರಿಗೆ ಆಗಮಿಸಲಿದ್ದಾರೆ. ಬೆಂಗಳೂರಿಗೆ ಹೋಗುವ ದಾರಿಯುದ್ಧಕ್ಕೂ ಅದ್ದೂರಿ ಸ್ವಾಗತಕ್ಕೂ ಸಿದ್ಧತೆ ಮಾಡಿಕೊಳ್ಳಲಾಗಿದೆ.