Asianet Suvarna News Asianet Suvarna News

ನಟ ದರ್ಶನ್ ಹೆಸರಲ್ಲಿ 25 ಕೋಟಿ ವಂಚನೆ ಯತ್ನ, ವಂಚಕಿ ವಶಕ್ಕೆ, ಮುಂದುವರೆದ ತನಿಖೆ

- ದರ್ಶನ್‌ ಆಸ್ತಿಪತ್ರ ನಕಲು ಮಾಡಿ ಬ್ಲಾಕ್‌ಮೇಲ್‌! ವಂಚನೆ ಯತ್ನ

- ಮೈಸೂರಿನಲ್ಲಿ ಚಾಲೆಂಜಿಂಗ್‌ ಸ್ಟಾರ್‌ ಆಸ್ತಿ ದಾಖಲೆ ಬಳಸಿ 25 ಕೋಟಿ ರು. ಸಾಲಕ್ಕೆ ಅರ್ಜಿ

- ನಟನ ಸ್ನೇಹಿತರಿಂದ .25 ಲಕ್ಷ ಕೇಳಿದ್ದ ಅರುಣಾ ಪೊಲೀಸ್‌ ವಶಕ್ಕೆ

 

ಮೈಸೂರು (ಜು. 12): ನಟ ದರ್ಶನ್‌ ತೂಗುದೀಪ ಅವರಿಗೆ ಸೇರಿದ ಮೈಸೂರಿನ ಆಸ್ತಿ ಪತ್ರಗಳನ್ನು ಫೋರ್ಜರಿ ಮಾಡಿ, ದರ್ಶನ್‌ ಸ್ನೇಹಿತರಿಗೆ ಬ್ಲಾಕ್‌ಮೇಲ್‌ ಮಾಡುತ್ತಿದ್ದ ಬ್ಯಾಂಕ್‌ ನಕಲಿ ಮಹಿಳಾ ಅಧಿಕಾರಿ ಅರುಣಾ ಕುಮಾರಿಯನ್ನು ಮೈಸೂರಿನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇಂದು ವೈದ್ಯಕೀಯ ಪರೀಕ್ಷೆ ನಡೆಸಲಿದ್ದು, ಬಳಿಕ ಕೋರ್ಟ್‌ಗೆ ಹಾಜರುಪಡಿಸಲಿದ್ದಾರೆ. 

ದರ್ಶನ್ ಹೆಸರಲ್ಲಿ 25 ಕೋಟಿ ವಂಚನೆ, ಹಿಂದಿದೆಯಾ ಈ ನಿರ್ಮಾಪಕರ ಷಡ್ಯಂತ್ರ.?

 

Video Top Stories