ಗುಂಬಜ್ ಗುದ್ದಾಟ: ಸೋಮವಾರದಿಂದ ಚಾಮುಂಡಿ ಫೋಟೋ ಅಭಿಯಾನ

ಮೈಸೂರು ಬಸ್ ಶೆಲ್ಟರ್ ಮೇಲೆ‌ ಗುಂಬಜ್ ಮಾದರಿ ನಿರ್ಮಾಣ ವಿವಾದ ಇನ್ನೂ ಬಿಸಿ ಬಿಸಿಯಾಗಿರುವಾಗಲೇ, ಅದೇ ಮಾದರಿಯಲ್ಲಿ  ಮತ್ತೊಂದು ಬಸ್ ಶೆಲ್ಟರ್ ತಲೆ ಎತ್ತುತ್ತಿದೆ. ಸೋಮವಾರದಿಂದ ಚಾಮುಂಡಿ ಫೋಟೋ ಅಭಿಯಾನ ಶುರುವಾಗಲಿದೆ.
 

Share this Video
  • FB
  • Linkdin
  • Whatsapp

ಬೆಂಗಳೂರು (ನ.17): ಗುಂಬಜ್‌ ಶೈಲಿಯಲ್ಲಿ ಕಟ್ಟಿರುವ ಬಸ್‌ ನಿಲ್ದಾಣ ವಿವಾದ ಇನ್ನಷ್ಟು ತಾರಕಕ್ಕೇರಿದೆ. ಗುಂಬಜ್‌ ಮಾದರಿಯಲ್ಲಿಯೇ ಇನ್ನೊಂದು ಬಸ್‌ ಶೆಲ್ಟರ್‌ ತಲೆ ಎತ್ತಲಿದೆ. ವಿರೋಧದ ನಡುವೆಯೂ, ಕೆಆರ್‌ ವಿಧಾನಸಭಾ ಕ್ಷೇತ್ರದ ಶ್ರೀರಾಮಪುರದಲ್ಲಿ ಇನ್ನೊಂದು ಬಸ್‌ ಶೆಲ್ಟರ್‌ ನಿರ್ಮಾಣವಾಗುತ್ತಿದೆ. ಈ ಕುರಿತಾದ ಶೇ.80ರಷ್ಟು ಕೆಲಸ ಕೂಡ ಮುಕ್ತಾಯವಾಗಿದೆ. ಜೆಎಸ್‌ಎಸ್‌ ಕಾಲೇಜಿನ ಬಳಿಯ ಬಸ್‌ ನಿಲ್ದಾಣದಲ್ಲಿ ಗುಂಬಜ್‌ ಮಾದರಿಯ ಬಸ್‌ ನಿಲ್ದಾಣ ಮಾಡಲಾಗಿದೆ ಎನ್ನುವ ವಿವಾದದ ರಾಜ್ಯಮಟ್ಟದಲ್ಲಿ ಸುದ್ದಿಯಾಗಿರುವ ನಡುವೆ ಸೋಮವಾರದಿಂದ ಚಾಮುಂಡಿ ಫೋಟೋ ಅಭಿಯಾನ ಕೂಡ ನಡೆಯಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಗುಂಬಜ್‌ ಮೇಲೆ ಕಳಸ ಹಾಕಿದ್ದು ನಾನಾ, ನೀನಾ? ಪ್ರತಾಪ್‌ ಸಿಂಹ-ರಾಮದಾಸ್‌ ಶೀತಲ ಸಮರ!

Related Video