
'ಕೈ' ಪಾಳಯದಲ್ಲಿ ಮುಖ್ಯಮಂತ್ರಿ ವಾರ್, ಶಿಸ್ತು ಮೀರಿ ಹೇಳಿಕೆ ನೀಡುತ್ತಿರುವವರಿಗೆ ನೊಟೀಸ್
- ಕಾಂಗ್ರೆಸ್ ಪಾಳಯದಲ್ಲಿ ಮುಂದುವರಿದ ಮುಖ್ಯಮಂತ್ರಿ ಹುದ್ದೆ ವಾರ್...!
- ಶಾಸಕ ಜಮೀರ್ ಅಹ್ಮದ್ ಹೇಳಿಕೆ ಬೆನ್ನಲ್ಲೇ ಇತರ ಶಾಸಕರಿಂದಲೂ ಬಹುಪರಾಕ್
- ಶಿಸ್ತು ಮೀರಿ ಹೇಳಿಕೆ ನೀಡುತ್ತಿರುವವರಿಗೆ ನೊಟೀಸ್ ನೀಡಲು ಮುಂದಾದ ಶಿಸ್ತು ಸಮಿತಿ...
ಬೆಂಗಳೂರು (ಜೂ. 23): ಕಾಂಗ್ರೆಸ್ ಪಾಳಯದಲ್ಲಿ ಮುಂದುವರಿದ ಮುಖ್ಯಮಂತ್ರಿ ಹುದ್ದೆ ವಾರ್..! ಸಿದ್ಧರಾಮಯ್ಯ ಮುಖ್ಯಮಂತ್ರಿಯಾಗಲಿ ಅನ್ನುವ ಶಾಸಕ ಜಮೀರ್ ಅಹ್ಮದ್ ಹೇಳಿಕೆ ಬೆನ್ನಲ್ಲೇ ಇತರ ಶಾಸಕರೂ ಬಹುಪರಾಕ್ ಎಂದಿದ್ಧಾರೆ. ಶಾಸಕರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಕಾಂಗ್ರೆಸ್ ಶಿಸ್ತು ಸಮಿತಿ, ಶಿಸ್ತು ಮೀರಿ ಹೇಳಿಕೆ ನೀಡುತ್ತಿರುವವರಿಗೆ ನೊಟೀಸ್ ನೀಡಲು ಮುಂದಾಗಿದೆ.
Add Asianetnews Kannada as a Preferred Source

ಬಿಜೆಪಿ ನಾಯಕತ್ವ ಬದಲಾವಣೆ ಕದನ ದೆಹಲಿಗೆ ಶಿಫ್ಟ್, ಬಿಜೆಪಿ ಸೈಲೆಂಟ್..!
ಸಿಎಂ ಹುದ್ದೆ ಕುರಿತು ಬೇಜವಾಬ್ದಾರಿ ಹೇಳಿಕೆ ಕೊಡುವುದು ಸರಿಯಲ್ಲ. ಎಷ್ಟೇ ದೊಡ್ಡವರು ಇಂತಹ ಹೇಳಿಕೆ ಕೊಟ್ಟರೂ ಇದು ತಪ್ಪು. ಮುಖ್ಯಮಂತ್ರಿ ಮಾಡೋದು ಶಾಸಕಾಂಗ ಪಕ್ಷ ಅನ್ನೋ ಗೊತ್ತಿರಲಿ. ಸಿಎಂ ಯಾರಾಗಬೇಕು ಅಂತ ಹೇಳುವುದಕ್ಕೆ ಇದು ಸೂಕ್ತ ಕಾಲ ಅಲ್ಲ. ಈಗಾಗಲೇ ಹೈಕಮಾಂಡ್ ನಿಂದ ಇಂತಹ ಹೇಳಿಕೆ ಕೊಡದಂತೆ ಸೂಚನೆ ಬಂದಿದೆ ಎಂದು ಶಾಸಕ ಜಮೀರ್ ಸೇರಿದಂತೆ ಕೈ ಶಾಸಕರಿಗೆ ಕಾಂಗ್ರೆಸ್ ಶಿಸ್ತು ಸಮಿತಿ ಅಧ್ಯಕ್ಷ ರೆಹಮಾನ್ ಖಾನ್ ಸೂಚನೆ ನೀಡಿದ್ಧಾರೆ.