Asianet Suvarna News Asianet Suvarna News

ಮೈಸೂರು ವಿಭಜನೆಗೆ ಒತ್ತಾಯ : ವಿಶ್ವನಾಥ್ ‘ದೂರದೃಷ್ಟಿ’ಗೆ ಸಾ.ರಾ. ಮಹೇಶ್ ಕುಚೋದ್ಯ!

ವಿಜಯನಗರವನ್ನು ಪ್ರತ್ಯೇಕ ಜಿಲ್ಲೆ ಮಾಡಬೇಕೆಂದು ಅನರ್ಹ ಶಾಸಕ ಆನಂದ್ ಸಿಂಗ್ ಸರ್ಕಾರದ ಮೇಲೆ ಒತ್ತಡ ಹೇರಿದ ಬೆನ್ನಲ್ಲೇ, ಮತ್ತಷ್ಟು ಹೊಸ ಜಿಲ್ಲೆಗಳ ರಚನೆಯ ಕೂಗು ದಟ್ಟವಾಗತೊಡಗಿದೆ.

ಬೆಂಗಳೂರು (ಅ.14): ವಿಜಯನಗರವನ್ನು ಪ್ರತ್ಯೇಕ ಜಿಲ್ಲೆ ಮಾಡಬೇಕೆಂದು ಅನರ್ಹ ಶಾಸಕ ಆನಂದ್ ಸಿಂಗ್ ಸರ್ಕಾರದ ಮೇಲೆ ಒತ್ತಡ ಹೇರಿದ ಬೆನ್ನಲ್ಲೇ, ಮತ್ತಷ್ಟು ಹೊಸ ಜಿಲ್ಲೆಗಳ ರಚನೆಯ ಕೂಗು  ದಟ್ಟವಾಗತೊಡಗಿದೆ.

ತುಮಕೂರು ಜಿಲ್ಲೆಯನ್ನು ವಿಭಜಿಸಿ ಮಧುಗಿರಿ ಜಿಲ್ಲೆ ಮಾಡಬೇಕೆಂದು ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ್ ಒತ್ತಾಯಿಸಿದರೆ, ಮೈಸೂರು ಜಿಲ್ಲೆಯಿಂದ ಹುಣಸೂರನ್ನು ಪ್ರತ್ಯೇಕಿಸಿ ಅರಸು ಜಿಲ್ಲೆ ಮಾಡಬೇಕೆಂದು ಎಚ್. ವಿಶ್ವನಾಥ್ ಆಗ್ರಹಿಸಿಸುತ್ತಿದ್ದಾರೆ.

ಹಾವು-ಮುಂಗುಸಿಯಂತೆ ಕಚ್ಚಾಡುವ ವಿಶ್ವನಾಥ್- ಸಾ.ರಾ. ಮಹೇಶ್ ನಡುವೆ  ಮೈಸೂರು ಜಿಲ್ಲೆಯ ವಿಭಜನೆ ಮತ್ತೊಮ್ಮೆ ಮಾತಿನ ಕಿಡಿ ಹಚ್ಚಿದೆ. ಸುವರ್ಣನ್ಯೂಸ್ ಜೊತೆ ಮಾತನಾಡಿದ ಮಹೇಶ್, ಮೈಸೂರು ಜಿಲ್ಲೆ ವಿಭಜನೆಯ ಹಿಂದೆ ವಿಶ್ವನಾಥ್ ತಂತ್ರ ಏನೆಂದು ಬಿಚ್ಚಿಟ್ಟರು.  

Video Top Stories