Asianet Suvarna News Asianet Suvarna News

ಮೀಸಲಾತಿ ಹೋರಾಟ, ಸಿದ್ದು- ಬಿಎಸ್‌ವೈಗೆ ಪ್ರಾಣ ಸಂಕಟ..!

ರಾಜ್ಯದಲ್ಲಿ ಮೀಸಲಾತಿ ಹೋರಾಟ ತೀವ್ರಗೊಳ್ಳುತ್ತಿದೆ. ಪಂಚಮಸಾಲಿ, ಕುರುಬ ಮೀಸಲಾತಿ ಹೋರಾಟದ ನಂತರ ವೀರಶೈವ ಲಿಂಗಾಯತ ಸಮುದಾಯವನ್ನು ಒಬಿಸಿಗೆ ಸೇರಿಸಬೇಕೆಂಬ ಕೂಗು ಜೋರಾಗಿದೆ. 

ಬೆಂಗಳೂರು (ಫೆ. 14): ರಾಜ್ಯದಲ್ಲಿ ಮೀಸಲಾತಿ ಹೋರಾಟ ತೀವ್ರಗೊಳ್ಳುತ್ತಿದೆ. ಪಂಚಮಸಾಲಿ, ಕುರುಬ ಮೀಸಲಾತಿ ಹೋರಾಟದ ನಂತರ ವೀರಶೈವ ಲಿಂಗಾಯತ ಸಮುದಾಯವನ್ನು ಒಬಿಸಿಗೆ ಸೇರಿಸಬೇಕೆಂಬ ಕೂಗು ಜೋರಾಗಿದೆ. 

ಪಂಚಮಸಾಲಿ ಸಮುದಾಯಕ್ಕೆ 2A ಮೀಸಲಾತಿ ಕೊಡಲು ಮಾರ್ಚ್ 4 ರವರೆಗೆ ಡೆಡ್‌ಲೈನ್ ನೀಡಲಾಗಿದ್ದು, ಕೊಡದಿದ್ರೆ ಅಮರಣಾಂತ ಉಪವಾಸ ಮಾಡುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಲಾಗಿದೆ. ಒಂದು ಸಮುದಾಯಕ್ಕೆ ಕೊಟ್ಟರೆ ಇನ್ನೊಂದು ಸಮುದಾಯದ ಆಕ್ರೋಶಕ್ಕೆ ಕಾರಣವಾಗುವ ಸಾಧ್ಯತೆ ಇದೆ. ಹಾಗಾಗಿ ಯಡಿಯೂರಪ್ಪ ಗೊಂದಲದಲ್ಲಿದ್ದಾರೆ. ಈ ಮೀಸಲಾತಿ ಹೋರಾಟ ಎಲ್ಲಿಗೆ ಹೋಗಿ ತಲುಪಬಹುದು..? 

ಮೀಸಲಾತಿ ಘೋಷಣೆಗೆ ಡೆಡ್‌ಲೈನ್, ಪಂಚಮಸಾಲಿ ಶ್ರೀಗಳ ಎಚ್ಚರಿಕೆಗೆ ಮಣಿಯುತ್ತಾರಾ ಬಿಎಸ್‌ವೈ.?

Video Top Stories