Asianet Suvarna News Asianet Suvarna News

ಎಚ್‌ಡಿಕೆ ವಿರುದ್ಧ ತೊಡೆ ತಟ್ಟಿದ ಡಿಕೆಶಿ ಶಪಥದ ಹಿಂದಿದೆ ಭಾರೀ ರಾಜಕೀಯ ಲೆಕ್ಕಾಚಾರ!

ಕನಕಪುರ ತಾಲೂಕನ್ನು ಬೆಂಗಳೂರಿಗೆ ಸೇರಿಸುವುದಾಗಿ ಹೇಳಿದ ಡಿಸಿಎಂ ಡಿ.ಕೆ. ಶಿವಕುಮಾರ್‌ ಶಪಥದ ಹಿಂದೆ ಭಾರಿ ದೊಡ್ಡ ರಾಜಕೀಯ ಲೆಕ್ಕಾಚಾರವಿದೆ. 

ಬೆಂಗಳೂರು (ಅ.25): ರಾಜ್ಯ ರಾಜಕಾರಣದ ಅತೀ ದೊಡ್ಡ ದುಷ್ಮನಿಗೆ ಸಿಕ್ಕಿದೆ ರೋಚಕ ತಿರುವು. ದಳಪತಿ ಕುಮಾರಸ್ವಾಮಿಗೆ ಕನಕವ್ಯೂಹದ ಮೂಲಕ ಟಕ್ಕರ್ ಕೊಡಲು ಮುಂದಾದ್ರು ಕನಕಾಧಿಪತಿ. ಡಿಕೆಶಿ ಕರ್ಮಭೂಮಿ ಕನಕಪುರ ಇನ್ನು ಮುಂದೆ ಬೆಂಗಳೂರು ಜಿಲ್ಲೆಗೆ ಸೇರಲಿದ್ಯಂತೆ. ಎಲ್ಲಿಯ ಬೆಂಗಳೂರು, ಎಲ್ಲಿಯ ಕನಕಪುರ..? ಅಷ್ಟಕ್ಕೂ ರಾಮನಗರ ಜಿಲ್ಲೆಯಿಂದ ಕನಕಪುರವನ್ನು ಬೇರ್ಪಡಿಸಲು ಡಿಸಿಎಂ ಡಿಕೆ ಶಿವಕುಮಾರ್ ಮುಂದಾಗಿರೋದ್ಯಾಕೆ..? ಡಿಕೆ ಶಿವಕುಮಾರ್ ಅವರ ಕರ್ಮಭೂಮಿ ಕನಕಪುರ ವಿಧಾನಸಭಾ ಕ್ಷೇತ್ರವನ್ನು ಒಡಲಲ್ಲಿ ಹಾಕಿಕೊಂಡಿರೋ ರಾಮನಗರ ಜಿಲ್ಲೆ ದಳಪತಿ ಕುಮಾರಸ್ವಾಮಿಯವರ ಕನಸಿನ ಕೂಸು. ಈಗ ಕನಕಪುರವನ್ನು ಬೆಂಗಳೂರು ಜಿಲ್ಲೆಗೆ ಸೇರಿಸ್ತೀನಿ ಅಂತ ಹೊರಟು ನಿಂತಿದ್ದಾರೆ.

ಹುಲಿ ಉಗುರು ಪೆಂಡೆಂಟ್‌ ಧರಿಸಿದ ನಟ ಜಗ್ಗೇಶ್, ದರ್ಶನ್‌ಗೆ ಅರಣ್ಯ ಇಲಾಖೆ ನೋಟಿಸ್‌: ನಿಖಿಲ್‌ ಕುಮಾರಸ್ವಾಮಿ ಬಚಾವ್‌!

ಕನಕಪುರ ಡಿಕೆ ಶಿವಕುಮಾರ್ ಅವರ ಕರ್ಮಭೂಮಿ. ರಾಮನಗರ ಕುಮಾರಸ್ವಾಮಿಯವರ ರಾಜಕೀಯ ಶಕ್ತಿಕೇಂದ್ರ. ಕನಕಪುರ ವಿಧಾನಸಭಾ ಕ್ಷೇತ್ರವನ್ನು ಒಡಲಲ್ಲಿ ಹಾಕಿಕೊಂಡಿರೋ ರಾಮನಗರ ಜಿಲ್ಲೆ ದಳಪತಿ ಕುಮಾರಸ್ವಾಮಿಯವರ ಕನಸಿನ ಕೂಸು. ಈಗ ಕನಕಪುರವನ್ನು ಬೆಂಗಳೂರು ಜಿಲ್ಲೆಗೆ ಸೇರಿಸ್ತೀನಿ ಅಂತ ಡಿಸಿಎಂ ಡಿಕೆಶಿ ಶಪಥ ಮಾಡಿದ್ದಾರೆ. ಒಟ್ಟಿನಲ್ಲಿ ವಿಜಯದಶಮಿಯ ದಿನ ಡಿಸಿಎಂ ಡಿಕೆ ಶಿವಕುಮಾರ್ ನೀಡಿರೋ ಹೇಳಿಕೆ, ಕನಕಾಧಿಪತಿ ಮತ್ತು ದಳಪತಿ ಮಧ್ಯೆ ಹೊಸ ರಾಜಕೀಯ ಸಮರಕ್ಕೆ ಮುನ್ನುಡಿ ಬರೆದಿದೆ.