Asianet Suvarna News Asianet Suvarna News

Party Rounds: ಹುಬ್ಬಳ್ಳಿ ಅಖಾಡಕ್ಕೆ ರಾಜಾಹುಲಿ ಎಂಟ್ರಿ, ಬದಲಾಯ್ತು ಕಾಂಗ್ರೆಸ್‌ ರಣತಂತ್ರ!

ಶೆಟ್ಟರ್‌ ಮಣಿಸಲು ಪಣತೊಟ್ಟಿರುವ ಬಿಎಸ್‌ವೈ ಹುಬ್ಬಳ್ಳಿಯಲ್ಲಿ ಅಖಾಡಕ್ಕಿಳಿಯುತ್ತಿದ್ದಂತೆ ಕಾಂಗ್ರೆಸ್‌ ಅಲರ್ಟ್‌ ಆಗಿದೆ. ರಾಜಾಹುಲಿಗೆ ಟಕ್ಕರ್‌ ಕೊಡಲು ಖುದ್ದು ಖರ್ಗೆ ಅಖಾಡಕ್ಕಿಳಿದಿದ್ದಾರೆ

ಹುಬ್ಬಳ್ಳಿ (ಏ.26): ಏನಾದರಾಗಲಿ, ಜಗದೀಶ್‌ ಶೆಟ್ಟರ್‌ ಅವರನ್ನು ಈ ಬಾರಿ ಹುಬ್ಬಳ್ಳಿ ಸೆಂಟ್ರಲ್‌ ಕ್ಷೇತ್ರದಲ್ಲಿ ಸೋಲಿಸಲೇಬೇಕು ಎಂದು ಪಣತೊಟ್ಟಿರುವ ಬಿಜೆಪಿ ಅದಕ್ಕಾಗಿ ಸರ್ವ ರೀತಿಯ ಪ್ರಯತ್ನಗಳನ್ನೂ ಮಾಡುತ್ತಿದದೆ. ಬುಧವಾರ ಖುದ್ದು ರಾಜ್ಯ ಬಿಜೆಪಿಯ ಹಿರಿಯ ನಾಯಕ ಬಿಎಸ್‌ ಯಡಿಯೂರಪ್ಪ ಹುಬ್ಬಳ್ಳಿಗೆ ತೆರಳಿದ್ದಾರೆ. ಈ ವೇಳೆ ಮಾತನಾಡಿದ ಅವರು, ರಕ್ತದಲ್ಲಿ ಬೇಕಾದರೆ ಬರೆದು ಕೊಡ್ತಿನಿ ಈ ಬಾರಿ ಶೆಟ್ಟರ್‌ ಸೋಲು ಶತಸಿದ್ಧ ಎಂದು ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಂಗಳವಾರ ತಡರಾತ್ರಿ ಯಡಿಯೂರಪ್ಪ ಲಿಂಗಾಯತ ಮುಖಂಡರ ಸಭೆ ಕೂಡ ನಡೆಸಿದ್ದಾರೆ. ಈ ವೇಳೆ ಪ್ರಲ್ಹಾದ್‌ ಜೋಶಿ ಕೂಡ ಭಾಗಿಯಾಗಿದ್ದರು. ಶೆಟ್ಟರ್‌ ಅವರನ್ನು ಸೋಲಿಸಲು ಏನೆಲ್ಲಾ ಪ್ರಯತ್ನ ಮಾಡಬೇಕು ಎನ್ನುವುದರ ಬಗ್ಗೆ ಚರ್ಚೆ ನಡೆಸಿದ್ದಾರೆ.

ಬಿ.ಎಲ್‌. ಸಂತೋಷ, ಜೋಶಿ, ಬೊಮ್ಮಾಯಿ ಹಿಡಿತದಲ್ಲಿ ಬಿಜೆಪಿ: ಶೆಟ್ಟರ್‌

Video Top Stories