ವಿಧಾನ ಪರಿಷತ್ತಿಗೆ ಎಂಎಲ್ಸಿಗಳ ನಾಮನಿರ್ದೇಶನ: ಸರ್ಕಾರಕ್ಕೆ ಶಾಕ್!

ವಿಧಾನ ಪರಿಷತ್ತಿಗೆ ಮೂವರು ಎಂಎಲ್ಸಿಗಳ ನಾಮನಿರ್ದೇಶನಕ್ಕೆ ಶಿಫಾರಸು ಮಾಡಿದ್ದ ಸಿದ್ದರಾಮಯ್ಯ ಸರ್ಕಾರಕ್ಕೆ ಈಗ ಶಾಕ್‌ ಸಿಕ್ಕಿದೆ. ಹೌದು! ನಾಮನಿರ್ದೇಶಿತ ಸದ್ಯಸರ ಹಿನ್ನಲೆಯನ್ನು ರಾಜ್ಯಪಾಲರು ಕೇಳಿದ್ದಾರೆ. 

First Published Aug 5, 2023, 6:37 PM IST | Last Updated Aug 5, 2023, 6:52 PM IST

ಬೆಂಗಳೂರು (ಆ.05): ವಿಧಾನ ಪರಿಷತ್ತಿಗೆ ಮೂವರು ಎಂಎಲ್ಸಿಗಳ ನಾಮನಿರ್ದೇಶನಕ್ಕೆ ಶಿಫಾರಸು ಮಾಡಿದ್ದ ಸಿದ್ದರಾಮಯ್ಯ ಸರ್ಕಾರಕ್ಕೆ ಈಗ ಶಾಕ್‌ ಸಿಕ್ಕಿದೆ. ಹೌದು! ನಾಮನಿರ್ದೇಶಿತ ಸದ್ಯಸರ ಹಿನ್ನಲೆಯನ್ನು ರಾಜ್ಯಪಾಲರು ಕೇಳಿದ್ದಾರೆ. ಸರ್ಕಾರ ಮೂವರು ಪರಿಷತ್ ನಾಮನಿರ್ದೇಶಿತರ ಹೆಸರನ್ನು ಶಿಫಾರಸು ಮಾಡಿತ್ತು. ಈಗ ಈ ಮೂವರ ಹಿನ್ನಲೆಯನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಕೇಳಿದ್ದು, ರಾಜ್ಯ ಸರ್ಕಾರದಿಂದ ರಾಜ್ಯಪಾಲರಿಗೆ ಶಿಫಾರಸು ರವಾನೆ ಆಗಿದೆ. ಸರ್ಕಾರವು ಎಂ.ಆರ್.ಸೀತಾರಾಮ್, ಮನ್ಸೂರ್ ಖಾನ್, ಸುಧಾಮ್ ದಾಸ್‌ ಶಿಕ್ಷಣ, ಸಹಕಾರ, ಸಂಸ್ಕೃತಿ ಸಮಾಜಸೇವೆ ಕೋಟಾದಡಿ ಶಿಫಾರಸು ಮಾಡಲಾಗಿತ್ತು. ಇನ್ನು ಜುಲೈ 31ರಂದು ರಾಜ್ಯಪಾಲರನ್ನು ಸಿಎಂ ಸಿದ್ದರಾಮಯ್ಯ ಭೇಟಿಯಾಗಿದ್ದರು. ಇದೀಗ ರಾಜ್ಯಪಾಲರ ವಿವರಣೆಯಿಂದ ರಾಜ್ಯ ಸರ್ಕಾರಕ್ಕೆ ಶಾಕ್ ಕೊಟ್ಟಂತಾಗಿದೆ.