
ಶಾಸಕ ಜಮೀರ್ ಅಡ್ಡಾದಲ್ಲಿ ಭುಗಿಲೆದ್ದು ನಿಂತ ಮೈದಾನ ವಿವಾದದ ಕಥೆ
ಇದು ಒಂದು ಮೈದಾನದ ಕಥೆ.. ಜಮೀರ್ ಅಡ್ಡಾದಲ್ಲಿ ಭುಗಿಲೆದ್ದು ನಿಂತ ಮೈದಾನ ವಿವಾದದ ಕಥೆ. ಸಂಧಾನ, ಸಂಘರ್ಷ, ಗಲಾಟೆ, ಗದ್ದಲ... ಶಾಂತಿಸಭೆ ಕರೆದ ಶಾಸಕ ಜಮೀರ್ ಅಹ್ಮದ್ ಖಾನ್, ಸಭೆಯಲ್ಲೇ ರೋಷಾವೇಷದಿಂದ ಅಬ್ಬರಿಸಿದ್ದೇಕೆ..? ಶಾಸಕರ ವಿರುದ್ಧ ನಾಗರಿಕ ಒಕ್ಕೂಟ ವೇದಿಕೆ ಸಿಡಿದೆದ್ದು ನಿಂತದ್ದೇಕೆ..? ಅಷ್ಟಕ್ಕೂ ಏನಿದು ಧರ್ಮ ದಂಗಲ್"ಗೆ ಸಾಕ್ಷಿಯಾಗ್ತಿರೋ ಮೈದಾನ ವಿವಾದ..?
ಬೆಂಗಳೂರು, (ಜುಲೈ.10): ಇದು ಒಂದು ಮೈದಾನದ ಕಥೆ.. ಜಮೀರ್ ಅಡ್ಡಾದಲ್ಲಿ ಭುಗಿಲೆದ್ದು ನಿಂತ ಮೈದಾನ ವಿವಾದದ ಕಥೆ. ಸಂಧಾನ, ಸಂಘರ್ಷ, ಗಲಾಟೆ, ಗದ್ದಲ... ಶಾಂತಿಸಭೆ ಕರೆದ ಶಾಸಕ ಜಮೀರ್ ಅಹ್ಮದ್ ಖಾನ್, ಸಭೆಯಲ್ಲೇ ರೋಷಾವೇಷದಿಂದ ಅಬ್ಬರಿಸಿದ್ದೇಕೆ..? ಶಾಸಕರ ವಿರುದ್ಧ ನಾಗರಿಕ ಒಕ್ಕೂಟ ವೇದಿಕೆ ಸಿಡಿದೆದ್ದು ನಿಂತದ್ದೇಕೆ..? ಅಷ್ಟಕ್ಕೂ ಏನಿದು ಧರ್ಮ ದಂಗಲ್"ಗೆ ಸಾಕ್ಷಿಯಾಗ್ತಿರೋ ಮೈದಾನ ವಿವಾದ..?
ಚಾಮರಾಜಪೇಟೆ ಈದ್ಗಾ ಗ್ರೌಂಡ್ ವಿವಾದ: ಬಂದ್ ಮಾಡೋದು ನಿಶ್ಚಿತ, ಜಮೀರ್ಗೆ ಸವಾಲ್
ರಾಜ್ಯದಲ್ಲಿ ಧರ್ಮ ದಂಗಲ್ ತಣ್ಣಗಾಯ್ತು ಅನ್ನುವಷ್ಟರಲ್ಲಿ ಎದ್ದು ಕೂತಿರೋ ಮತ್ತೊಂದು ಧರ್ಮಸಂಘರ್ಷವಿದು ವೀಕ್ಷಕರೇ... ಈ ಸಂಘರ್ಷದ ಕೇಂದ್ರಬಿಂದು ಬೆಂಗಳೂರಿನ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿರೋ ಈದ್ಗಾ ಮೈದಾನ. ಚಾಮರಾಜಪೇಟೆ ಅಂದ್ರೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಅಖಾಡ. ಈ ವಿವಾದದಲ್ಲಿ ಶಾಸಕ ಜಮೀರ್ ಕೂಡ ಸೆಂಟರ್ ಆಫ್ ಅಟ್ರಾಕ್ಷನ್..ಇದೇ ಇವತ್ತಿನ ಸುವರ್ಣ ಸ್ಪೆಷಲ್, ಈದ್ಗಾ ಕಾಳಗ.