Asianet Suvarna News Asianet Suvarna News

ರಾಯಚೂರು: ಪಿಪಿಇ ಕಿಟ್‌ ಇಲ್ಲದೆ ಕೊರೋನಾ ಸೋಂಕಿತನ ಅಂತ್ಯಕ್ರಿಯೆ..!

ಆರೋಗ್ಯ ಇಲಾಖೆ ಸಿಬ್ಬಂದಿ ಮಹಾಯಡವಟ್ಟು| ಮುನ್ನೆಚ್ಚರಿಕೆ ಕ್ರಮ ಇಲ್ಲದಯೇ ಸಂಬಂಧಿಕರಿಂದಲೇ ಕೊರೋನಾ ಸೋಂಕಿತನ ಅಂತ್ಯಕ್ರಿಯೆ| ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಆನೆಹೊಸೂರು ಗ್ರಾಮದಲ್ಲಿ ನಡೆದ ಘಟನೆ| 

ರಾಯಚೂರು(ಜು.23): ಆರೋಗ್ಯ ಇಲಾಖೆಯ ಸಿಬ್ಬಂದಿ ಪಿಪಿಇ ಕಿಟ್‌ ಇಲ್ಲದೆಯೇ ಕೊರೋನಾ ಸೋಂಕಿತನ ಅಂತ್ಯ ಸಂಸ್ಕಾರ ನಡೆಸಿದ ಘಟನೆ ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಆನೆಹೊಸೂರು ಗ್ರಾಮದಲ್ಲಿ ನಡೆದಿದೆ. ಈ ಮೂಲಕ ಆರೋಗ್ಯ ಇಲಾಖೆ ಸಿಬ್ಬಂದಿ ಮಹಾ ಯಡವಟ್ಟವಟ್ಟೊಂದನ್ನ ಮಾಡಿಕೊಂಡಿದ್ದಾರೆ. 

ಯಾದಗಿರಿ ಕೋವಿಡ್ ಆಸ್ಪತ್ರೆ ಅವ್ಯವಸ್ಥೆಗೆ ಕೊನೆ ಯಾವಾಗ..?

ಯಾವುದೇ ಮುನ್ನೆಚ್ಚರಿಕೆ ಕ್ರಮ ಇಲ್ಲದಯೇ ಸಂಬಂಧಿಕರಿಂದಲೇ ಕೊರೋನಾ ಸೋಂಕಿತನ ಅಂತ್ಯಕ್ರಿಯೆ ನಡೆದಿದೆ. ಕೇವಲ ಇಬ್ಬರು ಮಾತ್ರ ಪಿಪಿಇ ಕಿಟ್‌ ಧರಿಸಿದ್ದು ಬಿಟ್ಟರೆ ಬೇರೆ ಯಾರು ಪಿಪಿಇ ಕಿಟ್‌ ಧರಿಸಿಲ್ಲ. 
 

Video Top Stories