
ಇದು ಟ್ರೇಲರ್ ಅಷ್ಟೇ, ಪಿಕ್ಚರ್ ಅಭಿ ಬಾಕಿ ಹೈ, ಮುಕೇಶ್ ಅಂಬಾನಿಗೆ ಜೀವ ಬೆದರಿಕೆ
ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಅವರ ಮನೆಯ ಬಳಿ ಇತ್ತೀಚೆಗೆ ಸ್ಫೋಟಕ ಇರಿಸಿದ್ದ ಕಾರು ಪತ್ತೆಯಾದ ಪ್ರಕರಣಕ್ಕೆ ಇದೀಗ ಹೊಸ ತಿರುವು ಸಿಕ್ಕಿದೆ.
ನವದೆಹಲಿ (ಮಾ. 01): ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಅವರ ಮನೆಯ ಬಳಿ ಇತ್ತೀಚೆಗೆ ಸ್ಫೋಟಕ ಇರಿಸಿದ್ದ ಕಾರು ಪತ್ತೆಯಾದ ಪ್ರಕರಣಕ್ಕೆ ಇದೀಗ ಹೊಸ ತಿರುವು ಸಿಕ್ಕಿದೆ. ಘಟನೆಯಲ್ಲಿ ತನ್ನ ಕೈವಾಡವಿದೆ ಎಂದು ಹೇಳಿಕೊಂಡಿರುವ ‘ಜೈಷ್ ಅಲ್ ಹಿಂದ್’ ಎಂಬ ಸಂಘಟನೆಯೊಂದು, ಈಗಿನದ್ದು ಕೇವಲ ಟ್ರೇಲರ್, ಮುಂದೆ ಇನ್ನೂ ದೊಡ್ಡ ಆಟ ಇದೆ ಎಂದು ಎಚ್ಚರಿಸಿದೆ.
Add Asianetnews Kannada as a Preferred Source

ಗ್ಯಾಸ್ ಸಿಲಿಂಡರ್ ದರ ಇಂದು 25 ರೂ ಏರಿಕೆ, ಗ್ರಾಹಕರಿಗೆ ಬರೆ ಮೇಲೆ ಬರೆ!
ಈಗಿನದ್ದು ಕೇವಲ ಟ್ರೇಲರ್, ದೊಡ್ಡ ಆಟ ಇನ್ನೂ ಬಾಕಿ ಇದೆ. ನಾವು ಪತ್ರದಲ್ಲಿ ತಿಳಿಸಿದಂತೆ ಕೂಡಲೇ ಬಿಟ್ಕಾಯಿನ್ ರೂಪದಲ್ಲಿ ನಮಗೆ ಹಣ ಪಾವತಿ ಮಾಡಬೇಕು. ಇಲ್ಲದೇ ಹೋದಲ್ಲಿ ಮುಂದಿನ ಬಾರಿ ನಾವು ಕಾರನ್ನು ನಿಮ್ಮ ಮಕ್ಕಳ ಕಾರಿಗೆ ಗುದ್ದಲಿದ್ದೇವೆ. ನೀವು (ಮುಕೇಶ್) ಏನು ಮಾಡಬೇಕೆಂಬುದು ನಿಮಗೆ ಗೊತ್ತಿದೆ. ನಾವು ಈಗಾಗಲೇ ಹೇಳಿದಂತೆ ಸುಮ್ಮನೆ ಹಣ ವರ್ಗಾವಣೆ ಮಾಡಿ’ ಎಂದು ಬೆದರಿಕೆ ದಾಟಿಯಲ್ಲಿ ಹೇಳಲಾಗಿದೆ.