'ಸುವರ್ಣ' ಲಕ್ಷ್ಮಿಯರ ಜೊತೆ ವರಮಹಾಲಕ್ಷ್ಮೀ ಆಚರಣೆ
ವರಮಹಾಲಕ್ಷ್ಮೀ ಹಬ್ಬ ಏಕೆ ಆಚರಿಸಬೇಕು, ಹೇಗಿರಬೇಕು ಆಚರಣೆ, ಹಿನ್ನೆಲೆ ಏನು ಎಲ್ಲವನ್ನೂ ಸುವರ್ಣ ನ್ಯೂಸ್ನ 'ಮಹಾಲಕ್ಷ್ಮೀ'ಯರಿಗೆ ಶ್ರೀಕಂಠ ಶಾಸ್ತ್ರಿಗಳು ತಿಳಿಸಿಕೊಡುತ್ತಾರೆ.
ವರಮಹಾಲಕ್ಷ್ಮೀ ವ್ರತ ಆರಂಭವಾಗಿದ್ದು ಹೇಗೆ, ಈ ಬಗ್ಗೆ ಪರಮೇಶ್ವರ ಹೇಳಿದ್ದೇನು, ಇದನ್ನು ಆಚರಿಸುವುದು ಏಕೆ, ವರಮಹಾಲಕ್ಷ್ಮೀ ಪೂಜೆಯಿಂದ ಲಭಿಸುವ ಫಲವೇನು? ಈ ಸಂದರ್ಭದಲ್ಲಿ 12 ದಾರಗಳನ್ನು ಕಟ್ಟಿಕೊಳ್ಳುವುದರ ಉದ್ದೇಶ ಏನು? ವರಮಹಾಲಕ್ಷ್ಮೀ ವ್ರತವನ್ನು ಕಾರಣಾಂತರಗಳಿಂದ ಈ ದಿನ ಆಚರಿಸಲಾಗದಿದ್ದರೆ, ಮತ್ತೆ ಯಾವಾಗ ಆಚರಿಸಬಹುದು? ಇನ್ನೂ ಮುಂತಾದ ನಿಮ್ಮೊಳಗೂ ಇರಬಹುದಾದ ಎಲ್ಲ ಪ್ರಶ್ನೆಗಳಿಗೆ ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ಉತ್ತರಿಸಿದ್ದಾರೆ. ಸುವರ್ಣ ನ್ಯೂಸ್ನ 'ಉದ್ಯೋಗ ಲಕ್ಷ್ಮಿ'ಯರು ವರಮಹಾಲಕ್ಷ್ಮೀ ಪೂಜೆಯಲ್ಲಿ ಪಾಲ್ಗೊಂಡು ಆಚರಿಸಿದ್ದು ಹೀಗೆ..