ಗ್ರಹಗಳ ಸ್ಥಾನಪಲ್ಲಟ; ಭಯ ಹುಟ್ಟಿಸೋ ಭವಿಷ್ಯ ನುಡಿದ ಬ್ರಹ್ಮಾಂಡ ಗುರೂಜಿ!

ರಾಹು ಕೇತು ಗುರು ಗ್ರಹಗಳ ಪಲ್ಲಟದಿಂದಾಗುವ ಬದಲಾವಣೆಗಳ ಬಗ್ಗೆ ಬ್ರಹ್ಮಾಂಡ ಗುರೂಜಿ ನರೇಂದ್ರ ಶರ್ಮಾ ಭವಿಷ್ಯ ನುಡಿದಿದ್ದಾರೆ. 

Share this Video
  • FB
  • Linkdin
  • Whatsapp

ಬಹಳ ಅಪರೂಪದ ವಿದ್ಯಾಮಾನದಂತೆ ಈ ತಿಂಗಳಲ್ಲಿ ಹಲವಾರು ಗ್ರಹಗಳು ರಾಶಿ ಬದಲಾವಣೆ ಮಾಡುತ್ತಿವೆ. ಈಗಾಗಲೇ ರಾಹು, ಕೇತು, ಬುಧ, ಸೂರ್ಯ, ಗುರುವಿನ ಸ್ಥಾನ ಬದಲಾಗಿದೆ. ಗುರು ಮತ್ತೊಮ್ಮ ಇನ್ನೈದು ದಿನದಲ್ಲಿ ಸ್ಥಾನ ಬದಲಿಸಲಿದ್ದಾನೆ. ಈ ತಿಂಗಳ ಕೊನೆಯಲ್ಲಿ ಶನಿ, ಕುಜರ ಪಲ್ಲಟವೂ ನಡೆಯಲಿದೆ. ಇದರಿಂದ ಸಾಲು ಸಾಲು ಗಂಡಾಂತರಗಳು ನಡೆಯುತ್ತವೆ ಎಂದು ಬ್ರಹ್ಮಾಂಡ ಗುರೂಜಿ ನರೇಂದ್ರಬಾಬು ಶರ್ಮಾ ಭವಿಷ್ಯ ನುಡಿದಿದ್ದಾರೆ. 

Add Asianetnews Kannada as a Preferred SourcegooglePreferred

ಹೊಸ ವರ್ಷಾರಂಭದಲ್ಲೇ ಯುದ್ಧದ ಸುದ್ದಿಗಳು, ಶ್ರೀಲಂಕಾ, ನೇಪಾಳಗಳು ಹಣವಿಲ್ಲದೆ, ಅಲ್ಲಿನ ಜನ ತುತ್ತು ಅನ್ನಕ್ಕೂ ಪರದಾಡುತ್ತಿರುವ ಸುದ್ದಿಗಳು, ಕೋಮು ದಳ್ಳುರಿಗಳು ಹೆಚ್ಚಿವೆ. ಒಂದೇ ಒಂದು ಸಮಾಧಾನದ ವಿಷಯವೆಂದರೆ ಕೊರೋನಾ ವೈರಸ್ ಸಮಸ್ಯೆಯಿಂದ ಚೇತರಿಸಿಕೊಳ್ಳುತ್ತಿರುವುದು. ಆದರೆ ಆ ನೆಮ್ಮದಿಯೂ ಹೆಚ್ಚು ದಿನ ಉಳಿಯುವುದಿಲ್ಲ ಎಂಬಂಥ ಭವಿಷ್ಯವನ್ನು ಬ್ರಹ್ಮಾಂಡ ಗುರೂಜಿ ಹೇಳಿದ್ದಾರೆ. 

ಧರ್ಮಕ್ಕೂ ಮಿಗಿಲಾದ ಭಕ್ತಿ: ಮುಸ್ಲಿಂ ರಾಮ ಭಕ್ತನೊರ್ವರಿಂದ ಶ್ರೀರಾಮ ಕೋಟಿ ವ್ರತ!

ಹೌದು, ಈ ತಿಂಗಳಲ್ಲಾಗುವ ಪ್ರಮುಖ ಗ್ರಹಗಳ ಸ್ಥಾನ ಪಲ್ಲಟದಿಂದ ಮತ್ತೊಂದು ವೈರಸ್ ಹುಟ್ಟಿಕೊಳ್ಳಲಿದೆ, ಐದು ವರ್ಷಗಳ ಅದರ ಆರ್ಭಟ ನಲುಗಿಸಲಿದೆ, ಜಗತ್ತಿನಲ್ಲಿ ವಿಪತ್ತು ಹೆಚ್ಚಾಗಲಿದೆ ಎಂಬ ಭವಿಷ್ಯ ನುಡಿದಿದ್ದಾರೆ ಬ್ರಹ್ಮಾಂಡ ಗುರೂಜಿ. ಈ ಬಗ್ಗೆ ಹೆಚ್ಚಿನ ವಿವರಗಳನ್ನು ನೋಡೋಣ ಬನ್ನಿ. 

Related Video