Asianet Suvarna News Asianet Suvarna News

ಮಹಾಲಯದಲ್ಲಿ ಮನೆಗೆ ಬರ್ತಾರೆ ಪೂರ್ವಜರು!

ಮಹಾಲಯದಲ್ಲಿ ಮನೆಗೆ ಬರುತ್ತಾರೆ ಪೂರ್ವಜರು. ಅವರನ್ನು ಸಂತೃಪ್ತಿಪಡಿಸಿದರೆ ಅವರ ಆಶೀರ್ವಾದ ಸದಾ ನಿಮ್ಮನ್ನು ಕಾಯಲಿದೆ.. 

ಪಿತೃಪಕ್ಷದಲ್ಲಿ ಪೂರ್ವಜರು ತಮ್ಮ ಕುಟುಂಬಸ್ಥರನ್ನು ಕಾಣಲು ಧರೆಗೆ ಬರುತ್ತಾರೆ. ನಮಗೆ 15 ದಿನ ಎಂದರೆ ಅವರಿಗೆ ಅರ್ಧ ದಿನ.. ಈ ಸಂದರ್ಭದಲ್ಲಿ ಕುಟುಂಬಕ್ಕೆ ಅವರು ತುಂಬು ಹೃದಯದಿಂದ ಹರಸಬೇಕು. ಅದನ್ನು ಪಡೆಯಲು ಅವರನ್ನು ಬಹಳ ಶ್ರದ್ಧೆಯಿಂದ ನೆನೆಸಿಕೊಳ್ಳಬೇಕು. ಶ್ರದ್ಧೆಯಿಂದ ಮಾಡುವುದೇ ಶ್ರಾದ್ಧ.. ಹೀಗಾಗಿ ಯಥಾಸಾಮರ್ಥ್ಯ ಪೂರ್ವಜರಿಗೆ ಕೃತಜ್ಞತೆ ಅರ್ಪಿಸಬೇಕು ಎನ್ನುತ್ತಾರೆ ಜ್ಯೋತಿಷಿಗಳಾದ ಶ್ರೀಕಂಠ ಶಾಸ್ತ್ರಿಗಳು..