Asianet Suvarna News Asianet Suvarna News

ನಮ್ಮ ಹುಡುಗ್ರು ಮಾಡಿರೋದು, ನಾನೇನು ಮಾಡಿಲ್ಲ ಸಾರ್; ಎಸಿಪಿ ಚಂದನ್‌ಗೆ ಅವಾಜ್ ಹಾಕಿದ್ದ ನಟ ದರ್ಶನ್

ನಮ್ಮ ಹುಡುಗರು ಮಾಡಿರೋದು, ನಾನು ಏನು ಮಾಡಿಲ್ಲ. ನನಗೆ ಏನು ಗೊತ್ತಿಲ್ಲ ಸಾರ್​. ನನ್ನ ಯಾಕೆ ಅರೆಸ್ಟ್ ಮಾಡ್ತೀರಾ ಸಾರ್ ಎಂದು ದರ್ಶನ್ ಹೇಳಿದ್ದರು.

First Published Aug 13, 2024, 4:43 PM IST | Last Updated Aug 21, 2024, 4:48 PM IST

ರೇಣುಕಾಸ್ವಾಮಿಯನ್ನು ಕೊಲೆ ಮಾಡಿ ಹಣ ಕೊಟ್ಟು ಸೈಲೆಂಟ್​ ಆಗಿದ್ದ ನಟ ದರ್ಶನ್‌ಗೆ ಬೆಂಗಳೂರು ಪೊಲೀಸ್ ಇಲಾಖೆಯ ಎಸಿಪಿ ಚಂದನ್ ಬೆಳ್ಳಂಬೆಳಗ್ಗೆ ಶಾಕ್ ನೀಡಿದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸಿನ ಬಳಿಕ ಹಣ ಕೊಟ್ಟು ಕೆಲವರನ್ನು ಪೊಲೀಸರಿಗೆ ಸರೆಂಡರ್ ಆಹಲು ಕಳಿಸಿ ನೆಮ್ಮದಿಯಾಗಿರೋಣ ಎಂದುಕೊಂಡು ನಟ ದರ್ಶನ್ ಮೈಸೂರಿಗೆ ತೆರಳಿದ್ದನು. ಅಲ್ಲಿಗೆ ಹೋಗಿ ಅರೆಸ್ಟ್ ಮಾಡಿದ ಪೊಲೀಸರ ಮುಂದೆ ನಟ ದರ್ಶನ್ 'ನಾನು ಈ ರೀತಿ ಲಾಕ್ ಹಾಕ್ತೀನಿ ಅಂತ ಗೊತ್ತಿರಲಿಲ್ಲ ಸಾರ್. ನಾನು ನಿರೀಕ್ಷೆ ಮಾಡಿರಲಿಲ್ಲ, ಸಾರ್ ನೀವು ಬರ್ತೀರಾ ಅಂತ' ಎಂದು ಹೇಳಿದ್ದಾನೆ. 

ನಟ ದರ್ಶನ್ ವಿರುದ್ಧ ಸಾಕ್ಷಿ ಹೇಳಿದ್ರಾ ನಟ ಯಶಸ್ ಸೂರ್ಯ?

ನಟ ದರ್ಶನ್‌ನನ್ನು ಬಂಧಿಸಲು ಎಸಿಪಿ ಚಂದನ್ ಮೈಸೂರಿಗೆ ತೆರಳಿದ್ದಾಗ ದರ್ಶನ್ ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿದ್ದನು. ಪೊಲೀಸರು ಜಿಮ್ ನಿಂದ ನೇರವಾಗಿ ಸ್ಟೇಷನ್ ಗೆ ಕರೆತಂದಿದ್ದರು. ನಂತರ ಅನ್ನಪೂರ್ಣೇಶ್ವರಿನಗರ ಠಾಣೆಯಲ್ಲಿಟ್ಟು ದರ್ಶನ್ ವಿಚಾರಣೆ ಮಾಡಿದ್ದರು. ಇನ್ನು ವಿಚಾರಣೆ ವೇಳೆ ನಮ್ಮ ಹುಡುಗರು ಮಾಡಿರೋದು, ನಾನು ಏನು ಮಾಡಿಲ್ಲ ಸಾರ್. ನನಗೆ ಗೊತ್ತಿಲ್ಲದ ವಿಷಯ ಕೇಳಬೇಡಿ ಎಂದಿದ್ದರಂತೆ. ಪೊಲೀಸರು ಸಾಂಧರ್ಭಿಕ ಸಾಕ್ಷ್ಯಗಳನ್ನು ಮುಂದಿಟ್ಟ ನಂತರ ಸ್ವಲ್ಪ ಮಟ್ಟಿಗೆ ಬಾಯಿ ಮುಚ್ಚಿಕೊಂಡಿದ್ದರಂತೆ. ಪೊಲೀಸರ ಕಸ್ಟಡಿಯಲ್ಲಿದಾಗಲ್ಲೂ ಸ್ವಲ್ಪ ದಿನ ದರ್ಶನ್ ರೇಗಾಡಿದ್ದರಂತೆ. 

ಇನ್ನು ದರ್ಶನ್ ಮೇಲಿನ ಆರೋಪ ಸಾಬೀತಿಗೆ ಎಲ್ಲಾ ರೀತಿ ಸಾಕ್ಷ್ಯ ಸಂಗ್ರಹ ಮಾಡಿದ ನಂತರ ದರ್ಶನ್ ತೆಪ್ಪಗಾಗಿದ್ದಾರೆ. ದರ್ಶನ್  ವಿರುದ್ಧ ಸಣ್ಣ ಪುಟ್ಟ ಸಾಕ್ಷ್ಯಗಳನ್ನು ಬಿಡದೇ ಪೊಲೀಸರು ಸಂಗ್ರಹ ಮಾಡಿದ್ದಾರೆ. ಸಿಸಿಟಿವಿ, ಡಿವಿಆರ್  ಸೇರಿದಂತೆ ಹಲವು ವಸ್ತುಗಳು ವಶಕ್ಕೆ ಪಡೆದಿದ್ದಾರೆ. ದಿನ ಕಳೆದಂತೆ ನಟ ದರ್ಶನ್ ವಿರುದ್ಧದ ಸಾಕ್ಷ್ಯಗಳು ಬಿಗಿಯಾಗಿದ್ದವು. ದರ್ಶನ್ ವಿರುದ್ಧ ಆರೋಪ ಸಾಬೀತಾಗುವಂತಹ ಎಲ್ಲಾ ಸಾಕ್ಷ್ಯ ಸಂಗ್ರಹ ಮಾಡಲಾಗಿದೆ.

Video Top Stories