ನೌಕರಿಗೆ ಹೋದ ಹೆಂಡತಿಯ ನಡವಳಿಕೆ ಬದಲಾಯ್ತು: ಪತ್ನಿ ಬಗ್ಗೆ ಕನಸು ಕಂಡವನು ನೇಣಿಗೆ ಶರಣಾದ!

ಅದು 19 ವರ್ಷದ ಸುಖ ದಾಂಪತ್ಯ. ಗಂಡ ಮೂರ್ನಾಲ್ಕು ಲಾರಿ ಓನರ್, ಎರಡು ಮುದ್ದಾದ ಮಕ್ಕಳು. ಪಿಯುಸಿ ಮಾಡಿದ್ದ ಹೆಂಡತಿಯನ್ನ ಗಂಡ ಓದಿಸಿ ಡಿಗ್ರಿ ಕೂಡ ಮಾಡಿಸಿದ್ದ.. ಆದ್ರೆ ನೌಕರಿಗೆ ಹೋದ ಬಳಿಗೆ ಆಕೆಯ ನಡವಳಿಕೆಯೇ ಬದಲಾಗಿಹೋಯ್ತು. ಮಧ್ಯಾಹ್ನದ ಸಮಯ ಸೂಟು ಬೂಟಿನ ವ್ಯಕ್ತಿಯೊಬ್ಬ ಬಂದು ಹೋಗ್ತಿದ್ದನಂತೆ. ಇದೇ ಗಂಡನ ಸಾವಿಗೆ ಕಾರಣವಾಗೋಯ್ತು.

Share this Video
  • FB
  • Linkdin
  • Whatsapp

ಬೆಂಗಳೂರು(ಡಿ.24):  ಆತ ಎರಡು ಮೂರು ಲಾರಿಗೆ ಓನರ್.. ಹೆಂಡ್ತಿ, ಎರಡು ಮಕ್ಕಳು.. ಬೆಂಗಳೂರಲ್ಲಿ ಸ್ವಂತ ಮನೆಗಳು.. ಸೂಪರ್ ಡೂಪರ್ ಲೈಫ್ ಹೇ.. ಎಲ್ಲವೂ ಚೆನ್ನಾಗಿತ್ತು.. ಹೆಂಡತಿಯನ್ನು ಚೆನ್ನಾಗಿ ಓದಿಸಿ ಒಳ್ಳೆ ಬದುಕನ್ನು ಕೂಡ ಆತ ಆಕೆಗಾಗಿ ಕೊಟ್ಟಿದ್ದ.. ಆದ್ರೆ ಆಕೆ ಮಾಡಿದ್ದು ಮಾತ್ರ ಎಂಥ ದ್ರೋಹ ಗೊತ್ತಾ..? ಒಳ್ಳೆ ಬದುಕನ್ನು ಕಟ್ಕೊಂಡು ಬಾಳು ನಡೆಸಬೇಕಿದ್ದ ಆಕೆ ಪರಸಂಗಕ್ಕೆ ಬಿದ್ದಿದ್ಳು ಅನ್ನೋದು ಕುಟುಂಬಸ್ಥರ ಆರೋಪ. ಅದು ಕೂಡ ಪ್ರಭಾವಿ ವ್ಯಕ್ತಿಯ ಜೊತೆ. ಇದೇ ಇವತ್ತಿನ ಎಫ್‌ಐಆರ್ 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅದು 19 ವರ್ಷದ ಸುಖ ದಾಂಪತ್ಯ.. ಗಂಡ ಮೂರ್ನಾಲ್ಕು ಲಾರಿ ಓನರ್, ಎರಡು ಮುದ್ದಾದ ಮಕ್ಕಳು.. ಪಿಯುಸಿ ಮಾಡಿದ್ದ ಹೆಂಡತಿಯನ್ನ ಗಂಡ ಓದಿಸಿ ಡಿಗ್ರಿ ಕೂಡ ಮಾಡಿಸಿದ್ದ.. ಆದ್ರೆ ನೌಕರಿಗೆ ಹೋದ ಬಳಿಗೆ ಆಕೆಯ ನಡವಳಿಕೆಯೇ ಬದಲಾಗಿಹೋಯ್ತು.. ಮಧ್ಯಾಹ್ನದ ಸಮಯ ಸೂಟು ಬೂಟಿನ ವ್ಯಕ್ತಿಯೊಬ್ಬ ಬಂದು ಹೋಗ್ತಿದ್ದನಂತೆ.. ಇದೇ ಗಂಡನ ಸಾವಿಗೆ ಕಾರಣವಾಗೋಯ್ತು.

ಸುಬ್ಬಾ ಸುಬ್ಬಿಗೆ ಕೊನೆಗೂ ಸಿಕ್ತು ಬೇಲ್​​, ಈಗಲಾದ್ರೂ ನಿಲ್ಲುತ್ತಾ ಆಪರೇಷನ್​ ನಾಟಕ?

ರಾವಣನ ರೀತಿಯಲ್ಲಿ ಆ ಸೂಟು ಬೂಟಿನ ವ್ಯಕ್ತಿ ಬಂದ. ಆತನ ಎಂಟ್ರಿ ಆಗಿದ್ದೆ ತಡ. ಸೋಮಶೇಖರ್ ತನ್ನ ಜೀವನದಲ್ಲಿ ಹಂತ ಹಂತವಾಗಿ ಸೋಲೋಕೆ ಶುರುವಾಗಿದ್ದ. ಆ ಸೂಟು ಬೂಟಿನ ವ್ಯಕ್ತಿಯಾದ್ರೂ ಯಾರು..? ಆ ಪ್ರಭಾವಿ ವ್ಯಕ್ತಿಗೂ ಪವಿತ್ರಗೂ, ಸೋಮಶೇಖರ್ ಸಾವಿಗೂ ಏನ್ ಸಂಬಂಧ?. 

ಸೋಮಶೇಖರ್ ನ ಸುಖಸಂಸಾರದಲ್ಲಿ ರಾವಣನಂತೆ ಎಂಟ್ರಿ ಕೊಟ್ಟಿದ್ದು ಬೇರ್ಯಾರು ಅಲ್ಲಾ ಬೆಂಗಳೂರು ವಿವಿಯ ಮಾಜಿ ಉಪಕುಲಪತಿ ಮೈಲಾರಪ್ಪ ಅನ್ನೋದು ಕುಟುಂಬಸ್ಥರ ಆರೋಪವಾಗಿದೆ. ಗಂಡ ಸೋಮಶೇಖರ್ ನ ಸಹಾಯದಿಂದ ಎಚುಕೇಷನ್ ಮುಗಿಸಿದ್ದ ಪವಿತ್ರ ಬೆಂಗಳೂರು ವಿವಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸವನ್ನು ಮಾಡ್ಕೊಂಡಿದ್ದಳಂತೆ. ಅಲ್ಲಿಂದಲೇ ಈಕೆಯ ಅಸಲಿ ಆಟ ಶುರುವಾಯ್ತು. ಇದಕ್ಕೆ ಕುಮ್ಮಕ್ಕಾಗಿ ಇದ್ದಿದ್ದೇ ಮೈಲಾರಪ್ಪ ಅನ್ನೋದು ಸೋಮಶೇಖರ್ ಕುಟುಂಬಸ್ಥರ ಆರೋಪ. ಸೋಮಶೇಖರ್ ಸಾವಿಗೆ ಮೈಲಾರಪ್ಪ ಹೇಗೆ ಕಾರಣ ಅನ್ನೋದನ್ನು ಅವ್ರ ಫ್ಯಾಮಿಲಿಯವ್ರೆ ಹೇಳಿದ್ದಾರೆ.

ಸಮಾಜ ಒಪ್ಪದ ಸಂಬಂಧ ಒಂದಕ್ಕೆ ಒಂದು ಜೀವ ಬಲಿಯಾಗಿದ್ದನ್ನು. ಬದುಕಿನ ಮುಸ್ಸಂಜೆಯಲ್ಲಿ ತಂದೆಗೆ ಆಸರೆ ಯಾಗಬೇಕಿದ್ದ ಮಗನನ್ನು ಕಳೆದುಕೊಂಡು ಆ ಹಿರಿ ಜೀವ ನೋವು ಅನುಭವಿಸುತ್ತಿದ್ರೆ, ಇತ್ತ ಇಬ್ಬರು ಮುದ್ದಾದ ಗಂಡು ಮಕ್ಕಳು ತನ್ನ ತಂದೆ ಇಲ್ಲದೆ ಅನಾಥರಾಗಿದ್ದಾರೆ. 

Related Video