ಈದ್ ಮಿಲಾದ್‌ ಹಬ್ಬಕ್ಕೆ ಊರಿಗೆ ಹೊರಟವನು ಹೆಣವಾದ: ಆತ ಸತ್ತು 24 ಗಂಟೆಗಳಲ್ಲೇ ಕೊಲೆಗಾರನೂ ಆತ್ಮಹತ್ಯೆಗೆ ಶರಣಾದ!

ಹುಬ್ಬಳ್ಳಿಯಲ್ಲಿ ಈದ್ ಮಿಲಾದ್‌ ಹಬ್ಬಕ್ಕೆಂದು ಊರಿಗೆ ಹೋಗಲು ಸಿದ್ಧತೆಯಲ್ಲಿದ್ದ ಯುವಕನ್ನು ಕೊಲೆ ಮಾಡಿದ ವೃದ್ಧನೂ ಆತ್ಮಹತ್ಯೆಗೆ ಶರಣಾಗಿದ್ದಾನೆ.

Share this Video
  • FB
  • Linkdin
  • Whatsapp

ಹುಬ್ಬಳ್ಳಿ (ಸೆ.29): ಅವನು ಗಾರೆ ಕೆಲಸ ಮಾಡೋ ಹುಡುಗ. ಈದ್ ಮಿಲಾದ್ ತಯಾರಿಯಲ್ಲಿದ್ದನು. ಊರಿಗೆ ಹೋಗಿ ಕುಟುಂಬದ ಜೊತೆ ಹಬ್ಬ ಆಚರಿಸೋ ಖುಷಿಯಲಿದ್ದನು. ಆದ್ರೆ ರಾತ್ರಿ ಕಳೆದು ಬೆಳಗಾಗುವಷ್ಟರಲ್ಲೇ ಆತ ಹೆಣವಾಗಿ ಹೋಗಿದ್ದ. ಮಲಗಿದ್ದಲ್ಲೇ ಆತ ಶವವಾಗಿಬಿಟ್ಟಿದ್ದ. ಯಾರೊ ಆತನನ್ನ ಭೀಕರವಾಗಿ ಕೊಂದು ಮುಗಿಸಿದ್ರು. ಆದ್ರೆ ಇದೇ ಕೇಸನ್ನು ಬೆನ್ನು ಹತ್ತಿದ ಪೊಲೀಸರು ತನಿಖೆ ಆರಂಭಿಸುವ ಮೊದಲೇ ಒಂದು ಸುದ್ದಿ ತಲುಪಿತ್ತು. ಅದೇನೆಂದರೆ ಕೊಲೆಯಾದವನ ಕಥೆ ಮುಗಿಸಿದವನೂ ಸತ್ತಿದ್ದಾನೆ ಅಂತ. ಹಾಗಾದ್ರೆ ಅಲ್ಲಿ ಕೊಲೆಯಾದವನು ಯಾರು? ಕೊಲೆ ಮಾಡಿದವನು ಯಾರು.? ಒಬ್ಬನನ್ನ ಕೊಂದು ನಂತರ ತಾನೂ ಸತ್ತಿದ್ದು ಯಾಕೆ? ಇಲ್ಲಿದೆ ನೋಡಿ ಸಂಪೂರ್ಣ ವಿವರ.. 

Add Asianetnews Kannada as a Preferred SourcegooglePreferred

ದೃಶ್ಯ ಸಿನಿಮಾ ಸ್ಟೈಲಲ್ಲಿ ಕೊಲೆ ಮಾಡಿದ ಅಪ್ಪ, ಪೊಲೀಸರಿಂದ ತಪ್ಪಿಸಿಕೊಳ್ಳಲಾಗದೆ ಆತ್ಮಹತ್ಯೆಗೆ ಶರಣಾದ

ನಿನ್ನೆ ನನಗೇನು ಗೊತ್ತಿಲ್ಲ ಅಂದವನು ಇವತ್ತು ಸತ್ತಿದ್ದಾನೆ ಅಂದ್ರೆ ಏನರ್ಥ? ಈ ವೃದ್ಧನೇ ಮೌಲಾಲನನ್ನ ಕೊಂದು ಬಿಟ್ಟನಾ? ಆತನ ಕೊಲೆಗೂ ಈತನ ಆತ್ಮಹತ್ಯೆಗೂ ಲಿಂಕ್ ಇದ್ಯಾ? ಒಂದು ವೇಳೆ ಈತನೇ ಕೊಂದಿದ್ದಾನೆ ಅಂದ್ರೆ ಕೊಲೆ ಮಾಡೋದಕ್ಕೆ ಕಾರಣವಾದ್ರೂ ಏನು? ಎಂಬುದರ ಹಿಂದಿತ್ತು ಅನೈತಿಕ ಸಂಬಂಧದ ಅಸಲಿಯತ್ತು. ಕೊಲೆಯಾದ ಮೌಲಾಲಿ ಸತ್ತಾಗಲೇ ಪೊಲೀಸರಿಗೆ ಅನುಮಾನ ಬಂದಿತ್ತು. ಆದರೆ, ಅದು ಕನ್ಫರ್ಮ್ ಆಗಿದ್ದು ಮಾರನೇ ದಿನ ಅದೇ ಏರಿಯಾದಲ್ಲಿ ಸಿಕ್ಕ ಒಂದು ಶವ.. ಯಸ್... ಅದೇ ಕಟ್ಟಡದಲ್ಲಿ ವಾಚ್‌ಮ್ಯಾನ್‌ ಆಗಿದ್ದ ವೃದ್ಧ ರಾತ್ರಿ ಮೌಲಾಲನನ್ನ ಮಲಗಿದ್ದಲ್ಲೇ ಹೆಣವಾಗಿಸಿದ್ದಾನೆ. ಆದ್ರೆ ಅದಕ್ಕೆ ಕಾರಣ ಮೌಲಾಲನ ಅನೈತಿಕ ಸಂಬಂಧ. ವೃದ್ಧನ ಮಗಳ ಮೇಲೆಯೇ ಆತ ಕಣ್ಣು ಹಾಕಿಬಿಟ್ಟಿದ್ದನಯ. ಆದ್ರೆ ಈ ವಿಷ್ಯ ವೃದ್ಧನಿಗೆ ಗೊತ್ತಾದಾಗ ಅವನ ಹೆಣ ಕೆವಿದ್ದಾನೆ.

Related Video