Asianet Suvarna News Asianet Suvarna News

Tumakuru: ಬೀದಿ ರೌಡಿಗಳಂತೆ ರಸ್ತೆಯಲ್ಲೇ ಹೊಡೆದಾಡಿಕೊಂಡ ವಿದ್ಯಾರ್ಥಿಗಳು: ಇವರ ಪುಂಡಾಟಕ್ಕೆ ಸಾರ್ವಜನಿಕರು ಕಂಗಾಲು

ವಿದ್ಯಾರ್ಥಿಗಳ ಪುಂಡಾಟಕ್ಕೆ ಸಾರ್ವಜನಿಕರು ಕಂಗಾಲು
ಕ್ಷುಲ್ಲಕ ಕಾರಣಕ್ಕೆ ದಿನವೂ ವಿದ್ಯಾರ್ಥಿಗಳ ಮಧ್ಯೆ ಗಲಾಟೆ
ವಿದ್ಯಾರ್ಥಿಗಳ ಕರೆಸಿ ಬುದ್ಧಿ ಹೇಳಿ ಕಳುಹಿಸಿದ ಪೊಲೀಸರು

ತುಮಕೂರು: ಬೀದಿ ರೌಡಿಗಳಂತೆ ರಸ್ತೆಯಲ್ಲೇ ವಿದ್ಯಾರ್ಥಿಗಳು ಹೊಡೆದಾಡಿಕೊಂಡ ಘಟನೆ ಜಿಲ್ಲೆಯ ತಿಪಟೂರು ನಗರದಲ್ಲಿ ನಡೆದಿದೆ. ರಸ್ತೆಯಲ್ಲೇ ಪುಡಿ ರೌಡಿಗಳಂತೆ ವಿದ್ಯಾರ್ಥಿಗಳ(Students) ನಡುವೆ ಮಾರಾಮಾರಿ ನಡೆದಿದೆ. ಕೆಲವು ಕಿಡಿಗೇಡಿಗಳಿಂದ ಈ ವಿದ್ಯಾರ್ಥಿಗಳಿಗೆ ಗಾಂಜಾ ಸಪ್ಲೈ ಆಗುತ್ತಿದೆ ಎಂಬ ಆರೋಪ ಸಹ ಕೇಳಿಬಂದಿದೆ. ವಿದ್ಯಾರ್ಥಿಗಳ ಪುಂಡಾಟಕ್ಕೆ ಸಾರ್ವಜನಿಕರು ಕಂಗಾಲಾಗಿದ್ದಾರೆಕ್ಷ. ಕ್ಷುಲ್ಲಕ ಕಾರಣಕ್ಕೆ ದಿನವೂ ವಿದ್ಯಾರ್ಥಿಗಳ ಮಧ್ಯೆ ಗಲಾಟೆ(Conflict) ನಡೆಯುತ್ತಲೇ ಇರುತ್ತಂತೆ. ಸದ್ಯ ವಿದ್ಯಾರ್ಥಿಗಳನ್ನು ಕರೆಸಿ ಪೊಲೀಸರು(police) ಬುದ್ಧಿ ಹೇಳಿದ್ದಾರೆ. ತಿಪಟೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ವಿದ್ಯಾರ್ಥಿಗಳ ಗಲಾಟೆ ನಿಲ್ಲಿಸುವಲ್ಲಿ ಪೊಲೀಸರು ವಿಫಲವಾಗಿದ್ದಾರೆ ಎಂಬ ಆರೋಪ ಸಹ ಕೇಳಿಬಂದಿದೆ.

ಇದನ್ನೂ ವೀಕ್ಷಿಸಿ: ಕೆಜಿಎಫ್ ಕಿಂಗ್ ಯಶ್ ಜಾಗಕ್ಕೆ ಡಿವೈನ್ ಸ್ಟಾರ್ ಎಂಟ್ರಿ..! ರಾಕಿ ಭಾಯ್ ಅಚ್ಚು ಮೆಚ್ಚಿನ ಜಾಹೀರಾತು ಕಿತ್ತುಕೊಂಡ ರಿಷಬ್..!