‘ಗ್ರಾಮಾಯಣ’ ಸಿನಿಮಾಗೆ ಚಾಲನೆ: ಹಳ್ಳಿ ಹೈದನಾಗಿ ಗಾಜನೂರ ಕುಡಿ

‘ಗ್ರಾಮಾಯಣ’ ಸಿನಿಮಾದ ಮುಹೂರ್ತ ಸಮಾರಂಭವು, ಬಂಡೆ ಮಹಾಂಕಾಳಿ ದೇವಸ್ಥಾನದಲ್ಲಿ ನೆರವೇರಿದೆ. ಈ ಚಿತ್ರದಲ್ಲಿ ವಿನಯ್ ರಾಜಕುಮಾರ್ ನಾಯಕರಾಗಿ ನಟಿಸುತ್ತಿದ್ದಾರೆ. ಅನೇಕ ಸ್ಟಾರ್‌ ನಟರು ಸಿನಿಮಾಗೆ ಹಾರೈಸಿದ್ದಾರೆ.
 

Share this Video
  • FB
  • Linkdin
  • Whatsapp

ಗ್ರಾಮಾಯಣ ಸಿನಿಮಾ ಕೆಲ ವರ್ಷಗಳ ಹಿಂದೆ ಘೋಷಣೆಯಾಗಿ ಟೀಸರ್ ಕೂಡ ರಿವೀಲ್ ಆಗಿತ್ತು. ವಿನಯ್ ರಾಜ್ ಕುಮಾರ್, ಗ್ರಾಮಾಯಣದಲ್ಲಿ ಹಳ್ಳಿ ಹೈದನಾಗಿ ಕಾಣಿಸಿದ್ರು. ಅಣ್ಣಾವ್ರ ಹುಟ್ಟೂರು ಗಾಜನೂರಿನಲ್ಲಿ ಶುರುವಾಗಬೇಕಿದ್ದ ಗ್ರಾಮಾಯಣ ಕೊನೆಗೆ ಅದ್ಯಾಕೋ ಸೈಲೆಂಟ್ ಆಗಿತ್ತು. ಭರ್ತಿ ಮೂರು ವರ್ಷಗಳ ಬಳಿಕ, ಇದೀಗ ಗ್ರಾಮಾಯಣ ಅದ್ದೂರಿಯಾಗಿ ಟೇಕಾಫ್ ಆಗಿದೆ. ಜಿ. ಮನೋಹರ್ ನಾಯ್ಡು ನಿರ್ಮಾಣ, ದೇವನೂರು ಚಂದ್ರು ನಿರ್ದೆಶನದ ಈ ಸಿನಿಮಾಗೆ, ಬೆನ್ನೆಲುಬಾಗಿ ನಿಂತಿರುವವರು ಖ್ಯಾತ ನಿರ್ಮಾಪಕ ಕೆ.ಪಿ.ಶ್ರೀಕಾಂತ್. ಅವರೇ ಮುಂದೆ ನಿಂತು ಮುಹೂರ್ತ ಸಮಾರಂಭವನ್ನು ಅಚ್ಚುಕಟ್ಟಾಗಿ ಮಾಡಿ ಅರ್ಧಕ್ಕೆ ನಿಂತಿದ್ದ ಸಿನಿಮಾಗೆ ಮರು ಜೀವ ಕೊಟ್ಟಿದ್ದಾರೆ. ಅಶ್ವಿನಿ ಪುನೀತ್ ಕ್ಯಾಮೆರಾ ಚಾಲನೆ ಮಾಡಿದ್ರೆ, ರಿಯಲ್ ಸ್ಟಾರ್ ಉಪ್ಪಿ ಫಸ್ಟ್ ಶಾರ್ಟ್’ಗೆ ಕ್ಲಾಪ್ ಮಾಡಿದ್ರು. ನಟರಾದ ದುನಿಯಾ ವಿಜಯ್, ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ, ರಾಜ್.ಬಿ. ಶೆಟ್ಟಿ, ನಿರ್ದೆಶಕರಾದ ಪವನ್ ಒಡೆಯರ್, ಆರ್.ಚಂದ್ರು, ಸಿಂಪಲ್ ಸುನಿ ಸೇರಿದಂತೆ ಅನೇಕ ಸ್ಟಾರ್‌ಗಳು ದೊಡ್ಮನೆ ಕುಡಿಯ ಗ್ರಾಮಾಯಣಕ್ಕೆ ಮನದುಂಬಿ ಹಾರಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video