ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಪತ್ನಿ ಚೆನ್ನಮ್ಮ ನಿಧನದ ಬೆನ್ನಲ್ಲೇ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಚೆನ್ನಮ್ಮ ಆಸ್ಪತ್ರೆ ಸೇರುವ ಮೂರು ದಿನಗಳ ಹಿಂದಿನ ವಿಡಿಯೋ ಅದಾಗಿದ್ದು, ನೋಡುಗರ ಕಣ್ಣಾಲೆಗಳನ್ನ ಒದ್ದೆ ಮಾಡುತ್ತಿದೆ...
- Home
- News
- State
- State News Live: ಕಣ್ಣೀರು ತರಿಸುತ್ತೆ ಚೆನ್ನಮ್ಮರ ಕೊನೆಯ ನಮಸ್ಕಾರ.. ಆಸ್ಪತ್ರೆ ಸೇರುವ 3 ದಿನದ ಹಿಂದೆ ದೇವೇಗೌಡರ ಕೈಹಿಡಿದು ಹೇಳಿದ್ದರು 'ಮೌನ ಸಂದೇಶ'
State News Live: ಕಣ್ಣೀರು ತರಿಸುತ್ತೆ ಚೆನ್ನಮ್ಮರ ಕೊನೆಯ ನಮಸ್ಕಾರ.. ಆಸ್ಪತ್ರೆ ಸೇರುವ 3 ದಿನದ ಹಿಂದೆ ದೇವೇಗೌಡರ ಕೈಹಿಡಿದು ಹೇಳಿದ್ದರು 'ಮೌನ ಸಂದೇಶ'

ಬೆಂಗಳೂರು (ಜು.19): ರಾಜ್ಯದಲ್ಲಿ ಶೇ.30ರಷ್ಟು ಮುಂಗಾರು ಮಳೆ ಕೊರತೆ ಕಾಣಿಸಿದ್ದು, ರಾಜ್ಯ ಭೀಕರ ಬರಗಾಲದತ್ತ ಹೆಜ್ಜೆ ಹಾಕಿದೆ. ಈ ಹಿನ್ನೆಲೆಯಲ್ಲಿ ಅಖಾಡಕ್ಕೆ ಇಳಿದಿರುವ ಸಿಎಂ ಡಿ.ಕೆ.ಶಿವಕುಮಾರ್ ಭಾನುವಾರ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಸಿಇಒಗಳ ಜೊತೆ ವಿಡಿಯೋ ಕಾನ್ಸರೆನ್ಸ್ ಮೂಲಕ ಸಭೆ ನಡೆಸಲಿದ್ದಾರೆ. ಬಳಿಕ ಈ ವಿಷಯ ಸಂಪುಟ ಸಭೇಲಿ ಚರ್ಚಿಸಿ ಮುಂದಿನ ನಿರ್ಧಾರ ಪ್ರಕಟಿಸಲಿದ್ದಾರೆ. ಅದರೊಂದಿಗೆ ಇಂದಿನ ರಾಜ್ಯ ಸುದ್ದಿಗಳ ಅಪ್ಡೇಟ್ ಇಲ್ಲಿದೆ.
Karnataka News Live 19th July: ಕಣ್ಣೀರು ತರಿಸುತ್ತೆ ಚೆನ್ನಮ್ಮರ ಕೊನೆಯ ನಮಸ್ಕಾರ.. ಆಸ್ಪತ್ರೆ ಸೇರುವ 3 ದಿನದ ಹಿಂದೆ ದೇವೇಗೌಡರ ಕೈಹಿಡಿದು ಹೇಳಿದ್ದರು 'ಮೌನ ಸಂದೇಶ'
Karnataka News Live 19th July: ಧಾರವಾಡ ಟು ಬೆಂಗಳೂರು - ಲಾರಿಯಲ್ಲಿ ಸಾಗಿಸುತ್ತಿದ್ದ 100ಕ್ಕೂ ಹೆಚ್ಚು ಗೋವುಗಳ ಮಾಂಸ ವಶ!
Karnataka News Live 19th July: ಐದು ತಿಂಗಳಿಂದ ಸಂಬಳ ಇಲ್ಲ -ಆಸ್ಪತ್ರೆಯಲ್ಲಿ ಬಿಕ್ಕಿ ಬಿಕ್ಕಿ ಅತ್ತು ಗೋಳಾಡಿದ ಮಹಿಳಾ ಅಧಿಕಾರಿ -Video
ಜಮ್ಶೆಡ್ಪುರದ ಎಂಜಿಎಂ ಆಸ್ಪತ್ರೆಯ ಮಹಿಳಾ ಹೋಂಗಾರ್ಡ್ ಸಿಬ್ಬಂದಿಯೊಬ್ಬರು ಕಳೆದ ಐದು ತಿಂಗಳಿಂದ ಸಂಬಳವಿಲ್ಲದೆ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅನಾರೋಗ್ಯ ಮತ್ತು ಸಾಲದ ಬಾಧೆಯಿಂದ ಕಂಗೆಟ್ಟು, ಆಸ್ಪತ್ರೆಯ ಆವರಣದಲ್ಲೇ ಕಣ್ಣೀರು ಹಾಕುತ್ತಿರುವ ಅವರ ವಿಡಿಯೋ ವೈರಲ್ ಆಗಿದೆ.
Karnataka News Live 19th July: ತವರೂರು ಅಂದರೆ ಚೆನ್ನಮ್ಮಗೆ ತಾಯಿಯಂಥ ಪ್ರೀತಿ.. 3 ದೇವಸ್ಥಾನ, ಹೈಸ್ಕೂಲ್, ಆಸ್ಪತ್ರೆ ಏನೆಲ್ಲ ಕಟ್ಟಿಸಿಕೊಟ್ಟಿದ್ದರು?
ನಾವು ಅನಾಥರಾದೇವು ಅಂತಾ ಮುತ್ತಿಗೆ ಹಿರೇಹಳ್ಳಿ ಗ್ರಾಮದ ಜನರು ಚೆನ್ನಮ್ಮ ಅವರನ್ನು ಕಳೆದುಕೊಂಡು ಕಣ್ಣೀರು ಇಡುತ್ತಿದ್ದಾರೆ. ಗ್ರಾಮದ ಜನರ ಈ ಕಣ್ಣೀರಿಗೆ ಚೆನ್ನಮ್ಮ ಜೊತೆಗಿನ ಭಾವನಾತ್ಮಕ ಸಂಬಂಧ ಇದೆ. ಅದೇ ಕಾರಣಕ್ಕೆ ಇಡೀ ಗ್ರಾಮವೇ ಶೋಕದಲ್ಲಿ ಮುಳುಗಿದೆ.. ಈ ಕುರಿತ ಸ್ಟೋರಿ ಇಲ್ಲಿದೆ.
Karnataka News Live 19th July: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಎಂಟ್ರಿ-ಎಕ್ಸಿಟ್ ಪಾಯಿಂಟ್ ಬಂದ್ - NHAI ನಿರ್ಧಾರಕ್ಕೆ ಸ್ಥಳೀಯರ ತೀವ್ರ ಆಕ್ರೋಶ!
ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಟೋಲ್ ತಪ್ಪಿಸುವುದನ್ನು ತಡೆಯಲು ಎನ್ಎಚ್ಎಐ ಹಲವು ಪ್ರವೇಶ-ನಿರ್ಗಮನ ದ್ವಾರಗಳನ್ನು ಮುಚ್ಚಿದೆ. ಈ ನಿರ್ಧಾರದಿಂದ ಸ್ಥಳೀಯ ನಿವಾಸಿಗಳು ಮತ್ತು ದೈನಂದಿನ ಪ್ರಯಾಣಿಕರಿಗೆ ತೀವ್ರ ಅನಾನುಕೂಲವಾಗಿದೆ.
Karnataka News Live 19th July: 'ನನ್ನ ದೇವ್ರನ್ನ ಕಳ್ಕೊಂಡೆ ಸಾರ್..' ಅಮ್ಮನ ನೆನೆದು ಬಿಕ್ಕಿ ಬಿಕ್ಕಿ ಅತ್ತ ರೇವಣ್ಣ
Karnataka News Live 19th July: ಅಜ್ಜಿ ಅಗಲಿಕೆ ಸುದ್ದಿ ತಿಳಿದು ಜೈಲಿನಲ್ಲೇ ಕಣ್ಣೀರಿಟ್ಟ ಪ್ರಜ್ವಲ್ ರೇವಣ್ಣ..
ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಪತ್ನಿ ಚೆನ್ನಮ್ಮ ಅವರು ವಯೋಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಈ ಸುದ್ದಿ ಕೇಳಿ ಜೈಲಿನಲ್ಲಿರುವ ಮೊಮ್ಮಗ ಪ್ರಜ್ವಲ್ ರೇವಣ್ಣ ಭಾವುಕರಾಗಿದ್ದಾರೆ. ಅಜ್ಜಿಯ ಅಂತಿಮ ದರ್ಶನ ಮತ್ತು ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಅವಕಾಶ ಕೋರಿ ಅವರು ತುರ್ತು ಪೆರೋಲ್ಗಾಗಿ ಅರ್ಜಿ ಸಲ್ಲಿಸಿದ್ದು, ಜೈಲು ಅಧಿಕಾರಿಗಳ ನಿರ್ಧಾರಕ್ಕಾಗಿ ಕಾಯುತ್ತಿದ್ದಾರೆ.
Karnataka News Live 19th July: ನಾಡಗೀತೆಗೆ ‘ಬೌದ್ಧರುದ್ಯಾನ’ ಪದ ಸೇರ್ಪಡೆಗೆ ಸಂಘ-ಸಂಸ್ಥೆ ಬೆಂಬಲ
Karnataka News Live 19th July: ಮಹಾರಾಜ ಟ್ರೋಫಿ - ಶಿವಮೊಗ್ಗಕ್ಕೆ ಬರಲಿದ್ದಾರೆ ಚಾಂಪಿಯನ್ ತಂಡದ ಮೂವರು ಕ್ರಿಕೆಟಿಗರು! ಮೆರವಣಿಗೆ ಮೂಲಕ ಅದ್ದೂರಿ ಸ್ವಾಗತ
Karnataka News Live 19th July: ಡಿಕೆ, ಬಿಕೆ, ಸಿದ್ದು, ವೇಣು, ರಣದೀಪ್ರಿಂದ ಪ್ರತ್ಯೇಕ ಪಟ್ಟಿ; ಸಂಪುಟಕ್ಕೆ ಈಗ ಕೋಟಾ ಸಂಕಟ!
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಸಚಿವ ಸಂಪುಟದ ಎರಡನೇ ಹಂತದ ವಿಸ್ತರಣೆಯು ಹಲವು ನಾಯಕರು ಪ್ರತ್ಯೇಕ ಪಟ್ಟಿಗಳನ್ನು ಸಲ್ಲಿಸಿರುವುದರಿಂದ ವಿಳಂಬವಾಗಿದೆ. ರಾಜ್ಯ ನಾಯಕರು ಮತ್ತು ಹೈಕಮಾಂಡ್ ನಡುವೆ ಹೆಸರುಗಳ ಬಗ್ಗೆ ಒಮ್ಮತ ಮೂಡದ ಕಾರಣ, ಪರಿಷ್ಕೃತ ಪಟ್ಟಿ ಸಲ್ಲಿಸುವಂತೆ ಹೈಕಮಾಂಡ್ ಸೂಚಿಸಿದೆ.
Karnataka News Live 19th July: ಆಸ್ತಿ ಕೊಡದ ತಂದೆಯನ್ನೇ ಕೊಂದ ಮಗ! ಮುಂದೇನು ತೋಚದೇ ಮಗನ ಈ ನಿರ್ಧಾರದಿಂದ ಆಸ್ತಿ ಯಾರಿಗೆ ಸಿಕ್ತು?
ತಾನು ಮಾಡಿಕೊಂಡಿದ್ದ ಸಾಲ ತೀರಿಸಲು ಆಸ್ತಿ ಕೊಡುವಂತೆ ಪೀಡಿಸುತ್ತಿದ್ದ ಮಗನೊಬ್ಬ ತನ್ನ ತಂದೆಯನ್ನೇ ಕೊಂದು ಕಡೆಗೆ ತಾನೂ ಕೂಡ ನೇಣು ಬಿಗಿದುಕೊಂಡು ಸಾವನ್ನಪ್ಪಿದ ಘಟನೆ ಪಟ್ಟಣದ ಗುರನಹಳ್ಳಿಯಲ್ಲಿ ಶನಿವಾರ ನಡೆದಿದೆ.
Karnataka News Live 19th July: ರಾಷ್ಟ್ರೀಯ ಸಿನಿಮಾ ಪುರಸ್ಕಾರ - ಕನ್ನಡಕ್ಕೆ 4, ತುಳು ಭಾಷೆಗೆ 1 ಗೌರವ
ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ, ಸುಮಂತ್ ಭಟ್ ನಿರ್ದೇಶನದ ಮತ್ತು ರಕ್ಷಿತ್ ಶೆಟ್ಟಿ ನಿರ್ಮಾಣದ 'ಮಿಥ್ಯ' 3 ಪ್ರಶಸ್ತಿ ಗೆದ್ದುಕೊಂಡಿದೆ. ಈ ಪೈಕಿ, ರೂಪಶ್ರೀ ವರ್ಕಾಡಿ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಪಡೆದು, ಕನ್ನಡ ಚಿತ್ರರಂಗದಲ್ಲಿ ಈ ಗೌರವ ಪಡೆದ ಮೊದಲ ನಟಿ ಎಂಬ ಇತಿಹಾಸ ನಿರ್ಮಿಸಿದ್ದಾರೆ.
Karnataka News Live 19th July: ಮುಂಗಾರು ಮಳೆ ಕೊರತೆ - ಬರದ ನಾಡಿಗೆ ಸಿಎಂ ಸಿದ್ಧತೆ | ಇಂದು ಸರಣಿ ಸಭೆ ನಡೆಸಲಿರುವ ಡಿಕೆ ಶಿವಕುಮಾರ್
ರಾಜ್ಯದ ಬರ ಪರಿಸ್ಥಿತಿ ಸಂಬಂಧ ಮುಖ್ಯಮಂತ್ರಿ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳು ಮತ್ತು ಜಿ ಪಂ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ ಭಾನುವಾರ ಸಭೆ ನಡೆಸಲಾಗುತ್ತಿದ್ದು, ಪರಿಸ್ಥಿತಿ ಅವಲೋಕಿಸಿ ಸೂಕ್ತ ನಿರ್ದೇಶನ ನೀಡಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದರು.
Karnataka News Live 19th July: Credit war: ಕವಲುದಾರಿ ಹಿಡಿದ ಮೈತ್ರಿ: ಜೆಡಿಎಸ್ - ಬಿಜೆಪಿ ದೋಸ್ತಿಗಳ ಮಧ್ಯೆ ಕ್ರೆಡಿಟ್ ವಾರ್
ಬಿಡದಿ ಟೌನ್ ಶಿಪ್) ಯೋಜನೆ ಪರವಾಗಿ ಮತ್ತು ವಿರೋಧಿಸಿ ರೈತರು ನಡೆಸುತ್ತಿರುವ ಚಳವಳಿ ತಾರಕಕ್ಕೇರಿದೆ. ಮತ್ತೊಂದೆಡೆ ಜೆಡಿಎಸ್ ಮತ್ತು ಬಿಜೆಪಿ ನಡುವೆ ಕ್ರೆಡಿಟ್ ವಾರ್ ಶುರುವಾಗಿದೆ.
Karnataka News Live 19th July: ನೀಟ್: ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡೋವರೆಗೆ ಹೋರಾಟ ನಿಲ್ಲಿಸಲ್ಲ: ಹರಿಪ್ರಸಾದ್
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುವವರೆಗೂ ಹೋರಾಟ ನಡೆಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಸ್ಪಷ್ಟಪಡಿಸಿದರು.
Karnataka News Live 19th July: ಆಸ್ಪತ್ರೆ, ಶಾಲಾ ಆವರಣ ಕ್ಯಾಂಟೀನ್ಗಳಲ್ಲಿ ಜಂಕ್ ಫುಡ್ ನಿಷೇಧ: ಆರೋಗ್ಯ ಸಚಿವ ಯುಟಿ ಖಾದರ್ ಮತ್ತೊಂದು ಖಡಕ್ ನಿರ್ಧಾರ
ರಾಜ್ಯದ ಎಲ್ಲ ಆಸ್ಪತ್ರೆ ಹಾಗೂ ಶಾಲೆಗಳ ಆವರಣದಲ್ಲಿರುವ ಕ್ಯಾಂಟೀನ್ಗಳಲ್ಲಿ ಆರೋಗ್ಯಕರ ಆಹಾರಗಳನ್ನು ಮಾತ್ರ ಕನಿಷ್ಠ ದರದಲ್ಲಿ ಮಾರಾಟ ಮಾಡಬೇಕು. ಇದನ್ನು ಹೊರತುಪಡಿಸಿ ಯಾವುದೇ ರೀತಿಯ ಜಂಕ್ ಫುಡ್ಗಳನ್ನು ಮಾರಾಟ ಮಾಡುವಂತಿಲ್ಲ. ರಾಜ್ಯಾದ್ಯಂತ ಈ ನಿಯಮ ಜಾರಿಗೆ ತರಲು ಸಿದ್ಧತೆ ನಡೆಸಲಾಗಿದೆ.
Karnataka News Live 19th July: JDS V BJP Credit war: ಬಿಡದಿಯಿಂದ ಬೆಂಗಳೂರಿಗೆ ದಳ ಪ್ರತ್ಯೇಕ ಪಾದಯಾತ್ರೆ! ತನ್ನ ಕೇಳದೆ ಪಾದಯಾತ್ರೆ ಘೋಷಿಸಿದ್ದ ಬಿಜೆಪಿಗೆ ಸೆಡ್ಡು
ಬಿಡದಿ ಟೌನ್ಶಿಪ್ ಯೋಜನೆ(Bidadi township project) ವಿರೋಧಿಸಿ ಬಿಜೆಪಿ ಬಿಡದಿಯಿಂದ ಬೆಂಗಳೂರಿನವರೆಗೆ ಪಾದಯಾತ್ರೆ ನಡೆಸುವ ಘೋಷಣೆ ಮಾಡಿದ ಮರುದಿನವೇ ಜೆಡಿಎಸ್ ಒಂದು ಹೆಜ್ಜೆ ಮುಂದೆ ಹೋಗಿ ದಿನಾಂಕ ಸಮೇತ ತನ್ನ ಪಾದಯಾತ್ರೆಯನ್ನು ಪ್ರಕಟಿಸಿದೆ.
Karnataka News Live 19th July: ಅಮ್ಮನ ನೆನೆದು ಹೆಚ್ಡಿಕೆ ಕಣ್ಣೀರು: ಇಂದು ಮಾವಿನಕೆರೆ ಹರದನಹಳ್ಳಿಯಲ್ಲಿ ಚೆನ್ನಮ್ಮ ಅಂತ್ಯಕ್ರಿಯೆ, ಸ್ಥಳ, ಸಮಯದ ಸಂಪೂರ್ಣ ಮಾಹಿತಿ ಇಲ್ಲಿದೆ
Channamma final rites ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚನ್ನಮ್ಮ ಶಿವೈಕ್ಯರಾಗಿದ್ದಾರೆ .ಅವರ ಅಂತ್ಯಕ್ರಿಯೆ ಇಂದು ಭಾನುವಾರ ಮಾವಿನಕೆರೆ ಹರದನಹಳ್ಳಿಯಲ್ಲಿ ನಡೆಸಲಾಗುವುದು ಎಂದು ಪುತ್ರ ಹೆಚ್ಡಿ ಕುಮಾರಸ್ವಾಮಿ ತಿಳಿಸಿದ್ದಾರೆ. ಹೆಚ್ಚಿನ ವಿವರಗಳಿಗೆ ಮುಂದೆ ಓದಿ.
Karnataka News Live 19th July: Karnataka Cabinet expansion: ಸಂಪುಟ ವಿಸ್ತರಣೆ ವಿಳಂಬಕ್ಕೆ ಕಾರಣ ಬಯಲು! ರಾಜ್ಯ ನಾಯಕರು ಕೊಟ್ಟ ಆ ಹೆಸರುಗಳಿಗೆ ಹೈಕಮಾಂಡ್ ಆಕ್ಷೇಪ ಏಕೆ?
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್(DK Shivakumar) ಅವರ ಎರಡನೇ ಹಂತದ ಸಚಿವ ಸಂಪುಟವೆಂಬ ಖಾದ್ಯ ಸಿದ್ಧಪಡಿಸಲು ಹಲವು ಬಾಣಸಿಗರು ಅತ್ಯುತ್ಸಾಹ ತೋರುತ್ತಿರುವ ಪರಿಣಾಮ ಇಡೀ ಪ್ರಕ್ರಿಯೆಗೆ ಸೋಮವಾರದಿಂದ ಮತ್ತೊಂದು ಹಂತದ ಚಾಲನೆ ನೀಡಬೇಕಾದ ಪರಿಸ್ಥಿತಿ ಕಾಂಗ್ರೆಸ್ನಲ್ಲಿ ಉಂಟಾಗಿದೆ.