ಜೂನ್ ತಿಂಗಳ ಪ್ರಯಾಣಿಕರ ದಟ್ಟಣೆ ನಿವಾರಿಸಲು ಭಾರತೀಯ ರೈಲ್ವೆ ಇಲಾಖೆಯು ಹೈದರಾಬಾದ್ ಮತ್ತು ಮಂಗಳೂರು ಸೆಂಟ್ರಲ್ ನಡುವೆ ವಿಶೇಷ ಎಕ್ಸ್ಪ್ರೆಸ್ ರೈಲುಗಳ ಸೇವೆಯನ್ನು ಘೋಷಿಸಿದೆ. ಯಲಹಂಕ, ಕೆಆರ್ ಪುರಂ ಸೇರಿದಂತೆ ಹಲವು ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ.
- Home
- News
- State
- Karnataka News Live: ನಾಲ್ಕು ವಾರ ಮಂಗಳೂರು - ಮಂತ್ರಾಲಯ ನೇರ ವಿಶೇಷ ಎಕ್ಸ್ಪ್ರೆಸ್ ರೈಲು ಸಂಚಾರ - ರಾಯರ ದರ್ಶನ ಸುಲಭ
LIVE NOW
Karnataka News Live: ನಾಲ್ಕು ವಾರ ಮಂಗಳೂರು - ಮಂತ್ರಾಲಯ ನೇರ ವಿಶೇಷ ಎಕ್ಸ್ಪ್ರೆಸ್ ರೈಲು ಸಂಚಾರ - ರಾಯರ ದರ್ಶನ ಸುಲಭ

ಸಾರಾಂಶ
ಬೆಂಗಳೂರು: ಸಿಎಂ ಏನ್ ಹೇಳಿದ್ದಾರೋ ಅದನ್ನೇ ನಾನು ಹೇಳೋದು. ಎಲ್ಲಾ ನಿವಾರಣೆಯಾಗಿದೆ ಎಂದಷ್ಟೆ ಹೇಳಿದ ರಾಮಲಿಂಗಾರೆಡ್ಡಿ ಅವರು, ರಾಜೀನಾಮೆ ವಾಪಾಸ್ ಮತ್ತು ಜಲಸಂಪನ್ಮೂಲ ಖಾತೆಯಲ್ಲಿ ಮುಂದುವರೆಯುವ ಬಗ್ಗೆ ಯಾವುದೇ ಸ್ಪಷ್ಟನೆಯನ್ನು ನೀಡಿಲ್ಲ. ಇತ್ತ ಸಿಎಂ ಡಿಕೆ ಶಿವಕುಮಾರ್ ಮಾತನಾಡಿ, ನಾನು ಪ್ರೆಸಿಡೆಂಟ್, ಅವರು ವರ್ಕಿಂಗ್ ಪ್ರೆಸಿಡೆಂಡ್. ನಾನು ಚೀಫ್ ಮಿನಿಸ್ಟರ್, ಅವರು ಮಿನಿಸ್ಟರ್, ನಾವು ಪಕ್ಷದಲ್ಲಿ ಬೆಳೆದವರು. ಪಕ್ಷ ಉಳಿಸ್ತಾ ಇರೋರು. ಬೆಂಗಳೂರಿಗೆ ಒಳ್ಳೆದು ಆಗ್ಬೇಕು ಅನ್ನೋವರು. ನಾವೆಲ್ಲ ಕೂತು ಮಾತನಾಡಿದ್ದೇವೆ. ಪರಿಹಾರ ಆಗಿದೆ ಎಂದು ಹೇಳಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
06:50 AM (IST) Jun 06
Karnataka News Live 6 June 2026ನಾಲ್ಕು ವಾರ ಮಂಗಳೂರು - ಮಂತ್ರಾಲಯ ನೇರ ವಿಶೇಷ ಎಕ್ಸ್ಪ್ರೆಸ್ ರೈಲು ಸಂಚಾರ - ರಾಯರ ದರ್ಶನ ಸುಲಭ
Read Full Story
06:17 AM (IST) Jun 06
Karnataka News Live 6 June 2026ತೆಲಂಗಾಣದಲ್ಲಿ KMF ನಂದಿನಿ ಉತ್ಪನ್ನಗಳ ಮಾರಾಟ ವಿವಾದ - ಹೈಕೋರ್ಟ್ನಿಂದ ಮಹತ್ವದ ಆದೇಶ
ತೆಲಂಗಾಣದಲ್ಲಿ 'ನಂದಿನಿ' ಉತ್ಪನ್ನಗಳ ಮಾರುಕಟ್ಟೆ ವಿಸ್ತರಿಸಲು ಕೆಎಂಎಫ್ಗೆ ಇದ್ದ ಕಾನೂನು ತೊಡಕನ್ನು ಹೈಕೋರ್ಟ್ ನಿವಾರಿಸಿದೆ. ಹೈದರಾಬಾದ್ ಮಾರುಕಟ್ಟೆ ಹಕ್ಕಿನ ಆಧಾರದ ಮೇಲೆ ಇಡೀ ರಾಜ್ಯದ ಏಕಸ್ವಾಮ್ಯವನ್ನು ಪ್ರತಿಪಾದಿಸಿದ್ದ ಅರ್ಜಿದಾರರ ವಾದವನ್ನು ನ್ಯಾಯಾಲಯ ತಳ್ಳಿಹಾಕಿದ್ದು, ಕೆಎಂಎಫ್ಗೆ ಹೊಸ ಏಜೆನ್ಸಿಗಳನ್ನು ನೇಮಿಸುವ ಅಧಿಕಾರವಿದೆ ಎಂದು ಸ್ಪಷ್ಟಪಡಿಸಿದೆ.
Read Full Story 05:58 AM (IST) Jun 06
Karnataka News Live 6 June 2026ಮಳೆ-ಗಾಳಿಗೆ ಧರೆಗೆ ಉರುಳುವುದನ್ನುತಿಳಿಯಲು 1500 ಮರಗಳ ಅಧ್ಯಯನಕ್ಕೆ 4.45 ಕೋಟಿ ರು. ವೆಚ್ಚದ ಪ್ರಸ್ತಾವನೆ
ಬೆಂಗಳೂರಿನಲ್ಲಿ ಮರಗಳು ಉರುಳುವುದನ್ನು ತಡೆಯಲು, 1,500 ಮರಗಳ ಆರೋಗ್ಯವನ್ನು ಜರ್ಮನ್ ತಂತ್ರಜ್ಞಾನ ಬಳಸಿ ಪರೀಕ್ಷಿಸಲು ರಾಷ್ಟ್ರೀಯ ಮರ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯು 4.45 ಕೋಟಿ ರೂ.ಗಳ ಪ್ರಸ್ತಾವನೆಯನ್ನು ಸಲ್ಲಿಸಿದೆ. ಈ ದುಬಾರಿ ತಂತ್ರಜ್ಞಾನವು ಮರಗಳ ಆಂತರಿಕ ಸ್ಥಿತಿಯನ್ನು ನಿಖರವಾಗಿ ಅರಿಯಲು ಸಹಾಯ ಮಾಡಲಿದ್ದು, ವೆಚ್ಚವನ್ನು ಕಡಿಮೆ ಮಾಡುವಂತೆ ಜಿಬಿಎ ಕೋರಿದೆ.
Read Full Story 05:53 AM (IST) Jun 06
Karnataka News Live 6 June 2026ದೇಶದಲ್ಲಿ ತೈಲ, ಅನಿಲ ಬೆಲೆ ಏರಿಕೆಗೆ ಸರ್ಕಾರ ಕಾರಣವಲ್ಲ - ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್
ದೇಶದಲ್ಲಿನ ಇಂಧನ ಬೆಲೆ ಏರಿಕೆಗೆ ಕೇಂದ್ರ ಸರ್ಕಾರ ಕಾರಣವಲ್ಲ, ಬದಲಾಗಿ ಮಧ್ಯಪ್ರಾಚ್ಯದಲ್ಲಿನ ಯುದ್ಧದಂತಹ ಅಂತಾರಾಷ್ಟ್ರೀಯ ವಿದ್ಯಮಾನಗಳೇ ಕಾರಣ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟಪಡಿಸಿದ್ದಾರೆ. ಯುದ್ಧದ ವಾತಾವರಣ ತಿಳಿಯಾದ ನಂತರ ಬೆಲೆಗಳು ಇಳಿಕೆಯಾಗಲಿವೆ ಎಂದು ಅವರು ಭರವಸೆ ನೀಡಿದರು.
Read Full Story 05:44 AM (IST) Jun 06
Karnataka News Live 6 June 2026ದಿಲೀಪ್ ರಾಜ್ಗೆ ನುಡಿ ನಮನ; ಎಲ್ಲವನ್ನು ಕಲಿಸಿಕೊಟ್ಟು ಹೋಗಿಬಿಟ್ಟ; ಪತ್ನಿ ಕಣ್ಣೀರು
ಇತ್ತೀಚೆಗೆ ನಿಧನರಾದ ನಟ ದಿಲೀಪ್ ರಾಜ್ ಅವರಿಗೆ ಕರ್ನಾಟಕ ಟೆಲಿವಿಷನ್ ಪ್ರೊಡ್ಯೂಸರ್ ಅಸೋಸಿಯೇಷನ್ ವತಿಯಿಂದ ನುಡಿ ನಮನ ಸಲ್ಲಿಸಲಾಯಿತು. ಈ ಕಾರ್ಯಕ್ರಮದಲ್ಲಿ ಹಿರಿಯ ನಟಿ ಉಮಾಶ್ರೀ ಕಿರುತೆರೆ ಕಲಾವಿದರಿಗೆ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಸಲಹೆ ನೀಡಿದರೆ, ದಿಲೀಪ್ ಪತ್ನಿ ವಿದ್ಯಾ ಹಾಗೂ ನಿರ್ದೇಶಕ ಬಿ. ಸುರೇಶ್ ಭಾವುಕರಾಗಿ ಮಾತನಾಡಿದರು.
Read Full Story 05:23 AM (IST) Jun 06
Karnataka News Live 6 June 2026ವಿಧಾನ ಪರಿಷತ್ ಚುನಾವಣೆ - 5ನೇ ಸ್ಥಾನ ಗೆಲ್ಲಲು ಕಾಂಗ್ರೆಸ್ನಿಂದ ನಿಗೂಢ ದಾಳ, 2 ಮತಗಳ ಕೊರತೆ
ವಿಧಾನ ಪರಿಷತ್ ಚುನಾವಣೆಯಲ್ಲಿ ಐದನೇ ಸ್ಥಾನ ಗೆಲ್ಲಲು ಕಾಂಗ್ರೆಸ್ ಪಕ್ಷವು ವಿನಯ್ ಕಾರ್ತಿಕ್ ಅವರನ್ನು ಕಣಕ್ಕಿಳಿಸಿದೆ. ಗೆಲುವಿಗೆ ಬೇಕಾದ 2 ಮತಗಳ ಕೊರತೆ ನೀಗಿಸಲು, ಬಿಜೆಪಿ ಬಂಡಾಯ ಶಾಸಕರನ್ನು ಸೆಳೆಯುವುದು ಅಥವಾ ಅವರು ಗೈರಾಗುವಂತೆ ನೋಡಿಕೊಳ್ಳುವ ತಂತ್ರವನ್ನು ಕಾಂಗ್ರೆಸ್ ಹೆಣೆದಿದೆ.
Read Full Story