11:39 PM (IST) Dec 30

Karnataka News Live 30 December 2025ಬೆಂಗಳೂರು ಹೊಸೂರು ಫ್ಲೈಓವರ್ ಮೇಲೆ ಸ್ಲೀಪರ್ ಬಸ್ ಅಪಘಾತ, ನಾಲ್ವರಿಗೆ ಗಾಯ

ಬೆಂಗಳೂರು ಹೊಸೂರು ಫ್ಲೈಓವರ್ ಮೇಲೆ ಸ್ಲೀಪರ್ ಬಸ್ ಅಪಘಾತ, ನಾಲ್ವರಿಗೆ ಗಾಯ, ಚಿತ್ರದುರ್ಗ ಬಸ್ ದುರಂತದ ಬೆನ್ನಲ್ಲೇ ಇದೀಗ ಮತ್ತೊಂದು ಸ್ಲೀಪರ್ ಬಸ್ ಅಪಘಾತಕ್ಕೀಡಾಗಿದ್ದು, ಬಸ್ ಪ್ರಯಾಣವೇ ಆತಂಕ ಹುಟ್ಟಿಸುವಂತಿದೆ.

Read Full Story
11:05 PM (IST) Dec 30

Karnataka News Live 30 December 2025ಬೆಂಗಳೂರಿನ ಎಂಜಿ ರಸ್ತೆಯಲ್ಲಿ ಹೊಸ ವರ್ಷ ಸೆಲೆಬ್ರೇಷನ್‌ಗೆ ಡೆಡ್ ಲೈನ್, ಸಮಯ ಮೀರಿದರೆ ಆಪತ್ತು

ಬೆಂಗಳೂರಿನ ಎಂಜಿ ರಸ್ತೆಯಲ್ಲಿ ಹೊಸ ವರ್ಷ ಸೆಲೆಬ್ರೇಷನ್‌ಗೆ ಡೆಡ್ ಲೈನ್, ಸಮಯ ಮೀರಿದರೆ ಆಪತ್ತು, ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ಸೆಲೆಬ್ರೇಷನ್‌ಗೆ ಎಷ್ಟು ಗಂಟೆ ವರೆಗೆ ಅವಕಾಶ ನೀಡಲಾಗಿದೆ?

Read Full Story
10:59 PM (IST) Dec 30

Karnataka News Live 30 December 2025ರೈಲಲ್ಲ ಇದು ಹಳಿ ಮೇಲಿನ ವಿಮಾನ! 180 ಕಿ.ಮೀ ವೇಗದಲ್ಲೂ ಚೆಲ್ಲದ ಹನಿ ನೀರು, ವಂದೇ ಭಾರತ್ ಸ್ಲೀಪರ್‌ನ 'ವಾಟರ್ ಟೆಸ್ಟ್' ಕಂಡು ದಂಗಾದ ಜಗತ್ತು!

ವಂದೇ ಭಾರತ್ ಸ್ಲೀಪರ್ ರೈಲು ಗಂಟೆಗೆ 180 ಕಿ.ಮೀ ವೇಗದಲ್ಲಿ ಯಶಸ್ವಿ 'ವಾಟರ್ ಟೆಸ್ಟ್' ಪೂರ್ಣಗೊಳಿಸಿದೆ. ರೈಲಿನ ಅಸಾಧಾರಣ ಸ್ಥಿರತೆಯು ಜಗತ್ತನ್ನು ಬೆರಗುಗೊಳಿಸಿದ್ದು, BEML ನಿರ್ಮಿತ ಈ ಐಷಾರಾಮಿ ಸ್ಲೀಪರ್ ರೈಲು ಶೀಘ್ರದಲ್ಲೇ ವಾಣಿಜ್ಯ ಸಂಚಾರಕ್ಕೆ ಮುಕ್ತವಾಗಲಿದೆ.
Read Full Story
10:26 PM (IST) Dec 30

Karnataka News Live 30 December 2025ಶಿವಮೊಗ್ಗದಲ್ಲಿ ಬೇಕರ್ಸ್ ಮಾಫಿಯಾ ಅಟ್ಟಹಾಸಕ್ಕೆ ಬ್ರೇಕ್; ಸುವರ್ಣ ನ್ಯೂಸ್ ಸ್ಟಿಂಗ್ ಆಪರೇಷನ್ ಬೆನ್ನಲ್ಲೇ ಅಧಿಕಾರಿಗಳು ದಾಳಿ!

ಸುವರ್ಣ ನ್ಯೂಸ್ ನಡೆಸಿದ ಸ್ಟಿಂಗ್ ಆಪರೇಷನ್‌ನಿಂದ ಶಿವಮೊಗ್ಗದ ಬೇಕರ್ಸ್ ಮಾಫಿಯಾ ಬಯಲಾಗಿದೆ. ಹಾಳಾದ ಬ್ರೆಡ್ ಬಳಸಿ, ಅನೈರ್ಮಲ್ಯ ವಾತಾವರಣದಲ್ಲಿ ತಿನಿಸುಗಳನ್ನು ತಯಾರಿಸುತ್ತಿದ್ದ ಘಟಕಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿ, ಕಳಪೆ ಆಹಾರವನ್ನು ನಾಶಪಡಿಸಿದ್ದಾರೆ.
Read Full Story
09:09 PM (IST) Dec 30

Karnataka News Live 30 December 2025Breaking News - ಬೆಳಗಾವಿಯಲ್ಲಿ ಬಿಜೆಪಿ ಹೈವೋಲ್ಟೇಜ್ ಸಭೆ; ಬಿಎಲ್ ಸಂತೋಷ್, ವಿಜಯೇಂದ್ರ ನೇತೃತ್ವದಲ್ಲಿ ಚುನಾವಣಾ ತಂತ್ರ!

ಬೆಳಗಾವಿಯಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಮತ್ತು ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಜಿಲ್ಲಾ ಕೋರ್ ಕಮಿಟಿ ಸಭೆ ನಡೆದಿದೆ. ಪಕ್ಷ ಸಂಘಟನೆ, ಮುಂದಿನ ತಂತ್ರಗಾರಿಕೆ ಮತ್ತು ಭಿನ್ನಾಭಿಪ್ರಾಯಗಳ ಶಮನದ ಕುರಿತು ಚರ್ಚಿಸಲು ಜಿಲ್ಲೆಯ ಪ್ರಮುಖ ನಾಯಕರು ಭಾಗಿ.

Read Full Story
09:02 PM (IST) Dec 30

Karnataka News Live 30 December 2025ಬೀಚ್‌ನಲ್ಲಿ ಹೊಸ ವರ್ಷ ಆಚರಿಸುವವರಿಗೆ ವಾರ್ನಿಂಗ್, ಡಿ.31ರ ಸಂಜೆ 6ರ ಬಳಿಕ ಸಮುದ್ರಕ್ಕಿಳಿಯುವಂತಿಲ್ಲ

ಬೀಚ್‌ನಲ್ಲಿ ಹೊಸ ವರ್ಷ ಆಚರಿಸುವವರಿಗೆ ವಾರ್ನಿಂಗ್, ಡಿ.31ರ ಸಂಜೆ 6ರ ಬಳಿಕ ಸಮುದ್ರಕ್ಕಿಳಿಯುವಂತಿಲ್ಲ, ಜಿಲ್ಲಾಧಿಕಾರಿ ಈ ಖಡಕ್ ಆದೇಶ ನೀಡಿದ್ದಾರೆ. ಬೀಚ್‌ನಲ್ಲಿ ಯಾವುದೇ ಸಮಾರಂಭ, ಕಾರ್ಯಕ್ರಮ ಆಯೋಜಿಸಲು ಅವಕಾಶವಿಲ್ಲ ಎಂದಿದೆ.

Read Full Story
08:31 PM (IST) Dec 30

Karnataka News Live 30 December 2025ಮುಖ್ಯಮಂತ್ರಿಗಳೇ, ನಮ್ದು ಬದುಕಲ್ವಾ? ಕೇರಳಿಗರಿಗೆ ತೋರಿಸೋ ಪ್ರೀತಿ ಮಲೆನಾಡು ಸಂತ್ರಸ್ತರ ಮೇಲೆ ಏಕಿಲ್ಲ?

2019ರ ಭೀಕರ ಮಳೆಗೆ ಮನೆ-ಮಠ ಕಳೆದುಕೊಂಡ ಚಿಕ್ಕಮಗಳೂರಿನ ಮೂಡಿಗೆರೆ ಸಂತ್ರಸ್ತರು ಆರು ವರ್ಷಗಳಿಂದ ಪರಿಹಾರಕ್ಕಾಗಿ ಕಾಯುತ್ತಿದ್ದಾರೆ. ಬೆಂಗಳೂರಿನಲ್ಲಿ ಕೇರಳಿಗರಿಗೆ ವಸತಿ ಕಲ್ಪಿಸಲು ಸರ್ಕಾರ ತೋರುತ್ತಿರುವ ಆಸಕ್ತಿಯು, ತಮ್ಮನ್ನು ನಿರ್ಲಕ್ಷಿಸಲಾಗಿದೆ ಎಂಬ ಮಲೆನಾಡಿಗರ ಆಕ್ರೋಶಕ್ಕೆ ಕಾರಣವಾಗಿದೆ.
Read Full Story
07:50 PM (IST) Dec 30

Karnataka News Live 30 December 2025Viral Video - ದೇಶದ ಭಯಂಕರ ವಿಷಕಾರಿ ಹಾವಿನ ವಿಡಿಯೋ ಹಂಚಿಕೊಂಡ IFS ಅಧಿಕಾರಿ; ಇದು ಕಚ್ಚಿದ್ರೆ ಟಿಕೆಟ್ ಫಿಕ್ಸ್!

ಐಎಫ್‌ಎಸ್ ಅಧಿಕಾರಿ ಪರ್ವೀನ್ ಕಸ್ವಾನ್ ಭಾರತದ ಅತ್ಯಂತ ವಿಷಕಾರಿ ಹಾವುಗಳಲ್ಲಿ ಒಂದಾದ ಬ್ಯಾಂಡೆಡ್ ಕ್ರೈಟ್‌ನ ವಿಡಿಯೋ ಹಂಚಿಕೊಂಡಿದ್ದಾರೆ. ಈ ಹಾವಿನ ಕಪ್ಪು ಮತ್ತು ಹಳದಿ ಪಟ್ಟೆಗಳ ಸೌಂದರ್ಯ, ಅದರ ನಿಶಾಚರಿ ಮತ್ತು ನಾಚಿಕೆ ಸ್ವಭಾವದ ಬಗ್ಗೆ ಲೇಖನವು ವಿವರಿಸಿದ್ದಾರೆ.

Read Full Story
07:22 PM (IST) Dec 30

Karnataka News Live 30 December 2025ಪುರಾಣ ಪ್ರಸಿದ್ಧ ತೋಪಿನ ತಿಮ್ಮಪ್ಪ ದೇಗುಲ ವಶಕ್ಕೆ ಸರ್ಕಾರ ಕಸರತ್ತು; ಗ್ರಾಮಸ್ಥರ ಒಗ್ಗಟ್ಟಿಗೆ ಅಧಿಕಾರಿಗಳು ಸುಸ್ತು!

ಮದ್ದೂರು ತಾಲೂಕಿನ ಆಬಲವಾಡಿ ಗ್ರಾಮದ 'ತೋಪಿನ ತಿಮ್ಮಪ್ಪ' ದೇವಾಲಯವನ್ನು ಮುಜರಾಯಿ ಇಲಾಖೆಯ ಸುಪರ್ದಿಗೆ ತೆಗೆದುಕೊಳ್ಳುವ ಜಿಲ್ಲಾಡಳಿತದ ಕ್ರಮಕ್ಕೆ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ನ್ಯಾಯಾಲಯದ ಆದೇಶದ ಮೇರೆಗೆ ಬಂದ ಅಧಿಕಾರಿಗಳನ್ನು ಭಕ್ತರು ತಡೆದಿದ್ದಾರೆ.

Read Full Story
07:17 PM (IST) Dec 30

Karnataka News Live 30 December 2025ಗಲಭೆಕೋರರೇ ಎಚ್ಚರಿಕೆ - ಹೊಸ ವರ್ಷಾಚರಣೆಗೆ ಬೆಂಗಳೂರಲ್ಲಿ ಹದ್ದಿನ ಕಣ್ಣು, AI ಕ್ರೌಡ್ ಡೆನ್ಸಿಟಿ ಕ್ಯಾಮೆರಾ ಫಿಕ್ಸ್!

2026ರ ಹೊಸ ವರ್ಷಾಚರಣೆಗಾಗಿ ಬೆಂಗಳೂರಿನಲ್ಲಿ, ವಿಶೇಷವಾಗಿ ಎಂಜಿ ಮತ್ತು ಬ್ರಿಗೇಡ್ ರಸ್ತೆಗಳಲ್ಲಿ, ಪೊಲೀಸರು ಅಭೂತಪೂರ್ವ ಭದ್ರತಾ ವ್ಯವಸ್ಥೆ ಮಾಡಿದ್ದಾರೆ. 3,400 ಸಿಸಿಟಿವಿಗಳು, ವಾಚ್ ಟವರ್‌ಗಳು ಮತ್ತು ಗಲಭೆ ಪತ್ತೆಹಚ್ಚುವ AI ಆಧಾರಿತ ಕ್ಯಾಮೆರಾಗಳ ಮೂಲಕ ನಗರದ ಮೇಲೆ ಹದ್ದಿನ ಕಣ್ಣಿಡಲಾಗಿದೆ.
Read Full Story
06:38 PM (IST) Dec 30

Karnataka News Live 30 December 2025ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ವಾಟ್ಸಾಪ್ ಹ್ಯಾಕ್; ಗೂಗಲ್ ಪೇ ಮೂಲಕ ಹಣಕ್ಕೆ ಬೇಡಿಕೆ!

ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಅವರ ವಾಟ್ಸಾಪ್ ಖಾತೆಯನ್ನು ಹ್ಯಾಕ್ ಮಾಡಿ, ವಂಚಕರು ಅವರ ಸಂಪರ್ಕದಲ್ಲಿರುವವರಿಂದ ಹಣ ಲಪಟಾಯಿಸಲು ಯತ್ನಿಸಿದ್ದಾರೆ. ಈ ಘಟನೆಯ ಹಿನ್ನೆಲೆಯಲ್ಲಿ, ವಾಟ್ಸಾಪ್ ಹ್ಯಾಕ್ ಆಗುವ ಬಗೆ ಮತ್ತು 'ಟೂ ಸ್ಟೆಪ್ ವೆರಿಫಿಕೇಶನ್' ಮೂಲಕ ಖಾತೆ ಸುರಕ್ಷಿತವಾಗಿರಿಸಿಕೊಳ್ಳುವುದು ಹೇಗೆ ತಿಳಿಯಿರಿ

Read Full Story
06:33 PM (IST) Dec 30

Karnataka News Live 30 December 2025ಮನೆಗಾಗಿ 37.48 ಲಕ್ಷ ಅರ್ಜಿ ಹಾಕಿದರೂ ಸೂರು ಕೊಟ್ಟಿಲ್ಲ; ಕೋಗಿಲು ಅಕ್ರಮ ನಿವಾಸಿಗಳಿಗೆ ಮನೆ ಮಂಜೂರು-ಆರ್. ಅಶೋಕ್

ರಾಜ್ಯದಲ್ಲಿ 17.31 ಲಕ್ಷ ಜನರು ನಿವೇಶನ ರಹಿತರು ಹಾಗೂ 3 ಲಕ್ಷ ಜನರು ವಸತಿ ರಹಿತರಾಗಿದ್ದಾರೆ. ಒಟ್ಟು 37.48 ಲಕ್ಷ ಜನರು ಮನೆ ಇಲ್ಲದೆ ಅರ್ಜಿ ಹಾಕಿಕೊಂಡು ಕಾಯುತ್ತಿದ್ದಾರೆ. ಆದರೆ ಹೊರಗಿಂದ ಬಂದು ಅಕ್ರಮವಾಗಿ ವಾಸವಿದ್ದವರಿಗೆ ಸರ್ಕಾರ ಮನೆ ನಿರ್ಮಿಸಿ ಕೊಡುತ್ತಿದೆ ಎಂದು ಆರ್. ಅಶೋಕ ಆರೋಪಿಸಿದರು.

Read Full Story
05:33 PM (IST) Dec 30

Karnataka News Live 30 December 2025ಬೆಂಗಳೂರಿನ ಬಯೋಕಾನ್ ಕಂಪನಿ 6ನೇ ಮಹಡಿಯಿಂದ ಬಿದ್ದು ಟೆಕ್ಕಿ ಸಾವು - ಗೆಳತಿ ಜೊತೆಗಿದ್ದಾಗಲೇ ದುರಂತ!

ಬೆಂಗಳೂರಿನ ಪ್ರತಿಷ್ಠಿತ ಬಯೋಕಾನ್ ಕಂಪನಿಯ ಆರನೇ ಮಹಡಿಯಿಂದ ಆಕಸ್ಮಿಕವಾಗಿ ಬಿದ್ದು 26 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್ ಅನಂತಕುಮಾರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗೆಳತಿಯೊಂದಿಗೆ ಮಾತನಾಡುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Read Full Story
05:30 PM (IST) Dec 30

Karnataka News Live 30 December 2025ವೈಕುಂಠ ಏಕಾದಶಿ ದಿನದಂದೇ ಶಿರಸಿಯಲ್ಲಿ ದುರಂತ; ವಿದ್ಯಾರ್ಥಿಗಳ ಪ್ರವಾಸಿ ಬಸ್ ಪಲ್ಟಿ!

ದಾವಣಗೆರೆಯ ಜೈನ್ ಕಾಲೇಜು ವಿದ್ಯಾರ್ಥಿಗಳು ಶೈಕ್ಷಣಿಕ ಪ್ರವಾಸಕ್ಕೆಂದು ಬಂದಿದ್ದ ಬಸ್ ಉತ್ತರ ಕನ್ನಡದ ಶಿರಸಿ ಬಳಿಯ ಮತ್ತಿಘಟ್ಟ ತಿರುವಿನಲ್ಲಿ ಪಲ್ಟಿಯಾಗಿದೆ. ಈ ದುರ್ಘಟನೆಯಲ್ಲಿ ಸುಮಾರು 10-12 ವಿದ್ಯಾರ್ಥಿಗಳು ಗಾಯಗೊಂಡಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

Read Full Story
05:06 PM (IST) Dec 30

Karnataka News Live 30 December 2025ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿಗೆ ಬಿಗ್ ರಿಲೀಫ್ - ಇಡಿ ಪ್ರಕರಣದಲ್ಲಿ 4 ತಿಂಗಳ ಬಳಿಕ ಜಾಮೀನು ಮಂಜೂರು

ಬೆಟ್ಟಿಂಗ್ ದಂಧೆ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿದ್ದ ಕಾಂಗ್ರೆಸ್ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಅವರಿಗೆ ಷರತ್ತುಬದ್ಧ ಜಾಮೀನು. ₹2000 ಕೋಟಿ ಹಗರಣದ ವಿವರ ತಿಳಿಯಿರಿ.

Read Full Story
05:01 PM (IST) Dec 30

Karnataka News Live 30 December 2025ವಿದ್ಯಾರ್ಥಿಗಳ ಕೈಯಲ್ಲಿ ಕಾರು ತೊಳೆಯಿಸಿದ ಶಿಕ್ಷಕ; ಹಳಿಯಾಳದಲ್ಲಿ ಗುರುವಿನ 'ಕಾರು ಬಾರು' ವಿಡಿಯೋ ವೈರಲ್!

Students washing car viral video ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಶಾಲೆಯೊಂದರಲ್ಲಿ ಶಿಕ್ಷಕರೊಬ್ಬರು ಶಾಲಾ ಅವಧಿಯಲ್ಲಿ ವಿದ್ಯಾರ್ಥಿಗಳಿಂದ ತಮ್ಮ ಕಾರನ್ನು ತೊಳಿಸಿರುವ ಘಟನೆ ನಡೆದಿದೆ. ಈ ದೃಶ್ಯದ ವಿಡಿಯೋ ವೈರಲ್ ಆಗಿದ್ದು, ಶಿಕ್ಷಕನ ವರ್ತನೆಗೆ ಪೋಷಕರು ತೀವ್ರ ಆಕ್ರೋಶ ವ್ಯಕ್ತವಾಗಿದೆ 

Read Full Story
04:55 PM (IST) Dec 30

Karnataka News Live 30 December 2025Bigg Bossಗೆ ನನ್ನಮ್ಮ ಎಂಟ್ರಿ ಕೊಟ್ಟಾಗ್ಲೇ ಗೆಲ್ಲುವ ಸ್ಪರ್ಧಿ ಬಗ್ಗೆ ರಿವೀಲ್​ ಮಾಡಿಬಿಟ್ಟಿದ್ರು ಎಂದ ಸೂರಜ್​ ಸಿಂಗ್​!

ಬಿಗ್​ಬಾಸ್​ ಮನೆಯಿಂದ ಹೊರಬಂದಿರುವ ಸೂರಜ್​ ಸಿಂಗ್​, ತಮ್ಮ ಆಸೆಯಂತೆ ರಾಶಿಕಾ ಅಥವಾ ಅಶ್ವಿನಿ ಗೆಲ್ಲುವುದಿಲ್ಲ ಎಂದಿದ್ದಾರೆ. ಬದಲಾಗಿ, ಕುಟುಂಬದವರು ಮನೆಗೆ ಬಂದಾಗಲೇ ಈ ಸೀಸನ್​ನ ವಿಜೇತ ಯಾರು ಎಂಬುದು ತಮಗೆ ಖಚಿತವಾಗಿತ್ತು ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ.

Read Full Story
04:46 PM (IST) Dec 30

Karnataka News Live 30 December 2025ಕೋಗಿಲು ಅಕ್ರಮ ನಿವಾಸಿಗಳು 20 ವರ್ಷದಿಂದಲ್ಲ, 6 ತಿಂಗಳ ಹಿಂದೆ ಬಂದವರು - 2023ರ ನಕ್ಷೆ ತೋರಿಸಿದ-ಆರ್. ಅಶೋಕ್

ಬೆಂಗಳೂರಿನ ಕೋಗಿಲು ಗ್ರಾಮದಲ್ಲಿನ ಸರ್ಕಾರಿ ಜಮೀನು ಅಕ್ರಮವಾಗಿ ಒತ್ತುವರಿಯಾಗಿದೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಆರೋಪಿಸಿದ್ದಾರೆ. ಕಳೆದ 6 ತಿಂಗಳಿನಿಂದಷ್ಟೇ ಇಲ್ಲಿ ಮನೆಗಳನ್ನು ಕಟ್ಟಲಾಗಿದ್ದು, ಕಾಂಗ್ರೆಸ್ ಪ್ರಯೋಜಿತ ಅಕ್ರಮ ಎಂದು ಗೂಗಲ್ ಮ್ಯಾಪ್ ಸಾಕ್ಷ್ಯಗಳನ್ನು ಪ್ರದರ್ಶಿಸಿ ದೂರಿದ್ದಾರೆ.

Read Full Story
04:34 PM (IST) Dec 30

Karnataka News Live 30 December 2025ಸಿಎಂ ಸಿದ್ದರಾಮಯ್ಯ ಅವರೇ, ಕೇರಳ ವಲಸಿಗರ ಮೇಲೆ ತೋರಿಸೋ ಪ್ರೀತಿ; ಬೆಳಗಾವಿ ಸಂತ್ರಸ್ತರ ಮೇಲೆ ಏಕಿಲ್ಲ?

ಬೆಳಗಾವಿಯ ಅತಿವೃಷ್ಟಿ ಸಂತ್ರಸ್ತರು ರಾಜ್ಯ ಸರ್ಕಾರದ ದ್ವಂದ್ವ ನೀತಿಯ ವಿರುದ್ಧ ಬೀದಿಗಿಳಿದಿದ್ದಾರೆ. ಬೆಂಗಳೂರಿನ ವಲಸಿಗರಿಗೆ ಫ್ಲ್ಯಾಟ್ ನೀಡುವ ಸರ್ಕಾರ, 381 ಮನೆಗಳನ್ನು ಕಳೆದುಕೊಂಡ ಬೆಳಗಾವಿಯ ಸಂತ್ರಸ್ತರಿಗೆ ಕೇವಲ ₹1.20 ಲಕ್ಷ ಪರಿಹಾರ ನೀಡಿ ಭರವಸೆ ಮರೆತಿದೆ ಎಂದು ಸಂತ್ರಸ್ತರು ಆಕ್ರೋಶ 

Read Full Story
03:43 PM (IST) Dec 30

Karnataka News Live 30 December 2025Hubballi - ಹೊಟ್ಟೆ ಮೇಲೆ ಬೆಳೆಯದ ಚರ್ಮ, ಕರುಳು-ಕಿಡ್ನಿ ಹೊರಬಂದು ನವಜಾತ ಶಿಶು ಸಾವು!

ಕೊಪ್ಪಳ ಜಿಲ್ಲೆಯಲ್ಲಿ ಹೊಟ್ಟೆಯ ಚರ್ಮ ಸರಿಯಾಗಿ ಬೆಳೆಯದ ಕಾರಣ ಕರುಳು-ಕಿಡ್ನಿ ಹೊರಬಂದ ಸ್ಥಿತಿಯಲ್ಲಿ ಜನಿಸಿದ ನವಜಾತ ಶಿಶುವನ್ನು, ಜೀರೋ ಟ್ರಾಫಿಕ್ ಮೂಲಕ ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಮಗು ಸೋಮವಾರ ಮೃತಪಟ್ಟಿದೆ.
Read Full Story