10:58 PM (IST) Jul 28

Karnataka News Live 28 July 2026ಬೆಂಗಳೂರಿಗರಿಗೆ ಶಾಕ್ - ಹೆಬ್ಬಾಳ-ಸರ್ಜಾಪುರ ಕೆಂಪು ಮೆಟ್ರೋ ಯೋಜನೆಗೆ ಸದ್ಯಕ್ಕಿಲ್ಲ ಒಪ್ಪಿಗೆ! ಕೇಂದ್ರದ ಅಸಲಿ ಸತ್ಯ!

ಬೆಂಗಳೂರಿನ ಹೆಬ್ಬಾಳ-ಸರ್ಜಾಪುರ ಸಂಪರ್ಕಿಸುವ ನಮ್ಮ ಮೆಟ್ರೋ ಹಂತ 3A (ಕೆಂಪು ಮಾರ್ಗ) ಯೋಜನೆಗೆ ತಕ್ಷಣದ ಅನುಮೋದನೆ ಅನಿಶ್ಚಿತವಾಗಿದೆ ಎಂದು ಕೇಂದ್ರ ಸರ್ಕಾರ ರಾಜ್ಯಸಭೆಯಲ್ಲಿ ಸ್ಪಷ್ಟಪಡಿಸಿದೆ. ಈ ಪ್ರಸ್ತಾವನೆಯು ವಿವರವಾದ ಮೌಲ್ಯಮಾಪನದಲ್ಲಿದ್ದು, ಯೋಜನೆಯ ಕಾರ್ಯಸಾಧ್ಯತೆ ಮತ್ತು ಆರ್ಥಿಕ ಸಂಪನ್ಮೂಲಗಳ ಲಭ್ಯತೆ ಮೇಲೆ ಅನುಮೋದನೆ ಅವಲಂಬಿತವಾಗಿದೆ.
Read Full Story
10:31 PM (IST) Jul 28

Karnataka News Live 28 July 2026ಬೆಂಗಳೂರು ORR ಇನ್ಮುಂದೆ ಹೈಟೆಕ್ - ಬಸ್, ಸೈಕಲ್ ಟ್ರ್ಯಾಕ್ ದೇಶದಲ್ಲೇ ಫಸ್ಟ್ ಡೆಲಿವರಿ ಬಾಯ್ಸ್‌ಗೆ ಅತ್ಯಾಧುನಿಕ 'ಗಿಗ್ ಹಬ್ಸ್‌'

ಬೆಂಗಳೂರಿನ ಹೊರ ವರ್ತುಲ ರಸ್ತೆಯ (ORR) ಸಂಚಾರ ದಟ್ಟಣೆ ನಿವಾರಿಸಲು ರಾಜ್ಯ ಸರ್ಕಾರ ₹450 ಕೋಟಿ ವೆಚ್ಚದ ಬೃಹತ್ ಯೋಜನೆಗೆ ಚಾಲನೆ ನೀಡಿದೆ. ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಕೆ.ಆರ್. ಪುರಂವರೆಗಿನ 17 ಕಿ.ಮೀ ರಸ್ತೆಯನ್ನು ಬಹುಮಾದರಿ ಮೊಬಿಲಿಟಿ ಕಾರಿಡಾರ್ ಆಗಿ ಪರಿವರ್ತಿಸಲಾಗುತ್ತಿದ್ದು, ಫ್ಲೈಓವರ್‌ಗಳ ಕೆಳಗೆ ಗಿಗ್ ಹಬ್‌ಗಳು ಮತ್ತು ಸಮುದಾಯ ತಾಣಗಳನ್ನು ನಿರ್ಮಿಸಲಾಗುತ್ತಿದೆ.
Read Full Story
10:00 PM (IST) Jul 28

Karnataka News Live 28 July 2026ಕುಮಾರ ಕೃಪಾ ಗೆಸ್ಟ್ ಹೌಸ್ ಹೆಸರಿನಲ್ಲಿ ನಕಲಿ ವೆಬ್‌ಸೈಟ್; ಕೊಠಡಿ ಕಾಯ್ದಿರಿಸುವ ಸಾರ್ವಜನಿಕರಿಗೆ ಲಕ್ಷಾಂತರ ವಂಚನೆ!

ಬೆಂಗಳೂರಿನ ಪ್ರಸಿದ್ಧ ಕುಮಾರ ಕೃಪಾ ಸ್ಟೇಟ್ ಗೆಸ್ಟ್ ಹೌಸ್ ಹೆಸರಿನಲ್ಲಿ ನಕಲಿ ವೆಬ್‌ಸೈಟ್ ಸೃಷ್ಟಿಸಿ, ಆನ್‌ಲೈನ್‌ನಲ್ಲಿ ಕೊಠಡಿ ಕಾಯ್ದಿರಿಸುವ ಗ್ರಾಹಕರಿಗೆ ಲಕ್ಷಾಂತರ ರೂಪಾಯಿ ವಂಚಿಸಿರುವ ಜಾಲವೊಂದು ಬೆಳಕಿಗೆ ಬಂದಿದೆ.

Read Full Story
08:33 PM (IST) Jul 28

Karnataka News Live 28 July 2026ಕೆಪಿಎಸ್‌ಸಿ ನೇಮಕಾತಿ ಅಕ್ರಮ ಆರೋಪ, ಕೇಸ್ ಸಿಐಡಿಗೆ ವರ್ಗಾವಣೆ,ಪಾರದರ್ಶಕ ತನಿಖೆಗೆ ಸರ್ಕಾರ ಬದ್ಧ - ಪ್ರಿಯಾಂಕ್ ಖರ್ಗೆ

ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ನೇಮಕಾತಿ ಪ್ರಕ್ರಿಯೆಯಲ್ಲಿನ ಅಕ್ರಮಗಳ ಆರೋಪದ ತನಿಖೆಯನ್ನು ರಾಜ್ಯ ಸರ್ಕಾರವು ಸಿಐಡಿಗೆ ವರ್ಗಾಯಿಸಿದೆ. ಪಾರದರ್ಶಕ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟಪಡಿಸಿದ್ದಾರೆ.
Read Full Story
08:13 PM (IST) Jul 28

Karnataka News Live 28 July 2026ಪ್ರವಾಸೋದ್ಯಮ ವಸತಿ ಕ್ಷೇತ್ರಕ್ಕೆ ಹೊಸ ಆಯಾಮ - ಪ್ರತ್ಯೇಕ B&B ವ್ಯವಸ್ಥೆ ಪರಿಚಯಿಸಿದ ಕರ್ನಾಟಕ ಸರ್ಕಾರ

ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆಯು 'ಕರ್ನಾಟಕ ಹೋಂಸ್ಟೇ ನೋಂದಣಿ ಮಾರ್ಗಸೂಚಿ 2025' ಅಡಿಯಲ್ಲಿ ಹೋಂಸ್ಟೇ ಮತ್ತು ಬೆಡ್ & ಬ್ರೇಕ್‌ಫಾಸ್ಟ್ (B&B) ವ್ಯವಸ್ಥೆಗಳನ್ನು ಪ್ರತ್ಯೇಕಿಸಿದೆ. ಮಾಲೀಕರು ವಾಸಿಸುವ ಹೋಂಸ್ಟೇಗಳನ್ನು ವಾಣಿಜ್ಯೇತರ ಎಂದೂ, ನಿರ್ವಾಹಕರಿರುವ B&Bಗಳನ್ನು ವಾಣಿಜ್ಯ ಚಟುವಟಿಕೆ ಎಂದೂ ವರ್ಗೀಕರಿಸಿ, ಪ್ರವಾಸಿ ವಸತಿ ಕ್ಷೇತ್ರಕ್ಕೆ ಸ್ಪಷ್ಟ ನಿಯಂತ್ರಣ ತರಲಾಗಿದೆ.
Read Full Story
07:13 PM (IST) Jul 28

Karnataka News Live 28 July 2026ಗಮನಿಸಿ! ಆಗಸ್ಟ್ 1 ರಿಂದ ಎಲ್‌ಪಿಜಿಯಿಂದ ಆಧಾರ್‌ವರೆಗೆ ಹಲವು ನಿಯಮಗಳ ಬದಲಾವಣೆ; ಪ್ರತಿಯೊಬ್ಬರೂ ತಿಳಿಯಬೇಕಾದ ಸುದ್ದಿ!

ಆಗಸ್ಟ್ 1 ರಿಂದ ದೇಶಾದ್ಯಂತ ಹಲವು ಪ್ರಮುಖ ನಿಯಮಗಳು ಬದಲಾಗಲಿವೆ. ಎಲ್‌ಪಿಜಿ ಸಿಲಿಂಡರ್ ಬೆಲೆ, ಆದಾಯ ತೆರಿಗೆ ರಿಟರ್ನ್ ಗಡುವು, ತತ್ಕಾಲ್ ರೈಲು ಟಿಕೆಟ್ ಬುಕಿಂಗ್, ಮತ್ತು ಆಧಾರ್ ಆಧಾರಿತ CKYC 2.0 ವ್ಯವಸ್ಥೆಯಲ್ಲಿ ಗಮನಾರ್ಹ ಬದಲಾವಣೆಗಳು ಜಾರಿಗೆ ಬರಲಿವೆ.

Read Full Story
06:33 PM (IST) Jul 28

Karnataka News Live 28 July 2026ಟೀಂ ಇಂಡಿಯಾ ಕೋಚ್ ಹುದ್ದೆಗೆ ದಿಢೀರ್ ರಾಜೀನಾಮೆ..! ಮತ್ತೆ ಕೆಕೆಆರ್ ತಂಡಕ್ಕೆ ವಾಪಾಸ್

ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಸರಣಿ ಸೋಲಿನ ನಂತರ, ಟೀಂ ಇಂಡಿಯಾದ ಸಹಾಯಕ ಕೋಚ್ ರಿಯಾನ್ ಟ್ಯಾನ್ ಡೊಸ್ಕೆಟ್‌ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಗೌತಮ್ ಗಂಭೀರ್ ಅವರ ಆಪ್ತರಾಗಿದ್ದ ಡೊಸ್ಕೆಟ್‌, ಇದೀಗ ಕೋಲ್ಕತಾ ನೈಟ್ ರೈಡರ್ಸ್‌ ತಂಡದ ಕೋಚ್ ಆಗಿ ಮತ್ತೆ ಸೇರಿಕೊಂಡಿದ್ದಾರೆ.
Read Full Story
05:59 PM (IST) Jul 28

Karnataka News Live 28 July 2026Cricket - ಕ್ಯಾನ್ಸರ್ ಗೆದ್ದ ಕಷ್ಟ, ತಂದೆಯ ಮೌನ ಸಂದೇಶ; ಭಾವನಾತ್ಮಕ ಹೋರಾಟದ ಮೂಲಕ ಟೀಮ್ ಇಂಡಿಯಾ ಬಾಗಿಲು ತಟ್ಟಿದ ಹುಡುಗ!

ಭಾರತ ಟೆಸ್ಟ್ ತಂಡಕ್ಕೆ ಆಯ್ಕೆಯಾದ ಆ ಹುಡುನ ಯಶಸ್ಸಿನ ಹಿಂದೆ ತಂದೆಯ ನನಸಾಗದ ಕನಸು ಮತ್ತು ಕ್ಯಾನ್ಸರ್ ವಿರುದ್ಧದ ಹೋರಾಟದ ಸ್ಪೂರ್ತಿದಾಯಕ ಕಥೆಯಿದೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.

Read Full Story
05:33 PM (IST) Jul 28

Karnataka News Live 28 July 2026ಮುನಿಸು ಮರೆತರಾ ಕುಚಿಕೂ? ನಟ ದರ್ಶನ್ ಭೇಟಿಗೆ ಹೋದ ಧನ್ವೀರ್ ಗೌಡ.. ಅಲ್ಲಿ ಆಗಿದ್ದೇನು, ಮಾತಾಡಿದ್ದೇನು?

ಸ್ಯಾಂಡಲ್‌ವುಡ್ ಸಿನಿಮಾರಂಗದಲ್ಲಿ ಈ ಮೊದಲು ನಟ ದರ್ಶನ್‌ ಅವರ ಕ್ಲೋಸ್ ಸರ್ಕಲ್‌ನಲ್ಲಿ ಇದ್ದ ಹಲವರು ಈಗ ಜೈಲಿಗೆ ಹೋಗಿ ಭೆಟಿ ಮಾಡುವುದು ಹಾಗಿರಲಿ, ಸಂದರ್ಶನದಲ್ಲೋ ಅಥವಾ ಇನ್ನೆಲ್ಲೋ ನಟ ದರ್ಶನ್ ಬಗ್ಗೆ ಮಾತನ್ನಾಡಲೂ ಹಿಂದೇಟು ಹಾಕುತ್ತಿರುವಾಗ, ಧನ್ವೀರ್ ಗೌಡ ಮಾತ್ರ ಬದಲಾಗಿಲ್ಲ!

Read Full Story
04:57 PM (IST) Jul 28

Karnataka News Live 28 July 2026Politics - ಬಿಜೆಪಿ vs ಕಾಂಗ್ರೆಸ್; ಯಾರ ಬಳಿ ಇದೆ ಅತಿ ಹೆಚ್ಚು ಹಣ? ಇಲ್ಲಿದೆ ನೋಡಿ ಅಸಲಿ ಲೆಕ್ಕಾಚಾರ!

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ಗಿಂತ ಬಿಜೆಪಿ ಗಮನಾರ್ಹವಾಗಿ ಹೆಚ್ಚಿನ ನಗದು ಮೀಸಲು, ವಾರ್ಷಿಕ ಆದಾಯ ಮತ್ತು ಒಟ್ಟು ಆಸ್ತಿಗಳನ್ನು ಹೊಂದಿದೆ ಎಂದು ಹಣಕಾಸು ದತ್ತಾಂಶಗಳು ಕಡ್ಡಿತುಂಡರಿಸಿದಂತೆ ಹೇಳುತ್ತಿವೆ. ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಎಷ್ಟು ಹಣವನ್ನು ಹೊಂದಿವೆ ಎಂಬುದರ ಸಂಪೂರ್ಣ ವಿವರ ಇಲ್ಲಿದೆ.

Read Full Story
04:54 PM (IST) Jul 28

Karnataka News Live 28 July 2026ಬೆಂಗಳೂರು ಮೆಟ್ರೋ 3ನೇ ಹಂತದ ಯೋಜನೆಗೆ 1,087 ಬಿಲ್ಡಿಂಗ್‌ಗಳು ಪೂರ್ಣ, ಭಾಗಶಃ ನೆಲಸಮ!

ಬೆಂಗಳೂರಿನ 'ನಮ್ಮ ಮೆಟ್ರೋ' 3ನೇ ಹಂತದ ಯೋಜನೆಗಾಗಿ 1,087 ಕಟ್ಟಡಗಳನ್ನು ನೆಲಸಮಗೊಳಿಸಲು BMRCL ಸಿದ್ಧತೆ ನಡೆಸಿದೆ. 44.65 ಕಿ.ಮೀ ಉದ್ದದ ಈ ಯೋಜನೆಯು ಜೆ.ಪಿ. ನಗರದಿಂದ ಕೆಂಪಾಪುರ ಮತ್ತು ಹೊಸಹಳ್ಳಿಯಿಂದ ಕಡಬಗೆರೆಗೆ ಎರಡು ಕಾರಿಡಾರ್‌ಗಳನ್ನು ಒಳಗೊಂಡಿದೆ.

Read Full Story
04:52 PM (IST) Jul 28

Karnataka News Live 28 July 2026ಭಾಗ್ಯಶ್ರೀ ಬೋರ್ಸೆಗೆ ಇಂತಹ ಪರಿಸ್ಥಿತಿ ಬಂದಿದ್ದೇಕೆ? ಯಾರೆಲ್ಲಾ ಕೈ ಬಿಟ್ರು? ಏನೆಲ್ಲಾ ಆಯ್ತು ಲೈಫಲ್ಲಿ ಗೊತ್ತಾ?

ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದ ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿದ ಭಾಗ್ಯಶ್ರೀಗೆ ಬಾಲ್ಯದಿಂದಲೂ ಕ್ಯಾಮೆರಾ ಎದುರು ನಿಲ್ಲುವ ಕನಸು. ಆದರೆ ಸಿನಿಮಾ ಅಂದ್ರೆ ಸಾಕು, ಮಧ್ಯಮ ವರ್ಗದ ಪೋಷಕರ ಎದುರು ‘ನಾನು ನಟಿ ಆಗ್ತೀನಿ’ ಎಂದು ಭಾಗ್ಯಶ್ರೀ ಹೇಳಿದಾಗ ಮನೆಯಲ್ಲಿ ದೊಡ್ಡ ಜಗಳವೇ ನಡೆದಿತ್ತು. ಮುಂದೆ..?

Read Full Story
04:14 PM (IST) Jul 28

Karnataka News Live 28 July 2026TVS - ಭಾರಿ ಡಿಮ್ಯಾಂಡ್ ಸೃಷ್ಟಿಸಿದ ಲೇಟೆಸ್ಟ್ ಸ್ಕೂಟರ್; 53 ಕೀ.ಮೀ ಮೈಲೇಜ್ ಕೊಡುವ ಸ್ಕೂಟರ್‌ಗೆ ಮುಗಿಬಿದ್ದ ಜನ! ಇಷ್ಟು ಕಡಿಮೆ ಬೆಲೆಗೆ ಸಿಗ್ತಿದ್ಯಾ ಈ ಬೈಕ್?

ಕಂಪನಿಯ ಪ್ರಕಾರ ಈ ಸ್ಕೂಟರ್ ಲೀಟರ್‌ಗೆ ಸರಿಸುಮಾರು 53.8 ಕಿ.ಮೀ ಮೈಲೇಜ್ ನೀಡಲಿದ್ದು, 113.3 ಸಿಸಿ ಎಂಜಿನ್, ಆಧುನಿಕ ಎಲ್‌ಇಡಿ ಡಿಆರ್‌ಎಲ್‌ಗಳು, ಡಿಜಿಟಲ್ ಹಾಗೂ ಬ್ಲೂಟೂತ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಮುಂಭಾಗದಲ್ಲೇ ಪೆಟ್ರೋಲ್ ತುಂಬಿಸುವ ಸೌಲಭ್ಯ ಹೊಂದಿದೆ.

Read Full Story
04:00 PM (IST) Jul 28

Karnataka News Live 28 July 2026ಶಿವರಾಮ ಕಾರಂತ ಲೇಔಟ್ ಸೈಟ್‌ ದರ ಚದರಡಿಗೆ ₹6,000ಕ್ಕೆ ಹೆಚ್ಚಿಸಿದ ಬಿಡಿಎ, ಈಗ ಪ್ರತಿ 30X40 ಸೈಟ್‌ಗೆ 72 ಲಕ್ಷ!

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಡಾ. ಕೆ. ಶಿವರಾಮ ಕಾರಂತ ಲೇಔಟ್‌ನ ನಿವೇಶನಗಳ ದರವನ್ನು ಪ್ರತಿ ಚದರಡಿಗೆ ₹6,000ಕ್ಕೆ ಹೆಚ್ಚಿಸಿದೆ. ಈ ದರ ಏರಿಕೆಯಿಂದ 30x40 ಅಡಿ ನಿವೇಶನದ ಬೆಲೆ ₹72 ಲಕ್ಷಕ್ಕೆ ತಲುಪಿದ್ದು, ಇದು ಮಧ್ಯಮ ವರ್ಗದ ಮನೆ ಆಕಾಂಕ್ಷಿಗಳಿಗೆ ದೊಡ್ಡ ಆರ್ಥಿಕ ಹೊರೆಯಾಗಿದೆ.

Read Full Story
03:40 PM (IST) Jul 28

Karnataka News Live 28 July 2026Gen Z - ಜೆನ್‌ಜಿ ಲವ್, ಬ್ರೇಕಪ್, ಲಿವಿಂಗ್ ಟುಗೆದರ್.. ಬ್ರಹ್ಮಾಂಡದಲ್ಲಿ 'ಪಾಟ್ನರ್' ಅಮೋರಾ ಸೌಂಡ್!

ಫಸ್ಟ್ ಲುಕ್ ಮೂಲಕ ಗಮನ ಸೆಳೆದಿದ್ದ ಚಿತ್ರ ತಂಡ ಇದೀಗ ಚಿತ್ರದ ಮೊದಲ ಹಾಡನ್ನು ಹೊರತಂದಿದೆ. ನಾಗಾರ್ಜುನ ಶರ್ಮಾ ರಚನೆಯ ಅಮೋರಾ ಎಂಬ ಹಾಡಿಗೆ ಕುನಾಲ್ ಗಂಜಾವಾಲಾ ದನಿಯಾಗಿದ್ದಾರೆ. ನಕುಲ್ ಅಭಯಂಕರ್ ಅವರ ಸಂಗೀತ ಸಂಯೋಜನೆಯ ಈ ಹಾಡಿನ ಬಿಡುಗಡೆ ಸಮಾರಂಭ ನಡೆಯಿತು.

Read Full Story
02:44 PM (IST) Jul 28

Karnataka News Live 28 July 2026ಆಡಿಯೋ ವೈರಲ್‌ನಿಂದ ಹಿನ್ನಡೆ ಆಗಿರೋದು ನಿಜ - ಮತ್ತೆ ಮಂತ್ರಿ ಆಗುವ ಬಗ್ಗೆ ಜಮೀರ್ ಸ್ಫೋಟಕ ಹೇಳಿಕೆ

ವೈರಲ್ ಆಡಿಯೋ ವಿವಾದದಿಂದ ತಮಗೆ ರಾಜಕೀಯವಾಗಿ ಹಿನ್ನಡೆಯಾಗಿದೆ ಎಂದು ಕಾಂಗ್ರೆಸ್ ನಾಯಕ ಜಮೀರ್ ಅಹ್ಮದ್ ಖಾನ್ ಒಪ್ಪಿಕೊಂಡಿದ್ದಾರೆ. ಸಂಪುಟದ ಎರಡನೇ ಪಟ್ಟಿಯಲ್ಲಿ ಮಂತ್ರಿ ಸ್ಥಾನದ ನಿರೀಕ್ಷೆಯಲ್ಲಿದ್ದು, ತಾವು ಸಿದ್ದರಾಮಯ್ಯನವರಿಗೆ ದ್ರೋಹ ಮಾಡಿಲ್ಲ ಮತ್ತು ಕಾಂಗ್ರೆಸ್ ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ತಮ್ಮವರೇ ರಾಜಕೀಯದಲ್ಲಿ ಬೆಳೆಯಲು ಬಿಡುವುದಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
Read Full Story
01:40 PM (IST) Jul 28

Karnataka News Live 28 July 2026ಬಿಎಂಟಿಸಿ ಬಸ್ ಮೇಲಿದ್ದ 'ಕನ್ನಡಿಗ' ಸ್ಟಿಕರ್ ತೆಗೆಸಿದ ಮ್ಯಾನೇಜರ್! ಕನ್ನಡ ನಾಡಲ್ಲೇ ಕನ್ನಡಕ್ಕೆ ಅವಮಾನ

ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಚಾಲಕ 'ಕನ್ನಡಿಗ' ಎಂದು ಸ್ಟಿಕರ್ ಹಾಕಿದ್ದಕ್ಕೆ ಡಿಪೋ ಮ್ಯಾನೇಜರ್ ಅದನ್ನು ತೆಗೆಸಿದ್ದಾರೆ. ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕನ್ನಡಪರ ಸಂಘಟನೆಗಳು ಮತ್ತು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Read Full Story
01:09 PM (IST) Jul 28

Karnataka News Live 28 July 2026ಫ್ಲಿಪ್‌ಕಾರ್ಟ್‌ನಿಂದ ಧಮಾಕಾ ಆಫರ್! ಬಿಗ್ ಸರ್ಪ್ರೈಸಿಂಗ್ ಬೆಲೆಯಲ್ಲಿ ನಿಮ್ಮ ಇಷ್ಟದ ವಸ್ತುಗಳು..!

ದೇಶಾದ್ಯಂತ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ ಶುರುವಾಗುತ್ತಿದ್ದಂತೆ, ಅತ್ತ ಇ-ಕಾಮರ್ಸ್ ದೈತ್ಯ ಫ್ಲಿಪ್‌ಕಾರ್ಟ್ (Flipkart) ತನ್ನ ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದೆ. ಬಹುನಿರೀಕ್ಷಿತ ಫ್ರೀಡಂ ಸೇಲ್ 2026 (Freedom Sale 2026) ದಿನಾಂಕ ಪ್ರಕಟವಾಗಿದ್ದು, ಆಗಸ್ಟ್ 8 ರಿಂದ ಈ ಭರ್ಜರಿ ಮಾರಾಟ ಮೇಳ ಆರಂಭವಾಗಲಿದೆ.

Read Full Story
12:23 PM (IST) Jul 28

Karnataka News Live 28 July 2026ಇದು ಜೋಡೆತ್ತು ಕಥೆ.. ಜೈಲಲ್ಲೂ ದರ್ಶನ್‌ಗೆ 'ಯಶ್‌' ಯೋಚ್ನೆನಾ? ರಕ್ಷಿತಾ ಬಳಿ 'ದಾಸ' ಕೇಳಿ ಪಡೆದ ಉತ್ತರವೇನು?

‘ಜೈಲಿನಲ್ಲಿ‌ ಇದ್ರೂ, ಯಾವಾಗ ಏನ್ ಆಗುತ್ತೋ ಅನ್ನೋ ಆತಂಕದ ನಡುವೆಯೂ ದರ್ಶನ್ ಸಿನಿಮಾ‌ ಮೇಲಿನ ಪ್ರೀತಿ ಮಾತ್ರ ಕಡಿಮೆಯಾಗಿಲ್ಲ. ದರ್ಶನ್ ಜೈಲಿನಿಂದ ಹೊರ ಬಂದ ಮೇಲೆ ಸಿನಿಮಾ ಮಾಡಲ್ಲ, ಚಿತ್ರರಂಗದಿಂದ ದೂರ ಇರ್ತಾರೆ‌. ರಾಜಕೀಯಕ್ಕೆ ಹೋಗ್ತಾರೆ ‌ಹೀಗೆ ಹತ್ತು ಹಲವು ಅಯಾಮಗಳಲ್ಲಿ ಚರ್ಚೆ ಆಗ್ತಿದೆ’.. ಏನಿದು ಸ್ಟೋರಿ ನೋಡಿ..

Read Full Story
12:19 PM (IST) Jul 28

Karnataka News Live 28 July 2026ಹಂಪಿಯಲ್ಲಿ 200ಕ್ಕೂ ಅಧಿಕ ಅನಧಿಕೃತ ಹೋಂ ಸ್ಟೇ ಹಾವಳಿ! ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಉಪಲೋಕಾಯುಕ್ತ ಗರಂ

ವಿಶ್ವ ಪಾರಂಪರಿಕ ತಾಣ ಹಂಪಿಗೆ ದಿಢೀರ್ ಭೇಟಿ ನೀಡಿದ ಉಪ ಲೋಕಾಯುಕ್ತ ನ್ಯಾ.ಬಿ.ವೀರಪ್ಪ, 200ಕ್ಕೂ ಹೆಚ್ಚು ಅನಧಿಕೃತ ಹೋಂ ಸ್ಟೇಗಳು ಕಾರ್ಯನಿರ್ವಹಿಸುತ್ತಿರುವುದನ್ನು ಪತ್ತೆಹಚ್ಚಿದರು. ಇದಕ್ಕೆ ಕಾರಣರಾದ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.

Read Full Story