10 ವರ್ಷ ಸೇವೆ ಸಲ್ಲಿಸಿದ ಪೊಲೀಸ್ ಪೇದೆಗಳಿಗೆ ಅನ್ಯಾಯ ಆಗಿದೆ ಎಂದು ಅನಾಮಧೇಯ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಪೊಲೀಸರ ಹೆಸರಿನಲ್ಲಿ ಹರಿದಾಡುತ್ತಿರುವ ಪತ್ರದಲ್ಲಿ ಏನಿದೆ? ಈ ಕುರಿತು ಏಷ್ಯಾನೆಟ್ ಸುವರ್ಣನ್ಯೂಸ್ ಕ್ರೈಂ ರಿಪೋರ್ಟ್ ಚೇತನ್ ವರದಿ ಇಲ್ಲಿದೆ.
- Home
- News
- State
- Karnataka News Live: ರಾಜ್ಯ ಗೃಹ ಸಚಿವರಿಗೆ ಅನಾಮಧೇಯ ಪತ್ರ, ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದ ಪೊಲೀಸ್ ಲೆಟರ್
Karnataka News Live: ರಾಜ್ಯ ಗೃಹ ಸಚಿವರಿಗೆ ಅನಾಮಧೇಯ ಪತ್ರ, ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದ ಪೊಲೀಸ್ ಲೆಟರ್

ಚಿಕ್ಕಮಗಳೂರು: ಮುಸ್ಲಿಂ ಸಮುದಾಯ ವಿರುದ್ಧ ಅವಹೇಳನಕಾರಿ ಹಾಗೂ ಪ್ರಚೋದನಕಾರಿ ಪದಗಳನ್ನು ಬಳಸಿದ ಆರೋಪದ ಮೇಲೆ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ವಿರುದ್ಧ ಚಿಕ್ಕಮಗಳೂರಿನಲ್ಲಿ ನಗರ ಜಾಮಿಯಾ ಮಸೀದಿ ಅಧ್ಯಕ್ಷ ಮುದಾಸೀರ್ ಪಾಷಾ ನೇತೃತ್ವದಲ್ಲಿ ಮುಸ್ಲಿಂ ಮುಖಂಡರು ಕೇಸ್ ದಾಖಲಿಸಿದ್ದಾರೆ. ಕಳೆದ ಗುರುವಾರ ಯೂತ್ ಫಾರ್ ನೇಷನ್ ಸಂಘಟನೆ ವತಿಯಿಂದ ಸಂಸತ್ ಭವನದ ಬಳಿ ನಡೆದ ಪ್ರತಿಭಟನೆ ಖಂಡಿಸಿ ನಗರದ ಅಜಾದ್ ಪಾರ್ಕ್ ವೃತ್ತದಲ್ಲಿ ಪ್ರತಿಭಟನಾ ಸಭೆ ಆಯೋಜಿಸಲಾಗಿತ್ತು. ಈ ವೇಳೆ ಸಿ.ಟಿ.ರವಿ ಅವರು ಮುಸ್ಲಿಂ ಸಮುದಾಯದ ವಿರುದ್ಧ ಅವಹೇಳನಕಾರಿ ಮತ್ತು ಪ್ರಚೋದನಕಾರಿಯಾಗಿ ಮಾತನಾಡಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.
Karnataka News Live 26 July 2026ರಾಜ್ಯ ಗೃಹ ಸಚಿವರಿಗೆ ಅನಾಮಧೇಯ ಪತ್ರ, ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದ ಪೊಲೀಸ್ ಲೆಟರ್
Karnataka News Live 26 July 2026ಎಲ್ಲಾ ಹೀರೋಗಳು ಯಶ್ ಆಗಲು ಹೋಗಬಾರದು - ನಿರ್ಮಾಪಕ ಉದಯ್ ಕೆ. ಮೆಹ್ತಾ ಹೇಳಿದ್ದೇನು?
ಕೇವಲ ಐದಾರು ಪ್ಯಾನ್ ಇಂಡಿಯಾ ಚಿತ್ರಗಳಿಂದಲೇ ಕನ್ನಡ ಚಿತ್ರರಂಗವೊಂದೇ ರೂ. 350 ರಿಂದ 400 ಕೋಟಿ ಕಳೆದುಕೊಂಡಿದೆ. ಹೀಗೆ ಕಳೆದುಕೊಂಡ ಸಿನಿಮಾಗಳಲ್ಲಿ ನನ್ನದೂ ಇದೆ ಎಂದರು ನಿರ್ಮಾಪಕ ಉದಯ್ ಕೆ. ಮೆಹ್ತಾ.
Karnataka News Live 26 July 2026Vaibhav Sooryavanshi - 149 ವರ್ಷಗಳ ಇತಿಹಾಸದಲ್ಲೇ ಮೊದಲು! ಇಡೀ ಜಗತ್ತೇ ತಿರುಗಿ ನೋಡುವಂತೆ ಮಾಡಿದ ವೈಭವ್ ಸೂರ್ಯವಂಶಿ ಐತಿಹಾಸಿಕ ರೆಕಾರ್ಡ್!
15 ವರ್ಷದ ಭಾರತೀಯ ಕ್ರಿಕೆಟಿಗ ವೈಭವ್ ಸೂರ್ಯವಂಶಿ, ಅಂತರರಾಷ್ಟ್ರೀಯ T20I ಕ್ರಿಕೆಟ್ನಲ್ಲಿ ವಿಶಿಷ್ಟ ದಾಖಲೆ ನಿರ್ಮಿಸಿದ್ದಾರೆ. ಹರಾರೆಯಲ್ಲಿ ನಡೆದ ಸರಣಿಯಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಅವರು ಐತಿಹಾಸಿಕ ರೆಕಾರ್ಡ್ಗೆ ಸಾಕ್ಷಿಯಾಗಿದ್ದಾರೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.
Karnataka News Live 26 July 2026ರಾಮಾಯಣ ಸೆಟ್ನಲ್ಲಿ ನಾನು ವಾತಾವರಣವನ್ನೇ ಹಾಳು ಮಾಡ್ತಿದ್ದೆ ಎಂದ ಯಶ್ - ಕಾರಣ ಇದೇ!
ಸ್ಯಾನ್ ಡಿಯಾಗೋ ಕಾಮಿಕ್-ಕಾನ್ನಲ್ಲಿ ನಿತೇಶ್ ತಿವಾರಿ ಅವರ 'ರಾಮಾಯಣ' ಚಿತ್ರದ ಬಗ್ಗೆ ಮಾತನಾಡಿದ ಯಶ್, ರಾವಣನ ಪಾತ್ರಕ್ಕಾಗಿ ಸೆಟ್ನಲ್ಲಿ ತಾನು ವಾತಾವರಣವನ್ನೇ ಹಾಳು ಮಾಡುತ್ತಿದ್ದೆ ಎಂದು ತಮಾಷೆಯಾಗಿ ಹೇಳಿಕೊಂಡಿದ್ದಾರೆ. ಇದರ ಹಿಂದಿನ ಸೀಕ್ರೆಟ್ ಏನು? ಇಲ್ಲಿದೆ ಮಾಹಿತಿ.
Karnataka News Live 26 July 2026ಸದ್ಯದಲ್ಲೇ ಸಿನಿಮಾ ಆಗಲಿದೆ ರಜನಿಕಾಂತ್ ಬಯೋಪಿಕ್.. ಈ ಸೂಪರ್ ಸ್ಟಾರ್ ಪಾತ್ರ ಮಾಡೋ ನಟ ಯಾರು?
ಕೇವಲ ಪುಸ್ತಕ ಮಾತ್ರವಲ್ಲದೆ, ಈ ಆತ್ಮಕಥೆಯನ್ನೇ ಆಧರಿಸಿ ಒಂದು ಭರ್ಜರಿ ಬಯೋಪಿಕ್ ಸಿನಿಮಾ ಮಾಡುವ ಬಗ್ಗೆ ರಜನಿಕಾಂತ್ ತಮ್ಮ ಆಪ್ತ ವಲಯದಲ್ಲಿ ಸಮಾಲೋಚನೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಅವರ ಪುತ್ರಿ ಸೌಂದರ್ಯ ರಜನಿಕಾಂತ್ ಕೂಡ ಈ ಬಗ್ಗೆ ಸುಳಿವು ನೀಡಿದ್ದು, ಭಾರೀ ಸಂಚಲನ ಸೃಷ್ಟಿಸಿದೆ.
Karnataka News Live 26 July 2026ಅಪ್ಪು ಸರ್ ಹೇಳಿದ ಆ ಒಂದು ಮಾತು ಇಂದಿಗೂ ನೆನಪಿದೆ - ನಟ ರಾವ್ ರಮೇಶ್ ಭಾವುಕ ಕಥೆಯೇನು?
ಬಹುಭಾಷಾ ನಟ ರಾವ್ ರಮೇಶ್ ಅವರು ನಟ ಪುನೀತ್ ರಾಜ್ಕುಮಾರ್ ಅವರೊಂದಿಗಿನ ತಮ್ಮ ಅಪರೂಪದ ಭೇಟಿಯೊಂದನ್ನು ನೆನೆದು ಭಾವುಕರಾಗಿದ್ದಾರೆ. ಸರಳತೆ ಮತ್ತು ಸ್ನೇಹಪರ ವ್ಯಕ್ತಿತ್ವದಿಂದ ಎಲ್ಲರ ಮನಗೆದ್ದಿದ್ದ ಅಪ್ಪು.
Karnataka News Live 26 July 2026ರಾಯಚೂರಿನಲ್ಲಿ ರೈಲ್ವೇ ಟ್ರಾಕ್ ಕಾಮಗಾರಿ ಗುಂಡಿಗೆ ಬಿದ್ದು ಬಾಲಕ ಸಾವು, ಪೋಷಕರ ನರಳಾಟ
ರಾಯಚೂರಿನಲ್ಲಿ ರೈಲ್ವೇ ಟ್ರಾಕ್ ಕಾಮಗಾರಿಗಾಗಿ ಗುಂಡಿ ಅಗೆಯಲಾಗಿತ್ತು. ಹಾಗೇ ಬಿಟ್ಟು ನಿರ್ಲಕ್ಷ್ಯ ಮಾಡಿದ ಪರಿಮಾಮ 8 ವರ್ಷದ ಬಾಲಕ ಈ ಗುಂಡಿಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಮಗನ ಕಳೆದುಕೊಂಡ ಪೋಷಕರು ಕಂಗಾಲಾಗಿದ್ದಾರೆ.
Karnataka News Live 26 July 2026Dharwad Rural - ಧಾರವಾಡ ಗ್ರಾಮೀಣದಲ್ಲಿ ಬಿಗ್ ಫೈಟ್! ಕುಲಕರ್ಣಿಗೆ ಪರ್ಯಾಯ ಇಲ್ವಾ? ಬಿಜೆಪಿ ಆ ತಪ್ಪು ಮಾಡಿದ್ರೆ 'ಕೈ'ಗೆ ಅಧಿಕಾರ ಫಿಕ್ಸ್!
ಶಾಸಕ ವಿನಯ್ ಕುಲಕರ್ಣಿ ಅವರ ಅನರ್ಹತೆಯಿಂದಾಗಿ ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಉಪಚುನಾವಣೆಯ ಕಾವು ಏರಿದೆ. ಕಾಂಗ್ರೆಸ್ನಲ್ಲಿ ಕುಲಕರ್ಣಿ ಕುಟುಂಬಕ್ಕೆ ಟಿಕೆಟ್ ನೀಡಬೇಕೇ ಅಥವಾ ಪರ್ಯಾಯ ನಾಯಕತ್ವಕ್ಕೆ ಮಣೆ ಹಾಕಬೇಕೇ ಎಂಬ ಚರ್ಚೆ ನಡೆದರೆ, ಬಿಜೆಪಿಯಲ್ಲಿ ಆಕಾಂಕ್ಷಿಗಳ ನಡುವಿನ ಬಣ ರಾಜಕೀಯವೇ ದೊಡ್ಡ ಸವಾಲಾಗಿದೆ.
Karnataka News Live 26 July 20263ನೇ ಬಾರಿ ದಿಢೀರ್ ಲೈವ್ನಲ್ಲಿ ಕಾಣಿಸಿಕೊಂಡು ಇನ್ನೊಂದು ದೊಡ್ಡ ಘೋಷಣೆ ಮಾಡಿದ ಪ್ರಧಾನಿ ಮೋದಿ
Karnataka News Live 26 July 2026ಡಿಂಪಲ್ ಕ್ವೀನ್ ರಚಿತಾ ರಾಮ್ ಇಷ್ಟೊಂದು ಫೇಮಸ್ ಆಗಿರೋದ್ಯಾಕೆ? ಕೊನೆಗೂ ಆ ಗುಟ್ಟು ಬಹಿರಂಗ ಆಯ್ತು!
ಬಹಳಷ್ಟು ಸಿನಿಮಾಗಳಲ್ಲಿ ನಟಿಸಿ ಸ್ಟಾರ್ ನಟಿ ಆಗಿರುವ ರಚಿತಾ ರಾಮ್, ಸತೀಶ್ ನೀನಾಸಂ ಜೋಡಿಯಾಗಿ ನಟಿಸಿರುವ 'ಅಯೋಗ್ಯ 2' ಸಿನಿಮಾ ಬಿಡುಗಡೆಯ ಹೊಸ್ತಿಲಲ್ಲಿ ಇದ್ದಾರೆ. 7 ಆಗಸ್ಟ್ 2026ರಂದು ಅಯೋಗ್ಯ 2 ಸಿನಿಮಾ ಬಿಡುಗಡೆ ಆಗಲಿದೆ. ರಚಿತಾ ಸ್ಟಾರ್ ನಟಿ ಆಗಿರುವ ಹಿಂದಿನ ರಹಸ್ಯ ಇಲ್ಲಿದೆ ನೋಡಿ..
Karnataka News Live 26 July 2026ಕಿಚ್ಚ ಸುದೀಪ್ ಫ್ಯಾನ್ಸ್ಗೆ ಗುಡ್ ನ್ಯೂಸ್ - 'ಬಿಲ್ಲ ರಂಗ ಭಾಷಾ' ಶೂಟಿಂಗ್ ಬಗ್ಗೆ ಸಿಕ್ತು ಹೊಸ ಮಾಹಿತಿ
Billa Ranga Baashaa: ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ 'ಬಿಲ್ಲ ರಂಗ ಭಾಷಾ' ಚಿತ್ರದ ಚಿತ್ರೀಕರಣ ಮತ್ತೆ ವೇಗ ಪಡೆದುಕೊಂಡಿದೆ. ಮೊದಲ ಶೆಡ್ಯೂಲ್ ಬಳಿಕ ಕೆಲ ತಿಂಗಳ ವಿರಾಮ ತೆಗೆದುಕೊಂಡಿದ್ದ ಚಿತ್ರತಂಡ.
Karnataka News Live 26 July 2026ಕೊಡಗಿನಲ್ಲಿ ಮೃತಪಟ್ಟ ತಾಯಿ ಆನೆ ಎಬ್ಬಿಸಲು ಮರಿ ಆನೆ ಪರದಾಟ, ಮೂಕರೋಧನೆಗೆ ಭಾವುಕರಾದ ಜನ
ಆಹಾರ ಹುಡುಕುತ್ತ ಗ್ರಾಮದ ತೋಟಗಳಿಗೆ ನುಗ್ಗಿದ ತಾಯಿ ಆನೆ ಅನುಮಾನಸ್ಪದ ರೀತಿಯಲ್ಲಿ ಮೃತಪಟ್ಟಿದೆ. ಇತ್ತ ತಾಯಿ ಕಳೆದುಕೊಂಡ ಮರಿ ಆನೆಯ ಮೋಕರೋಧನೆ ಹಲವರ ಕಣ್ಣಾಲಿ ತೇವಗೊಳಿಸಿದೆ. ತಾಯಿ ಆನೆಯ ಎಬ್ಬಿಸಲು ಮರಿ ಆನೆ ಇನ್ನಿಲ್ಲದ ಪ್ರಯತ್ನ ಮಾಡಿದೆ.
Karnataka News Live 26 July 2026ಬಾಕ್ಸ್ ಆಫೀಸ್ನಲ್ಲಿ ವಿಜಯ್ ಅಬ್ಬರ, ಮೂರು ದಿನದಲ್ಲಿ ನೂರು ಕೋಟಿ ಕ್ಲಬ್ನತ್ತ ಜನ ನಾಯಗನ್
ದಳಪತಿ ವಿಜಯ್ ನಟನೆಯ ಬಹುನಿರೀಕ್ಷಿತ ಸಿನಿಮಾ 'ಜನ ನಾಯಗನ್'.ಬಾಕ್ಸ್ ಆಫೀಸ್ನಲ್ಲಿ ಭಾರಿ ಸದ್ದು ಮಾಡುತ್ತಿದೆ. ಜುಲೈ 23 ರಂದು ತೆರೆಕಂಡ ಈ ಚಿತ್ರವು ಎರಡನೇ ದಿನ ಗಳಿಕೆಯಲ್ಲಿ ಶೇ. 50 ರಷ್ಟು ಕುಸಿತ ಕಂಡಿತ್ತು. ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದಿದೆ. ಆದರೆ ಮೂರನೇ ದಿನದಂದು (ಶನಿವಾರ) ಭಾರಿ ಚೇತರಿಕೆ ಕಂಡುಕೊಂಡಿದೆ.
Karnataka News Live 26 July 2026KPSC - ಪಶು ವೈದ್ಯಾಧಿಕಾರಿಗಳ ನೇಮಕಾತಿ ಅಕ್ರಮಕ್ಕೆ ಬಿಗ್ ಟ್ವಿಸ್ಟ್! ಕಾಂತಕುಮಾರ್ ನಡೆಸಿದ ಹೋರಾಟಕ್ಕೆ ಕೊನೆಗೂ ಸಿಕ್ತಾ ಗೆಲುವು?
ಕೆಪಿಎಸ್ಸಿ ಪಶು ವೈದ್ಯಾಧಿಕಾರಿಗಳ ನೇಮಕಾತಿ ಅಕ್ರಮದ ಆರೋಪದ ಹಿನ್ನೆಲೆಯಲ್ಲಿ, ಸಾಮಾಜಿಕ ಕಾರ್ಯಕರ್ತ ಕಾಂತಕುಮಾರ್ ಅವರ ದೂರಿನ ಮೇರೆಗೆ ಆಯೋಗವು ಅಂತಿಮ ಆಯ್ಕೆ ಪಟ್ಟಿಗೆ ತಡೆ ನೀಡಿದೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.
Karnataka News Live 26 July 2026ವೈಭವ್ಗೆ ಸೀನಿಯರ್ ಪ್ಲೇಯರ್ಸ್ಯಿಂದ ವಾರ್ನಿಂಗ್; ಡ್ರೆಸ್ಸಿಂಗ್ ರೂಂನಲ್ಲಿ ಬಿಗ್ ಫೈಟ್! ಆಗಿದ್ದೇನು?
ಜಿಂಬಾಬ್ವೆ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಅಲ್ಪ ಮೊತ್ತಕ್ಕೆ ಔಟಾದ ಯುವ ಆಟಗಾರ ವೈಭವ್ಗೆ ಡ್ರೆಸ್ಸಿಂಗ್ ರೂಂನಲ್ಲಿ ಹಿರಿಯ ಆಟಗಾರರು ಗಂಭೀರ ಎಚ್ಚರಿಕೆ ನೀಡಿದ್ದಾರೆ. ಆ ಮೂವರು ವೈಭವ್ಗೆ ಕೊಟ್ಟ ವಾರ್ನಿಂಗ್ ಏನು? ಡ್ರೆಸ್ಸಿಂಗ್ ರೂಂನಲ್ಲಿ ಆಗಿಯೇ ಹೋಯ್ತಾ ಜಗಳ? ಎನ್ನುವುದನ್ನು ನೋಡೋಣ ಬನ್ನಿ!
Karnataka News Live 26 July 2026ಕಲುಷಿತಗೊಂಡ ರಾಜಕಾರಣ, 2028ರ ಚುನಾವಣೆ ಸ್ಪರ್ಧೆಯಿಂದ ಹಿಂದೆ ಸರಿದ ಸಿದ್ದರಾಮಯ್ಯ ಮನದ ಮಾತು
ಸಿದ್ದರಾಮಯ್ಯ ತಾವು 2028ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದಿದ್ದಾರೆ. ಈ ನಿರ್ಧಾರಕ್ಕೆ ಕಾರಣವನ್ನೂ ಹೇಳಿದ್ದಾರೆ. ಚುನಾವಣೆಯಿಂದ ದೂರ ಉಳಿದ ಸಿದ್ದರಾಮಯ್ಯ ರಾಜಕೀಯ ನಿವೃತ್ತಿಯಾಗುತ್ತಾರಾ?
Karnataka News Live 26 July 2026ಗ್ರೇಟ್ ಓಪನಿಂಗ್, ಸ್ಕ್ರೀನ್ ಸಂಖ್ಯೆಯಲ್ಲೂ ಹೆಚ್ಚಳ.. 'ಕರಾವಳಿ' ಫಸ್ಟ್ ಡೇ ಕಲೆಕ್ಷನ್ ಎಷ್ಟಾಯ್ತು ಗೊತ್ತಾ?
ಕರಾವಳಿ ಸಿನಿಮಾವನ್ನು ಸದ್ಯ ಕರ್ನಾಟಕದಲ್ಲಿ ಮಾತ್ರ ರಿಲೀಸ್ ಮಾಡಲಾಗಿದೆ. ಸಿನಿಮಾ ಸಿಕ್ತಿರುವ ಪ್ರತಿಕ್ರಿಯೆ ನೋಡಿ ಪರಭಾಷೆಯಲ್ಲೂ ಬೇಡಿಕೆ ಹೆಚ್ಚಾಗಿದೆ ಎನ್ನುವ ಮಾತು ಕೇಳಿಬಂದಿದೆ. ಮುಂದಿನ ವಾರ ಪಕ್ಕದ ಮಲಯಾಳಂ, ತೆಲುಗು ಹಾಗೂ ತಮಿಳಿನಲ್ಲೂ ರಿಲೀಸ್ ಮಾಡುವ ಸಾಧ್ಯತೆ ಹೆಚ್ಚಾಗಿದೆ
Karnataka News Live 26 July 2026ಖಾಲಿ ಕೊಡ ಹಿಡಿದು ತಮಿಳುನಾಡಿಗೆ ಎಚ್ಚರಿಕೆ ಕೊಟ್ಟ ಕನ್ನಡಿಗರು..! ಯಾಕೆ?
ತಮಿಳುನಾಡು ಸರ್ಕಾರದ ವಿರುದ್ಧ ಖಾಲಿ ಕೊಡ ಹಿಡಿದು ಕನ್ನಡ ಪರ ಹೋರಾಟಗಾರರ ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಹೆದ್ದಾರಿ ತಡೆಯಲು ಮುಂದಾದ ನೂರಾರು ಮಂದಿ ಪೊಲೀಸರ ವಶಕ್ಕೆ ಪಡೆಯಲಾಗಿದೆ. ಅಷ್ಟಕ್ಕೂ ತಮಿಳುನಾಡು ಸರ್ಕಾರದ ವಿರುದ್ಧ ಯಾಕೆ ಪ್ರತಿಭಟನೆ ನಡೆಯಿತು ಅನ್ನೋ ವಿವರ ಇಲ್ಲಿದೆ.
Karnataka News Live 26 July 2026ಜೀಪಿಗೆ ಬೆಂಕಿ ಹಚ್ಚಿದ ಮುಲ್ಲಾನಿಗೂ ನನ್ನ ಮೇಲೆ ಕೇಸ್ ಕೊಟ್ಟವನಿಗೂ ಏನು ಸಂಬಂಧ? ಪೊಲೀಸರು ತನಿಖೆ ಮಾಡಲಿ - ಸಿಟಿ ರವಿ
ನೀಟ್ ಪೇಪರ್ ಲೀಕ್ ಪ್ರತಿಭಟನೆ ಕುರಿತು ದ್ವೇಷ ಭಾಷಣ ಮಾಡಿದ ಆರೋಪದ ಮೇಲೆ ಎಂಎಲ್ಸಿ ಸಿ.ಟಿ. ರವಿ ವಿರುದ್ಧ ಎಫ್ಐಆರ್ ದಾಖಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಅವರು, ತಮ್ಮ ಹೇಳಿಕೆಗೆ ಬದ್ಧರಾಗಿದ್ದು, ತಾವು ದೇಶ ವಿರೋಧಿ ಕೃತ್ಯಗಳಲ್ಲಿ ತೊಡಗಿದವರ ಬಗ್ಗೆ ಮಾತನಾಡಿದ್ದಾಗಿ ಸಮರ್ಥಿಸಿಕೊಂಡಿದ್ದಾರೆ.
Karnataka News Live 26 July 202660 ಆಕಾಂಕ್ಷಿಗಳು, 20 ಕುರ್ಚಿ; ದೆಹಲಿ ತಲುಪಿದ ಸಂಪುಟ ಕಸರತ್ತು! ಸಿದ್ದು-ಡಿಕೆಶಿ ಪಟ್ಟಿಯಲ್ಲಿ ಯಾರಿಗೆ ಚಾನ್ಸ್?
ಕೊನೆಗೂ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ಕೂಡಿಬಂದಂತೆ ಕಾಣ್ತಿದೆ. ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರ ತಲೆದಂಡ ಆಗ್ತಿದ್ದಂತೆ, ಕಾಂಗ್ರೆಸ್ ಹೈಕಮಾಂಡ್ ಕರ್ನಾಟಕದತ್ತ ಚಿತ್ತ ಹರಿಸಿದೆ. ಎಲ್ಲವೂ ಅಂದುಕೊಂಡಂತೆ ಆದ್ರೆ ಬುಧವಾರವೇ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ತಂಡದ ಬಲ ಹೆಚ್ಚಾಗಲಿದೆ.