- Home
- News
- State
- Karnataka News Live: ಹೈಕೋರ್ಟ್ ಸರ್ಕ್ಯೂಟ್ ಪೀಠಕ್ಕೆ ಶಿವಮೊಗ್ಗ ಎಲ್ಲ ರೀತಿಯಲ್ಲೂ ಅರ್ಹವಾಗಿದೆ - ಸಂಸದ ಬಿ.ವೈ.ರಾಘವೇಂದ್ರ
Karnataka News Live: ಹೈಕೋರ್ಟ್ ಸರ್ಕ್ಯೂಟ್ ಪೀಠಕ್ಕೆ ಶಿವಮೊಗ್ಗ ಎಲ್ಲ ರೀತಿಯಲ್ಲೂ ಅರ್ಹವಾಗಿದೆ - ಸಂಸದ ಬಿ.ವೈ.ರಾಘವೇಂದ್ರ

ಬೆಂಗಳೂರು: ರಾಜ್ಯದಲ್ಲಿ ತೀವ್ರ ಮುಂಗಾರು ಕೊರತೆ ಹಿನ್ನೆಲೆಯಲ್ಲೇ ಕಾವೇರಿ ಜಲ ಸಂಘರ್ಷ ಆರಂಭವಾಗುವ ಆತಂಕ ಎದುರಾಗಿದೆ.
ದೆಹಲಿಯಲ್ಲಿ ಮಂಗಳವಾರ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯುಎಂಎ)ದ ಸಭೆ ನಡೆಯಲಿದ್ದು, ಸಿಡಬ್ಲ್ಯುಎಂಎ ಮುಖ್ಯಸ್ಥ ಎಸ್.ಕೆ.ಹಲ್ದಾರ್ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಯುವ ಸಭೆಯಲ್ಲಿ ಕಾವೇರಿ ಜಲನಿಗಮದ ಎಂಡಿ ಭಾಗಿಯಾಗಲಿದ್ದಾರೆ. ಮುಂಗಾರು ಮುನ್ಸೂಚನೆ, ಮಳೆಯ ಪ್ರಮಾಣ, ಕರ್ನಾಟಕ ಮತ್ತು ತಮಿಳುನಾಡಿನ ಡ್ಯಾಂಗಳಲ್ಲಿ ಪ್ರಸ್ತುತ ಇರುವ ನೀರಿನ ಪ್ರಮಾಣ ಕುರಿತು ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆಯಿದೆ. ಆದರೆ, ಮೇಕೆದಾಟು ಕುಡಿಯುವ ನೀರಿನ ಯೋಜನೆ ಕುರಿತು ಸಭೆಯಲ್ಲಿ ಯಾವುದೇ ಚರ್ಚೆ ನಡೆಯುವುದಿಲ್ಲ ಎಂದು ಮೂಲಗಳು ತಿಳಿಸಿವೆ.
ಸಭೆಯಲ್ಲಿ ತಮಿಳುನಾಡು ಮತ್ತೆ ಕಾವೇರಿ ನದಿ ನೀರಿಗೆ ಬೇಡಿಕೆ ಇಡುವ ಸಾಧ್ಯತೆಯಿದೆ. ಜೂನ್ ತಿಂಗಳಲ್ಲಿ ಒಟ್ಟಾರೆ 9.19 ಟಿಎಂಸಿಯಷ್ಟು ನೀರನ್ನು ತಮಿಳುನಾಡಿಗೆ ಕರ್ನಾಟಕ ಬಿಡುಗಡೆ ಮಾಡಬೇಕಿದ್ದು, ಜೂನ್ 18ರ ತನಕ 2 ಟಿಎಂಸಿ ನೀರು ಬಿಡುಗಡೆಯಾಗಿದೆ.
Karnataka News Live 24 June 2026ಹೈಕೋರ್ಟ್ ಸರ್ಕ್ಯೂಟ್ ಪೀಠಕ್ಕೆ ಶಿವಮೊಗ್ಗ ಎಲ್ಲ ರೀತಿಯಲ್ಲೂ ಅರ್ಹವಾಗಿದೆ - ಸಂಸದ ಬಿ.ವೈ.ರಾಘವೇಂದ್ರ
Karnataka News Live 24 June 2026ED Raid - ಸಚಿವ ಜಾರಕಿಹೊಳಿ ಬಾಮೈದ ಮಂಜುನಾಥ್ಗೆ ಇಡಿ ಶಾಕ್ - ಏಕಕಾಲದಲ್ಲಿ 6 ಕಡೆ ದಾಳಿ
ಸಚಿವ ಸತೀಶ್ ಜಾರಕಿಹೊಳಿ ಅವರ ಸೋದರಿಯ ಪತಿ ಹಾಗೂ ಅಬಕಾರಿ ಇಲಾಖೆಯ ಹೆಚ್ಚುವರಿ ಆಯುಕ್ತ ವೈ. ಮಂಜುನಾಥ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಳಗಾವಿ, ಮೈಸೂರು, ಬೆಂಗಳೂರು ಸೇರಿದಂತೆ ಹಲವು ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆದಿದೆ.
Karnataka News Live 24 June 2026Liquor Mafia - ಗೋವಾ ಮದ್ಯ ಸಾಗಾಟಕ್ಕೆ ಖತರ್ನಾಕ್ ಪ್ಲಾನ್! ಮೇಲೆ ಗೊಬ್ಬರ ಒಳಗೆ ಕೋಟಿ ಮೌಲ್ಯದ ಲಿಕ್ಕರ್
ಗೋವಾದಿಂದ ಮಹಾರಾಷ್ಟ್ರಕ್ಕೆ ಮದ್ಯ ಸಾಗಿಸಲು ಖದೀಮರು ಹಾಕಿದ್ದ ಖತರ್ನಾಕ್ ಪ್ಲಾನ್ ಕೇಳಿದ್ರೆ ನೀವು ಶಾಕ್ ಆಗ್ತೀರಿ. ಹತ್ತಾರು ಡ್ರೈವರ್ಸ್, ಪ್ರತ್ಯೇಕ ಜಿಪಿಎಸ್ ಲೊಕೇಶನ್, ಮೇಲೆ ಎರೆಹುಳ ಗೊಬ್ಬರದ ಮುಸುಕು! ಕರ್ನಾಟಕದ ಮೂರು ಜಿಲ್ಲೆಗಳ ಪೊಲೀಸರ ಕಣ್ಣಿಗೆ ಮಣ್ಣೆರಚಿದ್ದ ಅಂತರರಾಜ್ಯ ಖದೀಮರ ಜಾಲ!
Karnataka News Live 24 June 2026ಕೈಗಾ ಹೋರಾಟಕ್ಕೆ ಜಯ - 7 ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಎನ್ಪಿಸಿ ಅಧಿಕಾರಿಗಳ ಒಪ್ಪಿಗೆ
Karnataka News Live 24 June 2026ಬದುಕು ಸಿಹಿ ಮಾಡುವ ಕಹಿ ಬೇವಿನ ಹಣ್ಣು ಆಯುವ ಕಾಯಕ; ದಿನಕ್ಕೆ ಎಷ್ಟು ಸಿಗುತ್ತೆ ಹಣ?
Karnataka News Live 24 June 2026Basavaraj Patil Marum victory - ಮಹಾರಾಷ್ಟ್ರ ವಿಧಾನಪರಿಷತ್ಗೆ ಕಲಬುರಗಿಯ ಕನ್ನಡಿಗ ಆಯ್ಕೆ
Karnataka News Live 24 June 2026ಪುತ್ತೂರಿನ ಕೂಲಿ ಕಾರ್ಮಿಕ ಪುರಂದರ್ಗೆ ಅದೃಷ್ಟ ತಂದು ಕೊಟ್ಟ ದೇಸಿ ನಾಯಿ ‘ಚಿನ್ನು’
ಪುತ್ತೂರಿನಲ್ಲಿ ಕಾಣೆಯಾಗಿದ್ದ 'ಚಿನ್ನು' ಎಂಬ ದೇಸಿ ನಾಯಿಯನ್ನು ಪತ್ತೆ ಹಚ್ಚಿಕೊಟ್ಟ ಕೂಲಿ ಕಾರ್ಮಿಕ ಪುರಂದರ ಅವರಿಗೆ, ಶ್ವಾನಪ್ರೇಮಿ ಮಾಲೀಕ ಗಣೇಶ್ ಭಟ್ ಕೇರ ಅವರು 50 ಸಾವಿರ ರೂಪಾಯಿ ಬಹುಮಾನ ನೀಡಿದ್ದಾರೆ. ಫಿಟ್ಸ್ ಸಮಸ್ಯೆಯಿಂದ ಬಳಲುತ್ತಿದ್ದ ನಾಯಿಯ ಹುಡುಕಾಟಕ್ಕಾಗಿ ಮಾಲೀಕರು ಬಹುಮಾನ ಘೋಷಿಸಿದ್ದರು.