Hansika Motwani: ನಟಿ ಹನ್ಸಿಕಾ ಮೋಟ್ವಾನಿ ಕುಟುಂಬ ಸಮೇತ ತಿರುಮಲ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದಿದ್ದಾರೆ. ಬಿಳಿ ಬಣ್ಣದ ಟ್ರೆಡಿಷನಲ್ ಉಡುಪಿನಲ್ಲಿ ಕಾಣಿಸಿಕೊಂಡ ಹನ್ಸಿಕಾ, ‘ತಿರುಪತಿಯ ಬೆಳಗು’..
ನಟಿ ಹನ್ಸಿಕಾ ಮೋಟ್ವಾನಿ ತಮ್ಮ ಕುಟುಂಬದ ಜೊತೆ ತಿರುಮಲ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದಿದ್ದಾರೆ. ಬಿಳಿ ಬಣ್ಣದ ಸರಳ ಸೂಟ್ನಲ್ಲಿ ಕಾಣಿಸಿಕೊಂಡ ಅವರು, ತಿರುಪತಿ ಪ್ರವಾಸದ ಸೆಲ್ಫಿಯೊಂದನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ನಟಿ ಹನ್ಸಿಕಾ ಮೋಟ್ವಾನಿ ಬುಧವಾರ ತಮ್ಮ ಕುಟುಂಬದ ಜೊತೆ ತಿರುಮಲಕ್ಕೆ ಬಂದಿದ್ದರು. ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆಯುವುದೇ ಅವರ ಭೇಟಿಯ ಉದ್ದೇಶವಾಗಿತ್ತು.
ಸರಳ ಹಾಗೂ ಸುಂದರವಾದ ಬಿಳಿ ಬಣ್ಣದ ಸೂಟ್ನಲ್ಲಿ ಹನ್ಸಿಕಾ ಟ್ರೆಡಿಷನಲ್ ಆಗಿ ಕಂಗೊಳಿಸುತ್ತಿದ್ದರು. ಕೆಂಪು ಬಳೆ, ಹಗುರವಾದ ಮೇಕಪ್ ಮತ್ತು ಕೆಂಪು ಬಿಂದಿ ಅವರ ಅಂದವನ್ನು ಮತ್ತಷ್ಟು ಹೆಚ್ಚಿಸಿತ್ತು. ತಮ್ಮ ತಂಡ ಹಾಗೂ ಭದ್ರತಾ ಸಿಬ್ಬಂದಿ ಜೊತೆ ಅವರು ದೇವಸ್ಥಾನದ ಆವರಣಕ್ಕೆ ಪ್ರವೇಶಿಸುತ್ತಿರುವುದು ಕಂಡುಬಂತು. ಹನ್ಸಿಕಾ ತಮ್ಮ ಈ ಪ್ರವಾಸದ ಒಂದು ಫೋಟೋವನ್ನು ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಕಾರಿನೊಳಗಿನಿಂದ ತೆಗೆದ ಸೆಲ್ಫಿ ಹಾಕಿ, "ತಿರುಪತಿಯ ಬೆಳಗು" ಎಂದು ಬರೆದುಕೊಂಡಿದ್ದಾರೆ. ಶೇಷಾಚಲಂ ಬೆಟ್ಟದ ಏಳನೇ ಶಿಖರದ ಮೇಲೆ ಇರುವ ತಿರುಮಲ ವೆಂಕಟೇಶ್ವರ ದೇವಸ್ಥಾನ, ಭಾರತದ ಅತ್ಯಂತ ಪ್ರಮುಖ ಹಿಂದೂ ದೇವಾಲಯಗಳಲ್ಲಿ ಒಂದು. ಬಾಲಾಜಿ ಅಂತಲೂ ಕರೆಯಲ್ಪಡುವ ವೆಂಕಟೇಶ್ವರ ಸ್ವಾಮಿಗೆ ಸಮರ್ಪಿತವಾಗಿರುವ ಈ ಶತಮಾನಗಳಷ್ಟು ಹಳೆಯ ದೇವಸ್ಥಾನಕ್ಕೆ ಪ್ರತಿ ವರ್ಷ ದೇಶ-ವಿದೇಶಗಳಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ.
ಹನ್ಸಿಕಾ ಸಿನಿಮಾ ಜರ್ನಿ
ಹನ್ಸಿಕಾ, ಬಾಲನಟಿಯಾಗಿ 'ಶಾಕ ಲಾಕ ಬೂಮ್ ಬೂಮ್' ಅನ್ನೋ ಜನಪ್ರಿಯ ಟಿವಿ ಶೋ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ನಂತರ, ಹೃತಿಕ್ ರೋಷನ್ ಮತ್ತು ಪ್ರೀತಿ ಜಿಂಟಾ ನಟನೆಯ ಬ್ಲಾಕ್ಬಸ್ಟರ್ ಸಿನಿಮಾ 'ಕೋಯಿ ಮಿಲ್ ಗಯಾ'ದಲ್ಲೂ ಕಾಣಿಸಿಕೊಂಡರು. ಪುರಿ ಜಗನ್ನಾಥ್ ನಿರ್ದೇಶನದ ತೆಲುಗಿನ 'ದೇಸಮುದುರು' ಚಿತ್ರದ ಮೂಲಕ ಹನ್ಸಿಕಾ ನಾಯಕಿಯಾಗಿ ಎಂಟ್ರಿ ಕೊಟ್ಟರು. ಈ ಚಿತ್ರದ ನಟನೆಗೆ ಅವರಿಗೆ ಅತ್ಯುತ್ತಮ ನೂತನ ನಟಿ (ದಕ್ಷಿಣ) ಫಿಲ್ಮ್ಫೇರ್ ಪ್ರಶಸ್ತಿಯೂ ಸಿಕ್ಕಿತು. ಬಳಿಕ ಹಿಮೇಶ್ ರೇಶಮಿಯಾ ಜೊತೆ 'ಆಪ್ ಕಾ ಸುರೂರ್' ಚಿತ್ರದಲ್ಲಿ ನಟಿಸಿದರು.
ತಮಿಳು ಚಿತ್ರರಂಗಕ್ಕೆ 'ಮಾಪ್ಪಿಳ್ಳೈ' ಮೂಲಕ ಪಾದಾರ್ಪಣೆ ಮಾಡಿದರು. ಅವರ ಮುಂದಿನ ತಮಿಳು ಚಿತ್ರ 'ಎಂಗೇಯುಮ್ ಕಾದಲ್' ಕೂಡ ಯಶಸ್ಸು ಕಂಡಿತು. ಎಂ. ರಾಜೇಶ್ ನಿರ್ದೇಶನದ ರೊಮ್ಯಾಂಟಿಕ್ ಕಾಮಿಡಿ 'ಒರು ಕಲ್ ಒರು ಕನ್ನಡಿ' ಸಿನಿಮಾ ಬ್ಲಾಕ್ಬಸ್ಟರ್ ಆಗಿ, ಅವರ ನಟನೆಗೆ ಭಾರಿ ಮೆಚ್ಚುಗೆ ವ್ಯಕ್ತವಾಯಿತು. ತೆಲುಗಿನಲ್ಲಿ 'ದೇನಿಕೈನಾ ರೆಡಿ' ಚಿತ್ರದಲ್ಲಿ ನಟಿಸಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಈ ಚಿತ್ರಗಳಲ್ಲಿನ ನಟನೆಗಾಗಿ 60ನೇ ಫಿಲ್ಮ್ಫೇರ್ ಅವಾರ್ಡ್ಸ್ ಸೌತ್ನಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದರು.


