02:28 PM (IST) Jul 24

Karnataka News Live:ಮಗು ಮಾಡಿಕೊಳ್ಳುವ ವಿಚಾರಕ್ಕೆ ಗಲಾಟೆ; 21 ವರ್ಷಕ್ಕೆ ಬದುಕು ಮುಗಿಸಿದ ಪ್ರೇರಣಾ

ಸಿಲಿಕಾನ್ ಸಿಟಿಯಲ್ಲಿ ಗೃಹಿಣಿಯೊಬ್ಬರು ಪತಿಯ ಕಿರುಕುಳ ಹಾಗೂ ಅತಿಯಾದ ಅನುಮಾನಕ್ಕೆ ಬೇಸತ್ತು ಆತ್ಮ*ತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಇಂದಿರಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬಿ.ಎಸ್‌.ಸಿ (B.Sc) ಮುಗಿಸಿ ಬದುಕಿನ ದೊಡ್ಡ ಕನಸು ಕಾಣುತ್ತಿದ್ದ 21 ವರ್ಷದ ಪ್ರೇರಣಾ ಎಂಬ ಯುವತಿ ಬದುಕನ್ನು ಅರ್ಧಕ್ಕೇ ಅಂತ್ಯಗೊಳಿಸಿದ ದುರ್ದೈವಿ.

Read Full Story
02:22 PM (IST) Jul 24

Karnataka News Live:ಪಾರಿವಾಳ ಪ್ರಿಯರೇ ಎಚ್ಚರ - ಸಾರ್ವಜನಿಕ, ಖಾಸಗಿ ಸ್ಥಳದಲ್ಲಿ ಕಾಳು ಹಾಕಿದ್ರೆ ಹುಷಾರ್, ಸರ್ಕಾರದ ಹೊಸ ನಿಯಮ ಜಾರಿ!

ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ, ಆರೋಗ್ಯ ಇಲಾಖೆಯು ಎಲ್ಲೆಂದರಲ್ಲಿ ಪಾರಿವಾಳಗಳಿಗೆ ಆಹಾರ ನೀಡುವುದನ್ನು ನಿರ್ಬಂಧಿಸಿ ಸುತ್ತೋಲೆ ಹೊರಡಿಸಿದೆ. ಇನ್ನು ಮುಂದೆ, ನಿಗದಿತ ಸ್ಥಳಗಳಲ್ಲಿ ಮತ್ತು ನಿಗದಿತ ಸಮಯದಲ್ಲಿ ಮಾತ್ರ ಆಹಾರ ನೀಡಲು ಅವಕಾಶವಿದ್ದು, ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮದ ಎಚ್ಚರಿಕೆ.

Read Full Story
01:06 PM (IST) Jul 24

Karnataka News Live:ಭಾರತದ ಬಾಸುಮತಿ ಅಕ್ಕಿಗೆ ಸಂಕಷ್ಟ ತಂದಿಟ್ಟ ಕೊಲ್ಲಿ ದೇಶಗಳ ಯುದ್ಧ, ಟನ್‌ ಗಟ್ಟಲೆ ಸರಕು ಬಂದರುಗಳಲ್ಲೇ ಬಾಕಿ!

ಪಶ್ಚಿಮ ಏಷ್ಯಾದಲ್ಲಿನ ರಾಜಕೀಯ ಬಿಕ್ಕಟ್ಟಿನಿಂದಾಗಿ, ವಿಶೇಷವಾಗಿ ಕೆಂಪು ಸಮುದ್ರ ಮಾರ್ಗದಲ್ಲಿನ ಅಡಚಣೆಗಳಿಂದ ಭಾರತದ ಬಾಸುಮತಿ ಅಕ್ಕಿ ರಫ್ತು ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಸುಮಾರು 5 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಬಂದರುಗಳಲ್ಲಿ ಬಾಕಿ ಉಳಿದಿದ್ದು, ಸಾಗಣೆ ವೆಚ್ಚ ಗಗನಕ್ಕೇರಿದೆ. ಇದರಿಂದಾಗಿ ರಫ್ತುದಾರರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ.
Read Full Story
01:05 PM (IST) Jul 24

Karnataka News Live:Crigler-Najjar Syndrome - 9 ವರ್ಷದ ಬಾಲಕನ ಅನುವಂಶಿಕ ಕಾಯಿಲೆಗೆ ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿಲ್ಲ ಶಸ್ತ್ರಚಿಕಿತ್ಸೆ!

ಕಲಬುರಗಿಯ 9 ವರ್ಷದ ಬಾಲಕನೊಬ್ಬ 'ಕ್ರಿಗ್ಲರ್ ನಜ್ಜರ್ ಸಿಂಡ್ರೋಮ್' ಎಂಬ ಅಪರೂಪದ ಯಕೃತ್ತಿನ ಕಾಯಿಲೆಯಿಂದ ಬಳಲುತ್ತಿದ್ದಾನೆ. ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಯಕೃತ್ತು ಕಸಿ ಸೌಲಭ್ಯವಿಲ್ಲದ ಕಾರಣ, ಬಡ ಕುಟುಂಬವು ಖಾಸಗಿ ಆಸ್ಪತ್ರೆಯಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡುವ ಅನಿವಾರ್ಯತೆಗೆ ಸಿಲುಕಿದೆ.
Read Full Story
01:00 PM (IST) Jul 24

Karnataka News Live:ಟೆಕ್ ಮಹೀಂದ್ರಾ ವಿರುದ್ಧ ರೊಚ್ಚಿಗೆದ್ದ ಮಹಿಳೆ.. ಹೀಗೆ ಕೂರುವ ಹಿಂದಿದೆ ಒಂದು ಕರುಣಾಜನಕ ಕತೆ

ಹೈದರಾಬಾದ್‌ನ ಟೆಕ್ ಮಹೀಂದ್ರಾ ಕಂಪನಿಯ ಮಹಿಳಾ ಸಾಫ್ಟ್‌ವೇರ್ ಇಂಜಿನಿಯರ್, ಅನಾರೋಗ್ಯದ ರಜೆ ಪಡೆದಿದ್ದಕ್ಕೆ ಕಿರುಕುಳ ನೀಡಿ ಕೆಲಸದಿಂದ ವಜಾಗೊಳಿಸಲಾಗಿದೆ ಎಂದು ಆರೋಪಿಸಿ ಪೊಲೀಸ್ ದೂರು ದಾಖಲಿಸಿದ್ದಾರೆ. ಕಚೇರಿಯಲ್ಲಿ ವಾಶ್‌ರೂಮ್‌ಗೆ ಹೋಗಲು ಸಹ ಅನುಮತಿ ಪಡೆಯಬೇಕಾದ ಅಮಾನವೀಯ ನಿಯಮಗಳಿದ್ದವು ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.
Read Full Story
12:38 PM (IST) Jul 24

Karnataka News Live:RAMAYANA - ಅಮೆರಿಕಾದಲ್ಲಿ ಯಶ್, ಫೋಟೋಗಾಗಿ ಮುಗಿಬಿದ್ದ ಫ್ಯಾನ್ಸ್.. 'ರಾಮಾಯಣ' ಪ್ರಚಾರಕಾರ್ಯ ಇನ್ನೆಷ್ಟು ದಿನ?

ಕಾಮಿಕ್ ಕಾನ್ ಕಾರ್ಯಕ್ರಮದಲ್ಲಿ ರಾಮಾಯಣ ಸಿನಿಮಾವನ್ನು ಪ್ರಚಾರ ಮಾಡುತ್ತಿರುವ ನಟ ಯಶ್ ಹಾಗೂ ರಣಬೀರ್ ಕಪೂರ್ ಅವರು ತಮ್ಮ ಚಿತ್ರತಂಡದೊಂದಿಗೆ ಅಮೆರಿಕಾದಲ್ಲಿ ಬೀಡುಬಿಟ್ಟಿದ್ದಾರೆ. 'ಕಾಮಿಕ್ ಕಾನ್'ನಲ್ಲಿ ರಾಮಾಯಣ ಚಿತ್ರದ ಟ್ರೇಲರ್ ಲಾಂಚ್ ಮಾಡಿದ ಚಿತ್ರತಂಡವು ಅಮೆರಿಕಾದ ಹಲವು ಕಡೆ ಪ್ರಚಾರದಲ್ಲಿ ನಿರತವಾಗಿದೆ.

Read Full Story
11:08 AM (IST) Jul 24

Karnataka News Live:ಹಿಟ್ ಅಂಡ್ ರನ್‌ ಕೇಸ್‌ಗೆ ರೋಚಕ ಟ್ವಿಸ್ಟ್.. ಆಪ್ತಮಿತ್ರನ ಸದ್ದಿಲ್ಲದೇ ಮುಗಿಸಿಬಿಟ್ಟಿದ್ದ ಸ್ನೇಹಿತ..!

ಒಂದೂವರೆ ತಿಂಗಳ ಹಿಂದೆ ನಡೆದ ಆ ಘಟನೆಯನ್ನು ಎಲ್ಲರೂ ಒಂದು ಭೀಕರ ರಸ್ತೆ ಅಪಘಾತ ಎಂದೇ ಭಾವಿಸಿದ್ದರು. ಅಪಘಾತ ನಡೆದ ಜಾಗದಲ್ಲಿ ಪಲ್ಟಿಯಾಗಿದ್ದ ಗೂಡ್ಸ್ ಆಟೋ ಆ ಅನುಮಾನವನ್ನು ಮತ್ತಷ್ಟು ಪುಷ್ಟೀಕರಿಸಿತ್ತು. ಪೊಲೀಸರ ಹದ್ದಿನ ಕಣ್ಣು ಈ ಅಪಘಾತದ ಹಿಂದಿದ್ದ ಕರಾಳ ಕೊಲೆಯ ರಹಸ್ಯವನ್ನು ಬಯಲಿಗೆಳೆದಿದೆ.

Read Full Story
10:31 AM (IST) Jul 24

Karnataka News Live:ರಾಜ್ಯದಲ್ಲಿ ಹಲವು ಜಿಲ್ಲೆಗಳಲ್ಲಿ ಮಳೆ ಅಬ್ಬರ - ದೂಧಗಂಗಾ ನದಿಯಲ್ಲಿ ನೀರಿನ ಹರಿವು ಹೆಚ್ಚಳ; ರಾಜ್ಯದ ಜಲಾಶಯಗಳ ನೀರಿನ ಮಟ್ಟ ಎಷ್ಟು?

ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ರಾಜ್ಯದ ದೂಧಗಂಗಾ ನದಿಯ ಹರಿವು ಹೆಚ್ಚಾಗಿದೆ. ಇದರ ಪರಿಣಾಮವಾಗಿ, ಬೆಳಗಾವಿ ಜಿಲ್ಲೆಯ ಐತಿಹಾಸಿಕ ದರ್ಗಾ ಜಲಾವೃತಗೊಂಡಿದ್ದು, ಹಲವು ಸೇತುವೆಗಳು ಮುಳುಗಡೆಯಾಗಿವೆ ಮತ್ತು ಆಲಮಟ್ಟಿ ಜಲಾಶಯಕ್ಕೆ ಒಳಹರಿವು ಏರಿಕೆಯಾಗಿದೆ.
Read Full Story
09:47 AM (IST) Jul 24

Karnataka News Live:ಬೆಂಗಳೂರು - ಉದ್ಘಾಟನೆಗೂ ಮೊದಲೇ ವಾಲಿಕೊಂಡ ಕೂಡ್ಲುನಲ್ಲಿರುವ ವಸತಿ ಕಟ್ಟಡ, 18 ಮಹಡಿ ಅಪಾರ್ಟ್‌ಮೆಂಟ್ ಕೆಡವಲು ನಿರ್ಧಾರ

ಬೆಂಗಳೂರಿನ ಹೊಸೂರು ರಸ್ತೆಯ ಕೂಡ್ಲು ಬಳಿ ನಿರ್ಮಿಸಲಾದ 18 ಮಹಡಿಗಳ 'ಎಸ್‌ಎನ್‌ಎನ್‌ ರಾಜ್ ಇಟರ್ನಿಯ' ಅಪಾರ್ಟ್‌ಮೆಂಟ್‌ನ ಒಂದು ವಿಂಗ್ ವಾಲಿಕೊಂಡಿದೆ. ಮಣ್ಣಿನ ಪರೀಕ್ಷೆಯ ವರದಿಯಲ್ಲಾದ ಲೋಪವೇ ಇದಕ್ಕೆ ಕಾರಣವೆಂದು ಹೇಳಿರುವ ಡೆವಲಪರ್‌ಗಳು, ಕಟ್ಟಡವನ್ನು ಕೆಡವಿ ತಮ್ಮ ಸ್ವಂತ ಖರ್ಚಿನಲ್ಲಿ ಮರುನಿರ್ಮಿಸಲು ನಿರ್ಧರಿಸಿದ್ದಾರೆ.
Read Full Story
08:35 AM (IST) Jul 24

Karnataka News Live:ಮನೆ ಖರ್ಚಿಗೆ 5000 ಕೇಳಿದ್ದಕ್ಕೆ ವೃದ್ಧ ಪತ್ನಿಗೆ ಹೊಡೆದ ಪತಿಗೆ ಹೈಕೋರ್ಟ್ ಶಾಕ್, ಇನ್ಮುಂದೆ ತಿಂಗಳಿಗೆ 10,000 ನೀಡುವಂತೆ ಆದೇಶ

ಮನೆ ಖರ್ಚಿಗೆಂದು ಐದು ಸಾವಿರ ರುಪಾಯಿ ಕೇಳಿದ 65 ವರ್ಷದ ಪತ್ನಿಗೆ ಹಲ್ಲೆ ನಡೆಸಿದ 73 ವರ್ಷದ ಪತಿಯ ವಿರುದ್ಧದ ಕ್ರಿಮಿನಲ್ ಪ್ರಕರಣಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಮಾಡಿದ ತಪ್ಪಿಗೆ ಪ್ರಾಯಶ್ಚಿತ್ತವಾಗಿ, ಪತ್ನಿಗೆ ಮಾಸಿಕ 10 ಸಾವಿರ ರುಪಾಯಿ ನೀಡುವಂತೆ ನ್ಯಾಯಾಲಯ ಪತಿಗೆ ಕಟ್ಟುನಿಟ್ಟಿನ ನಿರ್ದೇಶನ.

Read Full Story
08:01 AM (IST) Jul 24

Karnataka News Live:ಇಬ್ಬರು ಹೆಣ್ಣುಮಕ್ಕಳಿಗೆ ಭಾರವಾಗಬಾರದೆಂದು ಜೀವ ತ್ಯಾಗ ಮಾಡಿದ ವೃದ್ಧ ದಂಪತಿ!

ಬೆಂಗಳೂರಿನ ಮಂಜುನಾಥನಗರದಲ್ಲಿ, ಅನಾರೋಗ್ಯ ಹಾಗೂ ತಮ್ಮ ಇಬ್ಬರು ಹೆಣ್ಣುಮಕ್ಕಳಿಂದ ಹಣ ಪಡೆದು ಜೀವನ ನಡೆಸುತ್ತಿದ್ದಕ್ಕೆ ಬೇಸತ್ತು ವೃದ್ಧ ದಂಪತಿಗಳು ತಂಪು ಪಾನೀಯದಲ್ಲಿ ವಿಷ ಸೇವಿಸಿ ಆತ್ಮ೧ಹತ್ಯೆ ಮಾಡಿಕೊಂಡಿದ್ದಾರೆ. ಈ ಮನಕಲಕುವ ಘಟನೆಯು ಕೆಲಸದಾಕೆ ಮನೆಗೆ ಬಂದಾಗ ಬೆಳಕಿಗೆ ಬಂದಿದೆ.

Read Full Story
07:52 AM (IST) Jul 24

Karnataka News Live:ಸಿಟಿ ಶಾಲೆಗಳು ಹಳ್ಳಿ ಶಾಲೆಗಳನ್ನು ದತ್ತು ಪಡೆವುದು ಕಡ್ಡಾಯ, ನನ್ನ ಮಗಳಿಗೂ ಇದು ಅನ್ವಯ, 3 ಶಾಲೆ ಪಡೆದಿದ್ದಾಳೆ - ಸಿಎಂ

ನಗರ ಪ್ರದೇಶಗಳಲ್ಲಿ 50 ಸಾವಿರ ರೂಪಾಯಿಗಿಂತ ಹೆಚ್ಚು ಶುಲ್ಕ ಪಡೆಯುವ ಖಾಸಗಿ ಶಾಲೆಗಳು ಸರ್ಕಾರಿ ಶಾಲೆಗಳನ್ನು ಕಡ್ಡಾಯವಾಗಿ ದತ್ತು ಪಡೆಯಬೇಕು, ಇಲ್ಲದಿದ್ದರೆ ಶುಲ್ಕಕ್ಕೆ ಮಿತಿ ಹಾಕಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಸಿಎಸ್‌ಆರ್‌ ನಿಧಿ ದುರುಪಯೋಗ ತಡೆಯಲು ಮತ್ತು ಗ್ರಾಮೀಣ ಶಿಕ್ಷಣದ ಗುಣಮಟ್ಟ ಸುಧಾರಿಸಲು ಉನ್ನತ ಮಟ್ಟದ ಸಮಿತಿ ರಚಿಸಲಾಗುವುದು ಎಂದೂ ಅವರು ಘೋಷಿಸಿದ್ದಾರೆ.
Read Full Story