ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು ಫಾಕ್ಸ್ಕಾನ್ ಮತ್ತು ದೇವನಹಳ್ಳಿ ವಿಶೇಷ ಹೂಡಿಕೆ ಪ್ರದೇಶದ ಇತರ ಘಟಕಗಳಿಗೆ ಆಸ್ತಿ ತೆರಿಗೆ ಪಾವತಿಸಲು ನಿರ್ದೇಶನ ನೀಡಿದೆ, ಅಧಿಸೂಚಿತ ಕೈಗಾರಿಕಾ ಪ್ರದೇಶಗಳಲ್ಲಿ ತೆರಿಗೆ ಮೌಲ್ಯಮಾಪನ ಮತ್ತು ಸಂಗ್ರಹಣೆಯ ಮೇಲಿನ ಅಧಿಕಾರವನ್ನು ಕೂಡ ಉಲ್ಲೇಖಿಸಿದೆ.
- Home
- News
- State
- Karnataka News Live: ಫಾಕ್ಸ್ಕಾನ್ V/s ಗ್ರಾಮ ಪಂಚಾಯ್ತಿ - ಟ್ಯಾಕ್ಸ್ ಕಟ್ಟಿ ಎಂದು ಐಫೋನ್ ತಯಾರಿಕಾ ಕಂಪನಿಗೆ ಹೇಳಿದ ಸರ್ಕಾರ!
Karnataka News Live: ಫಾಕ್ಸ್ಕಾನ್ V/s ಗ್ರಾಮ ಪಂಚಾಯ್ತಿ - ಟ್ಯಾಕ್ಸ್ ಕಟ್ಟಿ ಎಂದು ಐಫೋನ್ ತಯಾರಿಕಾ ಕಂಪನಿಗೆ ಹೇಳಿದ ಸರ್ಕಾರ!

‘14ನೇ ಹಣಕಾಸು ಆಯೋಗದ ಅವಧಿಯಲ್ಲಿ ಕರ್ನಾಟಕಕ್ಕೆ ಬಂದಿದ್ದ ಪಾಲು ಶೇ.4.71. ಆದರೆ, 15ನೇ ಹಣಕಾಸು ಆಯೋಗದ ಅವಧಿಯಲ್ಲಿ ಇನ್ನೂ ಕಮ್ಮಿ, ಅಂದರೆ, ಶೇ.3.64ರಷ್ಟು ಮಾತ್ರ ಬಂದಿದೆ. ಕನಿಷ್ಠ ಶೇ 4.71ರಷ್ಟಾದರೂ ಕೊಡಿ ಎಂದು ಒತ್ತಾಯ ಮಾಡಿದ್ದೆವು. 14ನೇ ಹಣಕಾಸು ಆಯೋಗಕ್ಕಿಂತ ಜಾಸ್ತಿ ಮಾಡಲು ಕೇಳಿದ್ದೆವು. ಆದರೆ, ಶೇ.4.131ರಷ್ಟು ಮಾತ್ರ ಕೊಡಲಾಗಿದೆ. ಇದು ರಾಜ್ಯಕ್ಕೆ ಮಾಡಿದ ದೊಡ್ಡ ಅನ್ಯಾಯ’ ಎಂದು ಸಿಎಂ ಸಿದ್ದರಾಮಯ್ಯ ಹರಿಹಾಯ್ದಿದ್ದಾರೆ.
Karnataka News Live 2 February 2026ಫಾಕ್ಸ್ಕಾನ್ V/s ಗ್ರಾಮ ಪಂಚಾಯ್ತಿ - ಟ್ಯಾಕ್ಸ್ ಕಟ್ಟಿ ಎಂದು ಐಫೋನ್ ತಯಾರಿಕಾ ಕಂಪನಿಗೆ ಹೇಳಿದ ಸರ್ಕಾರ!
Karnataka News Live 2 February 2026ರಾಜ್ಯ ಮಟ್ಟದ ಶೂಟಿಂಗ್ನಲ್ಲಿ ಬೆಳ್ಳಿ ಗೆದ್ದ ಪರಿಮಳ, ಹೆಂಡ್ತಿ ಸಾಧನೆ ಕೊಂಡಾಡಿದ ಜಗ್ಗೇಶ್!
57ನೇ ವಯಸ್ಸಿನಲ್ಲಿ ರಾಜ್ಯ ಮಟ್ಟದ ಶೂಟಿಂಗ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ನಟ ಜಗ್ಗೇಶ್ ಅವರ ಪತ್ನಿ ಪರಿಮಳಾ ಜಗ್ಗೇಶ್ ಸಾಧನೆ ಮಾಡಿದ್ದಾರೆ. ಸಂಸಾರದ ಜವಾಬ್ದಾರಿಯ ನಡುವೆಯೂ ಶಿಕ್ಷಣ ಹಾಗೂ ಹೊಸ ಕೌಶಲ್ಯಗಳನ್ನು ಕಲಿಯುವ ಅವರ ಛಲಕ್ಕೆ ಜಗ್ಗೇಶ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Karnataka News Live 2 February 2026'ಭಾರತದ ಸತ್ಯ ಬರೀ ಜಾತಿಯಷ್ಟೇ, ಇಲ್ಲಿ ಹಿಂದೂ ಎನ್ನುವುದೇ ಇಲ್ಲ' - ಕೇಂದ್ರ ಸರ್ಕಾರದ ವಿರುದ್ಧ ನಟ ಕಿಶೋರ್ ಕಿಡಿ!
ನಟ ಕಿಶೋರ್ ಅವರು ಬಿಜೆಪಿ, ಆರೆಸ್ಸೆಸ್ ಹಾಗೂ ಕೇಂದ್ರ ಸರ್ಕಾರದ ನೀತಿಗಳನ್ನು ತೀವ್ರವಾಗಿ ಟೀಕಿಸಿದ್ದಾರೆ. 'ಹಿಂದೂ ಹಿಂದಕ್ಕೆ, ಜಾತಿ ಮುಂದಕ್ಕೆ' ಎಂದು ಹೇಳುವ ಮೂಲಕ, ಯುಜಿಸಿ ನಿರ್ಧಾರ ಹಾಗೂ ದೇಶದ ಜಾಗತಿಕ ಸೂಚ್ಯಂಕಗಳ ಕುಸಿತದ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
Karnataka News Live 2 February 2026Extra Marital Affairs - ಮನಃಶಾಸ್ತ್ರದ ಪ್ರಕಾರ ವ್ಯಕ್ತಿ ಅಕ್ರಮ ಸಂಬಂಧದಲ್ಲಿದ್ದಾರೆ ಎಂದು ತಿಳಿಸುವ ಸೂಚನೆಗಳಿವು!
Extra Marital Affairs Signs: ಅಕ್ರಮ ಸಂಬಂಧ ಅನ್ನೋದು ತಪ್ಪು ಅಂತ ಎಲ್ಲರಿಗೂ ಗೊತ್ತು. ಆದರೂ ಕೆಲವರು ಯಾಕೆ ಆ ತಪ್ಪಿನ ಕಡೆಗೇ ಆಕರ್ಷಿತರಾಗುತ್ತಾರೆ? ಅಕ್ರಮ ಸಂಬಂಧದಲ್ಲಿರುವವರಲ್ಲಿ ಯಾವೆಲ್ಲಾ ಲಕ್ಷಣಗಳು ಕಾಣಿಸುತ್ತವೆ? ಈ ಬಗ್ಗೆ ಮನಃಶಾಸ್ತ್ರ ಏನು ಹೇಳುತ್ತೆ?
Karnataka News Live 2 February 2026ಇಷ್ಟೆಲ್ಲ ಬದಲಾವಣೆ ಆಗತ್ತೆ ಅಂತ ಗೊತ್ತಾದ್ರೆ Junk Food ಬಿಡ್ತೀರಾ! ಇದು 30 ದಿನದ ಚಾಲೆಂಜ್!
Effects of quitting junk food: ಜಂಕ್ ಫುಡ್ ಆರೋಗ್ಯಕ್ಕೆ ಒಳ್ಳೇದಲ್ಲ ಅಂತ ಎಲ್ಲರಿಗೂ ಗೊತ್ತು. ಆದ್ರೂ, ಬಹುತೇಕರು ಅದನ್ನೇ ಇಷ್ಟಪಟ್ಟು ತಿಂತಾರೆ. ಆದ್ರೆ, 30 ದಿನಗಳ ಕಾಲ ಜಂಕ್ ಫುಡ್ ತಿನ್ನೋದನ್ನು ನಿಲ್ಲಿಸಿದರೆ ನಿಮ್ಮ ದೇಹದಲ್ಲಿ, ಮುಖ್ಯವಾಗಿ ಮುಖದಲ್ಲಿ ಏನೆಲ್ಲಾ ಬದಲಾವಣೆ ಆಗುತ್ತೆ ಗೊತ್ತಾ?
Karnataka News Live 2 February 2026ಅಜ್ಜಿಯ ಅಂತ್ಯಕ್ರಿಯೆ ಮುಗಿಸಿ ಮನೆಗೆ ಹೊರಟ ಮೊಮ್ಮಗನನ್ನೂ ಮಸಣದ ಹೆಣ ಮಾಡಿದ ಜವರಾಯ!
ಧಾರವಾಡದಲ್ಲಿ, ಅಜ್ಜಿಯ ಅಂತಿಮ ಸಂಸ್ಕಾರ ಮುಗಿಸಿ ಮನೆಗೆ ಮರಳುತ್ತಿದ್ದ ಮೊಮ್ಮಗ ಬೈಕ್ ಅಪಘಾತದಲ್ಲಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ವೇಗವಾಗಿದ್ದ ಬೈಕ್ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ದುರ್ಘಟನೆ ಸಂಭವಿಸಿದ್ದು, ಒಂದೇ ಕುಟುಂಬದಲ್ಲಿನ ಸತತ ಎರಡು ಸಾವುಗಳು ಕುಟುಂಬಸ್ಥರ ಆಕ್ರಂದನಕ್ಕೆ ಕಾರಣವಾಗಿದೆ.
Karnataka News Live 2 February 2026ಸಿಜೆ ರಾಯ್ ಸಾವಿಗೂ ಮುನ್ನ ನಡೆದಿತ್ತು ಮಹತ್ವದ ಘಟನೆ, ದಿಢೀರ್ ದಿಕ್ಕು ಬದಲಿಸಿದ್ದ ಉದ್ಯಮಿ
ಸಿಜೆ ರಾಯ್ ಸಾವಿಗೂ ಮುನ್ನ ನಡೆದಿತ್ತು ಮಹತ್ವದ ಘಟನೆ, ಸಿಜೆ ರಾಯ್ ಸಾವಿಗೆ ಐಟಿ ದಾಳಿ, ಕಿರುಕುಳವೇ ಕಾರಣ ಎಂದು ಹೇಳಲಾಗುತ್ತಿದೆ. ಆದರೆ ಸಿಜೆ ರಾಯ್ ಮಹತ್ವದ ಯೂ ಟರ್ನ್ ಇದೀಗ ಅನುಮಾನ ಹೆಚ್ಚಿಸಿದೆ.
Karnataka News Live 2 February 2026ಕೃಷಿ ಭೂಮಿಗೆ ಕಂಟಕ - ಯಲಹಂಕ–ರಾಜಾನುಕುಂಟೆ ರೈಲು ಮಾರ್ಗ ಯೋಜನೆಯ ಭೂಸ್ವಾಧೀನಕ್ಕೆ ವ್ಯಾಪಕ ವಿರೋಧ
Karnataka News Live 2 February 2026ಲೈಫ್ ಕೊಟ್ಟ ಸೆಕೆಂಡ್ ಚಾನ್ಸ್ - 2ನೇ ಬಾರಿಗೆ ಲವ್ ಮಾಡಿ ಮದುವೆಯಾದ ದಕ್ಷಿಣ ಭಾರತದ ಸೆಲೆಬ್ರಿಟಿಗಳು
South Indian Celebrity Second Marriage: ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಕೆಲ ನಟ, ನಟಿಯರು ತಮ್ಮ ಮೊದಲನೇ ವೈವಾಹಿಕ ಜೀವನದಲ್ಲಿ ಸೋತಿದ್ದರು, ಆಮೇಲೆ ಅವರು ಎರಡನೇ ಮದುವೆ ಆಗಿ ಖುಷಿಯಿಂದ ಬದುಕುತ್ತಿದ್ದಾರೆ.
Karnataka News Live 2 February 2026ಶಾಸಕ ಶರತ್ ಬಚ್ಚೇಗೌಡರ ಹೊಸಕೋಟೆ ಮೆಟ್ರೋ ಕನಸು ನನಸು, ಮೆಟ್ರೋ ವಿಸ್ತರಣೆಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್
ಹೊಸಕೋಟೆ ಜನರ ಬಹುನಿರೀಕ್ಷಿತ ಮೆಟ್ರೋ ಯೋಜನೆಗೆ ರಾಜ್ಯ ಸರ್ಕಾರ ಹಸಿರು ನಿಶಾನೆ ತೋರಿದೆ. ಶಾಸಕ ಶರತ್ ಬಚ್ಚೇಗೌಡರ ಪ್ರಯತ್ನದ ಫಲವಾಗಿ, ಕೆ.ಆರ್.ಪುರಂನಿಂದ ಹೊಸಕೋಟೆಯವರೆಗಿನ ಮಾರ್ಗದ ಕಾರ್ಯಸಾಧ್ಯತಾ ಅಧ್ಯಯನಕ್ಕೆ ಚಾಲನೆ ನೀಡಲಾಗಿದೆ. ಈ ಯೋಜನೆಯು ಪ್ರಯಾಣಿಕರ ಸಂಚಾರವನ್ನು ಸುಗಮಗೊಳಿಸುವ ನಿರೀಕ್ಷೆಯಿದೆ.
Karnataka News Live 2 February 2026ಅಪ್ಪನ ಪ್ರೀತಿ ಕೊಟ್ಟ ಅಜ್ಜ ಸುಂದರ್ರಾಜ್ಗೆ 75ನೇ ವಸಂತದ 'ರಾಯಲ್ ಮೆಮೋರಿ' ಕೊಟ್ಟ ರಾಯನ್ ರಾಜ್ ಸರ್ಜಾ!
Karnataka News Live 2 February 2026ಕನಕೋತ್ಸವದಲ್ಲಿ ಗಾಯಕ ನವೀನ್ ಸಜ್ಜು ಜೊತೆಗೆ ನಾಚುತ್ತಲೇ ಹೆಜ್ಜೆ ಹಾಕಿದ ಪತ್ನಿ ಉಷಾ, ಡಿಕೆಶಿ ಫುಲ್ ಎಂಜಾಯ್
ಕನಕೋತ್ಸವದಲ್ಲಿ ಗಾಯಕ ನವೀನ್ ಸಜ್ಜು ಜೊತೆ ಡಿಸಿಎಂ ಡಿಕೆಶಿ ಪತ್ನಿ ಉಷಾ ಹೆಜ್ಜೆ ಹಾಕಿದ್ದು, ಈ ವೇಳೆ ಅವರು ನಾಚಿದ ಪ್ರಸಂಗ ಗಮನ ಸೆಳೆಯಿತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಡಿಕೆಶಿ, ಕನಕಪುರದಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆ , 2027ರಲ್ಲಿ ಅದ್ಧೂರಿ ಉತ್ಸವ ನಡೆಸುವ ಬಗ್ಗೆ ಘೋಷಣೆಗಳನ್ನು ಮಾಡಿದರು.
Karnataka News Live 2 February 2026ಇಷ್ಟೊಂದು ಸುಂದರಿಯಾಗಿ ಕಂಡ್ರೆ ಅಜ್ಜ ಉಜ್ಜದೇ ಇರ್ತಾನಾ? ಮೋಡಿ ಮಾಡಿದ ನಟ ರಾಘವೇಂದ್ರ
Karnataka News Live 2 February 2026'ನನಗೆ ಹಣ್ಣುಗಳೆಂದರೆ ಇಷ್ಟ..' ಎಂದಿದ್ದೇ ತಡ; ಬೆಂಗಳೂರಿನ ಪುಟ್ಟ ಮಕ್ಕಳು ಮಾಡುತ್ತಿರುವ ಕೆಲಸಕ್ಕೆ ನೆಟ್ಟಿಗರು ಫಿದಾ!
ಬೆಂಗಳೂರಿನ 'ಟೀಚ್ ಫಾರ್ ಇಂಡಿಯಾ' ಶಿಕ್ಷಕಿ ತಮಗೆ ಹಣ್ಣುಗಳಿಷ್ಟ ಎಂದು ಹೇಳಿದ್ದಕ್ಕೆ, ಅವರ ವಿದ್ಯಾರ್ಥಿಗಳು ಪ್ರತಿದಿನ ಪ್ರೀತಿಯಿಂದ ಹಣ್ಣುಗಳನ್ನು ತಂದುಕೊಡುತ್ತಿದ್ದಾರೆ. ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಮಕ್ಕಳು ತೋರುತ್ತಿರುವ ಈ ನಿಸ್ವಾರ್ಥ ಪ್ರೀತಿಯ ವಿಡಿಯೋ ಇಂಟರ್ನೆಟ್ನಲ್ಲಿ ವೈರಲ್ ಆಗಿದೆ.
Karnataka News Live 2 February 2026ದಾವಣಗೆರೆ ಪೊಲೀಸರ ಮೇಲೆ ಕೈ ಹಾಕಿದ ಪೈಲ್ವಾನ್ ಪುತ್ರರು! ಮಹಿಳಾ ಆಯೋಗ ಮೌನಕ್ಕೆ ವ್ಯಾಪಕ ಆಕ್ರೋಶ
ದಾವಣಗೆರೆಯಲ್ಲಿ ಕಾಂಗ್ರೆಸ್ ಮುಖಂಡ ಆಯೂಬ್ ಪೈಲ್ವಾನ್ ಪುತ್ರರು ಮಹಿಳಾ ಸಿಪಿಐ ಸೇರಿದಂತೆ ಪೊಲೀಸರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿದ್ದಾರೆ. ಘಟನೆ ಬಳಿಕ ಇಬ್ಬರು ಆರೋಪಿಗಳು ಪರಾರಿಯಾಗಿದ್ದು, ಅವರ ಬಂಧನಕ್ಕೆ ವಿಶೇಷ ತಂಡ ರಚಿಸಲಾಗಿದೆ. ಈ ಪ್ರಕರಣವು ರಾಜಕೀಯ ತಿರುವು ಪಡೆದುಕೊಂಡಿದೆ.
Karnataka News Live 2 February 2026ಅತಿ ಕಡಿಮೆ ದುಡ್ಡಿನಲ್ಲಿ ಮನೆಯಲ್ಲಿ ಕೂತು ಸೀರೆ ಇತ್ಯಾದಿಗಳನ್ನು Online ಮಾರಾಟ ಮಾಡೋದು ಹೇಗೆ?
Online Business: ಅನೇಕರು ಇಂದು ಮನೆಯಲ್ಲಿ ಕೂತು ಆನ್ಲೈನ್ ಬ್ಯುಸಿನೆಸ್ ಮಾಡುತ್ತಿದ್ದಾರೆ. ಇಂದಿನ ಕಾಲದಲ್ಲಿ ಇದು ಅತ್ಯಂತ ಲಾಭ ತಂದುಕೊಡುವ ಹಾಗೂ ಸ್ಮಾರ್ಟ್ ನಿರ್ಧಾರವಾಗಿದೆ. ಕಡಿಮೆ ಬಂಡವಾಳದಲ್ಲಿ ದೊಡ್ಡ ಮಟ್ಟದ ಯಶಸ್ಸು ಪಡೆಯಬಹುದು.
Karnataka News Live 2 February 2026ಬೆಂಗಳೂರು ಟ್ರೇಡ್ ಲೈಸೆನ್ಸ್ ನವೀಕರಣಕ್ಕೆ ಹೊಸ ಸುತ್ತೋಲೆ ಹೊರಡಿಸಿದ ಜಿಬಿಎ - ಶೇ.100 ದಂಡದ ಎಚ್ಚರಿಕೆ!
ಗ್ರೇಟರ್ ಬೆಂಗಳೂರು ಪ್ರಾಧಿಕಾರವು 2026-27ನೇ ಸಾಲಿನ ಉದ್ದಿಮೆ ಪರವಾನಿಗೆ ನವೀಕರಣ ಪ್ರಕ್ರಿಯೆಯನ್ನು ಆರಂಭಿಸಿದೆ. ದಂಡ ರಹಿತವಾಗಿ ನವೀಕರಿಸಲು ಫೆಬ್ರವರಿ 28 ಕೊನೆಯ ದಿನವಾಗಿದ್ದು, ಏಪ್ರಿಲ್ 1ರ ನಂತರ ಶೇ. 100ರಷ್ಟು ದಂಡ ವಿಧಿಸಲಾಗುವುದು. ಈ ನಿಯಮ ಪಾಲಿಸದಿದ್ದರೆ ಪರವಾನಿಗೆಯನ್ನು ತಿರಸ್ಕರಿಸಲಾಗುವುದು.
Karnataka News Live 2 February 2026Ajit Pawar Funeral - ಅಜಿತ್ ಪವಾರ್ ಅಂತ್ಯಕ್ರಿಯೆಯಲ್ಲೂ ಕಳ್ಳರ ಕೈಚಳಕ, 15 ಜನರ ಚಿನ್ನದ ಸರ ಕದ್ದ ಕಿಡಿಗೇಡಿಗಳು!
Karnataka News Live 2 February 2026ಗಿಲ್ಲಿ ನಟನಿಗೆ ರಾಜಯೋಗ; Bigg Boss Kannada 12 ಮುಗಿಯುತ್ತಿದ್ದಂತೆ ಕಂಡ ಕನಸು ಈಡೇರಿತು!
Bigg Boss Gilli Nata: ಬಿಗ್ ಬಾಸ್ ಕನ್ನಡ ಸೀಸನ್ 12 ಶೋ ವಿಜೇತ ಗಿಲ್ಲಿ ನಟ ಅವರು ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ನಿತ್ಯ ಒಂದಲ್ಲ ಒಂದು ಕಾರ್ಯಕ್ರಮಗಳು, ರಾಜಕಾರಣಿಗಳ ಭೇಟಿ ಮಧ್ಯೆ ಇನ್ನೆರಡು ಖುಷಿಯ ವಿಷಯವೂ ಇದೆ.
Karnataka News Live 2 February 2026ಫ್ಯಾನ್ಸ್ಗೆ ಭಾವುಕ ಪತ್ರ ಬರೆದ ಕಿಚ್ಚ ಸುದೀಪ! ಆ ಪತ್ರದಲ್ಲೇನಿದೆ? ಎಲ್ಲರ ಚಿತ್ತ ಬಿಲ್ಲ ರಂಗ ಭಾಷ ಚಿತ್ರದತ್ತ!
ಸ್ಯಾಂಡಲ್ವುಡ್ ನಟ ಕಿಚ್ಚ ಸುದೀಪ್ ತಮ್ಮ 30 ವರ್ಷಗಳ ಸಿನಿ ಪಯಣವನ್ನು ಪೂರ್ಣಗೊಳಿಸಿದ್ದಾರೆ. ಈ ವಿಶೇಷ ಸಂದರ್ಭದಲ್ಲಿ, ತಮ್ಮ ಅಭಿಮಾನಿಗಳಿಗೆ, ನಿರ್ದೇಶಕರಿಗೆ ಮತ್ತು ಚಿತ್ರರಂಗದ ಎಲ್ಲರಿಗೂ ಧನ್ಯವಾದ ಅರ್ಪಿಸಿ ಭಾವುಕ ಪತ್ರ ಬರೆದಿದ್ದಾರೆ. ಸದ್ಯ 'ಬಿಲ್ಲ ರಂಗಾ ಬಾಷಾ' ಚಿತ್ರಕ್ಕೆ ಸಜ್ಜಾಗುತ್ತಿದ್ದಾರೆ.