06:24 AM (IST) Aug 18

Karnataka News Live 18 August 2026Prajwal Revanna - ಸಹ ಕೈದಿಗಳಿಂದ ಕಜ್ಜಿ ಬರಹುದು - ಸೆಲ್ ಬದಲಿಸುವಂತೆ ಪ್ರಜ್ವಲ್ ಗೋಳಾಟ

ಮಾಜಿ ಸಂಸದ ಪ್ರಜ್ವಲ್ ರೇವಣ್ಣ, ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದು, ಸಹ ಕೈದಿಗಳಿಂದ ಕಜ್ಜಿ, ಕೆಮ್ಮು ಮುಂತಾದ ಸೋಂಕು ಹರಡುವ ಭಯದಿಂದ ತಮ್ಮನ್ನು ಬೇರೆ ಸೆಲ್‌ಗೆ ವರ್ಗಾಯಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಮೊಬೈಲ್ ಪತ್ತೆ ಪ್ರಕರಣದ ನಂತರ ಸಾಮಾನ್ಯ ಬ್ಯಾರಕ್‌ಗೆ ಸ್ಥಳಾಂತರಿಸಲಾಗಿದ್ದು, ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ಕಷ್ಟಪಡುತ್ತಿದ್ದಾರೆ.

Read Full Story
06:14 AM (IST) Aug 18

Karnataka News Live 18 August 2026ಕುಡಿದು ‘ಯಾರಿವಳು ಯಾರಿವಳು’ ಎಂದು ಹಾಡಿದ ಮರುಳಾರಾಧ್ಯ ಶ್ರೀ! ಹಾಡು ಹಾಡಿದ ಖಾವಿಧಾರಿ

ಕಲಬುರಗಿ ಜಿಲ್ಲೆಯ ಮಾಶಾಳ ಮಠದ ಮರುಳಾರಾಧ್ಯ ಸ್ವಾಮೀಜಿ ಅವರು ಶ್ರಾವಣ ಮಾಸದಲ್ಲಿ ಮದ್ಯದ ಬಾಟಲಿ ಮುಂದಿಟ್ಟುಕೊಂಡು ಸಿನಿಮಾ ಹಾಡು ಹಾಡಿ ಮೋಜು ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆಯು ಭಕ್ತರ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಈ ಹಿಂದೆಯೂ ಸ್ವಾಮೀಜಿ ಹಲವು ವಿವಾದಗಳಿಂದ ಸುದ್ದಿಯಾಗಿದ್ದರು.
Read Full Story
06:07 AM (IST) Aug 18

Karnataka News Live 18 August 2026ಬಟ್ಟೆ ಅಳತೆ ನೆಪದಲ್ಲಿ ಅಪ್ರಾಪ್ತೆ ದೇಹ ಮುಟ್ಟಿದ ಆರೋಪ; ಟೈಲರ್‌ ವಿರುದ್ಧ ಪೋಕ್ಸೋ ಕೇಸ್

ಬಟ್ಟೆ ಅಳತೆ ನೆಪದಲ್ಲಿ ಅಪ್ರಾಪ್ತೆಯ ದೇಹ ಮುಟ್ಟಿದ ಆರೋಪ ಎದುರಿಸುತ್ತಿರುವ 53 ವರ್ಷದ ಟೈಲರ್, ಘಟನೆ ನಡೆದ ದಿನ ಆಸ್ಪತ್ರೆಯಲ್ಲಿದ್ದೆ ಎಂದು ದಾಖಲೆ ಸಲ್ಲಿಸಿದ್ದಾನೆ. ಈ ದಾಖಲೆ ಕಂಡು ದಿಗ್ಭ್ರಮೆಗೊಂಡ ಹೈಕೋರ್ಟ್‌, ದಾಖಲೆಗಳ ಸತ್ಯಾಸತ್ಯತೆ ಪರಿಶೀಲಿಸಿ ವರದಿ ಸಲ್ಲಿಸುವಂತೆ ತನಿಖಾಧಿಕಾರಿಗೆ ಆದೇಶಿಸಿದೆ.
Read Full Story
05:42 AM (IST) Aug 18

Karnataka News Live 18 August 2026RSS 11 ಸಾವಿರ ಹೆಡೆಗಳ ವಿಷ ಸರ್ಪ, ಹಾಗೆಯೇ ಬಿಟ್ಟರೆ ಸಮಾಜ ಹಾಳಾಗುತ್ತೆ - ಯತೀಂದ್ರ ಸಿದ್ದರಾಮಯ್ಯ

ನಗರಾಭಿವೃದ್ಧಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ಆರ್‌ಎಸ್‌ಎಸ್‌ ಅನ್ನು ಸಾವಿರ ಹೆಡೆಗಳ ವಿಷ ಸರ್ಪಕ್ಕೆ ಹೋಲಿಸಿ ವಿವಾದ ಸೃಷ್ಟಿಸಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಭಾಷಣ ಮಾಡಿದ್ದ ವೇದಿಕೆ ಶುದ್ಧೀಕರಣ ಖಂಡಿಸಿ ಮೈಸೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ, ಆರ್‌ಎಸ್‌ಎಸ್‌ ಜಾತಿವಾದ ಮತ್ತು ಮನುವಾದವನ್ನು ಹರಡುತ್ತಿದೆ ಎಂದು ಅವರು ತೀವ್ರ ವಾಗ್ದಾಳಿ ನಡೆಸಿದರು.
Read Full Story