ವಿಜಯನಗರ ಜಿಲ್ಲೆಯ ಕೊಟ್ಟೂರಿನಲ್ಲಿ, ತಂಗಿಯ ಪ್ರೀತಿ ಮತ್ತು ಗರ್ಭಿಣಿ ಎಂಬ ವಿಚಾರದಿಂದ ಮರ್ಯಾದೆಗೆ ಅಂಜಿ ಅಣ್ಣನೊಬ್ಬ ತನ್ನ ತಂದೆ-ತಾಯಿ ಹಾಗೂ ತಂಗಿಯನ್ನು ಹತ್ಯೆ ಮಾಡಿದ್ದಾನೆ. ಆದರೆ, ಇದೀಗ ಆತ ಪೊಲೀಸರ ಮುಂದೆ 3 ಕೊಲೆಯಲ್ಲ, 4 ಕೊಲೆ ಮಾಡಿದ್ದಾಗಿ ಬಾಯಿ ಬಿಟ್ಟಿದ್ದಾನೆ.
- Home
- News
- State
- Karnataka News Live: ಕೊಟ್ಟೂರು ಮರ್ಯಾದೆಗೇಡು ಹತ್ಯೆ ಕೇಸಿಗೆ ಬಿಗ್ ಟ್ವಿಸ್ಟ್; ಕೊಲೆಯಾಗಿದ್ದು 3 ಆದ್ರೆ ಸತ್ತಿದ್ದು ನಾಲ್ವರು!
Karnataka News Live: ಕೊಟ್ಟೂರು ಮರ್ಯಾದೆಗೇಡು ಹತ್ಯೆ ಕೇಸಿಗೆ ಬಿಗ್ ಟ್ವಿಸ್ಟ್; ಕೊಲೆಯಾಗಿದ್ದು 3 ಆದ್ರೆ ಸತ್ತಿದ್ದು ನಾಲ್ವರು!

ಬೆಳಗಾವಿ: ಮಾಜಿ ಸಚಿವ ಲಕ್ಷ್ಮಣ ಸವದಿಗೂ ನಮಗೂ ಮುಸುಕಿನ ಗುದ್ದಾಟವಿಲ್ಲ, ಓಪನ್ ಗುದ್ದಾಟ ಎಂದು ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಬಹಿರಂಗವಾಗಿಯೇ ಹೇಳಿದರು. ಬೆಳಗಾವಿಯ ಅಥಣಿ ತಾಲೂಕಿನ ಕೆಂಪವಾಡದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಲಕ್ಷ್ಮಣ ಸವದಿ ಅವರ ಬಗ್ಗೆ ಮಾತನಾಡಿದರೆ ಹೊರಗಿನವರು ಎಂದು ಹೇಳುತ್ತಾರೆ. ಆದ್ದರಿಂದ, ನನ್ನ ಹಿತೈಷಿಗಳು ನನಗೆ ಅಥಣಿಯಲ್ಲಿ ಮಾತನಾಡಬಾರದು ಎಂದು ಹೇಳಿದ್ದಾರೆ. ಇದರ ಬಗ್ಗೆ ಈಗ ಮಾತನಾಡದೇ ಚುನಾವಣೆ ಸಂದರ್ಭದಲ್ಲಿ ಎಳೆಎಳೆಯಾಗಿ ಮಾತನಾಡುತ್ತೇನೆ ಎಂದರು.
ಸವದಿ ಬಿಜೆಪಿಗೆ ಬರುತ್ತಾರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿ, ನಮ್ಮಲ್ಲೇ ಘಟಾನುಘಟಿ ನಾಯಕರು ಇರುವಾಗ ಅಂಥವರ ಅವಶ್ಯಕತೆ ನಮಗಿಲ್ಲ. ನನಗಂತೂ ಮೊದಲೇ ಅವಶ್ಯಕತೆ ಇಲ್ಲ, ಹೈಕಮಾಂಡ್ಗೆ ಬೇಕಾದರೆ ನಾವೇನೂ ಹೇಳಕ್ಕಾಗಲ್ಲ ಎಂದರು.
Karnataka News Live 1 February 2026ಕೊಟ್ಟೂರು ಮರ್ಯಾದೆಗೇಡು ಹತ್ಯೆ ಕೇಸಿಗೆ ಬಿಗ್ ಟ್ವಿಸ್ಟ್; ಕೊಲೆಯಾಗಿದ್ದು 3 ಆದ್ರೆ ಸತ್ತಿದ್ದು ನಾಲ್ವರು!
Karnataka News Live 1 February 2026ಅಕ್ಕ ನಿನ್ ಗಂಡ್ ಹೆಂಗಿರಬೇಕು? ಶಂಕ್ರಣ್ಣಂಗೆ ಇರ್ಬೇಕೆಂದ್ರು ಸೀರಿಯಲ್ ನೋಡುವ ಲೇಡಿಸ್!
Karnataka News Live 1 February 2026500 ಜನರಿಗಾಗಿ 50 ಲಕ್ಷ ಖರ್ಚು ಮಾಡಿದ ರಾಮ್ ಚರಣ್! ಕೊಟ್ಟ ಮಾತು ಉಳಿಸಿಕೊಂಡ ಮೆಗಾ ಪವರ್ ಸ್ಟಾರ್
ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಮತ್ತೊಮ್ಮೆ ತಮ್ಮ ಒಳ್ಳೆಯ ಮನಸ್ಸನ್ನು ಸಾಬೀತುಪಡಿಸಿದ್ದಾರೆ. ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ. ಮೆಗಾಸ್ಟಾರ್ ಚಿರಂಜೀವಿಗೆ ತಕ್ಕ ಮಗ ಎನಿಸಿಕೊಂಡಿದ್ದಾರೆ. ಅಷ್ಟಕ್ಕೂ ಅವರು ಏನು ಮಾಡಿದ್ದಾರೆ ಗೊತ್ತಾ?
Karnataka News Live 1 February 2026Vijay Devarakonda, Rashmika Mandanna ಮುಚ್ಚಿಟ್ಟಿದ್ದ ಮಹಾಸತ್ಯವನ್ನು ಬಯಲು ಮಾಡಿದ್ರಾ ಆ ಹುಡುಗಿಯರು?
Vijay Devarakonda, Rashmika Mandanna News: ನಟಿ ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ ಮದುವೆ ಬಗ್ಗೆ ಊಹಾಪೋಹಗಳು ಹರಡುತ್ತಿವೆ. ಹೀಗಿರುವಾಗ ಇಬ್ಬರು ಹುಡುಗಿಯರು ಮಾಡಿದ ವಿಡಿಯೋವೊಂದು ಈಗ ಇನ್ನೊಂದಿಷ್ಟು ಅನುಮಾನವನ್ನು ಸೃಷ್ಟಿಸಿದೆ. ಏನದು?
Karnataka News Live 1 February 2026400 ಕೋಟಿ ದರೋಡೆ ಕೇಸ್ನಲ್ಲಿ ಬಿಗ್ ಟ್ವಿಸ್ಟ್; 35 ಕೋಟಿ ತೋರಿಸಲು ಮುಂದಾಯ್ತಾ SIT?
400 ಕೋಟಿ ರೂಪಾಯಿ ದರೋಡೆ ಪ್ರಕರಣವು ರೋಚಕ ತಿರುವು ಪಡೆದುಕೊಂಡಿದೆ. ದೂರುದಾರ ಸಂದೀಪ್ ಪಾಟೀಲ್, ತನಿಖೆ ನಡೆಸುತ್ತಿರುವ ಎಸ್ಐಟಿ ವಿರುದ್ಧವೇ ಪ್ರಕರಣವನ್ನು ಮುಚ್ಚಿಹಾಕುವ ಆರೋಪ ಮಾಡಿದ್ದಾರೆ. ಈ ನಡುವೆ, ಹಣದ ಮಾಲೀಕ ಎನ್ನಲಾದ ಬಿಲ್ಡರ್ ಕಿಶೋರ್ ಶೇಠ್ ಪೊಲೀಸರಿಗೆ ಶರಣಾಗಿದ್ದಾರೆ.
Karnataka News Live 1 February 2026ಮನೆಯಲ್ಲಿ ಗಂಡು ಮೊಮ್ಮಗು ಇಲ್ಲ ಎಂದು ಕೊರಗಿದ್ದ ಚಿರಂಜೀವಿ; ಅವಳಿ ಮಕ್ಕಳಿಗೆ ತಂದೆಯಾದ Ram Charan Teja, Upasana
Actor Ram Charan Teja Upasana Twins Babies: ನಟ ರಾಮ್ ಚರಣ್ ತೇಜ ಹಾಗೂ ಉಪಾಸನಾ ಕುಟುಂಬಕ್ಕೆ ಇನ್ನಿಬ್ಬರ ಆಗಮನ ಆಗಿದೆ. ಹೌದು, ಈ ದಂಪತಿ ಅವಳಿ ಮಕ್ಕಳಿಗೆ ಪಾಲಕರಾಗಿದ್ದಾರೆ. ಒಟ್ಟಿನಲ್ಲಿ ಚಿರಂಜೀವಿ ಕುಟುಂಬದಲ್ಲಿ ಖುಷಿ ಮನೆ ಮಾಡಿದೆ.
Karnataka News Live 1 February 2026ರಾಜಕೀಯದ ಜಂಜಾಟದ ನಡುವೆ ಸಿ.ಟಿ ರವಿಗೆ ಡಾಕ್ಟರೇಟ್ ಕಿರೀಟ! ಪಿಎಚ್ಡಿ ಮಂಡಿಸಿದ ಪ್ರಬಂಧವಿದು
ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಮತ್ತು ಕೆ.ಜಿ.ಎಫ್ ಶಾಸಕಿ ರೂಪಕಲಾ ಎಂ. ಶಶಿಧರ್ ಅವರು ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ 21ನೇ ಘಟಿಕೋತ್ಸವದಲ್ಲಿ ರಾಜ್ಯಪಾಲರಿಂದ ಪಿಎಚ್ಡಿ ಪದವಿ ಸ್ವೀಕರಿಸಿದರು.
Karnataka News Live 1 February 2026Indian Railways - ಶಿವರಾತ್ರಿ ಪ್ರಯುಕ್ತ ಯಶವಂತಪುರ-ಮಡಗಾಂವ್ ನಡುವೆ ವಿಶೇಷ ರೈಲು ಸಂಚಾರ
Shivaratri festival train service: ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ಪ್ರಯಾಣಿಕರ ದಟ್ಟಣೆ ನಿವಾರಿಸಲು, ನೈಋತ್ಯ ರೈಲ್ವೆಯು ಯಶವಂತಪುರ ಮತ್ತು ಗೋವಾದ ಮಡಗಾಂವ್ ನಡುವೆ ವಿಶೇಷ ರೈಲು ಸಂಚಾರವನ್ನು ಘೋಷಿಸಿದೆ.
Karnataka News Live 1 February 2026ಮಲಪ್ರಭಾ ಡ್ಯಾಂನಿಂದ ಕೃಷಿಗೆ ಹರಿಸುವ ನೀರು ಬಂದ್ ಮಾಡುವ ದಿನಾಂಕ ಪ್ರಕಟಿಸಿದ ಇಲಾಖೆ
Karnataka News Live 1 February 2026ತಿರುಪತಿ ಲಡ್ಡು ತಯಾರಿಕೆಗೆ ಬಳಸುವ ತುಪ್ಪದಲ್ಲಿ ಗೋಮಾಂಸ ಇತ್ತು ಎಂದ ತೆಲುಗುದೇಶಂ
ತಿರುಪತಿ ಲಡ್ಡು ತಯಾರಿಕೆಗೆ ಬಳಸುವ ತುಪ್ಪದಲ್ಲಿ ಗೋಮಾಂಸದ ಅಂಶಗಳಿವೆ ಎಂದು ಟಿಡಿಪಿ ಆರೋಪಿಸಿದೆ. 2022 ಮತ್ತು 2023ರ ಪ್ರಯೋಗಾಲಯ ವರದಿಗಳು ತುಪ್ಪ ಕಲಬೆರಕೆಯಾಗಿದ್ದು, ಪ್ರಾಣಿಜನ್ಯ ಅಂಶಗಳನ್ನು ಹೊಂದಿದೆ ಎಂದು ದೃಢಪಡಿಸಿವೆ ಎಂದು ಆಡಳಿತಾರೂಢ ಪಕ್ಷ ಹೇಳಿದೆ.
Karnataka News Live 1 February 2026ಬಂಡೀಪುರ ರಕ್ಷಿತಾರಣ್ಯದಲ್ಲಿ ಸುರಂಗ ಮಾರ್ಗ ನಿರ್ಮಾಣಕ್ಕೆ ವಿರೋಧ! ಕಾನೂನುಬಾಹಿರ ಕೆಲಸ ಮಾಡುವವರಿಗೆ ಆಸಕ್ತಿ?
ಕೇರಳ ಸಂಪರ್ಕಕ್ಕಾಗಿ ಬಂಡೀಪುರ ಅರಣ್ಯದಲ್ಲಿ ಸುರಂಗ ಮಾರ್ಗ ನಿರ್ಮಿಸಲು ಕೇಂದ್ರ ಸರ್ಕಾರ ತಜ್ಞರ ಸಮಿತಿ ರಚಿಸಿರುವುದಕ್ಕೆ ಪರಿಸರವಾದಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದು ಸುಪ್ರೀಂಕೋರ್ಟ್ ಆದೇಶದ ಉಲ್ಲಂಘನೆ ಮತ್ತು ಜೀವವೈವಿಧ್ಯಕ್ಕೆ ಮಾರಕವಾಗಿದ್ದು, ಹೋರಾಟದ ಎಚ್ಚರಿಕೆ ನೀಡಿದ್ದಾರೆ.
Karnataka News Live 1 February 2026Bagalkote - ಪ್ರತಿ ಕ್ವಿಂಟಲ್ಗೆ 5875 ರೂ.ನಂತೆ ಕಡಲೆಕಾಳು ಖರೀದಿ ಆರಂಭ - ಷರತ್ತು ಅನ್ವಯ
ಬಾಗಲಕೋಟೆ ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿನ ಕಡಲೆಕಾಳನ್ನು ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಪ್ರತಿ ಕ್ವಿಂಟಲ್ಗೆ ₹5,875 ರಂತೆ ಖರೀದಿಸಲಾಗುತ್ತಿದೆ. ಪ್ರತಿ ರೈತರಿಂದ ಗರಿಷ್ಠ 40 ಕ್ವಿಂಟಲ್ ಕಡಲೆ ಖರೀದಿಸಲಾಗುತ್ತಿದೆ.
Karnataka News Live 1 February 2026ದಾವೋಸ್ ರಹಸ್ಯ - ಕರ್ನಾಟಕಕ್ಕೆ ಸಿಕ್ಕಿದ್ದೇನು? 2ನೇ ಸ್ತರದ ನಗರಗಳತ್ತ ಹಲವು ಕಂಪನಿಗಳ ಆಸಕ್ತಿ!
ದಾವೋಸ್ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆ ಸಮಾವೇಶವು ರಾಜ್ಯಕ್ಕೆ ಹೊಸ ಹೂಡಿಕೆಗಳನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರ ಪ್ರಕಾರ, ಆಹಾರ ಸಂಸ್ಕರಣೆ, ಶುದ್ಧ ಇಂಧನ, ಮತ್ತು ಡೇಟಾ ಕೇಂದ್ರಗಳಂತಹ ವಲಯಗಳಲ್ಲಿ ಹಲವು ಜಾಗತಿಕ ಕಂಪನಿಗಳು ಹೂಡಿಕೆ ಮಾಡಲು ಒಲವು ತೋರಿವೆ.
Karnataka News Live 1 February 2026ಮಕ್ಕಳು ಚರಂಡಿ ನೀರಿನಲ್ಲಿ ತಟ್ಟೆ ತೊಳೆದ ಪ್ರಕರಣ - ಸಮರ್ಪಕ ಉತ್ತರ ನೀಡದ ಶಿಕ್ಷಕಿಗೆ ಶಿಕ್ಷೆ
ಜಮಖಂಡಿ ತಾಲೂಕಿನ ಆಲಬಾಳ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮಕ್ಕಳು ಚರಂಡಿ ನೀರಿನಲ್ಲಿ ತಟ್ಟೆ ತೊಳೆದ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಹಶಿಕ್ಷಕಿ ನಂದಾ ಕುಲಕರ್ಣಿ ಅವರನ್ನು ಅಮಾನತುಗೊಳಿಸಲಾಗಿದೆ.
Karnataka News Live 1 February 2026Union Budget 2026 - ಬಜೆಟ್ ಅರ್ಥ ಆಗ್ಬೇಕಾ? ಮೊದಲು ಇದನ್ನು ಓದಿ
Meaning and explanation of terms related to economics: ಬಜೆಟ್ ಮಂಡನೆಯಲ್ಲಿ ಬಳಸಲಾಗುವ ಜಿಡಿಪಿ, ವಿತ್ತೀಯ ಕೊರತೆ, ನೇರ ಮತ್ತು ಪರೋಕ್ಷ ತೆರಿಗೆಗಳಂತಹ ಹಲವಾರು ಆರ್ಥಿಕ ಪದಗಳನ್ನು ಈ ಲೇಖನವು ಸರಳವಾಗಿ ವಿವರಿಸುತ್ತದೆ.