10:59 PM (IST) Nov 14

Karnataka Latest News Live 14 November 2025 Breaking - ಕಲಬುರಗಿ ಅಷ್ಟಗಾ ಗ್ರಾಮದಲ್ಲಿ ಲಘು ಭೂಕಂಪ, 2.0 ತೀವ್ರತೆ ದಾಖಲು

ಕಲಬುರಗಿ ತಾಲೂಕಿನ ಅಷ್ಟಗಾ ಗ್ರಾಮದಲ್ಲಿ ರಿಕ್ಟರ್ ಮಾಪಕದಲ್ಲಿ 2 ರಷ್ಟು ತೀವ್ರತೆಯ ಭೂಕಂಪನ ದಾಖಲಾಗಿದೆ. ಈ ಕಂಪನದ ಪ್ರಮಾಣ ಕಡಿಮೆ ಇದ್ದು, ಜನರ ಗಮನಕ್ಕೆ ಬಂದಿಲ್ಲವಾದರೂ, ಕಳೆದ ತಿಂಗಳು ಚಿಂಚೋಳಿಯಲ್ಲಿ ನಡೆದ ಇದೇ ರೀತಿಯ ಘಟನೆಯ ನಂತರ ಇದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
Read Full Story
10:26 PM (IST) Nov 14

Karnataka Latest News Live 14 November 2025 ಬ್ಲ್ಯಾಕ್‌ಬಕ್‌ ಕಂಪನಿ ಬಳಿಕ ಬೆಳ್ಳಂದೂರಿಗೆ ಗುಡ್‌ಬೈ ಹೇಳಲಿರುವ ಫುಡ್‌ ಡೆಲಿವರಿ ಅಪ್ಲಿಕೇಶನ್‌ ಸ್ವಿಗ್ಗಿ!

ಬೆಳ್ಳಂದೂರಿನಲ್ಲಿ ಒಪ್ಪಂದ ಕೊನೆಗೊಳ್ಳುವುದರಿಂದ, ಸ್ವಿಗ್ಗಿ ವೈಟ್‌ಫೀಲ್ಡ್‌ನಲ್ಲಿ ಉತ್ತಮ ವಿಶಾಲವಾದ ಸ್ಥಳಕ್ಕೆ ಸ್ಥಳಾಂತರಗೊಳ್ಳಲು ಯೋಜಿಸಿದೆ ಮತ್ತು ಸಾಮಾಜಿಕ ಕಾರಣಗಳಿಗಾಗಿ ಉದ್ಯೋಗಿಗಳು ವೈಟ್‌ಫೀಲ್ಡ್ ಅನ್ನು ಬಯಸುತ್ತಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ.

Read Full Story
09:39 PM (IST) Nov 14

Karnataka Latest News Live 14 November 2025 ಅರೆರೆ ಇದೇನಿದು Karna Serial ಟ್ವಿಸ್ಟ್​? ಫ್ಯಾನ್ಸ್​ ಆಸೆಯಂತೆ ನಿತ್ಯಾ-ನಿಧಿ ಇಬ್ರನ್ನೂ ಮದ್ವೆಯಾಗಿ ಬಿಟ್ನಾ?

'ಕರ್ಣ' ಧಾರಾವಾಹಿಯಲ್ಲಿ ನಿಧಿ ಮತ್ತು ನಿತ್ಯಾ ಇಬ್ಬರನ್ನೂ ನಿಭಾಯಿಸಲು ಕರ್ಣ ಹೆಣಗಾಡುತ್ತಿದ್ದಾನೆ. ಇದರ ನಡುವೆಯೇ ಇಬ್ಬರ ಜೊತೆಗೂ ರೊಮ್ಯಾಂಟಿಕ್ ಆಗಿ ಡಾನ್ಸ್ ಮಾಡಿರುವ ವಿಡಿಯೋ ವೈರಲ್ ಆಗಿದ್ದು, ಇದು ತುಮಕೂರಿನಲ್ಲಿ ನಡೆದ 'ಸೀರಿಯಲ್ ಸಂತೆ' ಕಾರ್ಯಕ್ರಮದ ಝಲಕ್ ಆಗಿದೆ.
Read Full Story
09:20 PM (IST) Nov 14

Karnataka Latest News Live 14 November 2025 ಅಶ್ವಿನಿ ಗೌಡ ಪ್ಲಾನ್‌ಗಳನ್ನು ಫೇಲ್ ಮಾಡಿದ್ದೇಗೆ ರಕ್ಷಿತಾ ಶೆಟ್ಟಿ? ತುಳು ಬೆಡಗಿ ಆಟಕ್ಕೆ ಫ್ಯಾನ್ಸ್ ಫಿದಾ

Rakshitha Shetty Bigg Boss strategy: ಅಶ್ವಿನಿ ಗೌಡರ ಪ್ಲಾನ್‌ಗಳನ್ನು ವಿಫಲಗೊಳಿಸಿ, ರಘು ನಾಮಿನೇಷನ್‌ಗೆ ಕಾರಣ ವಿವರಿಸುವ ಮೂಲಕ ರಕ್ಷಿತಾ ತಮ್ಮ ಸ್ಮಾರ್ಟ್ ಆಟದಿಂದ ಎಲ್ಲರ ಲೆಕ್ಕಾಚಾರವನ್ನು ತಲೆಕೆಳಗು ಮಾಡಿದ್ದಾರೆ ಎಂದು ಚರ್ಚೆಯಾಗುತ್ತಿದೆ.

Read Full Story
08:38 PM (IST) Nov 14

Karnataka Latest News Live 14 November 2025 'ಸಾಲುಮರದ ತಿಮ್ಮಕ್ಕ ನಿಧನ ಹಿನ್ನಲೆಯಲ್ಲಿ ಶಾಲೆ-ಕಾಲೇಜುಗಳಿಗೆ ರಜೆ..' ಸುದ್ದಿ ನಿಜವೋ? ಸುಳ್ಳೋ?

Salumarada Thimmakka Death Holiday Karnataka Govt Clarifies ಸಾಲುಮರದ ತಿಮ್ಮಕ್ಕನವರ ನಿಧನದ ಕುರಿತು ಹಾಗೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂಬ ಸುಳ್ಳು ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. 

Read Full Story
08:02 PM (IST) Nov 14

Karnataka Latest News Live 14 November 2025 ವಿಮಾನದ ಫೋಟೋ ತೆಗೆಯಲು ಹೋಗಿ ದುರಂತ - ದುಬೈನ ಗಗನಚುಂಬಿ ಕಟ್ಟಡದಿಂದ ಬಿದ್ದು ಕೇರಳದ ಹುಡುಗ ಸಾವು

Kerala Teenage boy died in Dubai: ದುಬೈನ ಗಗನಚುಂಬಿ ಕಟ್ಟಡದಿಂದ ಕೆಳಗೆ ಬಿದ್ದು, ಕೇರಳದ 19 ವರ್ಷದ ತರುಣನೋರ್ವ ದಾರುಣವಾಗಿ ಸಾವನ್ನಪ್ಪಿದ ಆಘಾತಕಾರಿ ಘಟನೆ ದುಬೈನಲ್ಲಿ ನಡೆದಿದೆ. ಯುಎಇಗೆ ಪ್ರವಾಸಕ್ಕೆಂದು ಭೇಟಿ ನೀಡಿದ ಈ ಬಾಲಕ ಕೇರಳದ ಕೋಯಿಕೋಡ್ ನಿವಾಸಿಯಾಗಿದ್ದಾನೆ.

Read Full Story
07:41 PM (IST) Nov 14

Karnataka Latest News Live 14 November 2025 ಹುಲಿಕಲ್‌ನಲ್ಲೇ ಅಂತ್ಯಸಂಸ್ಕಾರ ಮಾಡಿ; ಸಾಲುಮರದ ತಿಮ್ಮಕ್ಕ ಪಾರ್ಥೀವ ಶರೀರ ತಡೆದು ಗ್ರಾಮಸ್ಥರು!

Saalumarada Thimmakka passes away: ಶತಾಯುಷಿ ಸಾಲುಮರದ ತಿಮ್ಮಕ್ಕ (114) ನಿಧನರಾಗಿದ್ದು, ಅವರ ಅಂತ್ಯಕ್ರಿಯೆ ಸ್ಥಳದ ಬಗ್ಗೆ ಗೊಂದಲ ಉಂಟಾಗಿದೆ. ತಿಮ್ಮಕ್ಕನ ಕೊನೆ ಆಸೆಯಂತೆ ಹುಲಿಕಲ್‌ನಲ್ಲೇ ಅಂತ್ಯಸಂಸ್ಕಾರ ನಡೆಸಬೇಕೆಂದು ಗ್ರಾಮಸ್ಥರು ಪಟ್ಟು ಹಿಡಿದು, ಪಾರ್ಥಿವ ಶರೀರವನ್ನು ತಡೆದಿದ್ದಾರೆ.

Read Full Story
07:11 PM (IST) Nov 14

Karnataka Latest News Live 14 November 2025 Bigg Bossನಲ್ಲಿ ಸ್ಕ್ರಿಪ್ಟೆಡ್ಡಾ? Suvarna TVಗೆ ಬಹುದೊಡ್ಡ ಗುಟ್ಟು ರಿವೀಲ್​ ಮಾಡಿದ ಭಾವನಾ ಬೆಳಗೆರೆ

ಮಾಜಿ ಬಿಗ್​ಬಾಸ್​ ಸ್ಪರ್ಧಿ ಭಾವನಾ ಬೆಳಗೆರೆ ಅವರು, ಬಿಗ್​ಬಾಸ್​ ಸ್ಕ್ರಿಪ್ಟೆಡ್ ಎನ್ನುವ ಆರೋಪದ ಬಗ್ಗೆ ಸುವರ್ಣ ಟಿವಿಯ ಬೆಂಗಳೂರು ಬಜ್​ಗೆ ನೀಡಿರೋ ಸಂದರ್ಶನದಲ್ಲಿ ಸ್ಪಷ್ಟನೆ ನೀಡಿದ್ದಾರೆ. ಅಲ್ಲಿ ನಡೆಯುವುದು ಏನು, ಸ್ಕ್ರಿಪ್ಟೆಡ್​ ಆಗುವುದು ಏನು ಎಲ್ಲವನ್ನೂ ಮುಚ್ಚುಮರೆಯಿಲ್ಲದೇ ವಿವರಿಸಿದ್ದಾರೆ. 

Read Full Story
07:00 PM (IST) Nov 14

Karnataka Latest News Live 14 November 2025 ಎರಡನೇ ಬೆಳೆಗೆ ನೀರಿಲ್ಲ, ಟಿಬಿ ಡ್ಯಾಂ ಸಮಿತಿ ನಿರ್ಣಯ, ಮತ್ತೊಂದು ಹೋರಾಟಕ್ಕೆ ಅನ್ನದಾತ ಸಜ್ಜು, ನಾಳೆ ಬಿಜೆಪಿ ಮಹತ್ವದ ಸಭೆ

ತುಂಗಭದ್ರಾ ಡ್ಯಾಂ ಗೇಟ್ ದುರಸ್ತಿ ನೆಪದಲ್ಲಿ ಎರಡನೇ ಬೆಳೆಗೆ ನೀರು ಬಿಡದಿರಲು ನೀರಾವರಿ ಸಲಹಾ ಸಮಿತಿ ನಿರ್ಧರಿಸಿದೆ. ಈ ನಿರ್ಧಾರದಿಂದ ಕೊಪ್ಪಳ, ರಾಯಚೂರು, ವಿಜಯನಗರ ಭಾಗದ ಲಕ್ಷಾಂತರ ರೈತರು ಆತಂಕಕ್ಕೊಳಗಾಗಿದ್ದು, ರೈತ ಸಂಘಟನೆಗಳು ಮತ್ತು ಬಿಜೆಪಿ ತೀವ್ರ ಹೋರಾಟದ ಎಚ್ಚರಿಕೆ ನೀಡಿವೆ.
Read Full Story
06:58 PM (IST) Nov 14

Karnataka Latest News Live 14 November 2025 ಡಿವೋರ್ಸ್‌ ಪ್ರಕರಣದಲ್ಲಿ ಪತ್ನಿಗೆ 664 ಕೋಟಿ ರೂ. ಪರಿಹಾರ ನೀಡುವಂತೆ ಉದ್ಯಮಿಗೆ ಕೋರ್ಟ್ ಆದೇಶ

15 ವರ್ಷಗಳ ಹಿಂದಿನ ವಿಚ್ಛೇದನ ಪ್ರಕರಣವೊಂದರಲ್ಲಿ ಪತ್ನಿಗೆ 664 ಕೋಟಿ ರೂಗಳ ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶಿಸಿದೆ. ಚೀನಾದ ವಾರೆನ್ ಬಫೆಟ್ ಎಂದೇ ಖ್ಯಾತಿ ಪಡೆದಿದ್ದ ಶ್ರೀಮಂತ ಉದ್ಯಮಿ ಝಾವೋ ಬಿಂಗ್ಕ್ಸಿಯಾನ್ ಹಾಗೂ ಅವರ ಪತ್ನಿ ನಡುವಿನ ಡಿವೋರ್ಸ್ ಕೇಸ್ ಇದಾಗಿದೆ.

Read Full Story
06:08 PM (IST) Nov 14

Karnataka Latest News Live 14 November 2025 ಹಸಿರಲ್ಲಿ ಉಸಿರಾದ ಸಾಲುಮರದ ತಿಮ್ಮಕ್ಕನಿಗೆ ಹೀಗೊಂದು ಯಕ್ಷನಮನ- ಗೀತೆಯಲ್ಲೇ ಸಾಧನೆಯ ಸ್ಮರಣ

'ವೃಕ್ಷಮಾತೆ' ಖ್ಯಾತಿಯ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಸಾಲುಮರದ ತಿಮ್ಮಕ್ಕನವರು 114ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಮಕ್ಕಳಿಲ್ಲದ ದುಃಖ ಮರೆಯಲು ರಸ್ತೆ ಬದಿ ಸಸಿಗಳನ್ನು ನೆಟ್ಟು ಬೆಳೆಸಿದ್ದ ಅವರಿಗೆ ಯಕ್ಷಗಾನದ ಮೂಲಕ ವಿಶಿಷ್ಟ ನಮನ ಸಲ್ಲಿಸಲಾಗಿದೆ.
Read Full Story
05:58 PM (IST) Nov 14

Karnataka Latest News Live 14 November 2025 ಆನೇಕಲ್ - ಸಿಲಿಕಾನ್ ಸಿಟಿಯಲ್ಲಿ ನಿಲ್ಲದ ರೋಡ್ ರೇಜ್; ಸೈಡ್ ಕೊಡದ್ದಕ್ಕೆ ನಡುರಸ್ತೆಯಲ್ಲೇ ಚಾಲಕನ ಮೇಲೆ ಹಲ್ಲೆ

Bengaluru road rage incident: ಬೆಂಗಳೂರಿನ ಬೊಮ್ಮಸಂದ್ರದ ಬಳಿ ಸೈಡ್ ಕೊಡಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಬೈಕ್ ಸವಾರನೊಬ್ಬ ಬೊಲೆರೋ ಪಿಕಪ್ ಚಾಲಕನ ಮೇಲೆ ನಡುರಸ್ತೆಯಲ್ಲೇ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಬೆಂಗಳೂರು-ಹೊಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಈ ಘಟನೆಯ ದೃಶ್ಯಗಳು ವೈರಲ್ ಆಗಿವೆ.

Read Full Story
05:23 PM (IST) Nov 14

Karnataka Latest News Live 14 November 2025 ಕಲಬುರಗಿ - ಕಾಂಗ್ರೆಸ್ ನಾಶಕ್ಕೆ ರಾಹುಲ್ ಗಾಂಧಿ ಒಬ್ಬರೇ ಸಾಕು

ಬಿಹಾರ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟದ ಐತಿಹಾಸಿಕ ಗೆಲುವಿನ ಹಿನ್ನೆಲೆಯಲ್ಲಿ ಬಿಜೆಪಿ ವಿಜಯೋತ್ಸವ ಆಚರಿಸಿದೆ. ಮತಗಳ್ಳತನದ ಸುಳ್ಳು ಸುದ್ದಿ ಹರಡಿದ ಕಾಂಗ್ರೆಸ್ ಹಾಗೂ ರಾಹುಲ್ ಗಾಂಧಿಗೆ ಬಿಹಾರದ ಜನರು ತಕ್ಕ ಪಾಠ ಕಲಿಸಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಅಶೋಕ್ ಬಗಲಿ ಹೇಳಿದ್ದಾರೆ.
Read Full Story
05:22 PM (IST) Nov 14

Karnataka Latest News Live 14 November 2025 Brahmagantu - ದೀಪಾಗೆ ಅಗ್ನಿ ಪರೀಕ್ಷೆ! ಅವಳೇ ದಿಶಾ ಎನ್ನೋ ಗುಟ್ಟು ಸೌಂದರ್ಯಾಗೆ ತಿಳಿದುಹೋಯ್ತಾ?

ಬ್ರಹ್ಮಗಂಟು ಧಾರಾವಾಹಿಯಲ್ಲಿ, ದಿಶಾಳಾಗಿ ನಟಿಸುತ್ತಿರುವ ದೀಪಾಳನ್ನು ಸಂಕಷ್ಟಕ್ಕೆ ಸಿಲುಕಿಸಲು ಸೌಂದರ್ಯ ವಿಫಲಳಾಗುತ್ತಿದ್ದಾಳೆ. ಇದೀಗ, ಬ್ಲೌಸ್ ಹೊಲಿಸುವ ನೆಪದಲ್ಲಿ ದೀಪಾಳ ಅಂಗಡಿಗೆ ಭೇಟಿ ನೀಡಲು ಸೌಂದರ್ಯ ನಿರ್ಧರಿಸಿದ್ದಾಳೆ. ಸೌಂದರ್ಯಳ ಈ ನಿಗೂಢ ನಡೆಯು ಕುತೂಹಲವನ್ನು ಸೃಷ್ಟಿಸಿದೆ.

Read Full Story
05:14 PM (IST) Nov 14

Karnataka Latest News Live 14 November 2025 ವಿಂಡ್‌ಶೀಲ್ಡ್‌ನಲ್ಲಿ ಬಿರುಕು - ರನ್‌ವೇಯಾಗಿ ಬದಲಾದ ಹೈವೇ - ಹೆದ್ದಾರಿಯಲ್ಲೇ ವಿಮಾನ ತುರ್ತು ಲ್ಯಾಂಡಿಂಗ್

ತಾಂತ್ರಿಕ ಸಮಸ್ಯೆಯಿಂದಾಗಿ ತರಬೇತಿ ವಿಮಾನವೊಂದು ರಾಷ್ಟ್ರೀಯ ಹೆದ್ದಾರಿಯಲ್ಲೇ ತುರ್ತು ಲ್ಯಾಂಡಿಂಗ್ ಆದಂತಹ ಘಟನೆ ನಡೆದಿದೆ. ಆಕಾಶದಲ್ಲಿ ಹಾರಾಡುತ್ತಿದ್ದ ವೇಳೆ ಈ ತರಬೇತಿ ವಿಮಾನದ ವಿಂಡ್‌ಶೀಲ್ಡ್‌ನಲ್ಲಿ ಬಿರುಕು ಕಾಣಿಸಿಕೊಂಡ ಹಿನ್ನೆಲೆ ವಿಮಾನವೂ ಹೆದ್ದಾರಿಯಲ್ಲೇ ಇಳಿದಿದೆ.

Read Full Story
04:56 PM (IST) Nov 14

Karnataka Latest News Live 14 November 2025 ಸೋಲಲ್ಲೂ ತಮ್ಮ ಗೆಲುವು ಕಂಡ ಸಿಎಂ ಸಿದ್ದು, ಅಹಿಂದ ನಾಯಕನ ಕುರ್ಚಿ ಗಟ್ಟಿ ಮಾಡಿದ ಬಿಹಾರ ರಿಸಲ್ಟ್‌!

ಬಿಹಾರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಕಳಪೆ ಪ್ರದರ್ಶನವು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ಥಾನವನ್ನು ಅನಿರೀಕ್ಷಿತವಾಗಿ ಬಲಪಡಿಸಿದೆ. ಅಹಿಂದ ಮತಬ್ಯಾಂಕ್ ಕಳೆದುಕೊಳ್ಳುವ ಭೀತಿಯಿಂದ ಹೈಕಮಾಂಡ್, ಡಿಕೆ ಶಿವಕುಮಾರ್ ಅವರನ್ನು ಸಿಎಂ ಮಾಡುವ ನಿರ್ಧಾರದಿಂದ ಹಿಂದೆ ಸರಿಯುವ ಸಾಧ್ಯತೆಯಿದೆ.

Read Full Story
04:38 PM (IST) Nov 14

Karnataka Latest News Live 14 November 2025 Bigg Boss ಮನೆಯಿಂದ ಹೊರಹಾಕಲು ವೀಕ್ಷಕರ ಬದಲು ಅಲ್ಲಿಯೇ ಜನರ ಕರೆಸಿ ಮತ ಚಲಾವಣೆ - ಸ್ಪರ್ಧಿ ಶಾಕಿಂಗ್​ ಹೇಳಿಕೆ!

ಬಿಗ್ ಬಾಸ್‌ನಲ್ಲಿ ಫೈನಲಿಸ್ಟ್ ಆಗುವೆ ಎನ್ನುವ ಕಾರಣಕ್ಕೆ ಬಿಗ್​ಬಾಸ್​ ಮನೆಯಿಂದ ಹೊರಕ್ಕೆ ಹಾಕಲು ವೀಕ್ಷಕರ ಬದಲು ಅಲ್ಲಿಯೇ ಜನರನ್ನು ಕರೆಸಿ ಮತ ಚಲಾಯಿಸಲಾಗಿತ್ತು ಎಂಬ ಬಹು ದೊಡ್ಡ ಆರೋಪವನ್ನು ಸ್ಪರ್ಧಿಯೊಬ್ಬರು ಮಾಡಿದ್ದಾರೆ. ಅವರು ಹೇಳಿದ್ದೇನು? 

Read Full Story
03:37 PM (IST) Nov 14

Karnataka Latest News Live 14 November 2025 'ಮೋದಿಯನ್ನು ವರ್ಷಪೂರ್ತಿ ವಿರೋಧಿಸ್ತೇವೆ ನಿಜ' ಎಂದ ಮುಸ್ಲಿಂ IT Cell ಬಾಂಬ್​ ಬ್ಲಾಸ್ಟ್​ ಕುರಿತು ಹೇಳಿದ್ದೇನು?

ದೆಹಲಿಯ ಕೆಂಪುಕೋಟೆಯಲ್ಲಿ ನಡೆದ ಬಾಂಬ್ ಸ್ಫೋಟವು ರಾಜಕೀಯ ಆರೋಪ-ಪ್ರತ್ಯಾರೋಪಗಳಿಗೆ ಕಾರಣವಾಗಿದೆ. ಈ ನಡುವೆ, ಮುಸ್ಲಿಂ ಐಟಿ ಸೆಟ್ ಒಂದು ಶಾಂತಿಯುತವಾಗಿರಲು ಮನವಿ ಮಾಡಿದ್ದು, ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧದ ಚರ್ಚೆಯನ್ನು ಹುಟ್ಟುಹಾಕಿದೆ.
Read Full Story
02:57 PM (IST) Nov 14

Karnataka Latest News Live 14 November 2025 Bigg Boss Kannada 12 - ಬಿಗ್‌ ಬಾಸ್ ಮನೆಯಲ್ಲಿ ಮೊದಲ ಬಾರಿಗೆ ಗಿಲ್ಲಿ ನಟ ರೋಸ್ಟ್

ಬಿಗ್‌ಬಾಸ್ ಸೀಸನ್ 12ರ ಸ್ಪರ್ಧಿ ಗಿಲ್ಲಿ ನಟ, ಈಜುಕೊಳದ ಟಾಸ್ಕ್ ವೇಳೆ ಸ್ವತಃ ಬಿಗ್‌ಬಾಸ್‌ನಿಂದಲೇ ರೋಸ್ಟ್ ಆಗಿದ್ದಾರೆ. ಇದರ ಜೊತೆಗೆ, ಸಹ ಸ್ಪರ್ಧಿಗಳಾದ ರಿಷಾ ಗೌಡ ಮತ್ತು ಕಾವ್ಯಾ ಶೈವ ಜೊತೆಗಿನ ಅವರ ಸಂಬಂಧದಲ್ಲಿನ ಬಿರುಕಿನ ಬಗ್ಗೆಯೂ ಈ ಲೇಖನ ಬೆಳಕು ಚೆಲ್ಲುತ್ತದೆ.
Read Full Story
02:51 PM (IST) Nov 14

Karnataka Latest News Live 14 November 2025 ನಾಯಿ ಕಚ್ಚಿದ್ದಕ್ಕೆ ಚಿಕಿತ್ಸೆ ಪಡೆಯದೇ ನಿರ್ಲ್ಷಕ್ಯ - 3 ತಿಂಗಳ ಬಳಿಕ ರೇಬೀಸ್‌ಗೆ ಯುವಕ ಬಲಿ

Rebbis death: ನಾಯಿ ಕಚ್ಚಿದ 3 ತಿಂಗಳ ನಂತರ ಯುವಕನೋರ್ವ ರೇಬೀಸ್‌ಗೆ ಬಲಿಯಾದ ಘಟನೆ ನಡೆದಿದೆ. ಮೂರು ತಿಂಗಳ ಹಿಂದೆ ಅಯ್ಯಪ್ಪನ್ ಅವರಿಗೆ ನಾಯಿ ಕಚ್ಚಿತ್ತು. ಆದರೆ ಅವರು ನಾಯಿ ಕಚ್ಚಿದ್ದನ್ನು ನಿರ್ಲಕ್ಷಿಸಿ ಚಿಕಿತ್ಸೆ ಪಡೆಯಲೇ ಇಲ್ಲ, ಪರಿಣಾಮ ನಾಯಿ ಕಚ್ಚಿದ ಮೂರು ತಿಂಗಳ ನಂತರ ಅವರ ಸಾವು ಸಂಭವಿಸಿದೆ.

Read Full Story