
ರಾಜಕಾರಣ ಮಾಡಲೆಂದೇ ಬೆಂಗಳೂರಿಗೆ ಬಂದಿದ್ದ ಹುಡುಗ, ಹಠದಲ್ಲಿ ಗೆದ್ದೇ ಬಿಟ್ಟ ಛಲಗಾರ ಡಿಕೆ ಶಿವಕುಮಾರ್
ಕನಕಪುರದಿಂದ ಬೆಂಗಳೂರಿಗೆ ಹೊರಟು ನಿಂತ ಆ ಹುಡುಗನ ಕಣ್ಣುಗಳಲ್ಲಿ ಅದೇನೋ ಮಿಂಚು.. ಜಗತ್ತೇ ಎದುರಾಗಿ ನಿಂತ್ರೂ ಎದುರಿಸಬಲ್ಲೆ ಅನ್ನೋ ಆತ್ಮವಿಶ್ವಾಸ.. ಊರು ಬಿಟ್ಟು ಹೊರಟವನಿಗೆ ತಾಯಿ ಒಂದು ಆಶೀರ್ವಾದ ಮಾಡಿ ಕಳುಹಿಸ್ತಾರೆ..
ಡಿಕೆ ಶಿವಕುಮಾರ್ ಅನ್ನೋದು ರಾಜ್ಯ ಕಾಂಗ್ರೆಸ್ ಪಾಲಿಗೆ ಆನೆಬಲ, ಭೀಮಬಲ.. ಒಬ್ಬ ಸಾಮಾನ್ಯ ಕಾರ್ಯಕರ್ತ.. ಪಕ್ಷದ ಧ್ವಜ ಹಿಡಿದು ನಿಂತ ಕಾರ್ಯಕರ್ತನೊಬ್ಬ ರಾಜ್ಯದ ಮುಖ್ಯಮಂತ್ರಿಯಾಗ್ತಾನೆ ಅಂದ್ರೆ, ಅದು ಕಾರ್ಯಕರ್ತನ ಗೆಲುವು.45 ವರ್ಷಗಳ ರಾಜಕಾರಣ.. ಜಿದ್ದಾಜಿದ್ದಿ, ಸೋಲು-ಗೆಲುವು, ಏಳು-ಬೀಳು.. ಎದ್ದು ಬಿದ್ದು, ಬಿದ್ದು ಎದ್ದು.. ಮೇಲೆದ್ದು ನಿಂತ ಡಿಕೆ, ಈಗ ರಾಜ್ಯದ ಮುಖ್ಯಮಂತ್ರಿ.. ಈ ಪ್ರಯಾಣ ಶುರುವಾಗಿದ್ದು ಇದು ಶುರುವಾಗಿದ್ದು 48 ವರ್ಷಗಳ ಹಿಂದೆ.. ಆ ದಿನ ದೊಡ್ಡಾಲಹಳ್ಳಿಯಿಂದ ಹೊರಟು ನಿಂತಿದ್ದ ಆ ಹುಡುಗ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ