11:01 PM (IST) Feb 20

India Latest News Live:ಬೆಂಗಳೂರಲ್ಲಿ ಹುಟ್ಟಿದ ಇಶಾನಿ ಜೋಹರ್‌ ಜೊತೆಗಿನ Divorce ಬೆನ್ನಲ್ಲಿಯೇ ಟ್ರೆಂಡ್‌ ಆದ ರಾಹುಲ್‌ ಜಾತಿ!

ಭಾರತೀಯ ಕ್ರಿಕೆಟಿಗ ರಾಹುಲ್ ಚಾಹರ್ ತಮ್ಮ ಪತ್ನಿ ಇಶಾನಿ ಜೋಹರ್ ಅವರಿಂದ ವಿಚ್ಛೇದನ ಪಡೆದಿದ್ದಾರೆ. ಈ ಬೇರ್ಪಡೆಯ ನಂತರ, ಅವರ ಜಾಟ್ ಸಮುದಾಯದ ಹಿನ್ನೆಲೆ, ಕುಟುಂಬ ಮತ್ತು ವಿವಾಹದ ಕುರಿತ ಚರ್ಚೆಗಳು ಮುನ್ನೆಲೆಗೆ ಬಂದಿವೆ. 

Read Full Story
10:48 PM (IST) Feb 20

India Latest News Live:ಕಾಂಗ್ರೆಸ್ Topless brainless shameless - ಎಐ ಶೃಂಗಸಭೆಯಲ್ಲಿ 'ಕೈ' ಟಾಪ್‌ಲೆಸ್‌ ಪ್ರತಿಭಟನೆಗೆ ಬಿಜೆಪಿ ಆಕ್ರೋಶ

ಜಾಗತಿಕ ಎಐ ಶೃಂಗಸಭೆಯಲ್ಲಿ, ಕಾಂಗ್ರೆಸ್ ಯುವ ಕಾರ್ಯಕರ್ತರು ಪ್ರಧಾನಿ ಮೋದಿ ವಿರುದ್ಧ ಘೋಷಣೆ ಕೂಗಿ ಟಾಪ್‌ಲೆಸ್ ಪ್ರತಿಭಟನೆ ನಡೆಸಿದರು. ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ ಬಿಜೆಪಿ, ಇದು ವಿಶ್ವ ವೇದಿಕೆಯಲ್ಲಿ ಭಾರತವನ್ನು ಮುಜುಗರಕ್ಕೀಡು ಮಾಡಲು ವ್ಯವಸ್ಥಿತವಾಗಿ ರೂಪಿಸಿದ ಸಂಚು ಎಂದು ಆರೋಪಿಸಿದೆ.

Read Full Story
10:35 PM (IST) Feb 20

India Latest News Live:ಕಪ್‌ಗಿಂತ ಬ್ರೇಕಪ್‌ಗಳೇ ಜಾಸ್ತಿ! 26ನೇ ವರ್ಷಕ್ಕೆ ಮದುವೆಗೆ ಗುಡ್‌ಬೈ ಹೇಳಿದ ಮತ್ತೊಬ್ಬ ಟೀಮ್‌ ಇಂಡಿಯಾ ಕ್ರಿಕೆಟಿಗ!

From Hardik to Rahul Chahar: Indian Cricketers Who Recently Divorced ಭಾರತೀಯ ಕ್ರಿಕೆಟ್‌ನಲ್ಲಿ ವಿಚ್ಛೇದನದ ಪರ್ವ ಮುಂದುವರೆದಿದೆ. ರಾಹುಲ್ ಚಹರ್, ಶಿಖರ್ ಧವನ್, ಹಾರ್ದಿಕ್ ಪಾಂಡ್ಯ ಸೇರಿದಂತೆ ಹಲವು ಪ್ರಮುಖ ಆಟಗಾರರು ತಮ್ಮ ಪತ್ನಿಯರಿಂದ ಬೇರ್ಪಟ್ಟಿದ್ದು, ಅವರ ವೈವಾಹಿಕ ವಿವರಗಳು ಇಲ್ಲಿವೆ.

Read Full Story
09:55 PM (IST) Feb 20

India Latest News Live:ಹಿಂದಿ ಉತ್ತೇಜಿಸಿದರೆ ಎಲ್ಲಾ ಭಾಷೆಗಳಿಗೂ ಬಲ, ಇವು ಒಂದೇ ತಾಯಿಯ ಮಕ್ಕಳು - ಅಮಿತ್‌ ಶಾ

ಅಗರ್ತಲಾದಲ್ಲಿ ನಡೆದ ರಾಜಭಾಷಾ ಸಮ್ಮೇಳನದಲ್ಲಿ, ಹಿಂದಿ ಭಾಷೆಯನ್ನು ಉತ್ತೇಜಿಸುವುದರಿಂದ ಪ್ರಾದೇಶಿಕ ಭಾಷೆಗಳು ದುರ್ಬಲಗೊಳ್ಳುವುದಿಲ್ಲ, ಬದಲಾಗಿ ಗಟ್ಟಿಗೊಳ್ಳುತ್ತವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸ್ಪಷ್ಟಪಡಿಸಿದ್ದಾರೆ. 

Read Full Story
09:42 PM (IST) Feb 20

India Latest News Live:ಕಲಬುರಗಿ - ಪರೀಕ್ಷೆಯಲ್ಲಿ ನಕಲು ಪ್ರಶ್ನಿಸಿದ್ದಕ್ಕೆ ಪ್ರೊಫೆಸರ್ ಮೇಲೆಯೇ ಹಲ್ಲೆ ಮಾಡಿದ ಮೆಡಿಕಲ್ ವಿದ್ಯಾರ್ಥಿ

ವೈದ್ಯಕೀಯ ವಿದ್ಯಾರ್ಥಿಗಳ ಅಂತರಿಕ ಪರೀಕ್ಷೆಯಲ್ಲಿ ರಾಜಾರೋಷವಾಗಿ ಮೊಬೈಲ್ ಫೋನ್ ಹಿಡಿದುಕೊಂಡು ನಕಲು ಮಾಡುತ್ತಿದ್ದ ವಿದ್ಯಾರ್ಥಿಯನ್ನು ಪ್ರಶ್ನಿಸಿದ್ದಕ್ಕೆ ಸಿಟ್ಟಿಗೆದ್ದ ವಿದ್ಯಾರ್ಥಿ ಕಾಲೇಜಿನ ಪ್ರೊಫೆಸರ್ ಮೇಲೆಯೇ ಹಲ್ಲೆ ಮಾಡಿದಂತಹ ಘಟನೆ ರಾಜ್ಯದ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ.

Read Full Story
09:39 PM (IST) Feb 20

India Latest News Live:ಹೆರಿಗೆ ನೋವು ತಾಳಲಾರದೆ ಚಾಕುವಿನಿಂದ ತನ್ನ ಹೊಟ್ಟೆಯನ್ನೇ ಸೀಳಿಕೊಂಡ ಗರ್ಭಿಣಿ - ಆರೋಗ್ಯವಂತ ಮಗುವಿಗೆ ಜನ್ಮ ನೀಡಿದ ತಾಯಿ!

ಉತ್ತರ ಪ್ರದೇಶದ ಬಹ್ರೈಚ್‌ನಲ್ಲಿ, ತೀವ್ರ ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿಯೊಬ್ಬಳು ಸಹಾಯಕ್ಕೆ ಯಾರೂ ಇಲ್ಲದ ಕಾರಣ ಚಾಕುವಿನಿಂದ ತನ್ನ ಹೊಟ್ಟೆಯನ್ನೇ ಸೀಳಿಕೊಂಡಿದ್ದಾಳೆ. ಈ ಆಘಾತಕಾರಿ ಘಟನೆಯ ನಂತರವೂ ಆಕೆ ಆರೋಗ್ಯವಂತ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

Read Full Story
09:16 PM (IST) Feb 20

India Latest News Live:ಏಪ್ರಿಲ್ 1 ರಿಂದ ಟೋಲ್ ಪ್ಲಾಜಾದಲ್ಲಿ ನಗದು ಸ್ವೀಕಾರ ಬಂದ್? ಸಂಪೂರ್ಣ ಡಿಜಿಟಲ್ ಪಾವತಿಗೆ NHAI ಮಾಸ್ಟರ್ ಪ್ಲಾನ್!

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (NHAI) 2026 ರಿಂದ ದೇಶಾದ್ಯಂತ ಟೋಲ್ ಪ್ಲಾಜಾಗಳಲ್ಲಿ ನಗದು ವಹಿವಾಟುಗಳನ್ನು ಸಂಪೂರ್ಣವಾಗಿ ನಿಲ್ಲಿಸಲು ಯೋಜಿಸುತ್ತಿದೆ. ಈ ಕ್ರಮದಿಂದ, ಎಲ್ಲಾ ಪಾವತಿಗಳನ್ನು ಫಾಸ್ಟ್‌ಟ್ಯಾಗ್ ಮತ್ತು ಯುಪಿಐ ಮೂಲಕ ಡಿಜಿಟಲ್ ಆಗಿ ಮಾಡಲಾಗುತ್ತದೆ.

Read Full Story
08:54 PM (IST) Feb 20

India Latest News Live:Breaking - ಜಗತ್ತಿನ ಮೇಲೆ ಟ್ರಂಪ್‌ ವಿಧಿಸಿರುವ ಸುಂಕ ಅಸಿಂಧುಗೊಳಿಸಿದ ಅಮೆರಿಕ ಸುಪ್ರೀಂ ಕೋರ್ಟ್!

ಅಮೆರಿಕದ ಸುಪ್ರೀಂ ಕೋರ್ಟ್, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವ್ಯಾಪಾರ ಸುಂಕದ ಆದೇಶಗಳನ್ನು 'ಅಕ್ರಮ' ಎಂದು ಘೋಷಿಸಿ ರದ್ದುಗೊಳಿಸಿದೆ. ಈ ತೀರ್ಪು ಅಧ್ಯಕ್ಷರ ಕಾರ್ಯನಿರ್ವಾಹಕ ಅಧಿಕಾರದ ವ್ಯಾಪ್ತಿಯನ್ನು ಪ್ರಶ್ನಿಸಿದೆ.

Read Full Story
08:24 PM (IST) Feb 20

India Latest News Live:ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಭವಿಷ್ಯ ಹೇಳಿದ ಪಾಕ್ ಮಾಜಿ ವೇಗಿ, ಸೆಮಿಫೈಲ್ ಟ್ವಿಸ್ಟ್

ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಭವಿಷ್ಯ ಹೇಳಿದ ಪಾಕ್ ಮಾಜಿ ವೇಗಿ, ಸೂಪರ್ 8 ಹಂತದಲ್ಲಿ ಭಾರತದ ಏನಾಗಲಿದೆ ಅನ್ನೋದನ್ನು ಪಾಕ್ ಮಾಜಿ ವೇಗಿ ಹೇಳಿದ್ದಾರೆ. ಸೆಮಿಫೈನಲ್‌ಗೂ ಮೊದಲು ಟ್ವಿಸ್ಟ್ ಕೊಟ್ಟಿದ್ದಾರೆ.

Read Full Story
08:16 PM (IST) Feb 20

India Latest News Live:ಅಮ್ಮನ ಅಂಬಾರಿ - ಮೇವಿನ ಹೊರೆಯ ಜೊತೆ ಮಗನನ್ನು ಕಟ್ಟಿ ತಲೆಯ ಮೇಲಿಟ್ಟು ಸಾಗಿದ ತಾಯಿ

ಹಳ್ಳಿಯ ತಾಯಿಯೊಬ್ಬಳು ತನ್ನ ಮಗುವನ್ನು ಹುಲ್ಲಿನ ಹೊರೆಯೊಳಗೆ ಇಟ್ಟು ಹೊತ್ತು ಸಾಗುತ್ತಿರುವ ವೀಡಿಯೋವೊಂದು ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದೆ. ಈ ದೃಶ್ಯವು ಗ್ರಾಮೀಣ ಮಹಿಳೆಯರ ಕಷ್ಟಕರ ಜೀವನ ಮತ್ತು ಅಚಲವಾದ ಮಾತೃಪ್ರೇಮವನ್ನು ಬಿಂಬಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಜನರ ಮನ ಕಲಕಿದೆ.
Read Full Story
07:30 PM (IST) Feb 20

India Latest News Live:ಡೇಟಿಂಗ್ ಆ್ಯಪ್ ಬಿಡಿ ಸಿಂಗಾಪುರ ಆಂಟಿ ಮೇಲೆ ನಂಬಿಕೆ ಇಡಿ, ಏನಿದು 4 ರಾತ್ರಿಯ ಟೂರ್ ಆಫರ್?

ಡೇಟಿಂಗ್ ಆ್ಯಪ್ ಬಿಡಿ ಸಿಂಗಾಪುರ ಆಂಟಿ ಮೇಲೆ ನಂಬಿಕೆ ಇಡಿ, ಇಷ್ಟೇ ನೋಡಿ, ಆಂಟಿಯರ ಜೊತೆ ನಾಲ್ಕು ರಾತ್ರಿಗಳ ಟೂರ್ ಆಫರ್, ಉನ್ನತ ಹೊಟೆಲ್‌ನಲ್ಲಿ ವಾಸ್ತವ್ಯ ಸೇರಿ ಹಲವು ಆತಿಥ್ಯ. ಏನಿದು ಮ್ಯಾಚ್ ಮೇಕಿಂಗ್ ಟೂರ್ ಆಫರ್?

Read Full Story
07:26 PM (IST) Feb 20

India Latest News Live:ಭೂಮಿಯತ್ತ ಬರುತ್ತಿವೆ 15 ಸಾವಿರ ಸಿಟಿ ಕಿಲ್ಲರ್ಸ್‌, ಅವುಗಳನ್ನು ತಡೆಯುವ ಯಾವುದೇ ದಾರಿ ಇಲ್ಲ - ನಾಸಾ ವಾರ್ನಿಂಗ್‌

ನಾಸಾದ ಗ್ರಹ ರಕ್ಷಣಾ ಮುಖ್ಯಸ್ಥರಾದ ಕೆಲ್ಲಿ ಫಾಸ್ಟ್, ಭೂಮಿಯತ್ತ ಬರುತ್ತಿರುವ ಸುಮಾರು 15,000 ಪತ್ತೆಹಚ್ಚಲಾಗದ ಕ್ಷುದ್ರಗ್ರಹಗಳ ಬಗ್ಗೆ ಎಚ್ಚರಿಸಿದ್ದಾರೆ. ಈ 'ಸಿಟಿ ಕಿಲ್ಲರ್'ಗಳು ಯಾವುದೇ ನಗರವನ್ನು ನಾಶಪಡಿಸುವ ಸಾಮರ್ಥ್ಯ ಹೊಂದಿದ್ದು, ಅವುಗಳನ್ನು ತಡೆಯಲು ನಮ್ಮ ಬಳಿ ತಂತ್ರಜ್ಞಾನವಿಲ್ಲ ಎಂದಿದ್ದಾರೆ.

Read Full Story
06:59 PM (IST) Feb 20

India Latest News Live:ಕಲ್ಪನಾ ಚಾವ್ಲಾ ರೀತಿಯಲ್ಲೇ ಸುನೀತಾ ವಿಲಿಯಮ್ಸ್‌ ಸಾವಾಗುತ್ತಿತ್ತು - ಶಾಕಿಂಗ್‌ ಸತ್ಯ ಒಪ್ಪಿಕೊಂಡ NASA

ಸುನೀತಾ ವಿಲಿಯಮ್ಸ್ ಅವರ ಬೋಯಿಂಗ್ ಬಾಹ್ಯಾಕಾಶ ಯಾನ ವಿಫಲವಾಗಿದ್ದು, ನಾಸಾ ಇದನ್ನು 'ಟೈಪ್ ಎ' ದುರಂತ ಎಂದು ಘೋಷಿಸಿದೆ. ಕೊಲಂಬಿಯಾ ದುರಂತದಂತೆಯೇ ಎಂಜಿನಿಯರಿಂಗ್ ಮತ್ತು ನಾಯಕತ್ವದ ವೈಫಲ್ಯಗಳೇ ಇದಕ್ಕೆ ಕಾರಣ ಎಂದು ವರದಿ ಹೇಳಿದೆ.

Read Full Story
06:42 PM (IST) Feb 20

India Latest News Live:ನಾವು ದೇಶಕ್ಕಾಗಿ ಹೋರಾಡಿದೆವು ಆದರೆ ದೇಶ ನಮ್ಮ ಕೈ ಬಿಟ್ಟಿತು - ಬಲೂಚ್‌ ಹೋರಾಟಗಾರರ ಕೈಗೆ ಸಿಕ್ಕಿದ ಪಾಕ್ ಯೋಧರ ಅಳಲು

ಬಲೂಚ್ ಲಿಬರೇಶನ್ ಆರ್ಮಿ (ಬಿಎಲ್‌ಎ) ಪಾಕಿಸ್ತಾನದ ಏಳು ಸೈನಿಕರನ್ನು ಸೆರೆಹಿಡಿದು ವೀಡಿಯೋ ಬಿಡುಗಡೆ ಮಾಡಿದೆ. ಈ ವೀಡಿಯೋದಲ್ಲಿ, ಯೋಧರು ತಮ್ಮನ್ನು ರಕ್ಷಿಸುವಂತೆ ಪಾಕ್ ಸರ್ಕಾರವನ್ನು ಕೋರುತ್ತಿದ್ದರೆ, ಪಾಕಿಸ್ತಾನ ಸರ್ಕಾರ ಮಾತ್ರ ಆ ಸೈನಿಕರು ನಮ್ಮವರಲ್ಲ ಎಂದು ಹೇಳಿ ಕೈತೊಳೆದುಕೊಂಡಿದೆ. 

Read Full Story
06:40 PM (IST) Feb 20

India Latest News Live:ರಶ್ಮಿಕಾ ಮದುವೆ - ನ್ಯಾಷನಲ್‌ ಕ್ರಶ್‌ ರೇಸ್‌ನಲ್ಲಿ ಇಬ್ಬರು ಕನ್ನಡತಿಯರ ಎಂಟ್ರಿ! ಯಾರಾಗ್ತಾರೆ ಮುಂದಿನ ನ್ಯಾಷನಲ್ ಕ್ರಶ್?

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅವರ ಮದುವೆಯ ನಂತರ, ಅವರ ಸ್ಥಾನವನ್ನು ಯಾರು ತುಂಬಲಿದ್ದಾರೆ ಎಂಬ ಚರ್ಚೆ ಶುರುವಾಗಿದೆ. ಈ ರೇಸ್‌ನಲ್ಲಿ 'ಕಾಂತಾರ' ಖ್ಯಾತಿಯ ರುಕ್ಮಿಣಿ ವಸಂತ್ ಮತ್ತು ಟಾಲಿವುಡ್‌ನಲ್ಲಿ ಮಿಂಚುತ್ತಿರುವ ಶ್ರೀಲೀಲಾ ಮುಂಚೂಣಿಯಲ್ಲಿದ್ದಾರೆ.

Read Full Story
06:30 PM (IST) Feb 20

India Latest News Live:ಲವ್ ಸೈಕಾಲಜಿ - ಹುಡುಗಿಯರು ಹುಡುಗರಿಂದ ಬಯಸೋದು ಇದನ್ನೇ ನೋಡಿ! ಲವ್ ಮಾಡೋ ಹುಡುಗರಿಗಿದು ಗೊತ್ತಿರಲೇಬೇಕು

ಪ್ರೀತಿ ಅನ್ನೋದು ನೋಡೋಕೆ ಸಿಂಪಲ್ ಅನಿಸಿದ್ರೂ, ಅದರೊಳಗೊಂದು ಬೇರೆಯೇ ಪ್ರಪಂಚ ಇರುತ್ತೆ. ಅದರಲ್ಲೂ ಹುಡುಗಿಯರು, ಹುಡುಗರಿಂದ ನಿಜವಾಗ್ಲೂ ಏನು ಬಯಸುತ್ತಾರೆ ಅನ್ನೋ ಪ್ರಶ್ನೆ ಎಲ್ಲರಲ್ಲೂ ಇರುತ್ತೆ. ಮನಶಾಸ್ತ್ರದ ಪ್ರಕಾರ, ಹುಡುಗರಲ್ಲಿರುವ ಯಾವ ಗುಣಗಳು ಹುಡುಗಿಯರ ಮನಸ್ಸಲ್ಲಿ ವಿಶೇಷ ಸ್ಥಾನವಿರುತ್ತೆ ನೋಡೋಣ.

Read Full Story
06:21 PM (IST) Feb 20

India Latest News Live:ಸಂಜು ಸ್ಯಾಮ್ಸನ್ ಬೇಡವೇ ಬೇಡ, ಅಭಿಷೇಕ್ ಶರ್ಮಾ ಇರಲಿ! ಆತ ಡಕ್ ಆದ್ರೂ ಪರವಾಗಿಲ್ಲ ಎಂದ ಮಾಜಿ ಕ್ರಿಕೆಟಿಗ

ಟಿ20 ವಿಶ್ವಕಪ್‌ನ ಸೂಪರ್ 8 ಹಂತದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯಕ್ಕೆ ಅಭಿಷೇಕ್ ಶರ್ಮಾರನ್ನೇ ತಂಡದಲ್ಲಿ ಉಳಿಸಿಕೊಳ್ಳಬೇಕು ಎಂದು ಮಾಜಿ ಆಟಗಾರ ಆಕಾಶ್ ಚೋಪ್ರಾ ಹೇಳಿದ್ದಾರೆ. ಸತತ ಮೂರು ಮ್ಯಾಚ್‌ಗಳಲ್ಲಿ ಡಕೌಟ್ ಆಗಿದ್ರೂ, ಚೋಪ್ರಾ ಅಭಿಷೇಕ್‌ಗೆ ಬೆಂಬಲ ಸೂಚಿಸಿದ್ದಾರೆ.

Read Full Story
06:18 PM (IST) Feb 20

India Latest News Live:4.5 ಲಕ್ಷ ರೂಪಾಯಿಗೆ ಲಾಂಚ್‌ ಆದ ಎಲೆಕ್ಟ್ರಿಕ್‌ ಸ್ಕೂಟರ್‌ ಮೇಲೆ 2 ಲಕ್ಷ ರೂಪಾಯಿ ಡಿಸ್ಕೌಂಟ್‌ ಘೋಷಿಸಿದ BMW

BMW ಮೋಟೊರಾಡ್ ಇಂಡಿಯಾ ತನ್ನ ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್ CE 02 ಅನ್ನು ₹4.50 ಲಕ್ಷ ಬೆಲೆಯಲ್ಲಿ ಬಿಡುಗಡೆ ಮಾಡಿತ್ತು. ನಿರೀಕ್ಷಿತ ಮಾರಾಟ ಕಾಣದ ಕಾರಣ, ಡೀಲರ್‌ಶಿಪ್ ಮಟ್ಟದಲ್ಲಿ ಈಗ ₹2 ಲಕ್ಷಗಳ ಭಾರಿ ರಿಯಾಯಿತಿಯೊಂದಿಗೆ ಇದನ್ನು ಮಾರಾಟ ಮಾಡಲಾಗುತ್ತಿದೆ. 

Read Full Story
06:18 PM (IST) Feb 20

India Latest News Live:ತೂಕ ಇಳಿಕೆಗೆ ಸಖತ್ ಡೇಂಜರ್ ಪ್ಲಾಸ್ಟಿಕ್ ತಿನ್ನೋ ಡಯಟ್ ಭಾರಿ ವೈರಲ್, ಏನಂತಾರೆ ತಜ್ಞ ವೈದ್ಯರು?

ತೂಕ ಇಳಿಕೆಗೆ ಸಖತ್ ಡೇಂಜರ್ ಪ್ಲಾಸ್ಟಿಕ್ ತಿನ್ನೋ ಡಯಟ್ ಭಾರಿ ವೈರಲ್, ತಕ್ಷಣವೇ ತೂಕ ಇಳಿಕೆಯಾಗಬೇಕು, ಫ್ಯಾಟ್ ಕಡಿಮೆಯಾಗಬೇಕು ಅನ್ನೋ ಮಂದಿ ಈ ವಿಧಾನ ಅನುಸರಿಸುತ್ತಿದ್ದಾರೆ. ತಜ್ಞರು ಹೇಳೋದೇನು?

Read Full Story
05:54 PM (IST) Feb 20

India Latest News Live:ರಾಜಕೀಯಕ್ಕೆ ಎಂಟ್ರಿಕೊಟ್ಟ ಬಿಗ್ ಬಾಸ್ ವಿನ್ನರ್, ಬಿಜೆಪಿ ನೇತೃತ್ವದ ಎನ್‌ಡಿಎ ಮಿತ್ರ ಪಕ್ಷಕ್ಕೆ ಸೇರ್ಪಡೆ

ರಾಜಕೀಯಕ್ಕೆ ಎಂಟ್ರಿಕೊಟ್ಟ ಬಿಗ್ ಬಾಸ್ ವಿನ್ನರ್, ಬರಲ್ಲ, ಆಗಲ್ಲ ಎನ್ನುತ್ತಿದ್ದ ಬಿಗ್ ಬಾಸ್ ಕಿರೀಟ ಗೆದ್ದ ಸ್ಪರ್ಧಿ ಇದೀಗ ಬಿಜೆಪಿ ನೇತೃತ್ವದ ಎನ್‌ಡಿಎ ಮಿತ್ರ ಪಕ್ಷ ಸೇರಿಕೊಂಡಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಗೂ ಸ್ಪರ್ಧಿಸುತ್ತಿದ್ದಾರೆ.

Read Full Story