LIVE NOW
India Latest News Live: ವಿಜಯ್-ರಶ್ಮಿಕಾ ಮದುವೆ ರೂಮರ್ಸ್ ಒಂದೆರಡಲ್ಲ! ಸಿಎಂ ಕೂಡಾ ಭಾಗಿ?

ಸಾರಾಂಶ
ತಿರುಮಲ ಲಡ್ಡು ಪ್ರಸಾದಕ್ಕೆ ಬಳಸುವ ತುಪ್ಪದಲ್ಲಿ ಕಲಬೆರಕೆಯಾಗಿದೆ ಅನ್ನೋ ಆರೋಪಕ್ಕೆ ಸಂಬಂಧಿಸಿದಂತೆ ವೈಎಸ್ಆರ್ ಕಾಂಗ್ರೆಸ್ ಪಕ್ಷದ (YSRCP) ಮುಖ್ಯಸ್ಥ ಜಗನ್ ಮೋಹನ್ ರೆಡ್ಡಿ ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ. ಈ ಇಡೀ ಪ್ರಕರಣದಲ್ಲಿ ತಮ್ಮ ಪಕ್ಷದ ಯಾವುದೇ ಪಾತ್ರವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
11:19 AM (IST) Feb 20
India Latest News Live:ವಿಜಯ್-ರಶ್ಮಿಕಾ ಮದುವೆ ರೂಮರ್ಸ್ ಒಂದೆರಡಲ್ಲ! ಸಿಎಂ ಕೂಡಾ ಭಾಗಿ?
ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಮದುವೆ ಸುದ್ದಿ ಜೋರಾಗಿದೆ. ಫೆಬ್ರವರಿ 26 ರಂದು ಇವರಿಬ್ಬರ ವಿವಾಹ ನಡೆಯಲಿದೆ ಎನ್ನಲಾಗ್ತಿದೆ. ಅಷ್ಟೇ ಅಲ್ಲ, ಅದಕ್ಕೂ ಮುನ್ನ ನಡೆಯುವ ಹಲ್ದಿ, ಸಂಗೀತ ಕಾರ್ಯಕ್ರಮಗಳ ದಿನಾಂಕ ಯಾವುದು ಗೊತ್ತಾ? ಈ ಜೋಡಿಯ ಮದುವೆ ಸಂಭ್ರಮ ಯಾವಾಗ ಶುರುವಾಗಲಿದೆ? ಇಲ್ಲಿದೆ ಮಾಹಿತಿ.
Read Full Story 11:16 AM (IST) Feb 20
India Latest News Live:Ricky Syngkon - ಶಿಲ್ಲಾಂಗ್ ಸಂಸದ ರಿಕಿ ಎಜೆ ಸಿಂಗ್ಕಾನ್ ಹೃದಯಾಘಾತದಿಂದ ನಿಧನ, ಗಣ್ಯರ ಸಂತಾಪ
Ricky Syngkon ಮೇಘಾಲಯದ ಶಿಲ್ಲಾಂಗ್ ಲೋಕಸಭಾ ಕ್ಷೇತ್ರದ ಸಂಸದ ರಿಕಿ ಎಜೆ ಸಿಂಗ್ಕಾನ್ (54) ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರ ಅಕಾಲಿಕ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಲವು ರಾಜಕೀಯ ಗಣ್ಯರು ಕಂಬನಿ ಮಿಡಿದಿದ್ದಾರೆ.
11:05 AM (IST) Feb 20
India Latest News Live:Crime News - ಟಿವಿ ಸೌಂಡ್ ಕಡಿಮೆ ಮಾಡು ಅಂದಿದ್ದಕ್ಕೆ ಗಂಡನನ್ನೇ ಚುಚ್ಚಿ ಕೊಂದ ಹೆಂಡತಿ!
ಆಂಧ್ರಪ್ರದೇಶದ ಅಮರಾವತಿಯಲ್ಲಿ ಟಿವಿ ಸೌಂಡ್ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಗಂಡನಿಗೆ ಚಾಕುವಿನಿಂದ ಇರಿದು ಪತ್ನಿ ಕೊಂದಿದ್ದಾಳೆ. 27 ವರ್ಷದ ಶೇಖ್ ಅಹ್ಮದ್ ಮೃತಪಟ್ಟಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
Read Full Story 10:56 AM (IST) Feb 20
India Latest News Live:T20 World Cup 2026 ಅಭಿಷೇಕ್ಗೆ ಗೇಟ್ಪಾಸ್? ಸಂಜುಗೆ ಚಾನ್ಸ್? ಟೀಂ ಇಂಡಿಯಾದಲ್ಲಿ ಮಹತ್ವದ ಬದಲಾವಣೆ!
ಟಿ20 ವಿಶ್ವಕಪ್ 2026ರ ಸೂಪರ್-8 ಹಂತದ ಪಂದ್ಯದಲ್ಲಿ ಭಾರತ ತಂಡ ಫೆಬ್ರವರಿ 22 ರಂದು ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ. ಸತತ ಮೂರು ಬಾರಿ ಡಕೌಟ್ ಆಗಿರುವ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಬದಲಿಗೆ ಸಂಜು ಸ್ಯಾಮ್ಸನ್ಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಸಿಗುವ ಸಾಧ್ಯತೆ ದಟ್ಟವಾಗಿದೆ.
Read Full Story