11:29 AM (IST) Feb 20

Karnataka News Live:Karnataka Weather - ಬೆಂಕಿ ಬಿಸಿಲಿಗೆ ಬ್ರೇಕ್ ಇಲ್ಲ, ಇಬ್ಬನಿ ಚಳಿಗೆ ಕೊನೆಯಿಲ್ಲ - ಇಂದಿನ ರಾಜ್ಯದ ಹವಾಮಾನ ಹೇಗಿದೆ ಗೊತ್ತಾ?

ಇಂದು ಕರ್ನಾಟಕದಾದ್ಯಂತ ಒಣಹವೆ ಮುಂದುವರಿದಿದೆ. ಆಕಾಶವು ಶುಭ್ರವಾಗಿದ್ದು, ರಾತ್ರಿಗಳು ತಂಪಾಗಿರಲಿವೆ. ಕರಾವಳಿ, ಉತ್ತರ ಮತ್ತು ದಕ್ಷಿಣ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಯಲಿದ್ದು, ವಿಜಯಪುರದಲ್ಲಿ ಕನಿಷ್ಠ ತಾಪಮಾನ 15°C ನಷ್ಟು ಕಡಿಮೆ ದಾಖಲಾಗಿದೆ.

Read Full Story
10:47 AM (IST) Feb 20

Karnataka News Live:ಕಿಮ್ಮನೆ ರತ್ನಾಕರ್ ಆಪ್ತನಿಂದ ಮಹಿಳೆಗೆ ವಂಚನೆ; ಅದಾನಿ ಗ್ರೂಪ್‌ನಿಂದ 100 ಕೋಟಿ ಫಂಡ್ ಕೊಡಿಸೋದಾಗಿ 35 ಲಕ್ಷ ಪಂಗನಾಮ!

ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರ ಆಪ್ತನೆಂದು ಹೇಳಿಕೊಂಡು ಅಮ್ರಪಾಲಿ ಸುರೇಶ್ ಎಂಬಾತ, ಅದಾನಿ ಗ್ರೂಪ್‌ನಿಂದ 100 ಕೋಟಿ ಸಿಎಸ್‌ಆರ್ ಫಂಡ್ ಕೊಡಿಸುವುದಾಗಿ ನಂಬಿಸಿ ಮಹಿಳೆಯೊಬ್ಬರಿಗೆ 35 ಲಕ್ಷ ರೂ. ವಂಚಿಸಿದ್ದಾನೆ. ಈ ಸಂಬಂಧ ಬೆಂಗಳೂರಿನ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read Full Story