ಭಾರತದ ಸುರಕ್ಷಿತ ನಗರ ಯಾವುದು? ಹೈದರಾಬಾದ್ ವಿಶ್ವವಿದ್ಯಾಲಯ ನಡೆಸಿದ ಸರ್ವೆ ಪಟ್ಟಿ ಪ್ರಕಟಗೊಂಡಿದೆ. ವಿಶೇಷ ಅಂದರೆ ಬೆಂಗಳೂರು ನಂ.1 ಸ್ಥಾನ ಪಡೆದುಕೊಂಡಿದೆ. ಇನ್ನು ಅತೀ ಕಡಿಮೆ ಸುರಕ್ಷತೆ ಹೊಂದಿರುವ ನಗರ ಯಾವುದು ಗೊತ್ತಾ?
ಪೂರ್ತಿ ಓದಿ- Home
- News
- India News
- Operation Sindoor Live: ಭಾರತದ ಸುರಕ್ಷಿತ ನಗರ ಪಟ್ಟಿ ಪ್ರಕಟ, ಬೆಂಗಳೂರು ನಂ.1, ಕೊನೆಯ ಸ್ಥಾನ ಯಾರಿಗೆ?
Operation Sindoor Live: ಭಾರತದ ಸುರಕ್ಷಿತ ನಗರ ಪಟ್ಟಿ ಪ್ರಕಟ, ಬೆಂಗಳೂರು ನಂ.1, ಕೊನೆಯ ಸ್ಥಾನ ಯಾರಿಗೆ?

ನವದೆಹಲಿ: 'ಭಾರತ ಮತ್ತು ಪಾಕ್ ನಡುವೆ ಬಾಕಿ ಇರುವ ಏಕೈಕ ವಿಷಯವೆಂದರೆ ಪಾಕ್ ಆಕ್ರಮಿತ ಕಾಶ್ಮೀರವನ್ನು (ಪಿಒಕೆ) ಹಸ್ತಾಂತರಿಸುವುದು ಎಂದು ಎಂದು ಭಾರತದ ವಿದೇಶಾಂಗ ಸಚಿವಾಲಯ ಪುನರುಚ್ಚರಿಸಿದೆ. ಈ ಮೂಲಕ ಪಿಒಕೆ ಖಾಲಿ ಮಾಡಿ ಎಂದು ಪಾಕ್ಗೆ ಭಾರತ ಮತ್ತೆ ಸಂದೇಶ ನೀಡಿದೆ. ಪಾಕಿಸ್ತಾನದಲ್ಲಿ ಅಡಗಿರುವ ಉಗ್ರರ ವಿರುದ್ಧದ ಭಾರತ ಬೃಹತ್ ಸೇನಾ ಕಾರ್ಯಾ ಚರಣೆ ನಡೆಸಿದ ಬಳಿಕ ಇದೇ ಮೊದಲ ಬಾರಿಗೆ ಯೋಧರ ನ್ನುದ್ದೇಶಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, 'ಆಪರೇಷನ್ ಸಿಂದೂರದ ಮೂಲಕ ಪಾಕಿಸ್ತಾನದ ಪಾಲಿಗೆ ಲಕ್ಷ್ಮಣ ರೇಖೆ ಎಳೆಯಲಾಗಿದೆ' ಎಂದು ಹೇಳಿದ್ದಾರೆ. ಈ ಮೂಲಕ, 'ಭಾರತದ ಗಡಿ ದಾಟುವ ದುಸ್ಸಾಹಸಕ್ಕೆ ಕೈ ಹಾಕಿದರೆ ಸರ್ವನಾಶ ಖಚಿತ' ಎಂದು ಪರೋಕ್ಷವಾಗಿ ಎಚ್ಚರಿಸಿದ್ದಾರೆ. ಪಂಜಾಬ್ನ ಆದಂಪುರದ ವಾಯುನೆಲೆಯಲ್ಲಿ ಭಾರತದ ಬಲಿಷ್ಠ ವಾಯು ರಕ್ಷಣಾ ವ್ಯವಸ್ಥೆಯಾದ ರಷ್ಯಾ ನಿರ್ಮಿತ ಎಸ್-400 ಮತ್ತು ಮಿಗ್-29 ಮುಂದೆ ನಿಂತು ಸೈನಿಕರನ್ನು ಉದ್ದೇಶಿಸಿ ಮಾತನಾಡಿದ ಮೋದಿ, 'ನೀವು (ಭಾರತೀಯ ಸೈನಿಕರು) ಮಾಡಿರುವ ಕೆಲಸ ಅಭೂತಪೂರ್ವ, ಆಕಲ್ಪನೀಯ ಮತ್ತು ಅದ್ಭುತ ಎಂದು ಹೇಳಿ ಯೋಧರನ್ನು ಹುರಿದುಂಬಿಸಿದರು.
ಭಾರತದ ಸುರಕ್ಷಿತ ನಗರ ಪಟ್ಟಿ ಪ್ರಕಟ, ಬೆಂಗಳೂರು ನಂ.1, ಕೊನೆಯ ಸ್ಥಾನ ಯಾರಿಗೆ?
ಭಾರತೀಯ ಯೋಧರಿಂದ ನೆಮ್ಮದಿಯಾಗಿ ಮಲಗುತ್ತಿದ್ದೇನೆ, ಭಾರತ ತೊರೆಯಲ್ಲ ಎಂದ ರಷ್ಯಾ ಮಹಿಳೆ
ರಷ್ಯಾ ಮಹಿಳೆಯ ವಿಡಿಯೋ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ಭಾರತೀಯ ಯೋಧರ ಶೌರ್ಯವನ್ನು ರಷ್ಯಾ ಮಹಿಳೆ ಶ್ಲಾಘಿಸಿದ್ದಾರೆ. ಇದೇ ವೇಳೆ ಭಾರತ ನನ್ನ ಶಾಂತಿಯುತ ಮನೆ. ಭಾರತೀಯ ಸೈನಿಕರ ಕಾರಣದಿಂದ ನಾನು ನೆಮ್ಮದಿಯಾಗಿ ಮಲಗುತ್ತಿದ್ದೇನೆ, ದೇಶ ತೊರೆಯುವುದಿಲ್ಲ ಎಂದು ರಷ್ಯಾ ಮಹಿಳೆ ಹೇಳಿದ್ದಾರೆ.
ಪೂರ್ತಿ ಓದಿಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆದು ನಾಯಿ ಮುಟ್ಟದ ಹೆಣವಾದ ಸಂಪತ್! ಹತ್ಯೆಗೈದು ಪ್ರಪಾತಕ್ಕೆ ಎಸೆದ ದುಷ್ಕರ್ಮಿಗಳು!
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆ ಎಸೆದ ಆರೋಪಿ ಸಂಪತ್ನ ಮೃತದೇಹ ಹಾಸನ ಜಿಲ್ಲೆಯ ಕಲ್ಲಹಳ್ಳಿ ಬಳಿಯ ಪ್ರಪಾತದಲ್ಲಿ ಪತ್ತೆಯಾಗಿದೆ. ಕಾರಿನಲ್ಲಿ ರಕ್ತದ ಕಲೆಗಳು ಪತ್ತೆಯಾಗಿದ್ದು, ಬರ್ಬರವಾಗಿ ಹತ್ಯೆ ಮಾಡಿ ಶವವನ್ನು ಪ್ರಪಾತಕ್ಕೆ ಎಸೆದಿರುವ ಶಂಕೆ ವ್ಯಕ್ತವಾಗಿದೆ.
ಪೂರ್ತಿ ಓದಿಕರ್ನಾಟಕ ಸೇರಿ 15 ರಾಜ್ಯಗಳಿಗೆ ಭಾರಿ ಮಳೆ, ಹಮಾಮಾನ ಇಲಾಖೆ ಎಚ್ಚರಿಕೆ
ಕರ್ನಾಟಕ ಸೇರಿದಂತೆ 15 ರಾಜ್ಯಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಕರ್ನಾಟಕದಲ್ಲಿ ಯಾವ ಅಲರ್ಟ್ ಘೋಷಿಸಲಾಗಿದೆ. ಎಲ್ಲೆಲ್ಲಿ ಮಳೆಯಾಗಲಿದೆ?
ಪೂರ್ತಿ ಓದಿಇನ್ನುಳಿದ ಐಪಿಎಲ್ 2025 ಟೂರ್ನಿಗೆ ಪ್ಲೇಯರ್ ರಿಪ್ಲೇಸ್ಮೆಂಟ್ ನಿಯಮ ಬದಲು, ಹೊಸ ರೂಲ್ಸ್
ಇಂಡೋ ಪಾಕ್ ಸಂಘರ್ಷದ ಕಾರಣದಿಂದ ಸ್ಥಗಿತಗೊಂಡ ಐಪಿಎಲ್ ಮೇ.17ರಿಂದ ಆರಂಭಗೊಳ್ಳುತ್ತಿದೆ. ಆದರೆ ಇನ್ನುಳಿದ ಆವೃತ್ತಿಗೆ ಬಿಸಿಸಿಐ ಹೊಸ ನಿಯಮ ಜಾರಿಗೆ ತಂದಿದೆ. ಪ್ಲೇಯರ್ ರಿಪ್ಲೇಸ್ಮೆಂಟ್ ನಿಯಮದಲ್ಲಿ ಮಹತ್ತರ ಬದಲಾವಣೆ ಮಾಡಿದೆ. ಏನಿದು ಹೊಸ ರೂಲ್ಸ್
ಪೂರ್ತಿ ಓದಿಹೆಚ್ಆರ್ ಉದ್ಯೋಗಕ್ಕೆ ಕುತ್ತು, IMBನಲ್ಲಿ 200 ಉದ್ಯೋಗ ಕಡಿತಗೊಳಿಸಿ ಎಐ ಆಟೋಮೇಶನ್ ಬಳಕೆ
ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಇದೀಗ ಹೆಚ್ಆರ್(ಹ್ಯೂಮನ್ ರಿಸೋರ್ಸ್ ) ಉದ್ಯೋಕಕ್ಕೆ ಕುತ್ತು ನೀಡಿದೆ. ಪ್ರತಿಷ್ಠಿತ ಐಬಿಎಂ ಕಂಪನಿಯಲ್ಲಿ ಬರೋಬ್ಬರಿ 200 ಹೆಚ್ಆರ್ ಮ್ಯಾನೇಜರ್ಗಳ ಬದಲು ಇದೀಗ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಬಳಕೆ ಮಾಡಲಾಗಿದೆ.
ಪೂರ್ತಿ ಓದಿಟ್ರೈಲರ್ ಲಾಂಚ್ ಬೆನ್ನಲ್ಲೇ ಶಾಕ್, ಅಮಿರ್ ಖಾನ್ ಸೀತಾರೆ ಜಮೀನ್ ಪರ್ ಚಿತ್ರಕ್ಕೆ ಬಹಿಷ್ಕಾರ ಬಿಸಿ
ಅಮಿರ್ ಖಾನ್ ಅಭಿನಯ, ಅಮೀರ್ ಖಾನ್ ಪ್ರೊಡಕ್ಷನ್ ಸಂಸ್ಥೆ ನಿರ್ಮಾಣ ಮಾಡಿರುವ ಸೀತಾರೆ ಜಮೀನ್ ಪರ್ ಸಿನಿಮಾದ ಟ್ರೇಲರ್ ಲಾಂಚ್ ಆದ ಬೆನ್ನಲ್ಲೇ ಬಾಯ್ಕಾಟ್ ಅಭಿಯಾನ ಆರಂಭಗೊಂಡಿದೆ. ಇದೇ ರೀತಿ ಬಾಯ್ಕಾಟ್ ಅಭಿಯಾನದಿಂದ ಪ್ಲಾಪ್ ಆದ ಲಾಲ್ ಸಿಂಗ್ ಚಡ್ಡಾ ಸಿನಿಮಾ ಬಳಿಕ ತೆರೆ ಮೇಲೆ ಕಾಣಿಸಿಕೊಳ್ಳುತ್ತಿರುವ ಅಮಿರ್ಗೆ ಇದೀಗ ಮತ್ತೊಂದು ಹೊಡೆತ ಬೀಳುವ ಸಾಧ್ಯತೆ ದಟ್ಟವಾಗಿದೆ.
ಪೂರ್ತಿ ಓದಿಗಡಿ ಸಂಘರ್ಷದ ಬೆನ್ನಲ್ಲೇ ಜೈಶಂಕರ್ ಭದ್ರತೆ ಹೆಚ್ಚಳ, 2 ಬುಲೆಟ್ ಪ್ರೂಫ್ ಕಾರಿನ ಜೊತೆ Z ಸೆಕ್ಯೂರಿಟಿ
ಭಾರತ ಹಾಗೂ ಪಾಕಿಸ್ತಾನ ನಡುವೆ ಕದನ ವಿರಾಮ ಘೋಷಣೆಯಾಗಿದ್ದರೂ ಟೆನ್ಶನ್ ಮುಗಿದಿಲ್ಲ. ಪಾಕಿಸ್ತಾನ ಬೆದರಿಕೆ, ಅಂತಾರಾಷ್ಟ್ರೀಯ ಮಟ್ಟದ ಒತ್ತಡವನ್ನು ಸಮರ್ಥವಾಗಿ ಎದುರಿಸಿದ ವಿದೇಶಾಂಗ ಸಚಿವ ಎಸ್ ಜೈಶಂಕರ್ಗೆ ಭದ್ರತೆ ಹೆಚ್ಚಿಸಲಾಗಿದೆ.
ಪೂರ್ತಿ ಓದಿಆಪರೇಷನ್ ಸಿಂದೂರ: ಯಶಸ್ಸಿನ ಕಥೆ ಮತ್ತು ಪರಿಣಾಮಗಳು
ಭಯೋತ್ಪಾದಕ ಪಾಕಿಸ್ತಾನವನ್ನು ಶಿಕ್ಷಿಸಲು ಭಾರತದ ವಿಸ್ಮಯಕಾರಿ ಮಿಲಿಟರಿ ಯೋಜನೆಯಾದ ಆಪರೇಷನ್ ಸಿಂದೂರವನ್ನು ಭದ್ರತಾ ಪಡೆಗಳು ಎರಡು ವಾರಗಳಲ್ಲಿ ಯೋಜಿಸಿ ಕಾರ್ಯಗತಗೊಳಿಸಿದವು. ಈ ಯೋಜನೆಯನ್ನು ಕೆಲವೇ ವಾರಗಳಲ್ಲಿ ಪೂರ್ಣಗೊಳಿಸುವ ಸಾಮರ್ಥ್ಯವನ್ನು ಹಲವು ವರ್ಷಗಳ ಕಾಲ ಎಲ್ಲಾ ಪ್ರತಿಕೂಲತೆ ಮತ್ತು ವಿರೋಧದ ನಡುವೆಯೂ ಅಭಿವೃದ್ಧಿಪಡಿಸಲಾಯಿತು.
ಪೂರ್ತಿ ಓದಿಪಾಕಿಸ್ತಾನ ಮೆತ್ತಗಾದ ಬೆನ್ನಲ್ಲೇ ಚೀನಾದಿಂದ ಕಿರಿಕ್ ಶುರು, ಅರುಣಾಚಲ ಪ್ರದೇಶದಲ್ಲಿ ತಲೆನೋವು
ಕಾಲು ಕೆರೆದು ಬಂದ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ ಬಳಿಕ ಇದೀಗ ತಣ್ಣಗಾಗಿದೆ. ಆದರೆ ಪಾಕಿಸ್ತಾನ ಸೈಲೆಂಟ್ ಆದ ಬೆನ್ನಲ್ಲೇ ಇತ್ತ ಚೀನಾ ಕಿರಿಕ್ ಶುರು ಮಾಡಿದೆ. ಅರುಣಾಚಲ ಪ್ರದೇಶದಲ್ಲಿ ಚೀನಾ ಕಿರಿಕ್ ಆರಂಭಿಸಿದ್ದು, ಭಾರತ ಖಡಕ್ ತಿರುಗೇಟು ನೀಡಿದೆ.
Colonel Sofiya Qureshi ಕುಟುಂಬಸ್ಥರ ಮೇಲೆ ದಾಳಿ ಎಂಬ ಫೇಕ್ ಪೋಸ್ಟ್; ಕ್ರಿಮಿ ಅನೀಸ್ ಉದ್ದೀನ್ ಸ್ಥಳ ಗುರುತು ಪತ್ತೆ!
ಕರ್ನಲ್ ಸೋಫಿಯಾ ಖುರೇಷಿ ಅವರ ಮಾವನ ಮನೆಯನ್ನು ಆರ್ಎಸ್ಎಸ್ ಕಾರ್ಯಕರ್ತರು ದ್ವಂಸಗೊಳಿಸಿದ್ದಾರೆ ಎಂಬ ಸುಳ್ಳು ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಈ ಸುಳ್ಳು ಸುದ್ದಿ ಹಬ್ಬಿಸಿದವನು ಕೆನಡಾದ ಕೊಲಂಬಿಯಾ ನಿವಾಸಿ ಅನೀಸ್ ಉದ್ದೀನ್ ಎಂದು ಬೆಳಗಾವಿ ಪೊಲೀಸರು ತಿಳಿಸಿದ್ದಾರೆ. ಕರ್ನಲ್ ಸೋಫಿಯಾ ಖುರೇಷಿ ಕುಟುಂಬಕ್ಕೆ ಭದ್ರತೆ ಒದಗಿಸಲಾಗಿದೆ.
ಪೂರ್ತಿ ಓದಿOperation Sindoor: ಕ್ಯಾಂಡಲ್ಲೈಟ್ನಿಂದ ಹಿಡಿದು ಬ್ರಹ್ಮೋಸ್ವರೆಗೆ... ಇತಿಹಾಸದ ಪುಟ ತಿರುವಿದಾಗ...
ಪಹಲ್ಗಾಮ್ನಲ್ಲಿ ಹಿಂದೂಗಳನ್ನು ಗುರಿಯಾಗಿಸಿಕೊಂಡು ನಡೆದ ಭಯೋತ್ಪಾದಕ ದಾಳಿಯ ನಂತರ, ಭಾರತವು ಆಪರೇಷನ್ ಸಿಂದೂರವನ್ನು ಪ್ರಾರಂಭಿಸಿತು. ಈ ಕಾರ್ಯಾಚರಣೆಯು ಪಾಕಿಸ್ತಾನದ ಭಯೋತ್ಪಾದನಾ ಮೂಲಸೌಕರ್ಯವನ್ನು ಬಹಿರಂಗಪಡಿಸಿತು ಮತ್ತು ಭಾರತದ ಭಯೋತ್ಪಾದನಾ ವಿರೋಧಿ ಕಾರ್ಯತಂತ್ರದಲ್ಲಿ ಹೊಸ ಯುಗವನ್ನು ತೆರೆಯಿತು.
ಪೂರ್ತಿ ಓದಿಕಾಶ್ಮೀರದ ಪಹಲ್ಗಾಮ್ ಪ್ರವಾಸದಲ್ಲಿ ಸಹೋದ್ಯೋಗಿಯ ಅಪ್ರಾಪ್ತ ಮಗಳನ್ನೇ ರೇಪ್ ಮಾಡಿದ ಶಿಕ್ಷಕ!
ಜಮ್ಮು ಕಾಶ್ಮೀರದ ಪಹಲ್ಗಾಮ್ಗೆ ಪ್ರವಾಸಕ್ಕೆ ಹೋಗಿದ್ದ ಶಿಕ್ಷಕನೊಬ್ಬ ತನ್ನ ಸಹೋದ್ಯೋಗಿಯ 13 ವರ್ಷದ ಮಗಳ ಮೇಲೆ ಅತ್ಯಾಚಾರ ಎಸಗಿ ಪರಾರಿಯಾಗಿದ್ದ. ಎರಡು ವರ್ಷಗಳ ನಂತರ ಕೇರಳದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.
ಪೂರ್ತಿ ಓದಿಅದಂಪುರಕ್ಕೆ ಪ್ರಧಾನಿ ಭೇಟಿ; ಏಪ್ರಿಲ್ 22 ರಿಂದ ಮೇ 12ರವರೆಗೆ ಮೋದಿ ಎಲ್ಲಿದ್ದರು? ಪ್ರಿಯಾಂಕ್ ಖರ್ಗೆ ವಾಗ್ದಾಳಿ
ಪ್ರಧಾನಿ ಮೋದಿ ಆದಂಪುರ ವಾಯುನೆಲೆಯಲ್ಲಿ ಸೈನಿಕರನ್ನು ಭೇಟಿಯಾಗಿ ಧೈರ್ಯ ತುಂಬಿದ್ದಾರೆ. ಪ್ರಿಯಾಂಕ್ ಖರ್ಗೆ ಈ ಕ್ರಮವನ್ನು ಶ್ಲಾಘಿಸಿದರೂ, ಪ್ರಧಾನಿಯ ಕೆಲವು ಕ್ರಮಗಳನ್ನು ಟೀಕಿಸಿದ್ದಾರೆ ಮತ್ತು ಟ್ರಂಪ್ ಹೇಳಿಕೆಗಳ ಬಗ್ಗೆಯೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೂರ್ತಿ ಓದಿಅಮೆರಿಕ ಉತ್ಪನ್ನಕ್ಕೆ ಭಾರತದ ಸುಂಕ ಹೆಚ್ಚಳ? : ಚಿಲ್ಲರೆ ಹಣದುಬ್ಬರ 6 ವರ್ಷಗಳಲ್ಲೇ ಕನಿಷ್ಠ
ಭಾರತದಿಂದ ರಫ್ತಾಗುವ ಉಕ್ಕಿನ ಮೇಲೆ ಶೇ.25 ಮತ್ತು ಅಲ್ಯೂಮಿನಿಯಂ ಮೇಲೆ ಶೇ.10 ಸುಂಕ ವಿಧಿಸಿದ್ದ ಅಮೆರಿಕದ ಕ್ರಮಕ್ಕೆ ಪ್ರತಿಯಾಗಿ ಭಾರತವೂ ಅಮೆರಿಕದ ಕೆಲವು ಸರಕುಗಳ ಮೇಲೆ ಸುಂಕ ವಿಧಿಸುವ ಪ್ರಸ್ತಾಪವನ್ನು ಮುಂದಿಟ್ಟಿದೆ.
ಪೂರ್ತಿ ಓದಿSonu Nigam Kannada Controversy: ಹೈಕೋರ್ಟ್ ಮೆಟ್ಟಿಲೇರಿದ ಗಾಯಕ! ಮುಂದೇನು ಕಥೆ?
Sonu Nigam Controversy: ಕನ್ನಡದವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕೆ ಸೋನು ನಿಗಮ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಎಫ್ಐಆರ್ ರದ್ದುಗೊಳಿಸಲು ಸೋನು ನಿಗಮ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ವಿಚಾರಣೆಯನ್ನು ಮೇ 15ಕ್ಕೆ ಮುಂದೂಡಲಾಗಿದೆ.
ಪೂರ್ತಿ ಓದಿಆಪರೇಷನ್ ಸಿಂದೂರ್ ವೇಳೆ ಪಾಕ್ ಪರ ಘೋಷಣೆ ಕೂಗಿದ ಬೆಂಗಳೂರಿನ ಟೆಕ್ಕಿ ಬಂಧನ
ಬೆಂಗಳೂರಿನ ವೈಟ್ಫೀಲ್ಡ್ನಲ್ಲಿ ಪಾಕ್ ಪರ ಘೋಷಣೆ ಕೂಗಿದ ಛತ್ತೀಸ್ಗಢ ಮೂಲದ ಟೆಕ್ಕಿಯನ್ನು ಪೊಲೀಸರು ಬಂಧಿಸಿದ್ದಾರೆ. ಮೇ 9ರಂದು ಪಿಜಿಯಲ್ಲಿ ಈ ಘಟನೆ ನಡೆದಿದ್ದು, ಸ್ಥಳೀಯರು 112ಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದರು.
ಪೂರ್ತಿ ಓದಿಪಾಕಿಸ್ತಾನದ ವಶದಲ್ಲಿದ್ದ BSF ಯೋಧ ಬಿಡುಗಡೆ
BSF Constable: ಪಾಕಿಸ್ತಾನ ರೇಂಜರ್ಸ್ನ ವಶದಲ್ಲಿದ್ದ ಬಿಎಸ್ಎಫ್ ಯೋಧ ಪೂರ್ಣಂ ಕುಮಾರ್ ಶಾ ಅವರನ್ನು ಇಂದು ಬೆಳಿಗ್ಗೆ 10.30ಕ್ಕೆ ಅಟ್ಟಾರಿಯಲ್ಲಿ ಭಾರತಕ್ಕೆ ಹಸ್ತಾಂತರಿಸಲಾಗಿದೆ. ಈ ಹಸ್ತಾಂತರ ಶಾಂತಿಯುತವಾಗಿ ಮತ್ತು ನಿಯಮಗಳ ಪ್ರಕಾರ ನಡೆದಿದೆ.
ಪೂರ್ತಿ ಓದಿಆಪರೇಷನ್ ಸಿಂದೂರ್ ಬಗ್ಗೆ ಸುಳ್ಳು ಸುದ್ದಿ ಬಿತ್ತರಿಸುತ್ತಿದ್ದಂತೆ ಚೀನಾಗೆ ಶಾಕ್ ನೀಡಿದ ಭಾರತ
ಆಪರೇಷನ್ ಸಿಂದೂರ್ ಕುರಿತು ಸುಳ್ಳು ಸುದ್ದಿ ಹರಡಿದ್ದಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಇದು ಒಂದು ವಾರದೊಳಗೆ ಚೀನಾ ಸಂಬಂಧಿತ ಮಾಧ್ಯಮಗಳ ವಿರುದ್ಧ ಭಾರತ ತೆಗೆದುಕೊಂಡ ಎರಡನೇ ಕ್ರಮವಾಗಿದೆ.
ಪೂರ್ತಿ ಓದಿಭಾರತದ ದಾಳಿಗೆ ಚಿಂದಿಯಾದ ಪಾಕ್ ವಾಯುನೆಲೆ: ಹೈ ರೆಸಲ್ಯೂಷನ್ ಚಿತ್ರ ಬಿಡುಗಡೆ ಮಾಡಿದ ಅಮೆರಿಕನ್ ಸಂಸ್ಥೆ
ಭಾರತದ ಕ್ಷಿಪಣಿ ದಾಳಿಯಿಂದ ಪಾಕಿಸ್ತಾನದ ವಾಯುನೆಲೆಗಳು ಹೇಗೆ ಚಿಂದಿಯಾಗಿವೆ ಎಂಬುದಕ್ಕೆ ಹೊಸ ಸಾಕ್ಷ್ಯ ಸಿಕ್ಕಿದೆ. ಅಮೆರಿಕದ ಮ್ಯಾಕ್ಸರ್ ಕಂಪನಿ ಧ್ವಂಸವಾದ ರನ್ವೇ ಮತ್ತು ಕಟ್ಟಡಗಳ ಹೈ ರೆಸಲ್ಯೂಷನ್ ಚಿತ್ರಗಳನ್ನು ಬಿಡುಗಡೆ ಮಾಡಿದೆ.
ಪೂರ್ತಿ ಓದಿ