4ನೇ ಸೀಸನ್ ವುಮೆನ್ಸ್ ಪ್ರೀಮಿಯರ್ ಲೀಗ್ ಫೈನಲ್ನಲ್ಲಿ ಮಾಜಿ ಚಾಂಪಿಯನ್ ಆರ್ಸಿಬಿ ಹಾಗೂ ಕಳೆದ 3 ಆವೃತ್ತಿಗಳ ರನ್ನರ್-ಅಪ್ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿವೆ. ಲೀಗ್ನಲ್ಲಿ ಉತ್ತಮ ಪ್ರದರ್ಶನ ನೀಡಿ ನೇರವಾಗಿ ಫೈನಲ್ಗೇರಿದ ಆರ್ಸಿಬಿ ಸಂಘಟಿತ ಆಟವನ್ನು ನೆಚ್ಚಿಕೊಂಡಿದೆ.
- Home
- News
- India News
- India News Live: ಇಂದು ಆರ್ಸಿಬಿ-ಡೆಲ್ಲಿ ಫೈನಲ್ - ಎರಡನೇ ಟ್ರೋಫಿ ಮೇಲೆ ಕಣ್ಣಿಟ್ಟ ಬೆಂಗಳೂರು!
India News Live: ಇಂದು ಆರ್ಸಿಬಿ-ಡೆಲ್ಲಿ ಫೈನಲ್ - ಎರಡನೇ ಟ್ರೋಫಿ ಮೇಲೆ ಕಣ್ಣಿಟ್ಟ ಬೆಂಗಳೂರು!

ನವದೆಹಲಿ (ಫೆ.5): ವಿಪಕ್ಷದ ಮಹಿಳಾ ಸಂಸದರು, ಲೋಕಸಭೆಯಲ್ಲಿ ಪ್ರಧಾನಿ ಕುಳಿತುಕೊಳ್ಳುವ ಸ್ಥಳಕ್ಕೆ ಮುತ್ತಿಗೆ ಹಾಕಿದ ಪರಿಣಾಮ ನರೇಂದ್ರ ಮೋದಿ ಅವರ ಭಾಷಣವನ್ನೇ ರದ್ದುಪಡಿಸಿದ ಅಪರೂಪದ ಬೆಳವಣಿಗೆಯೊಂದು ಬುಧವಾರ ನಡೆದಿದೆ.ಆದರೆ ಘಟನೆ ನಡೆದಾಗ ಮೋದಿ ಸ್ಥಳದಲ್ಲಿ ಹಾಜರಿರದ ಕಾರಣ ಯಾವುದೇ ಅಹಿತಕರ ಘಟನೆ ನಡೆಯಲಿಲ್ಲ. ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕಲಾಪವನ್ನೇ ಗುರುವಾರಕ್ಕೆ ಮುಂದೂಡಲಾಯಿತು. ಪ್ರಧಾನಿ ಮೋದಿ ಇಂದು ಲೋಕಸಭೆಯಲ್ಲಿ ಭಾಷಣ ಮಾಡಲಿದ್ದಾರೆ. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್ಟೇನ್ಮೆಂಟ್ನ ಸುದ್ದಿಗಳ ವಿವರಗಳ ಲೈವ್ ಬ್ಲಾಗ್..
India News Live 5th February: ಇಂದು ಆರ್ಸಿಬಿ-ಡೆಲ್ಲಿ ಫೈನಲ್ - ಎರಡನೇ ಟ್ರೋಫಿ ಮೇಲೆ ಕಣ್ಣಿಟ್ಟ ಬೆಂಗಳೂರು!
India News Live 5th February: ಎರಡು ಮದುವೆ 5 ಜನ ಮಕ್ಕಳು; ಕೊರಿಯನ್ ಗೇಮ್ಗೆ 3 ಸೋದರಿಯರು ಬಲಿಯಾಗಿದ್ದು ನಿಜವೇ?
3 Sisters Die Ghaziabad Due to Korean Game Addiction ಅಪ್ಪಾ... ನಮ್ಮನ್ನು ಕ್ಷಮಿಸಿ, ನಮ್ಮನ್ನು ಕೊರಿಯಾದಿಂದ ದೂರ ಮಾಡಲಾಗದು ಎಂದು ಪತ್ರ ಬರೆದಿಟ್ಟು 9ನೇ ಮಹಡಿಯಿಂದ ಬಾಲಕಿಯರು ಜಿಗಿದಿದ್ದಾರೆ. ನೂರಾರು ಮಕ್ಕಳ ಬಲಿ ಪಡೆದಿದ್ದ ಬ್ಲ್ಯೂವೇಲ್ ಬಳಿಕ ಮತ್ತೊಂದು ಮಾದರಿ ಆಟದ ಆತಂಕ ಶುರುವಾಗಿದೆ.
India News Live 5th February: ಹೆಲಿಕಾಪ್ಟರ್ ತೋರಿಸಿ ಮೋಸ: ತಾನು ಅಮಿತ್ ಶಾ ದತ್ತುಪುತ್ರನೆಂದು ಹೇಳುತ್ತಿದ್ದ ವಂಚಕನ ವಿರುದ್ಧ FIR!
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ದತ್ತು ಪುತ್ರನೆಂದು ಹೇಳಿಕೊಂಡು ವಂಚಿಸುತ್ತಿದ್ದ ಸುಜಯ್ ಅಲಿಯಾಸ್ ಸುಜಯೇಂದ್ರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಈತ ರಾಜ್ಯಪಾಲರ ಲೆಟರ್ಹೆಡ್ನಲ್ಲಿ ನಕಲಿ ಸಹಿ ಮಾಡಿ ವಿಐಟಿ ವಿವಿ ಕುಲಪತಿ ಹುದ್ದೆಗೆ ನೇಮಕಾತಿ ಪತ್ರ ನೀಡಿ ವಂಚಿಸಿದ್ದಾನೆ..
India News Live 5th February: ಕಿರಿಯರ ವಿಶ್ವಕಪ್: ಬೌಲರ್ಗಳನ್ನು ಚೆಂಡಾಡಿದ ವೈಭವ್, ಆ್ಯರೊನ್ ಜಾರ್ಜ್; ದಾಖಲೆ ರನ್ ಚೇಸ್ ಮಾಡಿ ಫೈನಲ್ಗೆ ಲಗ್ಗೆಯಿಟ್ಟ ಭಾರತ
ಐಸಿಸಿ ಅಂಡರ್-19 ವಿಶ್ವಕಪ್ ಸೆಮಿಫೈನಲ್ನಲ್ಲಿ, ಅಫ್ಘಾನಿಸ್ತಾನ ವಿರುದ್ಧ ಭಾರತ ತಂಡ ಐತಿಹಾಸಿಕ ಗೆಲುವು ಸಾಧಿಸಿ ಫೈನಲ್ಗೆ ಪ್ರವೇಶಿಸಿದೆ. 311 ರನ್ಗಳ ಬೃಹತ್ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿದ ಭಾರತ, ಕಿರಿಯರ ವಿಶ್ವಕಪ್ ಇತಿಹಾಸದಲ್ಲೇ ಗರಿಷ್ಠ ರನ್ ಚೇಸ್ ಮಾಡಿದ ದಾಖಲೆ ಬರೆಯಿತು.
India News Live 5th February: ಅಬ್ಬಬ್ಬಾ! .. ಅಬುದಾಭಿಯಲ್ಲಿ ಭರ್ಜರಿ ₹49 ಕೋಟಿ ಲಾಟ್ರಿ ಗೆದ್ದ ಉಡುಪಿಯ ಶಂತನು!
ಮಸ್ಕತ್ನಲ್ಲಿ ಉದ್ಯೋಗದಲ್ಲಿರುವ ಕರ್ನಾಟಕದ ಉಡುಪಿ ಜಿಲ್ಲೆಯ ಶಂತನು ಶೆಟ್ಟಿಗಾರ್ ಅಬುದಾಭಿಯಲ್ಲಿ ನಡೆದ ಬಿಗ್ ಟಿಕೆಟ್ ಡ್ರಾನಲ್ಲಿ 49 ಕೋಟಿ ( (20 ಮಿಲಿಯನ್ ದಿರಮ್ ) ರು. ಮೊತ್ತದ ಲಾಟರಿ ಗೆದ್ದಿದ್ದಾರೆ.
India News Live 5th February: ರಷ್ಯಾ ತೈಲ ನಿಲ್ಲಿಸಿದರೆ ಭಾರತಕ್ಕೆ ₹36000 ಕೋಟಿ ನಷ್ಟ
ವ್ಯಾಪಾರ ಒಪ್ಪಂದದ ಭಾಗವಾಗಿ, ರಷ್ಯಾದಿಂದ ತೈಲ ಖರೀದಿ ಸ್ಥಗಿತಕ್ಕೆ ಭಾರತ ನಿರ್ಧರಿಸಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ಇದೀಗ ಅಮೆರಿಕ ಮತ್ತು ರಷ್ಯಾ ನಡುವೆ ಜಟಾಪಟಿಗೆ ಕಾರಣವಾಗಿದೆ.
India News Live 5th February: 7 ಲಕ್ಷ ಸೇಬು ಮರ ಉಳಿಸಲು ಚಿಪ್ಕೋ ಚಳವಳಿ : 3 ಕಾಶ್ಮೀರ ರೈಲ್ವೆಗಳ ರದ್ದು
ಕಣಿವೆ ರಾಜ್ಯ ಜಮ್ಮು ಕಾಶ್ಮೀರಕ್ಕೆ ಕೇಂದ್ರ ಸರ್ಕಾರ ಘೋಷಿಸಿದ್ದ ರೈಲ್ವೆ ಯೋಜನೆ ವಿರೋಧಿಸಿ 7 ಲಕ್ಷ ಸೇಬು ಮರಗಳ ಉಳಿವಿಗೆ ಜನ ಚಿಪ್ಕೋ ಚಳವಳಿ ನಡೆದದ್ದು, ಇದಕ್ಕೆ ಮಣಿದ ಸರ್ಕಾರ ಮೂರು ಯೋಜನೆಗಳನ್ನು ರದ್ದುಪಡಿಸಿದೆ.
India News Live 5th February: ಸುಪ್ರೀಂನಲ್ಲಿ ವಕೀಲೆ ಆದ ಬಂಗಾಳದ ಮುಖ್ಯಮಂತ್ರಿ ದೀದಿ!
ವಿಶೇಷ ಮತಪಟ್ಟಿ ಪರಿಷ್ಕರಣೆ (ಎಸ್ಐಆರ್) ಪ್ರಶ್ನಿಸಿ ಪಶ್ಚಿಮ ಬಂಗಾಳ ಸರ್ಕಾರ ಸಲ್ಲಿಸಿರುವ ಅರ್ಜಿ ವಿಚಾರಣೆ ವೇಳೆ ಸ್ವತಃ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೇ ವಾದ ಮಂಡಿಸಿದ ಅಪರೂಪದ ಘಟನೆಗೆ ಸುಪ್ರೀಂಕೋರ್ಟ್ ಬುಧವಾರ ಸಾಕ್ಷಿಯಾಯಿತು.
India News Live 5th February: ಮಹಿಳಾ ಮಂಡಲ ಮುತ್ತಿಗೆಯಿಂದ ಪ್ರಧಾನಿ ಮೋದಿ ಮಾತಿಗೆ ಬ್ರೇಕ್
ವಿಪಕ್ಷದ ಮಹಿಳಾ ಸಂಸದರು, ಲೋಕಸಭೆಯಲ್ಲಿ ಪ್ರಧಾನಿ ಕುಳಿತುಕೊಳ್ಳುವ ಸ್ಥಳಕ್ಕೆ ಮುತ್ತಿಗೆ ಹಾಕಿದ ಪರಿಣಾಮ ನರೇಂದ್ರ ಮೋದಿ ಅವರ ಭಾಷಣವನ್ನೇ ರದ್ದುಪಡಿಸಿದ ಅಪರೂಪದ ಬೆಳವಣಿಗೆಯೊಂದು ಬುಧವಾರ ನಡೆದಿದೆ.