ರಾಜ್ಯಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಮತ್ತು ನೆಹರೂಕುಟುಂಬದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಗಾಂಧಿ ಕುಟುಂಬವು ಮಹಾತ್ಮ ಗಾಂಧಿಯವರ ಉಪನಾಮವನ್ನು ಕದ್ದಿದೆ ಎಂದು ಆರೋಪಿಸಿದ ಅವರು, ಕಳ್ಳತನ ಅವರ ಕುಟುಂಬ ವೃತ್ತಿ ಎಂದು ದೂಷಿಸಿದರು.
ಅವರು ಮಹಾತ್ಮಗಾಂಧಿಯವರ ಸರ್ನೇಮ್ ಕದ್ದವರು:
ನವದೆಹಲಿ: ರಾಜ್ಯಸಭೆಯಲ್ಲಿ ಇಂದು ಸುಮಾರು 100 ನಿಮಿಷಗಳ ಕಾಲ ನಿರಂತರ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ , ಕಾಂಗ್ರೆಸ್ ಮತ್ತು ಗಾಂಧಿ ಕುಟುಂಬವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಕಾಂಗ್ರೆಸ್ ಹಾಗೂ ರಾಹುಲ್ ಗಾಂಧಿ ಕುಟುಂಬ ಮೂಲತಃ ಕಳ್ಳರು, ಅವರು ಮಹಾತ್ಮ ಗಾಂಧಿಯವರ ಉಪನಾಮವನ್ನೂ ಕದ್ದಿದ್ದಾರೆ ಎಂದು ಪ್ರಧಾನಿ ಆರೋಪಿಸಿದರು. ಕೆಲವು ಜನರಿಗೆ ಕಳ್ಳತನವು ಒಂದು ಕುಟುಂಬ ವೃತ್ತಿಯಾಗಿದೆ. ಆ ಕಳ್ಳರು ಗುಜರಾತಿನ ಮಹಾತ್ಮ ಗಾಂಧಿಯವರ ಉಪನಾಮವನ್ನೂ ಕದ್ದಿದ್ದಾರೆ ಎಂಬುದು ಆಘಾತಕಾರಿ ಸಂಗತಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕುಟುಂದ ಕಾಲೆಳೆದಿದ್ದಾರೆ.
ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಉತ್ತರಿಸುತ್ತಾ ಮಾತನಾಡಿದ ಪ್ರಧಾನಿ ಮೋದಿ ವಿರೋಧ ಪಕ್ಷದ ಸದಸ್ಯರ ಘೋಷಣೆಗಳು ಮತ್ತು ಸಭಾತ್ಯಾಗದ ನಡುವೆಯೂ ಕಾಂಗ್ರೆಸ್ ನಾಯಕರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಕಾಂಗ್ರೆಸ್ ಪಕ್ಷ ಮತ್ತು ಅದರ ನಾಯಕ ರಾಹುಲ್ ಗಾಂಧಿ ಅವರನ್ನು ಸ್ಟಾರ್ಟ್ ಅಪ್ ಎಂದು ಟೀಕಿಸಿದ ಪ್ರಧಾನಿ, ಕಾಂಗ್ರೆಸ್ ಎಂದಿಗೂ ಸ್ಟಾರ್ಟ್ಅಪ್ ಸಂಸ್ಕೃತಿಯನ್ನು ಉತ್ತೇಜಿಸಲಿಲ್ಲ, ಅವರು ತಮ್ಮದೇ ಆದ ಸ್ಟಾರ್ಟ್ಅಪ್ ಅನ್ನು ಮಾಡಲು ಸಾಧ್ಯವಿಲ್ಲ ಎಂದು ಪ್ರಧಾನಿ ಮೋದಿ ಹೇಳಿದರು.
ಇದನ್ನೂ ಓದಿ: ಹಿಟ್& ರನ್ನಿಂದ ನವ ವಿವಾಹಿತ ಸಾವು ಪ್ರಕರಣಕ್ಕೆ ರೋಚಕ ಟ್ವಿಸ್ಟ್: ಬಾಯ್ಫ್ರೆಂಡ್ ಜೊತೆ ಸೇರಿ ಗಂಡನ ಕತೆ ಮುಗಿಸಿದ ಹೆಂಡ್ತಿ
ಒಂದು ದಿನ ಮೊದಲು ಸದನದಲ್ಲಿ ರಾಹುಲ್ ಅವರನ್ನು ಕಾಂಗ್ರೆಸ್ ಯುವರಾಜ ಎಂದು ಕರೆದಿದನ್ನು ಟೀಕಿಸಿದ ಪ್ರಧಾನಿ, ನಿನ್ನೆ ಏನಾಯಿತು? ದ್ವೇಷ ಹೊಂದಿರುವ ಕಾಂಗ್ರೆಸ್ನ ಯುವರಾಜ ಈ ಸದನದ ಸಂಸದರೊಬ್ಬರನ್ನು ದೇಶದ್ರೋಹಿ ಎಂದು ಕರೆದರು. ಅವರ ದುರಹಂಕಾರವು ಉತ್ತುಂಗದಲ್ಲಿದೆ ಎಂದು ಕೇಂದ್ರ ಸಚಿವ ರವನೀತ್ ಸಿಂಗ್ ಬಿಟ್ಟು ಅವರನ್ನು ದೇಶದ್ರೋಹಿ ಎಂದು ಕರೆದ ರಾಹುಲ್ ಅವರನ್ನು ತೀವ್ರವಾಗಿ ಟೀಕಿಸಿದರು. ಈ ಹೇಳಿಕೆಯನ್ನು ಸಿಖ್ ಸಂಸದರೊಬ್ಬರನ್ನು ಗುರಿಯಾಗಿರಿಸಿಕೊಂಡು ಹೇಳಲಾಗಿದೆ. ಕಾಂಗ್ರೆಸ್ ತೊರೆದ ಯಾರನ್ನೂ ಅವರು ದೇಶದ್ರೋಹಿ ಎಂದು ಕರೆದಿಲ್ಲ. ಆದರೆ ಅವರು ಸಂಸದರನ್ನು ದೇಶದ್ರೋಹಿ ಎಂದು ಕರೆದರು, ಏಕೆಂದರೆ ಅವರು ಸಿಖ್. ಇದು ಸಿಖ್ಖರಿಗೆ ಮಾಡಿದ ಅವಮಾನ, ಗುರುಗಳಿಗೆ ಮಾಡಿದ ಅವಮಾನ. ಇದು ಕಾಂಗ್ರೆಸ್ನಲ್ಲಿ ತುಂಬಿರುವ ಸಿಖ್ಖರ ಮೇಲಿನ ದ್ವೇಷದ ಅಭಿವ್ಯಕ್ತಿಯಾಗಿದೆ ಎಂದು ಪ್ರಧಾನಿ ಹೇಳಿದರು.
ಅವರು ದೇಶಕ್ಕಾಗಿ ತಮ್ಮನ್ನು ತಾವು ತ್ಯಾಗ ಮಾಡಿದ ಕುಟುಂಬದ ಸದಸ್ಯ. ಅವರು ತಮ್ಮ ರಾಜಕೀಯ ಸಿದ್ಧಾಂತವನ್ನು ಬದಲಾಯಿಸಿದ ಕಾರಣಕ್ಕೆ ದೇಶದ್ರೋಹಿಯಾದರು ಇದು ಸಣ್ಣ ಪದವಲ್ಲ. ನಾಗರಿಕನನ್ನು ದೇಶದ್ರೋಹಿ ಎಂದು ಕರೆಯುವುದನ್ನು ದೇಶ ಹೇಗೆ ಸಹಿಸಿಕೊಳ್ಳುತ್ತದೆ. ಇದು ತುಂಬಾ ದುರಾದೃಷ್ಟಕರ ಇಂತಹ ಜನರು ಕಾಂಗ್ರೆಸ್ ಅನ್ನು ಮುಳುಗಿಸುತ್ತಾರೆ ಎಂದು ಪ್ರಧಾನಿ ಮೋದಿ ಹೇಳಿದರು.
ಇದನ್ನೂ ಓದಿ: ಬೆಂಗಳೂರಿನಲ್ಲಿ 24 ಕೊಲೆ ಪ್ರಕರಣಗಳಲ್ಲಿ ಬೇಕಾಗಿದ್ದ ಬಿಹಾರದ ಅಪ್ಪ ಮಗನ ಬಂಧನ
ಸಂಸತ್ತಿನಲ್ಲಿ ಪ್ರತಿಪಕ್ಷಗಳು ಪದೇ ಪದೇ ಅಡ್ಡಿಪಡಿಸಿದ್ದಕ್ಕೆ ಪ್ರಧಾನಿ ಮೋದಿ ವಿಷಾದ ವ್ಯಕ್ತಪಡಿಸಿದರು, ಇದು ಬಡ ಬುಡಕಟ್ಟು ಮಹಿಳೆಯಾದ ರಾಷ್ಟ್ರಪತಿಗೆ ಮಾತ್ರವಲ್ಲದೆ ಅತ್ಯುನ್ನತ ಸಾಂವಿಧಾನಿಕ ಹುದ್ದೆ ಮತ್ತು ಭಾರತದ ಸಂವಿಧಾನಕ್ಕೂ ಮಾಡಿದ ಅವಮಾನ ಎಂದು ಹೇಳಿದರು.


