ಅಪ್ನಾ ದಳ (ಕಮ್ಯುನಿಸ್ಟ್) ರಾಷ್ಟ್ರೀಯ ಅಧ್ಯಕ್ಷೆ ಪಲ್ಲವಿ ಪಟೇಲ್, ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ತೀವ್ರವಾಗಿ ವಿರೋಧಿಸಿದ್ದಾರೆ. ತಮ್ಮ ಬಳಿ ಎಲ್ಲಾ ದಾಖಲೆಗಳಿವೆ SIR ಫಾರ್ಮ್ ಅನ್ನು ಏಕೆ ಭರ್ತಿ ಮಾಡಬೇಕು ಎಂದು ಪ್ರಶ್ನಿಸಿದರು.
- Home
- News
- India News
- India News Live: ನಾನು SIR ಫಾರ್ಮ್ ಭರ್ತಿ ಮಾಡಲ್ಲ - ಸಿರಾತು ಕಮ್ಯುನಿಸ್ಟ್ ಶಾಸಕಿ ಪಲ್ಲವಿ ಪಟೇಲ್ ಗಂಭೀರ ವಿರೋಧ!
India News Live: ನಾನು SIR ಫಾರ್ಮ್ ಭರ್ತಿ ಮಾಡಲ್ಲ - ಸಿರಾತು ಕಮ್ಯುನಿಸ್ಟ್ ಶಾಸಕಿ ಪಲ್ಲವಿ ಪಟೇಲ್ ಗಂಭೀರ ವಿರೋಧ!

ನವದೆಹಲಿ (ನ.28): ಪ್ರಧಾನಿ ಆದ ಬಳಿಕ ನರೇಂದ್ರ ಮೋದಿ ಇದೇ ಮೊದಲ ಬಾರಿಗೆ ಕೃಷ್ಣನ ಊರು ಕರ್ನಾಟಕ ಕರಾವಳಿಯ ಉಡುಪಿಗೆ ಭೇಟಿ ನೀಡಲಿದ್ದಾರೆ. ಅಲ್ಲಿ ಇದಕ್ಕೂ ಮುನ್ನ 10 ಕಿಲೋಮೀಟರ್ವರೆಗೆ ಅವರು ರೋಡ್ ಶೋ ಕೂಡ ಮಾಡಲಿದ್ದಾರೆ. ಲಕ್ಷ ಕಂಠ ಗೀತಾ ಪಾರಾಯಣದಲ್ಲಿ ಪಾಲ್ಗೊಂಡು ಭಗವದ್ಗೀತೆಯ 10 ಶ್ಲೋಕಗಳನ್ನು ಪಠಿಸಲಿದ್ದಾರೆ. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್ಟೇನ್ಮೆಂಟ್ನ ಸುದ್ದಿಗಳ ವಿವರಗಳ ಲೈವ್ ಬ್ಲಾಗ್..
India News Live 28th November:ನಾನು SIR ಫಾರ್ಮ್ ಭರ್ತಿ ಮಾಡಲ್ಲ - ಸಿರಾತು ಕಮ್ಯುನಿಸ್ಟ್ ಶಾಸಕಿ ಪಲ್ಲವಿ ಪಟೇಲ್ ಗಂಭೀರ ವಿರೋಧ!
India News Live 28th November:ಜಾಗತಿಕ ಚಿನ್ನದ ಬೆಲೆಗಳ ಮೇಲೆ ಹಿಡಿತ Price Maker ಆಗುವತ್ತ ಭಾರತ, ತಜ್ಞರು ಹೇಳಿದ್ದೇನು?
ಮುಂದಿನ ದಶಕದಲ್ಲಿ, ದೇಶೀಯ ಗಣಿಗಾರಿಕೆ ಮೂಲಕ ಭಾರತವು ತನ್ನ ಚಿನ್ನದ ಬೇಡಿಕೆಯ ಶೇ. 20 ರಷ್ಟನ್ನು ಪೂರೈಸುವ ಸಾಮರ್ಥ್ಯ ಹೊಂದಿದೆ. ಈ ಬೆಳವಣಿಗೆಯು ಜಾಗತಿಕ ಮಾರುಕಟ್ಟೆಯಲ್ಲಿ ಭಾರತವನ್ನು 'ಬೆಲೆ ಸ್ವೀಕರಿಸುವ' ರಾಷ್ಟ್ರದಿಂದ 'ಬೆಲೆ ತಯಾರಕ' ರಾಷ್ಟ್ರವನ್ನಾಗಿ ಪರಿವರ್ತಿಸುವಲ್ಲಿ ಪ್ರಮುಖ ಹೆಜ್ಜೆಯಾಗಿದೆ.
India News Live 28th November:ಗೊತ್ತಿಲ್ಲದವರ ಮದ್ವೆಗೆ ₹1 ಕೋಟಿ ಖರ್ಚು, ಇಡಿಗೆ ಶಾಕ್ ಕೊಟ್ಟ ರ್ಯಾಪಿಡೋ ಚಾಲಕನ ₹331 ಕೋಟಿ
ಗೊತ್ತಿಲ್ಲದವರ ಮದ್ವೆಗೆ ₹1 ಕೋಟಿ ಖರ್ಚು, ಇಡಿಗೆ ಶಾಕ್ ಕೊಟ್ಟ ರ್ಯಾಪಿಡೋ ಚಾಲಕನ ₹331 ಕೋಟಿ, ರ್ಯಾಪಿಡೋ ಚಾಲಕನಾಗಿ ಕೆಲಸ ಬಿಟ್ಟು ಈತನಿಗೆ ಬೇರೇನೂ ಕೆಲಸವಿಲ್ಲ. ಆದರೆ ಕೋಟಿ ಕೋಟಿ ರೂಪಾಯಿ ವಹಿವಾಟು ಮೂಲ ಹಲವು ಅಚ್ಚರಿಗೆ ಕಾರಣವಾಗಿದೆ.
India News Live 28th November:ಗಂಗಾ ತಟದಲ್ಲಿ ಬೆಚ್ಚಿ ಬೀಳಿಸಿದ ಅಂತ್ಯಸಂಸ್ಕಾರ, ಚಿತೆಯಲ್ಲಿ ಶವ ನಾಪತ್ತೆ, ಪ್ರತ್ಯಕ್ಷಗೊಂಡಿದ್ದು ಯಾರು?
ಗಂಗಾ ತಟದಲ್ಲಿ ಬೆಚ್ಚಿ ಬೀಳಿಸಿದ ಅಂತ್ಯಸಂಸ್ಕಾರ,ಚಿತೆಯಲ್ಲಿ ಶವ ನಾಪತ್ತೆ, ಪ್ರತ್ಯಕ್ಷಗೊಂಡಿದ್ದು ಯಾರು?, ಕಟ್ಟಿಗೆ ಸರಿಸಿದಾಗ ಈ ಅಚ್ಚರಿ ಬೆಳಕಿಗೆ ಬಂದಿದೆ. ಇದೀಗ ಅಂತ್ಯಸಂಸ್ಕಾರಕ್ಕೆ ಬಂದಿದ್ದ ಇಬ್ಬರ ಮಾತು ಕೇಳಿ ಸ್ಥಳೀಯರ ಅಚ್ಚರಿಗೊಂಡಿದ್ದಾರೆ.
India News Live 28th November:ದೇವ್ರೇ ಅಮ್ಮ ಈ ವಿಡಿಯೋ ನೋಡದಿರಲಪ್ಪ ಎಂದು ಚಪ್ಪಲಿ ತೋರಿಸಿದ ನಮ್ರತಾ ಗೌಡ - ಅಂಥ ಗುಟ್ಟೇನಿದೆ ನೋಡಿ!
'ಕರ್ಣ' ಸೀರಿಯಲ್ ಖ್ಯಾತಿಯ ನಟಿ ನಮ್ರತಾ ಗೌಡ ಅವರು ತಮ್ಮ ಹೊಸ ಚಪ್ಪಲಿಯ ವಿಡಿಯೋ ಹಂಚಿಕೊಂಡಿದ್ದಾರೆ. ಒಂದು ಫಂಕ್ಷನ್ಗಾಗಿ ದುಬಾರಿ ಚಪ್ಪಲಿ ಖರೀದಿಸಿದ್ದು, ಈ ವಿಷಯ ಅಮ್ಮನಿಗೆ ತಿಳಿದರೆ ಬೈಯ್ಯುತ್ತಾರೆ ಎಂದು ತಮಾಷೆಯಾಗಿ ಹೇಳಿಕೊಂಡಿದ್ದಾರೆ. ಎಷ್ಟು ಇದರ ಬೆಲೆ ನೋಡಿ!
India News Live 28th November:5 ಕೋಟಿ ಕೊಡಿ ಇಲ್ಲ ಚಿನ್ನ ಹಾಕೋದು ನಿಲ್ಸಿ - ಕೇಜಿಗಟ್ಟಲೇ ಚಿನ್ನ ಹಾಕಿ ಓಡಾಡ್ತಿದ್ದ ಗೋಲ್ಡ್ಮ್ಯಾನ್ಗೆ ಬೆದರಿಕೆ
ಮೈ ತುಂಬಾ ಕೇಜಿಗಟ್ಟಲೇ ಚಿನ್ನದ ಆಭರಣ ಧರಿಸಿಕೊಂಡು ರಾಜಾರೊಷವಾಗಿ ಸಾರ್ವಜನಿಕವಾಗಿ ಓಡಾಡುತ್ತಾ ಚಿತೋರ್ಗಢದ ಚಿನ್ನದ ವ್ಯಕ್ತಿ ಅಥವಾ ಗೋಲ್ಡ್ ಮ್ಯಾನ್ ಎಂದೇ ಫೇಮಸ್ ಆಗಿದ್ದ ಕನ್ಹಯ್ಯಾಲಾಲ್ ಖಾಟಿಕ್ ಅವರಿಗೆ ಚಿನ್ನ ಧರಿಸದಂತೆ ಬೆದರಿಕೆ ಬಂದಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ.
India News Live 28th November:ಹಾಸಿಗೆ ಒಳಹೊಕ್ಕರೆ Bigg Boss ಕ್ಯಾಮೆರಾ ಕಣ್ಣು ಸುಮ್ನೆ ಬಿಡತ್ತಾ? ಸಿಕ್ಕಿಬಿದ್ದ ರಕ್ಷಿತಾ ಶೆಟ್ಟಿ
India News Live 28th November:ಟೀಂ ಇಂಡಿಯಾ ಹೆಡ್ ಕೋಚ್ ಗೌತಮ್ ಗಂಭೀರ್ ಆ ಹೇಳಿಕೆಗೆ ಸಿಟ್ಟಾದ ಬಿಸಿಸಿಐ! ಅಷ್ಟಕ್ಕೂ ಗೌತಿ ಏನಂದ್ರು?
ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ ಸೋಲಿನ ಬಳಿಕ, ಪಿಚ್ ಕುರಿತು ಕೋಚ್ ಗೌತಮ್ ಗಂಭೀರ್ ನೀಡಿದ ಹೇಳಿಕೆಯಿಂದ ಬಿಸಿಸಿಐ ಅಸಮಾಧಾನಗೊಂಡಿದೆ. ಸದ್ಯಕ್ಕೆ ಯಾವುದೇ ಕ್ರಮ ಕೈಗೊಳ್ಳದಿದ್ದರೂ, ಮುಂಬರುವ ಟಿ20 ವಿಶ್ವಕಪ್ನಲ್ಲಿ ತಂಡದ ಕಳಪೆ ಪ್ರದರ್ಶನ ಮುಂದುವರೆದರೆ ಗಂಭೀರ್ಗೆ ಸಂಕಷ್ಟ ಎದುರಾಗುವ ಸಾಧ್ಯತೆ.
India News Live 28th November:Video ಉದಯನಿಧಿ ಸ್ಟಾಲಿನ್ ಬರ್ತ್ಡೆ ಪಾರ್ಟಿಯಲ್ಲಿ ಅಶ್ಲೀಲ ನೃತ್ಯಕ್ಕೆ ಸಚಿವರ ಚಪ್ಪಾಳೆ, ಭಾರಿ ವಿವಾದ
Video ಉದಯನಿಧಿ ಸ್ಟಾಲಿನ್ ಬರ್ತ್ಡೆ ಪಾರ್ಟಿಯಲ್ಲಿ ಅಶ್ಲೀಲ ನೃತ್ಯಕ್ಕೆ ಸಚಿವರ ಚಪ್ಪಾಳೆ, ಭಾರಿ ವಿವಾದ, ಜನಪ್ರತಿನಿಧಿನಿ ಈ ರೀತಿಯ ವರ್ತನೆಗೆ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಡ್ಯಾನ್ಸ್ ಹಾಗೂ ಸಚಿವರು ಆಸ್ವಾದಿಸುತ್ತಿರುವ ವಿಡಿಯೋ ವೈರಲ್ ಆಗಿದೆ.
India News Live 28th November:ದಕ್ಷಿಣ ಆಫ್ರಿಕಾ ಎದುರಿನ ಮೊದಲ ಏಕದಿನ ಪಂದ್ಯಕ್ಕೆ ಭಾರತ ಸಂಭಾವ್ಯ ತಂಡ ಇಲ್ಲಿದೆ ನೋಡಿ!
ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯಕ್ಕೆ ಭಾರತ ಸಜ್ಜಾಗಿದ್ದು, ಶುಭಮನ್ ಗಿಲ್ ಮತ್ತು ಶ್ರೇಯಸ್ ಅಯ್ಯರ್ ಅನುಪಸ್ಥಿತಿಯಲ್ಲಿ ತಂಡದಲ್ಲಿ ಬದಲಾವಣೆ ನಿರೀಕ್ಷಿಸಲಾಗಿದೆ. ಯಶಸ್ವಿ ಜೈಸ್ವಾಲ್ ಮತ್ತು ತಿಲಕ್ ವರ್ಮಾ ಆಡುವ ಬಳಗದಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿದೆ.
India News Live 28th November:ಯುವತಿ ಗರ್ಭಿಣಿ ಮಾಡಿ ಗರ್ಭಪಾತಕ್ಕೆ ಮಾತ್ರೆ ಕೊಟ್ಟ ಕಾಂಗ್ರೆಸ್ ಶಾಸಕ, ಕೇಸ್ ಬೆನ್ನಲ್ಲೇ ನಾಪತ್ತೆ
ಯುವತಿ ಗರ್ಭಿಣಿ ಮಾಡಿ ಗರ್ಭಪಾತಕ್ಕೆ ಮಾತ್ರೆ ಕೊಟ್ಟ ಕಾಂಗ್ರೆಸ್ ಶಾಸಕ, ಕೇಸ್ ಬೆನ್ನಲ್ಲೇ ನಾಪತ್ತೆ, ಯುವತಿ ಮುಖ್ಯಮಂತ್ರಿಗೂ ದೂರು ನೀಡಿದ್ದಾರೆ. ಇತ್ತ ಆಡಿಯೋ ಕೂಡ ಬಹಿರಂಗಪಡಿಸಿದ್ದಾರೆ. ತೀವ್ರ ಕೋಲಾಹಲ ಸೃಷ್ಟಿಸಿರುವ ಈ ಪ್ರಕರಣ ಕಾಂಗ್ರೆಸ್ಗೆ ತೀವ್ರ ಹಿನ್ನಡೆ ನೀಡಿದೆ.
India News Live 28th November:ಚೇರ್ ಮುರಿದು ಹಾಕಿ ಸೆಲ್ಫಿಗಾಗಿ ಮುಗಿಬಿದ್ದ ಅಭಿಮಾನಿಗಳು - ಕೋಪದಿಂದ ಹೊರಟು ಹೋದ ಬಿಗ್ಬಾಸ್ ಸ್ಪರ್ಧಿ
ಬಿಗ್ಬಾಸ್ ಸ್ಪರ್ಧಿ ಹಾಗೂ ಯೂಟ್ಯೂಬರ್ ಮೃದುಲ್ ತಿವಾರಿ ಅವರನ್ನು ನೋಡಲು ಸಾವಿರಾರು ಅಭಿಮಾನಿಗಳು ಸೇರಿದ್ದರಿಂದ ನೂಕುನುಗ್ಗಲು ಉಂಟಾಗಿದೆ. ಅಭಿಮಾನಿಗಳು ಬ್ಯಾರಿಕೇಡ್ ಮುರಿದು ಕುರ್ಚಿಗಳನ್ನು ಮುರಿದಿದ್ದರಿಂದ ಮೃದುಲ್ ಕೇವಲ 12 ನಿಮಿಷಗಳಲ್ಲಿ ಕಾರ್ಯಕ್ರಮದಿಂದ ನಿರ್ಗಮಿಸಿದರು.
India News Live 28th November:ನಾಯಿ ಸಾಲ ತೀರಿಸಬೇಕಿದೆ, Bigg Boss ನೋಡ್ತಿಲ್ಲ ಎಂದ ಮಾಜಿ ಸ್ಪರ್ಧಿ ವಿನಯ್ ಗೌಡ! ನೆಟ್ಟಿಗರು ಏನಂದ್ರು ನೋಡಿ
ಬಿಗ್ ಬಾಸ್ ಖ್ಯಾತಿಯ ವಿನಯ್ ಗೌಡ, ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಬಿಗ್ ಬಾಸ್ ವೀಕ್ಷಣೆ ಕುರಿತ ಪ್ರಶ್ನೆಗೆ, '200 ಕೋಟಿ ನಾಯಿ ಸಾಲ ತೀರಿಸಬೇಕು' ಎಂದು ವ್ಯಂಗ್ಯವಾಗಿ ಉತ್ತರಿಸಿ ಸೋಷಿಯಲ್ ಮೀಡಿಯಾದಲ್ಲಿ ತೀವ್ರ ಟೀಕೆಗೆ ಗುರಿಯಾಗಿದ್ದಾರೆ.
India News Live 28th November:ನವ ಜೋಡಿಗೆ ಶುಭ ಹಾರೈಸುತ್ತಿದ್ದಂತೆ ಕುಸಿದ ವೇದಿಕೆ, ಬಿಜೆಪಿ ಮಾಜಿ ಎಂಪಿ ಸೇರಿ ಹಲವರಿಗೆ ಗಾಯ
ನವ ಜೋಡಿಗೆ ಶುಭ ಹಾರೈಸುತ್ತಿದ್ದಂತೆ ಕುಸಿದ ವೇದಿಕೆ, ಬಿಜೆಪಿ ಮಾಜಿ ಎಂಪಿ ಸೇರಿ ಹಲವರಿಗೆ ಗಾಯ, ಘಟನೆಯಲ್ಲಿ ಹಲವು ಬಿಜೆಪಿಯ ನಾಯಕರು ಮಾತ್ರವಲ್ಲ, ವಧು ವರರು ಗಾಯಗೊಂಡ ಘಟನೆ ನಡೆದಿದೆ. ಈ ವಿಡಿಯೋ ಹರಿದಾಡುತ್ತಿದೆ.
India News Live 28th November:ರಾತ್ರೋರಾತ್ರಿ ಮದರ್ ಮೇರಿಯಾದ ಕಾಳಿ ಮಾತೆ! ಮಧ್ಯರಾತ್ರಿ ಅರ್ಚಕನಿಗೆ ಆಗಿದ್ದೇನು, ಅಲ್ಲಿ ನಡೆದಿದ್ದೇನು?
India News Live 28th November:ಸೆಲೆಬ್ರೇಷನ್ ನೆಪದಲ್ಲಿ ಬರ್ತ್ಡೇ ದಿನವೇ ಬೆಂಕಿ ಹಚ್ಚಿದ ಸ್ನೇಹಿತರು - 21ರ ಯುವಕನ ಸ್ಥಿತಿ ಗಂಭೀರ
21 ವರ್ಷದ ಯುವಕನ ಹುಟ್ಟುಹಬ್ಬದ ಆಚರಣೆಯು ದುರಂತದಲ್ಲಿ ಅಂತ್ಯಗೊಂಡಿದೆ. ತಮಾಷೆಯ ನೆಪದಲ್ಲಿ ಸ್ನೇಹಿತರೇ ಆತನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದು, ಯುವಕನ ಸ್ಥಿತಿ ಗಂಭೀರವಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
India News Live 28th November:ಸ್ಮೃತಿ ಮಂಧನಾ-ಪಲಾಶ್ ಮದುವೆ ಯಾವಾಗ? ಹುಡುಗನ ತಾಯಿ ನೀಡಿದ್ರು ಬಿಗ್ ಅಪ್ಡೇಟ್
India News Live 28th November:ಮದುವೆ ಹಿಂದಿನ ರೆಡ್ ಹ್ಯಾಂಡ್ ಆಗಿ ಸೀಝ್ ಆದ್ರಾ ಪಲಾಶ್ ಮುಚ್ಚಲ್! ಮದುವೆ ಸ್ಥಗಿತಗೊಳಿಸಲು ಇದೇ ನಿಜವಾದ ಕಾರಣ?
ನವದೆಹಲಿ: ಭಾರತ ಮಹಿಳಾ ತಂಡದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧನಾ ಅವರ ಮದುವೆ ದಿಢೀರ್ ಸ್ಥಗಿತವಾಗಿಲೂ, ಪಲಾಶ್ ಮುಚ್ಚಲ್ ಮಾಡಿದ ಮೋಸವೇ ಕಾರಣ ಎನ್ನಲಾಗುತ್ತಿದೆ. ಈ ಕುರಿತಾದ ಮಹತ್ವದ ಅಪ್ಡೇಟ್ ಇಲ್ಲಿದೆ ನೋಡಿ
India News Live 28th November:ಐಶ್ವರ್ಯ ರೈ ಇನ್ನು ಆಯೇಷಾ! ಮತಾಂತರಕ್ಕೆ ಸಿದ್ಧನಾಗಿ ಮದ್ವೆಗೆ ರೆಡಿಯಾದ ಈ ಮಫ್ತಿ - ಏನ್ ಹೇಳ್ದ ಕೇಳಿ
ನಟಿ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಅವರ ವಿಚ್ಛೇದನದ ವದಂತಿಗಳ ನಡುವೆ, ಪಾಕಿಸ್ತಾನಿ ಮಫ್ತಿಯೊಬ್ಬರು ಒಂದು ವೇಳೆ ಡಿವೋರ್ಸ್ ಆದರೆ, ಐಶ್ವರ್ಯಾ ಅವರನ್ನು ಮತಾಂತರಿಸಿ ಮದುವೆಯಾಗುವುದಾಗಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.