10:43 PM (IST) Apr 19

India News Live: ಪ್ರಧಾನಿ ಮೋದಿ ದಿಢೀರ್ ಭೇಟಿಯಿಂದ ಸಣ್ಣ ಜಲ್ಮುರಿ ಅಂಗಡಿಗೆ ಈಗ ಜನವೋ ಜನ

ಪ್ರಧಾನಿ ಮೋದಿ ದಿಢೀರ್ ಭೇಟಿಯಿಂದ ಸಣ್ಣ ಜಲ್ಮುರಿ ಅಂಗಡಿಗೆ ಈಗ ಜನವೋ ಜನ, ಪಶ್ಚಿಮ ಬಂಗಾಳದಲ್ಲಿ ಸರಣಿ ರ‍್ಯಾಲಿಗಳ ಬಳಿಕ ಅಂಗಡಿಗೆ ತೆರಳಿ ಜಲ್ಮುರಿ ಖರೀದಿಸಿ ಸವಿದಿದ್ದಾರೆ, ಸ್ಥಳೀಯರಿಗೂ ನೀಡಿದ್ದಾರೆ.

Read Full Story
08:36 PM (IST) Apr 19

India News Live: ಆ ಸಾಂಗ್ ಹಾಡಿದ ಮೇಲೆ ಎಸ್‌ಪಿಬಿ ಮಾಡಿದ್ದೇನು? ಇಳಯರಾಜಾ ಮ್ಯಾಜಿಕ್‌ಗೆ ಮುತ್ತಿಟ್ಟ ಗಾನ ಗಂಧರ್ವ!

ಕೆಲವು ಹಾಡುಗಳು ಮನಸ್ಸನ್ನು ಮಾತ್ರವಲ್ಲ, ಕಾಲವನ್ನೂ ನಿಲ್ಲಿಸಿಬಿಡುತ್ತವೆ. 'ಪಚ್ಚಮಲ ಪೂವು, ನೀ ಉಚ್ಚಿಮಲ ತೇನು...' ಆ ಸಾಲಿಗೆ ಸೇರುವ ಹಾಡು. ಸಂಗೀತ, ಸಾಹಿತ್ಯ, ಧ್ವನಿ-ಈ ಮೂರೂ ಸೇರಿ ಒಂದು ಮ್ಯಾಜಿಕ್ ಸೃಷ್ಟಿಸಿವೆ.

Read Full Story
08:10 PM (IST) Apr 19

India News Live: ದೇವಸ್ಥಾನಕ್ಕೆ ಹೋಗಿ ಅತ್ತು ಕೂಗಿ ಮರಳಿದ್ದೆ, ಮಗಳ ಸಾವಿನ ನೋವು ಬಿಚ್ಚಿಟ್ಟ ಗಾಯಕಿ ಚಿತ್ರ

ದೇವಸ್ಥಾನಕ್ಕೆ ಹೋಗಿ ಅತ್ತು ಕೂಗಿ ಮರಳಿದ್ದೆ, ಮಗಳ ಸಾವಿನ ನೋವು ಬಿಚ್ಚಿಟ್ಟ ಗಾಯಕಿ ಚಿತ್ರ, ನನಗೆ ವಾಪಸ್ ಬರಲು ಇಷ್ಟವಿರಲಿಲ್ಲ. ಯಾರ ಭೇಟಿಗೂ ಇಷ್ಟವಿರಲಿಲ್ಲ. ಹಾಡು ನಿಲ್ಲಿಸಿದ್ದೆ. ಯಾರಿಗೆ ನೋವು ಮಾಡಿದ್ದೇ ನಾನು? ಕೆಎಸ್ ಚಿತ್ರ ನೋವು ಎಂತವರ ಕಣ್ಣಾಲಿ ತೇವಗೊಳಿಸಲಿದೆ.

Read Full Story
08:05 PM (IST) Apr 19

India News Live: 'ತಾಯಿ ಕಿಳವಿ' ಚಿತ್ರಕ್ಕೆ ಶುಭ ಹಾರೈಸಿದ ಭಾರತಿರಾಜ - ನಿರ್ದೇಶಕರ ಸ್ಥಿತಿ ನೋಡಿ ಫ್ಯಾನ್ಸ್ ಕಣ್ಣೀರು!

ಸಿನಿಮಾ ಪ್ರೇಕ್ಷಕರು ವಿಭಿನ್ನ ಕಥಾಹಂದರದ ಚಿತ್ರಗಳನ್ನು ಹೆಚ್ಚು ಇಷ್ಟಪಡುತ್ತಿದ್ದಾರೆ. ಆ ಸಾಲಿಗೆ ಇತ್ತೀಚೆಗೆ ಸೇರಿದ ಚಿತ್ರ 'ತಾಯಿ ಕಿಳವಿ'. ಶಿವಕುಮಾರ್ ಮುರುಗೇಶನ್ ನಿರ್ದೇಶನದ ಈ ಚಿತ್ರವು ಹಾಸ್ಯದ ಜೊತೆಗೆ ಸಾಮಾಜಿಕ ಸಂದೇಶವನ್ನು ಸಾರುತ್ತದೆ.

Read Full Story
07:33 PM (IST) Apr 19

India News Live: ಮಗಳು ಸುಹಾನಾ ಹೊಟ್ಟೆ ಕಾಣದಂತೆ ಕಾಪಾಡಿದ ಶಾರುಖ್ ಖಾನ್​​ - ಎಂಥ ಸಂಸ್ಕಾರಿ ಅಪ್ಪ ಎಂದು ಹಾಡಿ ಹೊಗಳಿದ ಫ್ಯಾನ್ಸ್​

ನಟ ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್, ಅಗಸ್ತ್ಯ ನಂದಾ ಜೊತೆಗಿನ ಡೇಟಿಂಗ್ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ, ಮಗಳ ಹೊಟ್ಟೆ ಕಾಣದಂತೆ ಶಾರುಖ್ ಬಟ್ಟೆ ಸರಿಪಡಿಸಿದ ವಿಡಿಯೋ ವೈರಲ್ ಆಗಿದ್ದು, ಇದು ಅಭಿಮಾನಿಗಳ ಮೆಚ್ಚುಗೆ ಹಾಗೂ ಟ್ರೋಲಿಗರ ಕುಹಕಕ್ಕೆ ಕಾರಣವಾಗಿದೆ.

Read Full Story
07:00 PM (IST) Apr 19

India News Live: ಕೊಹ್ಲಿ ಬ್ಯಾಟಿಂಗ್‌ಗಿಂತ ಅನುಷ್ಕಾಗೆ ಫ್ಲೈಯಿಂಗ್ ಕಿಸ್ ಶೋ ಆಫ್ ಹೆಚ್ಚಾಯ್ತು, ಸೋಲಿಗೆ ಫ್ಯಾನ್ಸ್ ಗರಂ

ಕೊಹ್ಲಿ ಬ್ಯಾಟಿಂಗ್‌ಗಿಂತ ಅನುಷ್ಕಾಗೆ ಫ್ಲೈಯಿಂಗ್ ಕಿಸ್ ಶೋ ಆಫ್ ಹೆಚ್ಚಾಯ್ತು, ಸೋಲಿಗೆ ಫ್ಯಾನ್ಸ್ ಗರಂ ಆಗಿದ್ದಾರೆ. ಕೆಲ ಅಭಿಮಾನಿಗಳು ಡೆಲ್ಲಿ ವಿರುದ್ದ ಆರ್‌ಸಿಬಿ ಸೋಲಿಗೆ ಕೊಹ್ಲಿ ಕಳಪೆ ಬ್ಯಾಟಿಂಗ್ ಕಾರಣ ಎಂದಿದ್ದಾರೆ.

Read Full Story
06:18 PM (IST) Apr 19

India News Live: ನ್ಯಾಯ ಕೋರಿ ಬೀದಿಗಿಳಿದ ಮುಸ್ಲಿಂ ವಿದ್ಯಾರ್ಥಿನಿಯರು- ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ- ಕಾಶ್ಮೀರದಲ್ಲಿ ಘಟನೆ

ಜಮ್ಮು ಮತ್ತು ಕಾಶ್ಮೀರದ ಸೋಪೋರ್‌ನಲ್ಲಿ, ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಶಿಕ್ಷಕನೊಬ್ಬನ ಲೈಂಗಿಕ ದೌರ್ಜನ್ಯದ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ವಿದ್ಯಾರ್ಥಿನಿಯರ ಹೋರಾಟ ತೀವ್ರಗೊಂಡ ಬಳಿಕ, ಆರೋಪಿ ಶಿಕ್ಷಕನನ್ನು ಅಮಾನತುಗೊಳಿಸಿ ತನಿಖೆಗೆ ಆದೇಶಿಸಲಾಗಿದೆ.
Read Full Story
06:02 PM (IST) Apr 19

India News Live: Tamannaah Bhatia - ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ನಟಿ ತಮನ್ನಾ - ಸಾಂಪ್ರದಾಯಿಕ ಉಡುಗೆಯಲ್ಲಿ ಮಿಲ್ಕಿ ಬ್ಯೂಟಿ!

ನಟಿ ತಮನ್ನಾ ಭಾಟಿಯಾ ಭಾನುವಾರ ಬೆಳಗ್ಗೆ ತಿರುಮಲದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಸಾಂಪ್ರದಾಯಿಕ ಉಡುಗೆ ತೊಟ್ಟಿದ್ದ ತಮನ್ನಾ, ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದು ಆಶೀರ್ವಾದ ಬೇಡಿದರು.

Read Full Story
05:44 PM (IST) Apr 19

India News Live: ‘ನರಸಿಂಹ’ ನಂತರ ‘ಪರಶುರಾಮ್’ - ಹೊಂಬಾಳೆ ಫಿಲ್ಮ್ಸ್‌ನಿಂದ ಮಹಾವತಾರ ಯೂನಿವರ್ಸ್ ವಿಸ್ತರಣೆ

ಭಾನುವಾರ ಹೊಂಬಾಳೆ ಫಿಲ್ಮ್ಸ್, ಏಳು ಭಾಗಗಳಲ್ಲಿ ನಿರ್ಮಾಣವಾಗಲಿರುವ ತನ್ನ ಮಹಾವತಾರ ಸಿನೆಮ್ಯಾಟಿಕ್ ಯೂನಿವರ್ಸ್‌ನ ಎರಡನೇ ಚಿತ್ರ 'ಮಹಾವತಾರ ಪರಶುರಾಮ್' ಅನ್ನು ಘೋಷಿಸಿದೆ. ಸಿನಿಮಾ 2027ರ ಡಿಸೆಂಬರ್‌ನಲ್ಲಿ ತೆರೆಗೆ ಬರಲಿದೆ.

Read Full Story
05:41 PM (IST) Apr 19

India News Live: ಸೂರ್ಯಕುಮಾರ್ ಯಾದವ್ ಔಟ್, ಶ್ರೇಯಸ್ ಅಯ್ಯರ್ ಇನ್! ಪಂಜಾಬ್ ಹೀರೋಗೆ ಕ್ಯಾಪ್ಟನ್ ಪಟ್ಟ?

ಟೀಂ ಇಂಡಿಯಾದ ಟಿ20 ತಂಡದ ನಾಯಕತ್ವವನ್ನು ಶ್ರೇಯಸ್ ಅಯ್ಯರ್‌ಗೆ ವಹಿಸಿಕೊಡಲು ಬಿಸಿಸಿಐ ಚಿಂತನೆ ನಡೆಸಿದೆ. ಸೂರ್ಯಕುಮಾರ್ ಯಾದವ್ ಅವರ ಫಾರ್ಮ್ ಕಳವಳಕಾರಿಯಾಗಿರುವುದರಿಂದ, ಈ ಪ್ರಮುಖ ಬದಲಾವಣೆಗೆ ಬಿಸಿಸಿಐ ಸಿದ್ಧವಾಗಿದೆ ಎಂದು ಕ್ರಿಕೆಟ್ ವಲಯದಲ್ಲಿ ಚರ್ಚೆಯಾಗುತ್ತಿದೆ.

Read Full Story
05:19 PM (IST) Apr 19

India News Live: ಮೆಚ್ಚುಗೆ ಸಿಕ್ಕರೂ ಕಲೆಕ್ಷನ್ ಇಲ್ಲ - ಆರ್ಯ 'ಮಿಸ್ಟರ್ ಎಕ್ಸ್' ಸಿನಿಮಾಗೆ ಬಾಕ್ಸ್ ಆಫೀಸ್‌ನಲ್ಲಿ ನಿರಾಶೆ

ಸೂಪರ್ ಸ್ಟಾರ್ ಆರ್ಯ, ಮಂಜು ವಾರಿಯರ್ ನಟನೆಯ 'ಮಿಸ್ಟರ್ ಎಕ್ಸ್' ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕರೂ, ಬಾಕ್ಸ್ ಆಫೀಸ್‌ನಲ್ಲಿ ಕಲೆಕ್ಷನ್ ನಿರಾಶಾದಾಯಕವಾಗಿದೆ. ಚಿತ್ರದ ಕಲೆಕ್ಷನ್ ವರದಿ ಇಲ್ಲಿದೆ.

Read Full Story
05:07 PM (IST) Apr 19

India News Live: ಬಿಗ್ ಬಾಸ್ ಮನೆಯಲ್ಲಿ 17 ಜನಕ್ಕೆ ಒಂದೇ ಟಾಯ್ಲೆಟ್, ಊಟದಲ್ಲಿ ಜಿರಳೆ - ನಟಿ ಸೊನಾಲಿ ರಾವತ್ ಸ್ಫೋಟಕ ಆರೋಪ

ನಟಿ ಸೊನಾಲಿ ರಾವತ್, 'ಬಿಗ್ ಬಾಸ್ ಮರಾಠಿ' ಶೋ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಶೋನಲ್ಲಿ ಹೊರಗೆ ಕಾಣುವ ಗ್ಲಾಮರ್ ಹಿಂದೆ, ಸ್ಪರ್ಧಿಗಳ ಶೋಷಣೆಯ ಕರಾಳ ಸತ್ಯ ಅಡಗಿದೆ ಎಂದು ಅವರು ಹೇಳಿದ್ದಾರೆ.

Read Full Story
04:54 PM (IST) Apr 19

India News Live: ಕೊಲೆಸ್ಟ್ರಾಲ್ ಹೆಚ್ಚಾದ್ರೆ ದೇಹ ನೀಡೋ ಈ 6 ಸೂಚನೆಗಳನ್ನು ನೆಗ್ಲೆಕ್ಟ್ ಮಾಡ್ಬೇಡಿ!

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರಲ್ಲಿ ಅಧಿಕ ಕೊಲೆಸ್ಟ್ರಾಲ್ ಸಮಸ್ಯೆ ಕಾಣಿಸಿಕೊಳ್ತಿದೆ. ಕೊಲೆಸ್ಟ್ರಾಲ್ ಹೆಚ್ಚಾಗೋದು ಅನೇಕ ರೋಗಗಳಿಗೆ ಕಾರಣವಾಗುತ್ತೆ. ಅಧಿಕ ಕೊಲೆಸ್ಟ್ರಾಲ್ ಅಂದ್ರೆ ರಕ್ತದಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಾಗಿರೋದು.
Read Full Story
04:39 PM (IST) Apr 19

India News Live: ಗ್ಯಾರೆಂಟಿಯಿಂದ ಕಂಗೆಟ್ಟ ಸರ್ಕಾರ, ಹಿಮಾಚಲ ಅಧಿಕಾರಿಗಳ ಶೇ.30ರಷ್ಟು ವೇತನ 6 ತಿಂಗಳು ಮುಂದೂಡಿಕೆ

ಗ್ಯಾರೆಂಟಿಯಿಂದ ಕಂಗೆಟ್ಟ ಸರ್ಕಾರ, ಹಿಮಾಚಲ ಅಧಿಕಾರಿಗಳ ಶೇ.30ರಷ್ಟು ವೇತನ 6 ತಿಂಗಳು ಮುಂದೂಡಿಕೆ, ಆರ್ಥಿಕ ಪರಿಸ್ಥಿತಿ ಹದಗೆಟ್ಟಿರುವ ಕಾರಣ ಈ ಕಠಿಣ ನಿರ್ಧಾರವನ್ನು ತೆಗೆದುಕೊಳ್ಳಾಗಿದೆ. ಇದು ಭಾರಿ ವಿರೋಧಕ್ಕೆ ಕಾರಣವಾಗಿದೆ.

Read Full Story
04:35 PM (IST) Apr 19

India News Live: 'ದೃಶ್ಯಂ 3'ಗೆ ಕಥೆ ಕಳಿಸೋರ ಸ್ಕ್ರಿಪ್ಟ್ ಓದದೇ ಡಿಲೀಟ್ ಮಾಡ್ತೀನಿ - ನಿರ್ದೇಶಕ ಜೀತು ಜೋಸೆಫ್ ಹೀಗಂದಿದ್ದೇಕೆ?

ಸದ್ಯ ಅತಿ ಹೆಚ್ಚು ನಿರೀಕ್ಷೆ ಹುಟ್ಟಿಸಿರುವ ಸಿನಿಮಾ ಅಂದ್ರೆ ಅದು ಮೋಹನ್‌ಲಾಲ್-ಜೀತು ಜೋಸೆಫ್ ಕಾಂಬಿನೇಷನ್‌ನ 'ದೃಶ್ಯಂ 3'. ಈ ಚಿತ್ರವನ್ನು ಏಪ್ರಿಲ್ 2 ರಂದು ವಿಶ್ವಾದ್ಯಂತ ರಿಲೀಸ್ ಮಾಡಲು ಮೊದಲು ನಿರ್ಧರಿಸಲಾಗಿತ್ತು.

Read Full Story
04:13 PM (IST) Apr 19

India News Live: ಸಾಯಿ ಪಲ್ಲವಿ ದೇವರ ಮಗುನಾ? ಅವರಮ್ಮ ಹೇಳಿದ ಸತ್ಯ ಕೇಳಿದ್ರೆ ಶಾಕ್ ಆಗೋದ್ ಗ್ಯಾರಂಟಿ!

ನಟಿ ಸಾಯಿ ಪಲ್ಲವಿ ಅವರದೊಮದು ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಅದರಲ್ಲಿ ಅವರು ತಮ್ಮ ತಾಯಿ ಹೇಳಿದ ಸಂಗತಿಯೊಂದನ್ನು ಹಂಚಿಕೊಂಡಿದ್ದಾರೆ. ಅದೀಗ ಸಾಕಷ್ಟು ವೈರಲ್ ಅಗುತ್ತಿದೆ.

Read Full Story
04:09 PM (IST) Apr 19

India News Live: 'ಆ ನಿರ್ಧಾರ ನೋಡಿ ಶಾಕ್ ಆಯ್ತು'; ಸಿಎಸ್‌ಕೆ ಸೋಲಿನ ಬೆನ್ನಲ್ಲೇ ಮ್ಯಾನೇಜ್ಮೆಂಟ್ ಮೇಲೆ ಕಿಡಿಕಾರಿದ ಅಶ್ವಿನ್‌!

ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಸೋಲಿನ ನಂತರ, ಆರ್. ಅಶ್ವಿನ್ ಅವರು ಸಿಎಸ್‌ಕೆ ಮ್ಯಾನೇಜ್ಮೆಂಟ್‌ನ ತಂತ್ರಗಾರಿಕೆಯನ್ನು ತೀವ್ರವಾಗಿ ಟೀಕಿಸಿದ್ದಾರೆ. ಯುವ ಆಟಗಾರ ಆಯುಷ್ ಮ್ಹಾತ್ರೆಯವರ ಗಾಯವನ್ನು ನಿರ್ವಹಿಸಿದ ರೀತಿ ಮತ್ತು ಬ್ಯಾಟಿಂಗ್ ಕ್ರಮಾಂಕದಲ್ಲಿನ ತಪ್ಪುಗಳ ಬಗ್ಗೆ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಅಶ್ವಿನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Read Full Story
03:58 PM (IST) Apr 19

India News Live: ಮಿಸ್ ಇಂಡಿಯಾ ವರ್ಲ್ಡ್ 2026 ಕಿರೀಟ ಗೆದ್ದ ಸಾಧ್ವಿ ಸೈಲ್ ಯಾರು?

ಮಿಸ್ ಇಂಡಿಯಾ ವರ್ಲ್ಡ್ 2026 ಕಿರೀಟ ಗೆದ್ದ ಸಾಧ್ವಿ ಸೈಲ್ ಯಾರು?, 61ನೇ ಆವೃತ್ತಿ ಫೆಮಿನಾ ಮಿಸ್ ಇಂಡಿಯಾಗೆ ಹೊಸ ಬ್ಯೂಟಿ ಕ್ವೀನ್ ಭಾರಿ ಸಂಚಲನ ಸೃಷ್ಟಿಸಿದ್ದಾರೆ. ಕಿರೀಟ ಗೆದ್ದ ಹೊಸ ಸುಂದರಿ ಯಾರು?

Read Full Story
03:16 PM (IST) Apr 19

India News Live: ಭಾರತದ ವನ್ಯಜೀವಿ ಸುರಕ್ಷಿತ ರೆಡ್ ರೋಡ್ ಹೆದ್ದಾರಿ ಈಗ ಭಾರಿ ಟ್ರೆಂಡ್, ಕಡಿತಗೊಳ್ಳಲಿದೆ ವೇಗ

ಭಾರತದ ವನ್ಯಜೀವಿ ಸುರಕ್ಷಿತ ರೆಡ್ ರೋಡ್ ಹೆದ್ದಾರಿ ಈಗ ಭಾರಿ ಟ್ರೆಂಡ್, ಕಡಿತಗೊಳ್ಳಲಿದೆ ವೇಗ, ವನ್ಯಜೀವಿಗಳು ರಸ್ತೆ ದಾಟುವಾಗ ಅಪಘಾತಕ್ಕೀಡಾಗಿ ಸಾಯುವ ಪ್ರಮಾಣ ತಗ್ಗಿಸಲು ಈ ಹೆದ್ದಾರಿ ನಿರ್ಮಾಣ ಮಾಡಿದ NHAI ಬಹೇತಕ ಯಶಸ್ವಿಯಾಗಿದೆ.

Read Full Story
02:38 PM (IST) Apr 19

India News Live: ಜಪ್ತಿ ಮಾಡಿದ್ದ ಟ್ರಕ್ ರಿಲೀಸ್‌ಗೆ 55 ಲಕ್ಷಕ್ಕೆ ಬೇಡಿಕೆ - 10 ಲಕ್ಷ ಲಂಚ ಸ್ವೀಕರಿಸುತ್ತಿದ್ದ GST ಅಧಿಕಾರಿಗಳು ಎಸಿಬಿ ಬಲೆಗೆ

ಜಪ್ತಿಯಾದ ವಾಹನ ಬಿಡುಗಡೆಗೆ 55 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟಿದ್ದ ಇಬ್ಬರು ಕೇಂದ್ರ ಜಿಎಸ್‌ಟಿ ಅಧಿಕಾರಿಗಳನ್ನು ಗುಜರಾತ್ ಭ್ರಷ್ಟಾಚಾರ ನಿಗ್ರಹದಳ ಬಂಧಿಸಿದೆ. ಮೊದಲ ಕಂತಿನ 10 ಲಕ್ಷ ರೂಪಾಯಿ ಸ್ವೀಕರಿಸುತ್ತಿದ್ದಾಗ ಕಚೇರಿಯಲ್ಲೇ ಅಧಿಕಾರಿಗಳು ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.

Read Full Story