ಸಿನಿಮಾ ಪ್ರೇಕ್ಷಕರು ವಿಭಿನ್ನ ಕಥಾಹಂದರದ ಚಿತ್ರಗಳನ್ನು ಹೆಚ್ಚು ಇಷ್ಟಪಡುತ್ತಿದ್ದಾರೆ. ಆ ಸಾಲಿಗೆ ಇತ್ತೀಚೆಗೆ ಸೇರಿದ ಚಿತ್ರ 'ತಾಯಿ ಕಿಳವಿ'. ಶಿವಕುಮಾರ್ ಮುರುಗೇಶನ್ ನಿರ್ದೇಶನದ ಈ ಚಿತ್ರವು ಹಾಸ್ಯದ ಜೊತೆಗೆ ಸಾಮಾಜಿಕ ಸಂದೇಶವನ್ನು ಸಾರುತ್ತದೆ.
ನಟಿ ರಾಧಿಕಾ ಶರತ್ಕುಮಾರ್ ನಟನೆಯ 'ತಾಯಿ ಕಿಳವಿ' ಸಿನಿಮಾ ಇತ್ತೀಚೆಗೆ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಕಂಡಿದೆ. ಈ ಚಿತ್ರಕ್ಕೆ ನಿರ್ದೇಶಕ ಭಾರತಿರಾಜ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತಮಿಳು ಸಿನಿಮಾ ಪ್ರೇಕ್ಷಕರು ವಿಭಿನ್ನ ಕಥಾಹಂದರದ ಚಿತ್ರಗಳನ್ನು ಹೆಚ್ಚು ಇಷ್ಟಪಡುತ್ತಿದ್ದಾರೆ. ಆ ಸಾಲಿಗೆ ಇತ್ತೀಚೆಗೆ ಸೇರಿದ ಚಿತ್ರ 'ತಾಯಿ ಕಿಳವಿ'. ಶಿವಕುಮಾರ್ ಮುರುಗೇಶನ್ ನಿರ್ದೇಶನದ ಈ ಚಿತ್ರವು ಹಾಸ್ಯದ ಜೊತೆಗೆ ಸಾಮಾಜಿಕ ಸಂದೇಶವನ್ನು ಸಾರುತ್ತದೆ.
ಈ ಹಿಂದೆಂದೂ ಕಾಣಿಸಿಕೊಳ್ಳದ ಪಾತ್ರದಲ್ಲಿ ರಾಧಿಕಾ 'ತಾಯಿ ಕಿಳವಿ' ಚಿತ್ರದಲ್ಲಿ ನಟಿಸಿದ್ದಾರೆ. ಅವರ ಮೇಕಪ್ ಕೂಡ ತುಂಬಾ ಸಹಜವಾಗಿತ್ತು. 70 ವರ್ಷದ ಧೈರ್ಯವಂತೆ ವೃದ್ಧೆಯ ಪಾತ್ರದಲ್ಲಿ ರಾಧಿಕಾ ನಟಿಸಿದ್ದಾರೆ. ಚಿತ್ರದಲ್ಲಿ ಮುತ್ತುಕುಮಾರ್, ಮುನಿಷ್ಕಾಂತ್, ರೇಚಲ್ ರೆಬೆಕಾ, ಇಳವರಸು, ಜಾರ್ಜ್ ಮರಿಯನ್, ಬಾಲಾ ಶರವಣನ್ ಮುಂತಾದವರು ನಟಿಸಿದ್ದಾರೆ.
10 ಕೋಟಿ ರೂಪಾಯಿ ಬಜೆಟ್ನಲ್ಲಿ ನಿರ್ಮಾಣವಾದ ಈ ಚಿತ್ರ, ಬಾಕ್ಸ್ ಆಫೀಸ್ನಲ್ಲಿ ಸುಮಾರು 80 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ನಿವಾಸ್ ಕೆ. ಪ್ರಸನ್ನ ಅವರ ಸಂಗೀತ ಚಿತ್ರಕ್ಕೆ ಮತ್ತಷ್ಟು ಶಕ್ತಿ ತುಂಬಿದೆ. ಚಿತ್ರಮಂದಿರಗಳಂತೆ ಹಾಟ್ಸ್ಟಾರ್ ಒಟಿಟಿಯಲ್ಲೂ ಉತ್ತಮ ಪ್ರತಿಕ್ರಿಯೆ ಪಡೆದು ಟ್ರೆಂಡಿಂಗ್ನಲ್ಲಿ ಮೊದಲ ಸ್ಥಾನದಲ್ಲಿದೆ.
ರಾಧಿಕಾ ಅವರ ಗುರುಗಳಾದ ಭಾರತಿರಾಜ ಈ ಚಿತ್ರವನ್ನು ನೋಡಿ ನಟಿಯನ್ನು ಅಭಿನಂದಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಕಳೆದ ಎರಡು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿರುವ ಭಾರತಿರಾಜ, ಮಗನ ನಿಧನದ ನಂತರ ದೈಹಿಕವಾಗಿ ಮತ್ತು ಮಾನಸಿಕವಾಗಿ ಕುಗ್ಗಿದ್ದಾರೆ. ಅವರ ಆರೋಗ್ಯದ ಬಗ್ಗೆ ಆಗಾಗ ವದಂತಿಗಳು ಹರಿದಾಡುತ್ತಿರುತ್ತವೆ.
ಅಭಿಮಾನಿಗಳ ಕಣ್ಣಲ್ಲಿ ನೀರು
ವಿಡಿಯೋದಲ್ಲಿ ಭಾರತಿರಾಜ ತುಂಬಾ ತೆಳ್ಳಗೆ ಕಾಣಿಸಿಕೊಂಡಿದ್ದಾರೆ. 'ತಾಯಿ ಕಿಳವಿ' ಸಿನಿಮಾ ನೋಡಿದ್ರಾ ಎಂದು ರಾಧಿಕಾ ಕೇಳಿದಾಗ, ನೋಡಿದ್ದಾಗಿ ಹೇಳಿ, 'ಈ ಚಿತ್ರಕ್ಕಾಗಿ ನಿನಗೆ ರಾಷ್ಟ್ರ ಪ್ರಶಸ್ತಿ ಸಿಗುತ್ತದೆ' ಎಂದು ಹಾರೈಸಿದ್ದಾರೆ. ಗುರು-ಶಿಷ್ಯೆಯ ನಡುವಿನ ಸುಂದರ ಬಾಂಧವ್ಯವನ್ನು ಈ ವಿಡಿಯೋ ತೋರಿಸುತ್ತದೆ. ಆದರೆ, ಸದಾ ಗಂಭೀರವಾಗಿ ಕಾಣುತ್ತಿದ್ದ ಭಾರತಿರಾಜರ ಈ ಸ್ಥಿತಿ ಅಭಿಮಾನಿಗಳ ಕಣ್ಣಲ್ಲಿ ನೀರು ತರಿಸಿದೆ.


