- Home
- News
- India News
- India Latest News Live: ರಾಮಲಲ್ಲಾಗೆ ವಿಶ್ವದ ದುಬಾರಿ ಮಾವು 'ಸೂರ್ಯನ ಮೊಟ್ಟೆ' ಅರ್ಪಣೆ - ಕೆಜಿಗೆ 3 ಲಕ್ಷ- ರಾಜ್ಯದಲ್ಲೂ ಬೆಳೆದ ಇದರ ವಿಶೇಷತೆ ಏನು
India Latest News Live: ರಾಮಲಲ್ಲಾಗೆ ವಿಶ್ವದ ದುಬಾರಿ ಮಾವು 'ಸೂರ್ಯನ ಮೊಟ್ಟೆ' ಅರ್ಪಣೆ - ಕೆಜಿಗೆ 3 ಲಕ್ಷ- ರಾಜ್ಯದಲ್ಲೂ ಬೆಳೆದ ಇದರ ವಿಶೇಷತೆ ಏನು

ಲಾತೂರು: ‘ಸಂಸದನಾಗಿ ಆಯ್ಕೆಯಾದ ಬಳಿಕ ವೈದ್ಯಕೀಯ ವೃತ್ತಿಗೆ ಹೆಚ್ಚು ಸಮಯ ನೀಡಲಾಗುತ್ತಿಲ್ಲ. ನನಗೆ ಆರ್ಥಿಕವಾಗಿ ಬಹಳ ನಷ್ಟವಾಗುತ್ತಿದೆ’ ಎಂದು ಮೂಲತಃ ವೈದ್ಯರಾಗಿರುವ ಮಹಾರಾಷ್ಟ್ರದ ಲಾತೂರಿನ ಕಾಂಗ್ರೆಸ್ ಸಂಸದ ಡಾ. ಶಿವಾಜಿ ಕಲ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
‘2023-24ನೇ ಸಾಲಿನಲ್ಲಿ ನಾನು ಸುಮಾರು 36 ಲಕ್ಷ ರು. ಆದಾಯ ತೆರಿಗೆ ಕಟ್ಟಿದ್ದೆ. ಆದರೆ 2024-25ನೇ ಸಾಲಿನಲ್ಲಿ ನನ್ನ ಆದಾಯ ಗಣನೀಯವಾಗಿ ಕಡಿಮೆಯಾಗಿ ಕೇವಲ 8.75 ಲಕ್ಷ ರು. ಮಾತ್ರ ತೆರಿಗೆ ಕಟ್ಟಿದ್ದೇನೆ. ಸಂಸದನಾದ ನಂತರ ರೋಗಿಗಳಿಗೆ ಸಾಕಷ್ಟು ಸಮಯ ಕೊಡಲು ಆಗುತ್ತಿಲ್ಲ. ನನ್ನ ಆಸ್ಪತ್ರೆಯನ್ನು ಪೂರ್ಣ ಸಮಯ ನಡೆಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಆರ್ಥಿಕ ನಷ್ಟವಾಗುತ್ತಿದೆ’ ಎಂದರು.
India Latest News Live 16 June 2026ರಾಮಲಲ್ಲಾಗೆ ವಿಶ್ವದ ದುಬಾರಿ ಮಾವು 'ಸೂರ್ಯನ ಮೊಟ್ಟೆ' ಅರ್ಪಣೆ - ಕೆಜಿಗೆ 3 ಲಕ್ಷ- ರಾಜ್ಯದಲ್ಲೂ ಬೆಳೆದ ಇದರ ವಿಶೇಷತೆ ಏನು
India Latest News Live 16 June 2026ತೆಲಂಗಾಣದಲ್ಲಿ ಹೈದರಾಬಾದ್ ರಸ್ತೆಗೆ ಡೋನಾಲ್ಡ್ ಟ್ರಂಪ್ ಹೆಸರು, ಶರಣಾಗಿದ್ದು ಯಾರು ಪ್ರಶ್ನಿಸಿದ ಬಿಜೆಪಿ
ತೆಲಂಗಾಣ ಸರ್ಕಾರ ಹೈದರಾಬಾದ್ನಲ್ಲಿ ರಸ್ತೆಗೆ ಡೋನಾಲ್ಡ್ ಟ್ರಂಪ್ ಅವನ್ಯೂ ರಸ್ತೆ ಎಂದು ನಾಮಕರಣ ಮಾಡಿದೆ. ಇದರ ಬೆನ್ನಲ್ಲೇ ವಿವಾದಗಳು ಶುರುವಾಗಿದೆ. ಅಮೆರಿಕ ಮುಂದೆ ಶರಣಾಗಿದ್ದು ಯಾರು ಎಂದು ಬಿಜೆಪಿ ಪ್ರಶ್ನಿಸಿದೆ.
India Latest News Live 16 June 2026NH 150C Project - ಬಿಸಿಲುನಾಡು ರಾಯಚೂರು ಆಗಲಿದೆ ಹೈವೇಗಳ ಹಬ್ - ದೆಹಲಿಯಲ್ಲಿ ಮಹತ್ವದ ಸಭೆ
NH 150C Project: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (NHAI) ಅಧ್ಯಕ್ಷರಾದ ಸಂತೋಷ್ ಯಾದವ್ ಹಾಗೂ ಯೋಜನೆಗಳ ಸದಸ್ಯರಾದ ಅನಿಲ್ ಚೌಧರಿ ಅವರನ್ನು ಸಂಸದ ಜಿ ಕುಮಾರ ನಾಯಕ ಭೇಟಿ ಮಾಡಿದ್ರು.
India Latest News Live 16 June 2026ಭಾರತಕ್ಕೆ ಗಂಡಾಂತರ, ಭಾರಿ ಮಳೆಗಾಲದಲ್ಲೂ ಎಲ್ಲೆಡೆ ಬಿಸಿಲು, ಬೆಚ್ಚಿ ಬೀಳಿಸಿದ ಸ್ಯಾಟಲೈಟ್ ವರದಿ
ಮುಂಗಾರು ವಿಳಂಬವಾಗಿ ಕೇರಳಕ್ಕೆ ಅಪ್ಪಳಿಸಿದರೂ ದೇಶದ ಹಲವು ಭಾಗಕ್ಕೆ ಇನ್ನೂ ತಲುಪಿಲ್ಲ. ಇದೀಗ ಸ್ಯಾಟಲೈಟ್ ಚಿತ್ರ ಹಾಗೂ ವರದಿ ಗಂಡಾಂತರದ ಸೂಚನೆ ನೀಡಿದೆ. ಭಾರಿ ಮಳೆಗಾಲದಲ್ಲೂ ಭಾರತದಲ್ಲೆಡೆ ಬಿಸಿಲು ತೀವ್ರಗೊಂಡಿದೆ.
India Latest News Live 16 June 202616 ತಿಂಗಳ ಬಳಿಕ ಪ್ರಧಾನಿ ಮೋದಿ ಡೋನಾಲ್ಡ್ ಟ್ರಂಪ್ ಮಹತ್ವದ ಭೇಟಿ, ಹ್ಯಾಂಡ್ಶೇಕ್ನಲ್ಲೇ ಸಿಕ್ಕಿತಾ ಸೂಚನೆ?
ಜಿ7 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಡೋನಾಲ್ಡ್ ಟ್ರಂಪ್ ಭೇಟಿಯಾಗಿದ್ದಾರೆ. 16 ತಿಂಗಳ ಬಳಿಕ ಇಬ್ಬರು ನಾಯಕರು ಭೇಟಿಯಾಗಿದ್ದಾರೆ. ಹ್ಯಾಂಡ್ಶೇಕ್ ಮಾಡಿ ಇಬ್ಬರು ಮಾತನಾಡಿದ್ದಾರೆ. ಈ ಭೇಟಿ ತೀವ್ರ ಕುತೂಹಲ ಕೆರಳಿಸಿದೆ.
India Latest News Live 16 June 2026Anchor Sreemukhi - ಆಹಾ ನನ್ನ ಮದ್ವೆಯಂತೆ.. ಕೊನೆಗೂ ಆ ಸತ್ಯ ಬಾಯ್ಬಿಟ್ಟ ಸ್ಟಾರ್ ಆ್ಯಂಕರ್!
Tollywood ಲೇಡಿ ಆ್ಯಂಕರ್ಗಳ ಪೈಕಿ ರಶ್ಮಿ ಗೌತಮ್ ಮತ್ತು ಶ್ರೀಮುಖಿ ಇನ್ನೂ ಬ್ಯಾಚುಲರ್ ಆಗಿಯೇ ಉಳಿದಿದ್ದಾರೆ. 30 ವರ್ಷ ದಾಟಿದರೂ ಇವರು ಮದುವೆಯಾಗಿಲ್ಲ. ರಶ್ಮಿ ಗೌತಮ್ ಮದುವೆ ಬಗ್ಗೆ ಸ್ಪಷ್ಟತೆ ಇಲ್ಲ, ಆದರೆ ಶ್ರೀಮುಖಿ ಮಾತ್ರ ಇತ್ತೀಚೆಗೆ ತಮ್ಮ ಮದುವೆ ಯಾವಾಗ ಎಂಬುದನ್ನು ಬಹಿರಂಗಪಡಿಸಿದ್ದಾರೆ.
India Latest News Live 16 June 2026Akshay Kumar - ಹೆಲಿಕಾಪ್ಟರನ್ನೇ ಟ್ಯಾಕ್ಸಿ ಮಾಡಿಕೊಂಡಿದ್ದ ಅಕ್ಷಯ್ - ಫರಾ ಖಾನ್ ಹೇಳಿದ್ರು ರೋಚಕ ಕಥೆ!
Akshay Kumar 'ತೀಸ್ ಮಾರ್ ಖಾನ್' ಸಿನಿಮಾ ಶೂಟಿಂಗ್ಗೆ ಪ್ರತಿದಿನ ಹೆಲಿಕಾಪ್ಟರ್ನಲ್ಲಿ ಹೋಗಿಬರುತ್ತಿದ್ದರು! ಈ ಬಗ್ಗೆ ನಿರ್ದೇಶಕಿ ಫರಾ ಖಾನ್ ತಮಾಷೆಯಾಗಿ ಮಾತನಾಡಿದ್ದು, 'ನನ್ನ ದುಡ್ಡು ತಿಂದ' ಎಂದು ಕಾಲೆಳೆದಿದ್ದಾರೆ.
India Latest News Live 16 June 2026Rashmika Mandanna - ವಿದ್ಯಾರ್ಥಿಗಳಿಗೆ ನೆರವು ನೀಡಿದ ಸ್ಟಾರ್ ಜೋಡಿ - ಆದರೆ ಎಲ್ಲರ ಗಮನ ಸೆಳೆದಿದ್ದು ಈ ಕ್ಷಣ!
Rashmika Mandanna: ವೇದಿಕೆ ಮೇಲೆಯೇ ಪತಿ ವಿಜಯ್ ದೇವರಕೊಂಡ ಅವರ ಮುಖದ ಬೆವರನ್ನ ಪ್ರೀತಿಯಿಂದ ಒರೆಸಿ, ಅವರ ಮೀಸೆಯನ್ನ ಸರಿಪಡಿಸುತ್ತಿರುವ ರಶ್ಮಿಕಾ ಅವರ ವಿಡಿಯೋ ಅಭಿಮಾನಿಗಳ ಹೃದಯ ಗೆಲ್ತಾ ಇದೆ.
India Latest News Live 16 June 2026Thalapathy Vijay ಡಿವೋರ್ಸ್ ರಹಸ್ಯ - ವಿಜಯ್ ಅಕ್ರಮ ಸಂಬಂಧ.. ಪತ್ನಿ ಸಂಗೀತಾ ನೇರ ಆರೋಪ!
Thalapathy Vijay ತಮಿಳುನಾಡು ರಾಜಕೀಯದಲ್ಲಿ ದಿಗ್ವಿಜಯ ಸಾಧಿಸಿ ಸಿಎಂ ಆಗಿದ್ದಾರೆ. ಆದ್ರೆ ವೈಯಕ್ತಿಕ ಬದುಕು ಮಾತ್ರ ಹಳಿ ತಪ್ಪಿದೆ. ವಿಜಯ್ ಪತ್ನಿ ಸಂಗೀತಾ ಡಿವೋರ್ಸ್ಗೆ ಅರ್ಜಿ ಸಲ್ಲಿಸಿರೋ ವಿಷ್ಯ ಗೊತ್ತೇ ಇದೆ.
India Latest News Live 16 June 2026Sunita Ahuja - 'ಗೋವಿಂದ ಒಳ್ಳೆ ಮಗ, ಒಳ್ಳೆ ಸಹೋದರ - ಆದರೆ ಗಂಡನಾಗಿ...' - ಪತ್ನಿ ಸುನಿತಾ ಹೇಳಿದ್ದೇನು?
Govinda wife: 40 ವರ್ಷಗಳ ದಾಂಪತ್ಯದ ನಂತರ ಸುನಿತಾ, ಗೋವಿಂದ ಒಬ್ಬ ಅತ್ಯುತ್ತಮ ಮಗ ಮತ್ತು ಸಹೋದರ, ಆದರೆ ಗಂಡನಾಗಿ ಅವರಿಂದ ನನ್ನ ನಿರೀಕ್ಷೆಗಳು ಬೇರೆಯೇ ಇದ್ದವು ಎಂದು ಅವರು ಹೇಳಿದ್ದಾರೆ.
India Latest News Live 16 June 2026Marriage Secrets - ಮದುವೆಯಲ್ಲಿ ವಧು ಯಾಕೆ ವರನ ಎಡಭಾಗದಲ್ಲೇ ಕೂರುತ್ತಾಳೆ? ಕಾರಣವೇನು?
Marriage Secrets: ಮದುವೆಯಲ್ಲಿ ವಧು ಯಾವಾಗಲೂ ವರನ ಎಡಭಾಗದಲ್ಲಿ ಕೂರುವುದನ್ನು ನಾವು ನೋಡುತ್ತೇವೆ. ಆದರೆ, ಬಲಭಾಗದಲ್ಲಿ ಏಕೆ ಕೂರುವುದಿಲ್ಲ? ಎಡಭಾಗದಲ್ಲಿ ಕೂರುವುದರ ಹಿಂದಿನ ರಹಸ್ಯಗಳು, ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಕಾರಣಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
India Latest News Live 16 June 2026Odiyan - ಜಾನಪದ ಕಥೆ, ಭಯಾನಕ ಲೋಕ, ಸ್ಟಾರ್ ಕಾಸ್ಟ್ - ಮಾಲಿವುಡ್ಗೆ ಎಂಟ್ರಿ ಕೊಟ್ಟ ಕರಣ್ ಜೋಹರ್!
Bollywood ಖ್ಯಾತ ನಿರ್ಮಾಪಕ ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ಸ್ ಇದೇ ಮೊದಲ ಬಾರಿಗೆ ಮಲಯಾಳಂ ಚಿತ್ರರಂಗಕ್ಕೆ ಕಾಲಿಡುತ್ತಿದೆ. ಮಂಜು ವಾರಿಯರ್ ಮತ್ತು ಪೃಥ್ವಿರಾಜ್ ಸುಕುಮಾರನ್ ಮುಖ್ಯಭೂಮಿಕೆಯಲ್ಲಿದ್ದಾರೆ.
India Latest News Live 16 June 2026Alia Bhatt - ಕಲ್ಕಿ ಸೀಕ್ವೆಲ್ನಲ್ಲಿ ಆಲಿಯಾ? ಹೊಸ ಪಾತ್ರದಲ್ಲಿ ಪ್ರಭಾಸ್ಗೆ ಜೋಡಿಯಾಗ್ತಾರಾ ಬಾಲಿವುಡ್ ಬ್ಯೂಟಿ!
Kalki 2898 AD ಸೀಕ್ವೆಲ್ನ ಶೂಟಿಂಗ್ ಭರದಿಂದ ಸಾಗುತ್ತಿದೆ. ಈ ಮಧ್ಯೆ, ಆಲಿಯಾ ಭಟ್ ಈ ಚಿತ್ರತಂಡ ಸೇರಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಮಹತ್ವದ ಪಾತ್ರದ ಬಗ್ಗೆ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿದೆ.
India Latest News Live 16 June 2026Amrita Singh - ಮದುವೆ ಯಾಕೆ ಬೇಕು? ಸೈಫ್ ಮಾಜಿ ಪತ್ನಿ ಅಮೃತಾ ಕೊಟ್ಟ ಆ ಹೇಳಿಕೆ ಈಗ ಮತ್ತೆ ವೈರಲ್!
Amrita Singh: ಸೈಫ್ ಅಲಿ ಖಾನ್ ಜೊತೆಗಿನ ವಿಚ್ಛೇದನದ ನಂತರ ಅಮೃತಾ ಸಿಂಗ್ ಯಾಕೆ ಮತ್ತೆ ಮದುವೆಯಾಗಲಿಲ್ಲ? ಅವರ ಹಳೆಯ ಸಂದರ್ಶನವೊಂದು ಈಗ ಮತ್ತೆ ಸದ್ದು ಮಾಡುತ್ತಿದೆ. ಅದರಲ್ಲಿ ಅವರು ಹೇಳಿದ್ದೇನು?
India Latest News Live 16 June 2026ನೇರವಾಗಿ ಮೆಡಿಕಲ್ನಿಂದ ಶೀತ ಕೆಮ್ಮು ಸಿರಪ್ ಖರೀದಿಸುವ ಪದ್ಧತಿಗೆ ಬ್ರೇಕ್, ಇನ್ನು ಮುಂದೆ ಹೊಸ ನಿಯಮ
ಭಾರತ ಡ್ರಗ್ಸ್ ರೂಲ್ಸ್ನಲ್ಲಿ ಮಹತ್ತರ ಬದಲಾವಣೆ ಮಾಡಲಾಗಿದೆ. ಇನ್ನು ಮುಂದೆ ನೀವು ನೇರವಾಗಿ ಮೆಡಿಕಲ್ಗೆ ಹೋಗಿ ಶೀತ ಕೆಮ್ಮು ಸಿರಪ್ ಖರೀದಿಸಲು ಸಾಧ್ಯವಿಲ್ಲ. ಹೊಸ ನಿಯಮದಲ್ಲಿ ಏನಿದೆ? ಔಷಧಿ ಖರೀದಿಸುವ ವಿಧಾನ ಹೇಗೆ?
India Latest News Live 16 June 2026TMC Crisis - ಶಾಸಕರು, ಸಂಸದರು ಬರೀ ಟ್ರೈಲರ್, ಮಮತಾ ಕೋಟೆಯಲ್ಲಿ ಅಸಲಿ ಆಟ ಈಗ ಶುರು!
ಪಶ್ಚಿಮ ಬಂಗಾಳದ ಟಿಎಂಸಿಯಲ್ಲಿ ಬಂಡಾಯ ತೀವ್ರ 65 ಶಾಸಕರ ಬೆಂಬಲವಿದೆ ಎಂದು ಹೇಳಿಕೊಳ್ಳುತ್ತಿರುವ ಬಂಡಾಯ ಬಣ, ಈಗ ನಗರಸಭೆ ಮತ್ತು ಜಿಲ್ಲಾ ಪರಿಷತ್ಗಳಂತಹ ಸ್ಥಳೀಯ ಸಂಸ್ಥೆಗಳ ಮೇಲೆ ಹಿಡಿತ ಸಾಧಿಸಲು ಮುಂದಾಗಿದೆ.
India Latest News Live 16 June 2026Dhanush Son - ರಜನಿಕಾಂತ್ ಮೊಮ್ಮಗ ಯಾತ್ರಾ ಹೀರೋ ಆಗಿ ಎಂಟ್ರಿ - ತಂದೆ ಧನುಷ್ ನಿರ್ದೇಶನದಲ್ಲೇ ಮೊದಲ ಸಿನಿಮಾ!
ನಟ ಧನುಷ್ ಅವರ ಹಿರಿಯ ಮಗ ಯಾತ್ರಾ, ಇದೀಗ ಸಿನಿಮಾ ರಂಗಕ್ಕೆ ಹೀರೋ ಆಗಿ ಎಂಟ್ರಿ ಕೊಡುತ್ತಿದ್ದಾರೆ. ವಿಶೇಷ ಅಂದ್ರೆ, ಈ ಚಿತ್ರವನ್ನು ಸ್ವತಃ ಧನುಷ್ ಅವರೇ ನಿರ್ದೇಶಿಸಲಿದ್ದಾರೆ ಎಂದು ವರದಿಯಾಗಿದೆ.
India Latest News Live 16 June 2026ವಿರಾಟ್ ಕೊಹ್ಲಿ ಸಲಹೆಗೆ ಕ್ಯಾರೇ ಎನ್ನದ ವೈಭವ್ ಸೂರ್ಯವಂಶಿ..! ಈ ರೀತಿ ಕಿರಿಕ್ ಇದೇ ಮೊದಲಲ್ಲ
India Latest News Live 16 June 2026ನಾಗ್ಪುರದಲ್ಲಿ ಬೆಚ್ಚಿಬೀಳಿಸುವ ಕೃತ್ಯ, ಏರ್ ಫೋರ್ಸ್ ಅಧಿಕಾರಿಯ ಪತ್ನಿ ಮೇಲೆ ಗ್ಯಾಂಗ್ನಿಂದ ದೌರ್ಜನ್ಯ - ಮತಾಂತರದ ವೀಡಿಯೋ ವೈರಲ್!
ನಾಗ್ಪುರದಲ್ಲಿ ವಾಯುಪಡೆ ಅಧಿಕಾರಿಯ ಪತ್ನಿಯನ್ನು ಆಕೆಯ ಶಾಲಾ ಸ್ನೇಹಿತ ಆಯಾಜ್ ತಾಜ್ ಮದಾರೆ ಎಂಬಾತ ವಂಚಿಸಿ, ಅ*ತ್ಯಾಚಾರ ಎಸಗಿದ್ದಾನೆ. ನಂತರ ಬ್ಲಾಕ್ಮೇಲ್ ಮಾಡಿ, ಬಲವಂತವಾಗಿ ಇಸ್ಲಾಂಗೆ ಮತಾಂತರಗೊಳಿಸಿ ನಿಕಾಹ್ ಮಾಡಿಕೊಂಡಿದ್ದಾನೆ.
India Latest News Live 16 June 2026Kainchi Dham - ವಿರಾಟ್ ಕೊಹ್ಲಿ, ಸ್ಟೀವ್ ಜಾಬ್ಸ್, ಜುಕರ್ಬರ್ಗ್ ಬದುಕು ಬದಲಿಸಿದ ಕೈಂಚಿ ಧಾಮ್ ರಹಸ್ಯವೇನು??
ಆ್ಯಪಲ್ ಸಂಸ್ಥಾಪಕ ಸ್ಟೀವ್ ಜಾಬ್ಸ್, ಫೇಸ್ಬುಕ್ನ ಮಾರ್ಕ್ ಜುಕರ್ಬರ್ಗ್ನಿಂದ ಹಿಡಿದು ವಿರಾಟ್ ಕೊಹ್ಲಿಯವರೆಗೆ ಅನೇಕ ಗಣ್ಯರು ನೀಮ್ ಕರೋಲಿ ಬಾಬಾರ ಕೈಂಚಿ ಧಾಮ್ ಆಶ್ರಮಕ್ಕೆ ಭೇಟಿ ನೀಡಿದ್ದಾರೆ. ಅಷ್ಟಕ್ಕೂ ಅಲ್ಲೇನಿದೆ? ಕೈಂಚಿ ಧಾಮ್ನ ರಹಸ್ಯ, ವಿಶೇಷತೆಗಳು, ಅಲ್ಲಿಗೆ ತಲುಪುವುದು ಹೇಗೆ?