MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Ind vs SL 2nd Test
ICC Test Rankings
Mekedatu Project
Nepal-tibet Floods
New Financial Rules September
Bengaluru Airport Gold Smuggling
Bengaluru Development Authority
Mangaluru Railway station
CJ Roy Death Case
Hosapete to Arasikere Train
  • Home
  • Entertainment
  • Sandalwood
  • 'ಸ್ಯಾಂಡಲ್‌ವುಡ್ ಶೈನಿಂಗ್' ಸೆಷನ್‌ನಲ್ಲಿ ಸಪ್ತಮಿ ಗೌಡ ಹೇಳಿದ್ದೇನು? 'ಪ್ಯಾನ್ ಇಂಡಿಯಾ ಸಿನಿಮಾ' ಸೀಕ್ರೆಟ್ ತೆರೆದಿಟ್ಟ ನಟಿ!

'ಸ್ಯಾಂಡಲ್‌ವುಡ್ ಶೈನಿಂಗ್' ಸೆಷನ್‌ನಲ್ಲಿ ಸಪ್ತಮಿ ಗೌಡ ಹೇಳಿದ್ದೇನು? 'ಪ್ಯಾನ್ ಇಂಡಿಯಾ ಸಿನಿಮಾ' ಸೀಕ್ರೆಟ್ ತೆರೆದಿಟ್ಟ ನಟಿ!

"ಸಿನಿಮಾ ಎಂಬುದು ಕೇವಲ ಭಾಷೆಯಲ್ಲ, ಅದು ಸಂಸ್ಕೃತಿಯ ಪ್ರತಿಬಿಂಬ. 'ಕಾಂತಾರ' ಸಿನಿಮಾ ಗೆದ್ದಿದ್ದು ಅದರ ಮಣ್ಣಿನ ವಾಸನೆಯಿಂದ. ಶ್ರೀಮಂತ ಮತ್ತು ಬಡವನ ನಡುವಿನ ಸಂಘರ್ಷ ಜಗತ್ತಿನ ಯಾವುದೇ ಮೂಲೆಯ ಪ್ರೇಕ್ಷಕನಿಗೂ ಅರ್ಥವಾಗುತ್ತದೆ.

2 Min read
Author : Shriram Bhat
Published : Aug 27 2026, 12:16 PM IST
Share this Photo Gallery
  • FB
  • TW
  • Linkdin
  • Whatsapp
17
Image Credit : Instagram

Sapthami Gowda, talk in Sandalwood Shining of India Today Karnataka Roundtable- ಸ್ಯಾಂಡಲ್‌ವುಡ್ ‘ಲೀಲಾ’ ಸಪ್ತಮಿ ಗೌಡ ಸಿಡಿಸಿದ ಸತ್ಯದ ಪಟಾಕಿ: ಪ್ಯಾನ್-ಇಂಡಿಯಾ ಕ್ರೇಜ್ ಮತ್ತು ಸಂಭಾವನೆಯ ಗುಟ್ಟು ಬಯಲು!

ಬೆಳ್ಳಿತೆರೆಯ ಮೇಲೆ ‘ಲೀಲಾ’ ಆಗಿ ಬಂದು ಇಡೀ ಭಾರತದಾದ್ಯಂತ ಮೋಡಿ ಮಾಡಿದ ಬೆಡಗಿ ಸಪ್ತಮಿ ಗೌಡ ಈಗ ಕೇವಲ ನಟಿಯಷ್ಟೇ ಅಲ್ಲ, ಸ್ಯಾಂಡಲ್‌ವುಡ್‌ನ ಪ್ರಬಲ ಧ್ವನಿಯಾಗಿಯೂ ಹೊರಹೊಮ್ಮುತ್ತಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
27
Image Credit : Instagram

ಇತ್ತೀಚೆಗೆ ನಡೆದ 'ಇಂಡಿಯಾ ಟುಡೇ ಕರ್ನಾಟಕ ರೌಂಡ್‌ಟೇಬಲ್'ನ 'ಸ್ಯಾಂಡಲ್‌ವುಡ್ ಶೈನಿಂಗ್' ಸಂವಾದದಲ್ಲಿ ಭಾಗವಹಿಸಿದ್ದ ಸಪ್ತಮಿ, ಸಿನಿಮಾ ರಂಗದ ಒಳಸುಳಿಗಳನ್ನು ಬಿಚ್ಚಿಟ್ಟ ರೀತಿ ನಿಜಕ್ಕೂ ಬೆರಗುಗೊಳಿಸುವಂತಿತ್ತು. ಸಹ-ನಟಿ ಆಶಿಕಾ ರಂಗನಾಥ್ ಅವರೊಂದಿಗೆ ವೇದಿಕೆ ಹಂಚಿಕೊಂಡ ಸಪ್ತಮಿ, ಯಾವುದೇ ಮುಲಾಜಿಲ್ಲದೆ ಸಿನಿಮಾ ಇಂಡಸ್ಟ್ರಿಯ ಕಹಿ ಸತ್ಯಗಳನ್ನು ‘ಧಮಾಕಾ’ ಶೈಲಿಯಲ್ಲಿ ವಿವರಿಸಿದರು.

Related Articles

Related image1
ಅರುಣಾ ಇರಾನಿ ಪತಿ - ಖ್ಯಾತ ನಿರ್ದೇಶಕ ಇನ್ನಿಲ್ಲ, ಸ್ಟಂಟ್ ಹಾಕಿದ್ರೂ ಹೃದಯಾಘಾತ ಆಗಿದ್ದು ಏಕೆ? ಆ ಗುಟ್ಟು ಇಲ್ಲಿದೆ ನೋಡಿ!
Related image2
ಸೂಚನೆ ಕೊಟ್ರೂ ಲೀಕ್‌ ಆಯ್ತು ಯಶ್‌ ಟಾಕ್ಸಿಕ್‌ ಸಿನಿಮಾ, ಆದ್ರೆ ಅದನ್ನು ತಕ್ಷಣ ಡಿಲೀಟ್ ಮಾಡಿದ್ದು ಏಕೆ?
37
Image Credit : Instagram

ಬರೀ ಡಬ್ಬಿಂಗ್ ಮಾಡಿದ್ರೆ 'ಪ್ಯಾನ್-ಇಂಡಿಯಾ' ಆಗಲ್ಲ ಗುರು!

ಇತ್ತೀಚಿನ ದಿನಗಳಲ್ಲಿ ಸಣ್ಣ ಬಜೆಟ್‌ನಿಂದ ದೊಡ್ಡ ಬಜೆಟ್ ಸಿನಿಮಾಗಳವರೆಗೆ ಎಲ್ಲರೂ ‘ಪ್ಯಾನ್-ಇಂಡಿಯಾ’ ಎಂಬ ಹಣೆಪಟ್ಟಿ ಹಚ್ಚಿಕೊಳ್ಳುತ್ತಿದ್ದಾರೆ. ಆದರೆ, ಸಪ್ತಮಿ ಇದಕ್ಕೆ ಹೊಸ ವ್ಯಾಖ್ಯಾನ ನೀಡಿದ್ದಾರೆ. "ಒಂದು ಸಿನಿಮಾವನ್ನು ನಾಲ್ಕು ಭಾಷೆಗೆ ಡಬ್ಬಿಂಗ್ ಮಾಡಿ ಪ್ರಚಾರ ಮಾಡಿದ ತಕ್ಷಣ ಅದು ಪ್ಯಾನ್-ಇಂಡಿಯಾ ಆಗುವುದಿಲ್ಲ" ಎಂದು ಅವರು ಖಡಕ್ ಆಗಿ ಹೇಳಿದರು.

47
Image Credit : Instagram

"ಸಿನಿಮಾ ಎಂಬುದು ಕೇವಲ ಭಾಷೆಯಲ್ಲ, ಅದು ಸಂಸ್ಕೃತಿಯ ಪ್ರತಿಬಿಂಬ. 'ಕಾಂತಾರ' ಸಿನಿಮಾ ಗೆದ್ದಿದ್ದು ಅದರ ಮಣ್ಣಿನ ವಾಸನೆಯಿಂದ. ಶ್ರೀಮಂತ ಮತ್ತು ಬಡವನ ನಡುವಿನ ಸಂಘರ್ಷ ಜಗತ್ತಿನ ಯಾವುದೇ ಮೂಲೆಯ ಪ್ರೇಕ್ಷಕನಿಗೂ ಅರ್ಥವಾಗುತ್ತದೆ. ಇಂತಹ ಕಥೆಗಳಿದ್ದಾಗ ಸಿನಿಮಾ ತನ್ನಿಂತಾನೇ ಎಲ್ಲೆ ಮೀರಿ ಬೆಳೆಯುತ್ತದೆ" ಎಂಬ ಅವರ ಮಾತುಗಳು ಸಿನಿ ಪ್ರೇಕ್ಷಕರ ಮನಗೆದ್ದವು.

57
Image Credit : Instagram

ಪ್ರೇಕ್ಷಕರ ನಂಬಿಕೆ ದ್ರೋಹದ ಬಗ್ಗೆ ಅಚ್ಚರಿಯ ಒಪ್ಪಿಗೆ!

ಕನ್ನಡ ಸಿನಿಮಾಗಳಿಗೆ ಪ್ರೇಕ್ಷಕರಿಲ್ಲ ಎಂಬ ಮಾತನ್ನು ಸಪ್ತಮಿ ಸುಳ್ಳಾಗಿಸಿದರು. "ನಮ್ಮಲ್ಲಿ ಅದ್ಭುತ ಪ್ರೇಕ್ಷಕರಿದ್ದಾರೆ, ಆದರೆ ನಾವು (ಚಿತ್ರರಂಗದವರು) ಅವರ ನಂಬಿಕೆಯನ್ನು ಉಳಿಸಿಕೊಳ್ಳುವಲ್ಲಿ ಸೋತಿದ್ದೇವೆ" ಎಂದು ಸಪ್ತಮಿ ಒಂದು ಕಹಿ ಸತ್ಯವನ್ನು ಬಿಚ್ಚಿಟ್ಟರು. ಚಿತ್ರತಂಡಗಳು ದೊಡ್ಡ ಮಟ್ಟದ ಪ್ರಾಮಿಸ್ ಮಾಡಿ, ನಂತರ ಕಳಪೆ ಗುಣಮಟ್ಟದ ಸಿನಿಮಾ ನೀಡಿದಾಗ ವೀಕ್ಷಕರು ಸಹಜವಾಗಿಯೇ ದೂರ ಸರಿಯುತ್ತಾರೆ. ಆದರೆ, ಒಂದು ಒಳ್ಳೆ ಸಿನಿಮಾ ಬಂದರೆ ಕನ್ನಡಿಗರು ಯಾವತ್ತೂ ಕೈಬಿಟ್ಟಿಲ್ಲ ಎಂಬ ಭಾವನಾತ್ಮಕ ಅಂಶವನ್ನು ಅವರು ಹಂಚಿಕೊಂಡರು. ಒಟಿಟಿಯಲ್ಲಿ ಸೂಪರ್ ಹಿಟ್ ಆಗುವ ಸಿನಿಮಾಗಳು ಚಿತ್ರಮಂದಿರದಲ್ಲಿ ಯಾಕೆ ಸೋಲುತ್ತಿವೆ ಎಂಬುದರ ಬಗ್ಗೆಯೂ ಅವರು ಆತ್ಮಾವಲೋಕನ ಮಾಡಿಕೊಂಡರು.

67
Image Credit : Instagram

ಸಂಭಾವನೆ ಅಸಮಾನತೆ: ಗ್ಲಾಮರ್ ಹಿಂದಿನ ಕರಾಳ ಮುಖ!

ಇನ್ನು ಸಂಭಾವನೆ ವಿಷಯಕ್ಕೆ ಬಂದಾಗ ಸಪ್ತಮಿ ಯಾವುದೇ ಫಿಲ್ಟರ್ ಇಲ್ಲದೆ ಮಾತನಾಡಿದರು. ಚಿತ್ರರಂಗದಲ್ಲಿ ನಟ ಮತ್ತು ನಟಿಯರ ನಡುವೆ ಇರುವ ದೊಡ್ಡ ಮಟ್ಟದ ‘ಸಂಭಾವನೆ ಕಂದಕ’ದ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದರು. "ನಟಿಯರು ಕೇವಲ ಮೇಕಪ್ ಹಾಕಿಕೊಂಡು ಕ್ಯಾಮೆರಾ ಮುಂದೆ ನಗುವುದಕ್ಕೆ ಸೀಮಿತವಲ್ಲ. ಅವರ ಶ್ರಮವೂ ಬಹಳಷ್ಟಿದೆ. ಚಿತ್ರಮಂದಿರಕ್ಕೆ ಜನರನ್ನು ಸೆಳೆಯುವ ಶಕ್ತಿ (Crowd Pulling Power) ಇರುವ ನಟರಿಗೆ ದೊಡ್ಡ ಮೊತ್ತ ಸಿಗುವುದು ಸರಿ, ಆದರೆ ಮಹಿಳಾ ಕಲಾವಿದರಿಗೂ ಅವರ ಅರ್ಹತೆಗೆ ತಕ್ಕಂತೆ ನ್ಯಾಯಯುತವಾದ ಸಂಭಾವನೆ ಸಿಗಬೇಕು" ಎಂಬುದು ಸಪ್ತಮಿ ಅವರ ಆಗ್ರಹವಾಗಿತ್ತು. ಸೆಟ್‌ಗಳಲ್ಲಿ ಸಿಗುವ ಗೌರವದ ಜೊತೆಗೆ, ಕೈ ಸೇರುವ ಸಂಭಾವನೆಯಲ್ಲೂ ಸಮಾನತೆ ಇರಲಿ ಎಂಬುದು ಅವರ ದಿಟ್ಟ ನಿಲುವಾಗಿತ್ತು.

77
Image Credit : Instagram

ಒಟ್ಟಿನಲ್ಲಿ, 'ಕಾಂತಾರ' ಮತ್ತು 'ದಿ ವ್ಯಾಕ್ಸಿನ್ ವಾರ್' ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಸಪ್ತಮಿ ಗೌಡ, ಸಿನಿಮಾ ಅಂದರೆ ಬರೀ ಬಣ್ಣದ ಲೋಕವಲ್ಲ, ಅದೊಂದು ಸವಾಲಿನ ಕಣಜ ಎಂಬ ಸಂದೇಶವನ್ನು ಈ ಸಂವಾದದ ಮೂಲಕ ರವಾನಿಸಿದ್ದಾರೆ. ಸಪ್ತಮಿ ಅವರ ಈ ಬೋಲ್ಡ್ ಮಾತುಗಳು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ!

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SB
Shriram Bhat
ಏಷ್ಯಾನೆಟ್ ಸುವರ್ಣನ್ಯೂಸ್.ಕಾಮ್‌ನಲ್ಲಿ ಉಪ ಸಂಪಾದಕ. ಸಿನಿಮಾ, ಲೈಫ್‌ಸ್ಟೈಲ್, ರಾಜಕೀಯ ಸುದ್ದಿಗಳ ಬಗ್ಗೆ ಹೆಚ್ಚಿನ ಗಮನ ನೀಡುತ್ತಿದ್ದೇನೆ. ಇಂಡಿಯನ್ ಎಕ್ಸ್‌ಪ್ರೆಸ್‌, ಒನ್‌ ಇಂಡಿಯಾ ಕನ್ನಡ ಹಾಗೂ ವಿಜಯ ಕರ್ನಾಟಕ ವೆಬ್‌ನಲ್ಲಿ ಕೆಲಸ ಮಾಡಿದ ಅನುಭವವಿದೆ. ಕಳೆದ 15 ವರ್ಷಗಳಿಂದ ನಿರಂತರ ಬರವಣಿಗೆ ಉದ್ಯೋಗದಲ್ಲಿದ್ದೇನೆ. ಸುದ್ದಿ ಮಾಧ್ಯಮವಲ್ಲದೇ ಮನರಂಜನಾ ಮಾಧ್ಯಮದಲ್ಲೂ ಕೆಲಸ ಮಾಡಿದ್ದೇನೆ. ಉತ್ತರ ಕನ್ನಡ ಜಿಲ್ಲೆ ಶಿರಸಿ ಹುಟ್ಟೂರು. ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದಿಂದ ಕಲಾ ವಿಭಾಗದಲ್ಲಿ ಪದವಿ ಪಡೆದಿದ್ದೇನೆ. ಸಾಮಾಜಿಕ ಕಳಕಳಿಗೆ ಹೆಚ್ಚಿನ ಆದ್ಯತೆ, ಮಾನವೀಯತೆಗೆ ಮೊದಲ ಪ್ರಾಶಸ್ತ್ಯ.
ಸ್ಯಾಂಡಲ್‌ವುಡ್
ಮನರಂಜನಾ ಸುದ್ದಿ
ವೈರಲ್ ಸುದ್ದಿ

Latest Videos
Recommended Stories
Recommended image1
ಕಾಡಿನ ನಡುವೆ ಅದ್ದೂರಿ ಬಂಗಲೆ, ಬಿ. ಸರೋಜಾ ದೇವಿ ದತ್ತು ಮಗಳ ಹೊಸ ಮನೆ
Recommended image2
Yash's Toxic Movie Review: ರಣರಣ ರಣರಂಗದ ನಡುವೆ ಪ್ರೇಮ, ಕಾಮ, ನಿರ್ನಾಮ
Recommended image3
Yash Toxic Day 1 Box Collection: ಯಶ್ ‘ಟಾಕ್ಸಿಕ್’ ಮೊದಲ ದಿನದ ಕಲೆಕ್ಷನ್ ಎಷ್ಟು?
Related Stories
Recommended image1
ಅರುಣಾ ಇರಾನಿ ಪತಿ - ಖ್ಯಾತ ನಿರ್ದೇಶಕ ಇನ್ನಿಲ್ಲ, ಸ್ಟಂಟ್ ಹಾಕಿದ್ರೂ ಹೃದಯಾಘಾತ ಆಗಿದ್ದು ಏಕೆ? ಆ ಗುಟ್ಟು ಇಲ್ಲಿದೆ ನೋಡಿ!
Recommended image2
ಸೂಚನೆ ಕೊಟ್ರೂ ಲೀಕ್‌ ಆಯ್ತು ಯಶ್‌ ಟಾಕ್ಸಿಕ್‌ ಸಿನಿಮಾ, ಆದ್ರೆ ಅದನ್ನು ತಕ್ಷಣ ಡಿಲೀಟ್ ಮಾಡಿದ್ದು ಏಕೆ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved