MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Amit Shah Karnataka Visit
Karnataka Govt Social Pension
US Tariff on India
Mysuru Dasara 2026
Abhishek Sharma
Bengaluru Cantonment Railway Station
Kalyana Karnataka Development
Vande Mataram Row
Karnataka SSLC Mid-term Exam
Mangaluru Dharmasthala Railway Line
Shivamogga Mega Job Fair
Bengaluru Traffic
Mangaluru Cabinet Meeting
  • Home
  • Entertainment
  • Sandalwood
  • ಮಾಲಾಶ್ರೀ ಕನ್ನಡ ಚಿತ್ರರಂಗವನ್ನು ಅಕ್ಷರಶಃ ಆಳಲು ಕಾರಣವೇನು? A to Z ಸೀಕ್ರೆಟ್ ಇಲ್ಲಿದೆ ನೋಡಿ!

ಮಾಲಾಶ್ರೀ ಕನ್ನಡ ಚಿತ್ರರಂಗವನ್ನು ಅಕ್ಷರಶಃ ಆಳಲು ಕಾರಣವೇನು? A to Z ಸೀಕ್ರೆಟ್ ಇಲ್ಲಿದೆ ನೋಡಿ!

90ರ ದಶಕದಲ್ಲಿ ಮಾಲಾಶ್ರೀ ಎಂದರೆ ಕೇವಲ ಒಬ್ಬ ಸ್ಟಾರ್ ನಟಿಯಲ್ಲ, ಅವರೊಂದು ಸಂಚಲನ! ಚಿತ್ರಮಂದಿರಗಳ ಮುಂದೆ ಮಾಲಾಶ್ರೀ ಸಿನಿಮಾ ನೋಡಲು ಕಿಲೋಮೀಟರ್‌ಗಟ್ಟಲೆ ಸಾಲು ನಿಲ್ಲುತ್ತಿದ್ದ ಆ ಕಾಲವೇ ಒಂದು ಅದ್ಭುತ. ಮಾಲಾಶ್ರೀ ಯಶಸ್ಸಿನ ಸೀಕ್ರೆಟ್ ಇಲ್ಲಿದೆ ನೋಡಿ..

2 Min read
Author : Shriram Bhat
Published : Sep 19 2026, 08:02 PM IST
Share this Photo Gallery
  • FB
  • TW
  • Linkdin
  • Whatsapp
17
Image Credit : Asianet News

ಕನ್ನಡ ಚಿತ್ರರಂಗದ ಇತಿಹಾಸವನ್ನು ಒಮ್ಮೆ ತಿರುವಿ ನೋಡಿದರೆ, ಡಾ ರಾಜ್‌ಕುಮಾರ್, ಡಾ ವಿಷ್ಣುವರ್ಧನ್, ಅನಂತ್ ನಾಗ್, ಅಂಬರೀಷ್, ಶಂಕರ್‌ ನಾಗ್ ಅವರಂತೆ ಒಬ್ಬರು ನಟಿಯ ಹೆಸರು ಸುವರ್ಣಾಕ್ಷರಗಳಲ್ಲಿ ಮಿನುಗುತ್ತದೆ. ಅವರೇ ಅಭಿಮಾನಿಗಳ ಪಾಲಿನ 'ಕನಸಿನ ರಾಣಿ', ಚಿತ್ರರಂಗದ 'ಆಕ್ಷನ್ ಕ್ವೀನ್' ಮಾಲಾಶ್ರೀ. 90ರ ದಶಕದಲ್ಲಿ ಮಾಲಾಶ್ರೀ ಎಂದರೆ ಕೇವಲ ಒಬ್ಬ ಸ್ಟಾರ್ ನಟಿಯಲ್ಲ, ಅವರೊಂದು ಸಂಚಲನ! ಚಿತ್ರಮಂದಿರಗಳ ಮುಂದೆ ಮಾಲಾಶ್ರೀ ಸಿನಿಮಾ ನೋಡಲು ಕಿಲೋಮೀಟರ್‌ಗಟ್ಟಲೆ ಸಾಲು ನಿಲ್ಲುತ್ತಿದ್ದ ಆ ಕಾಲವೇ ಒಂದು ಅದ್ಭುತ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
27
Image Credit : Instagram

ಮಾಲಾಶ್ರೀ ಅವರ ಸಿನಿವೃತ್ತಿ ಆರಂಭವಾಗಿದ್ದು ಕೇವಲ ನಾಲ್ಕು ತಿಂಗಳ ಮಗುವಾಗಿದ್ದಾಗ! ಹೌದು, ಮಹಾನಟಿ ಸಾವಿತ್ರಿ ಅವರ ಚಿತ್ರದ ಮೂಲಕ ಬಾಲ ಕಲಾವಿದೆಯಾಗಿ ಬಣ್ಣ ಹಚ್ಚಿದವರು ನಟಿ ಶ್ರೀದುರ್ಗಾ. ಸುಮಾರು 35 ಚಿತ್ರಗಳಲ್ಲಿ ಬಾಲನಟಿಯಾಗಿ ಮಿಂಚಿದ್ದ ಶ್ರೀದುರ್ಗಾ, ಬಳಿಕ ಕನ್ನಡದ 'ನಂಜುಂಡಿ ಕಲ್ಯಾಣ' ಸಿನಿಮಾದ ಮೂಲಕ 'ಮಾಲಾಶ್ರೀ' ಎಂದು ಮರುನಾಮಕರಣದ ಮೂಲಕ ಮಿಂಚಿದ ನಟಿ!

Related Articles

Related image1
ಬಿಂದಿಯಾ ಹೆಸರನ್ನು ಬದಲಾಯಿಸಿಕೊಂಡಿದ್ದೇಕೆ 'ಬುಲ್‌ಬುಲ್' ರಚಿತಾ ರಾಮ್? ನ್ಯೂ ನೇಮ್ ಹಿಂದಿನ ಸೀಕ್ರೆಟ್ ಇದೇನಾ?
Related image2
ಗೀತೂ ಮೋಹನ್‌ದಾಸ್ 'ಟಾಕ್ಸಿಕ್' ಕೆಲಸದಲ್ಲಿ ನಟ ಯಶ್ ಹಸ್ತಕ್ಷೇಪ ಮಾಡಿದ್ದು ನಿಜವೇ? ಅಸಲಿ ಸಂಗತಿಗೆ ಈಗ ಸಾಕ್ಷಿ ಸಿಕ್ತು!
37
Image Credit : Instagram

1989ರಲ್ಲಿ ಪಾರ್ವತಮ್ಮ ರಾಜ್‌ಕುಮಾರ್ ಅವರು 'ನಂಜುಂಡಿ ಕಲ್ಯಾಣ' ಚಿತ್ರಕ್ಕೆ ನಾಯಕಿಯನ್ನು ಹುಡುಕುತ್ತಿದ್ದಾಗ ಅವರಿಗೆ ಸಿಕ್ಕಿದ್ದೇ ಈ ಪ್ರತಿಭೆ. ಶ್ರೀದುರ್ಗಾ ಹೆಸರನ್ನು ‘ಮಾಲಾಶ್ರೀ’ ಎಂದು ಬದಲಾಯಿಸಿದ ಪಾರ್ವತಮ್ಮನವರು, ರಾಘವೇಂದ್ರ ರಾಜ್‌ಕುಮಾರ್ ಎದುರು ನಾಯಕಿಯಾಗಿ ಲಾಂಚ್ ಮಾಡಿದರು. ಆಗ ಮಾಲಾಶ್ರೀಗೆ ಕೇವಲ 15 ವರ್ಷ! ಮೊದಲ ಚಿತ್ರವೇ ಬರೋಬ್ಬರಿ 535 ದಿನಗಳ ಕಾಲ ಪ್ರದರ್ಶನ ಕಂಡು ಇತಿಹಾಸ ಸೃಷ್ಟಿಸಿತು. ಮಾಲಾಶ್ರೀ ಅವರ ನಟನೆ, ಚಂದದ ಮುಖ ನೋಡಿ ಸ್ವತಃ ಅಣ್ಣಾವ್ರು ಇವರನ್ನು "ಕನ್ನಡ ಚಿತ್ರರಂಗದ ಹೇಮಾ ಮಾಲಿನಿ" ಎಂದು ಕರೆದಿದ್ದರು ಎನ್ನುವುದು ಗುಟ್ಟಾಗಿಲ್ಲ.

47
Image Credit : Instagram

ಒಂದೇ ವರ್ಷದಲ್ಲಿ ಅವರು ಬರೋಬ್ಬರಿ 20 ಚಿತ್ರಗಳಲ್ಲಿ ನಟನೆ

ಮಾಲಾಶ್ರೀ ಅವರ ನಟನೆ ಹಾಗೂ ಜನಪ್ರಿಯತೆ ವೇಗ ಎಷ್ಟಿತ್ತೆಂದರೆ, 1992ರಲ್ಲಿ ಒಂದೇ ವರ್ಷದಲ್ಲಿ ಅವರು ಬರೋಬ್ಬರಿ 20 ಚಿತ್ರಗಳಲ್ಲಿ ನಟಿಸಿ ಅಂದಿನ ಕಾಲಕ್ಕೆ ಅತಿ ದೊಡ್ಡ ದಾಖಲೆ ಬರೆದರು. ಕೇವಲ ಗ್ಲಾಮರ್ ಗೊಂಬೆಯಾಗಿ ಉಳಿಯದ ಮಾಲಾಶ್ರೀ, 'ರಾಣಿ ಮಹಾರಾಣಿ', 'ಹೃದಯ ಹಾಡಿತು' ಅಂತಹ ಚಿತ್ರಗಳ ಮೂಲಕ ತಮ್ಮ ಅಭಿನಯದ ತಾಕತ್ತು ಏನೆಂಬುದನ್ನು ತೋರಿಸಿದರು. ಇನ್ನು 'ಎಸ್.ಪಿ. ಭಾರ್ಗವಿ' ಚಿತ್ರದ ಮೂಲಕ ಅವರು ‘ಆಕ್ಷನ್ ಕ್ವೀನ್’ ಆಗಿ ಅವತರಿಸಿದಾಗ, ತೆಲುಗಿನ ವಿಜಯಶಾಂತಿಯಂತೆ ಕನ್ನಡದಲ್ಲೂ ಮಹಿಳಾ ಪ್ರಧಾನ ಚಿತ್ರಗಳಿಗೆ ಹೊಸ ಭಾಷ್ಯ ಬರೆದರು. ವಿಲನ್‌ಗಳನ್ನು ಮಾಲಾಶ್ರೀ ಸದೆಬಡಿಯುತ್ತಿದ್ದರೆ ಥಿಯೇಟರ್‌ನಲ್ಲಿ ಶಿಳ್ಳೆ-ಚಪ್ಪಾಳೆಗಳ ಸುರಿಮಳೆಯಾಗುತ್ತಿತ್ತು.

57
Image Credit : our own

ವೃತ್ತಿಜೀವನ ಉತ್ತುಂಗದಲ್ಲಿದ್ದಾಗಲೇ ಮಾಲಾಶ್ರೀ ಅವರು ಕನ್ನಡದ ಖ್ಯಾತ ನಿರ್ಮಾಪಕ ‘ಕೋಟಿ’ ಖ್ಯಾತಿಯ ರಾಮು ಅವರನ್ನು ಪ್ರೀತಿಸಿ ಮದುವೆಯಾದರು. ಈ ಜೋಡಿ ಸ್ಯಾಂಡಲ್‌ವುಡ್‌ನ 'ಪವರ್ ಕಪಲ್' ಎಂದೇ ಪ್ರಸಿದ್ಧವಾಗಿತ್ತು. ಆದರೆ 2021ರಲ್ಲಿ ಪತಿ ರಾಮು ಅವರ ಅಕಾಲಿಕ ಮರಣ ಮಾಲಾಶ್ರೀ ಅವರಿಗೆ ದೊಡ್ಡ ಆಘಾತ ನೀಡಿತು. ಈ ತೀವ್ರ ದುಃಖದ ನಡುವೆಯೂ ವಾಸ್ತವ ಪ್ರಜ್ಞೆ ಮರೆಯದ ನಟಿ ಮಾಲಾಶ್ರೀ ಅವರು, ಕುಗ್ಗದೇ ತಮ್ಮ ಮಕ್ಕಳಿಗಾಗಿ ಮತ್ತು ಚಿತ್ರರಂಗಕ್ಕಾಗಿ ಮರಳಿ ನಟನೆ ಮಾಡುತ್ತಿದ್ದಾರೆ.

67
Image Credit : Instagram

ಮಾಲಾಶ್ರೀ ಪುತ್ರಿ ಆರಾಧನಾ ರಾಮ್ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ

ಈಗ ಮಾಲಾಶ್ರೀ ಅವರ ಪರಂಪರೆಯನ್ನು ಮುಂದುವರಿಸಲು ಅವರ ಪುತ್ರಿ ಆರಾಧನಾ ರಾಮ್ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ‘ಕಾಟೇರ’ ಚಿತ್ರದ ಮೂಲಕ ಎಂಟ್ರಿ ಕೊಟ್ಟ ಆರಾಧನಾ, ಮೊದಲ ಚಿತ್ರದಲ್ಲೇ SIIMA ಪ್ರಶಸ್ತಿ ಗೆಲ್ಲುವ ಮೂಲಕ ತಾಯಿಯ ಹೆಸರನ್ನು ಉಳಿಸಿದ್ದಾರೆ. ಜೊತೆಗೆ, ಸದ್ಯ ರಿಯಲ್ ಸ್ಟಾರ್ ಉಪೇಂದ್ರ ನಟನೆಯ 'ನೆಕ್ಸ್ಟ್ ಲೆವೆಲ್' ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.

77
Image Credit : Instagram

ಬಾಲನಟಿಯಿಂದ ಹಿಡಿದು ಆಕ್ಷನ್ ಕ್ವೀನ್ ವರೆಗೆ ಮಾಲಾಶ್ರೀ ಅವರು ಸವೆಸಿದ ಹಾದಿ ಇಂದಿನ ಪೀಳಿಗೆಯ ನಟಿಯರಿಗೆ ಒಂದು ದೊಡ್ಡ ಸ್ಫೂರ್ತಿ. ‘ಕನಸಿನ ರಾಣಿ’ ಎಂದರೆ ಅದು ಅಂದಿಗೂ ಎಂದಿಗೂ ಮಾಲಾಶ್ರೀ ಮಾತ್ರ! ಅವರ ಈ ಪರಿಯ ಯಶಸ್ಸಿಗೆ ಕಾರಣ, ಅವರ ಹೈ ಲೆವೆಲ್ ಎನರ್ಜಿ, ನಟನಾ ಪ್ರತಿಭೆಯ ಜೊತೆಗೆ ಸಿನಿಮಾ ಆಯ್ಕೆಯಲ್ಲಿರುವ ಜಾಣ್ಮೆ ಮುಖ್ಯ ಕಾರಣ ಎನ್ನಬಹುದು. ಅದೃಷ್ಟದ ಮಾತು ಏನೇ ಇದ್ದರೂ ಮಾಲಾಶ್ರೀ ಬಳಿಗೆ ಅದೃಷ್ಟ ಬರಲು 'ಅದೃಷ್ಟಕ್ಕೆ ಅದೃಷ್ಟ ಇತ್ತು' ಎನ್ನಬೇಕಷ್ಟೇ!

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SB
Shriram Bhat
ಏಷ್ಯಾನೆಟ್ ಸುವರ್ಣನ್ಯೂಸ್.ಕಾಮ್‌ನಲ್ಲಿ ಉಪ ಸಂಪಾದಕ. ಸಿನಿಮಾ, ಲೈಫ್‌ಸ್ಟೈಲ್, ರಾಜಕೀಯ ಸುದ್ದಿಗಳ ಬಗ್ಗೆ ಹೆಚ್ಚಿನ ಗಮನ ನೀಡುತ್ತಿದ್ದೇನೆ. ಇಂಡಿಯನ್ ಎಕ್ಸ್‌ಪ್ರೆಸ್‌, ಒನ್‌ ಇಂಡಿಯಾ ಕನ್ನಡ ಹಾಗೂ ವಿಜಯ ಕರ್ನಾಟಕ ವೆಬ್‌ನಲ್ಲಿ ಕೆಲಸ ಮಾಡಿದ ಅನುಭವವಿದೆ. ಕಳೆದ 15 ವರ್ಷಗಳಿಂದ ನಿರಂತರ ಬರವಣಿಗೆ ಉದ್ಯೋಗದಲ್ಲಿದ್ದೇನೆ. ಸುದ್ದಿ ಮಾಧ್ಯಮವಲ್ಲದೇ ಮನರಂಜನಾ ಮಾಧ್ಯಮದಲ್ಲೂ ಕೆಲಸ ಮಾಡಿದ್ದೇನೆ. ಉತ್ತರ ಕನ್ನಡ ಜಿಲ್ಲೆ ಶಿರಸಿ ಹುಟ್ಟೂರು. ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದಿಂದ ಕಲಾ ವಿಭಾಗದಲ್ಲಿ ಪದವಿ ಪಡೆದಿದ್ದೇನೆ. ಸಾಮಾಜಿಕ ಕಳಕಳಿಗೆ ಹೆಚ್ಚಿನ ಆದ್ಯತೆ, ಮಾನವೀಯತೆಗೆ ಮೊದಲ ಪ್ರಾಶಸ್ತ್ಯ.
ಮಾಲಾಶ್ರೀ
ಸ್ಯಾಂಡಲ್‌ವುಡ್
ಮನರಂಜನಾ ಸುದ್ದಿ
ಮಹಿಳೆಯರು
 

Latest Videos
Recommended Stories
Recommended image1
ಬಿಂದಿಯಾ ಹೆಸರನ್ನು ಬದಲಾಯಿಸಿಕೊಂಡಿದ್ದೇಕೆ 'ಬುಲ್‌ಬುಲ್' ರಚಿತಾ ರಾಮ್? ನ್ಯೂ ನೇಮ್ ಹಿಂದಿನ ಸೀಕ್ರೆಟ್ ಇದೇನಾ?
Recommended image2
ಹುಟ್ಟುಹಬ್ಬದಂದು ಹೊಸ ಐಡಿಯಾ ಹೇಳಿ ಶಾಕ್ ಮೂಡಿಸಿದ ರಿಯಲ್ ಸ್ಟಾರ್ ಉಪೇಂದ್ರ.. ಅಂತಿಂಥ ಸೀಕ್ರೆಟ್ ಅಲ್ಲ ಇದು!
Recommended image3
'ಸಿಟಿ ಲೈಟ್ಸ್' ಜೀವನದಲ್ಲಿ ಹುಷಾರಾಗಿ ಇರಬೇಕು: ಬೀದಿ ದೀಪ ಅಯ್ಯೋ ಪಾಪ ಬದುಕು ಶಾಪ!
Related Stories
Recommended image1
ಬಿಂದಿಯಾ ಹೆಸರನ್ನು ಬದಲಾಯಿಸಿಕೊಂಡಿದ್ದೇಕೆ 'ಬುಲ್‌ಬುಲ್' ರಚಿತಾ ರಾಮ್? ನ್ಯೂ ನೇಮ್ ಹಿಂದಿನ ಸೀಕ್ರೆಟ್ ಇದೇನಾ?
Recommended image2
ಗೀತೂ ಮೋಹನ್‌ದಾಸ್ 'ಟಾಕ್ಸಿಕ್' ಕೆಲಸದಲ್ಲಿ ನಟ ಯಶ್ ಹಸ್ತಕ್ಷೇಪ ಮಾಡಿದ್ದು ನಿಜವೇ? ಅಸಲಿ ಸಂಗತಿಗೆ ಈಗ ಸಾಕ್ಷಿ ಸಿಕ್ತು!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved