ವಿಜಯನಗರ: ಮಳೆ ಕೊರತೆಯಿಂದ ತೀವ್ರ ಬರ; ಮಳೆಗಾಗಿ ಪ್ರಾರ್ಥಿಸಿ ಒಂಭತ್ತು ದಿನ ಭಜನಾ ವ್ರತ
ವಿಜಯನಗರದಲ್ಲಿ ಮಳೆ ಕೊರತೆಯಿಂದ ಭೀಕರ ಬರ ಪರಿಸ್ಥಿತಿ ಎದುರಾಗಿದೆ. ಕೃಷಿ ಚಟುವಟಿಕೆ ಇಲ್ಲದೆ ಅನ್ನದಾತರು ಆತಂಕಕ್ಕೀಡಾಗಿದ್ದಾರೆ. ಈ ಹಿನ್ನೆಲೆ ಮಳೆಗಾಗಿ ಪ್ರಾರ್ಥಿಸಿ ಉಲವತ್ತಿ ಗ್ರಾಮದ ಸರ್ವಧರ್ಮದ ನಾಗರಿಕರು ಒಂಭತ್ತು ದಿನಗಳ ಕಾಲ ಭಜನೆ ವ್ರತ ಕೈಗೊಂಡಿದ್ದಾರೆ.
13

Image Credit : Asianet News
ಕೈಕೊಟ್ಟ ಮುಂಗಾರು
ಈ ಬಾರಿ ಮುಂಗಾರು ಮಳೆ ತೀವ್ರವಾಗಿ ಕಡಿಮೆಯಾಗಿದೆ. ಆಗಸ್ಟ್ ಮುಗಿದರೂ ವಾಡಿಕೆಯಂತೆ ಮಳೆ ಸುರಿಯುತ್ತಿಲ್ಲ. ಸೆಪ್ಟಂಬರ್ ತಿಂಗಳಿನ ಮೇಲೆ ರೈತರ ಭರವಸೆ ಇಟ್ಟುಕೊಂಡಿದ್ದಾರೆ. ಮುಂದಿನ ತಿಂಗಳು ಮಳೆ ಕೈಕೊಟ್ಟರೆ ಬೆಳೆಯೂ ಇಲ್ಲ ಎಂಬ ಆತಂಕ ಅನ್ನದಾತರಿಗೆ ಎದುರಾಗಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
23
Image Credit : Asianet News
ವಿಜಯನಗದಲ್ಲಿ ಮಳೆ ಕೊರತೆಯಿಂದ ಭೀಕರ ಬರ
ಕೈಕೊಟ್ಟ ಮುಂಗಾರಿನಿಂದ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕು ಭೀಕರ ಬರದ ಪರಿಸ್ಥಿತಿಗೆ ಸಿಲುಕಿದೆ. ಮಳೆಯ ಕೊರತೆಯಿಂದ ರೈತರ ಕೃಷಿ ಚಟುವಟಿಕೆಗಳು ಕುಂಠಿತವಾಗಿದ್ದು, ಅನ್ನದಾತರ ಬದುಕು ಅಕ್ಷರಶಃ ಬಸವಳಿದು ಹೋಗಿದೆ.
33
Image Credit : Asianet News
ಉಲವತ್ತಿ ಗ್ರಾಮದ ಜನರಿಂದ ಮಳೆಗಾಗಿ ಭಜನಾ ವೃತ
ಇಂತಹ ಸಂಕಷ್ಟದ ಸಂದರ್ಭದಲ್ಲಿ ವರುಣ ದೇವ ಕರುಣೆ ತೋರಿ ಮಳೆ ಸುರಿಸಲಿ, ಹಗರಿಬೊಮ್ಮನಹಳ್ಳಿ ತಾಲೂಕು ಬರದಿಂದ ಮುಕ್ತವಾಗಲಿ, ಮಾಲವಿ ಜಲಾಶಯ ಭರ್ತಿಯಾಗಿ ರೈತರ ಕೃಷಿಗೆ ವರದಾನವಾಗಲಿ ಎಂದು ಪ್ರಾರ್ಥಿಸಿ ತಾಲೂಕಿನ ಉಲವತ್ತಿ ಗ್ರಾಮದ ಸರ್ವಧರ್ಮದ ನಾಗರಿಕರು ಒಂಭತ್ತು ದಿನಗಳ ಕಾಲ ಭಜನೆ ವ್ರತ ಕೈಗೊಂಡಿದ್ದಾರೆ.
ಗ್ರಾಮದ ಜನರು ಒಗ್ಗೂಡಿ ಭಜನೆ, ಪ್ರಾರ್ಥನೆ ನಡೆಸಿ ಉತ್ತಮ ಮಳೆಯಾಗುವಂತೆ ವರುಣ ದೇವನಲ್ಲಿ ಮೊರೆ ಇಟ್ಟಿದ್ದಾರೆ.
Latest Videos

